ಕಮಲಾ ಹಂಪನಾ
ಪ್ರೊಫೆಸರ್ ಕಮಲಾ ಹಂಪನಾ ಅವರು ಕನ್ನಡದ ಬಹುದೊಡ್ಡ ಲೇಖಕರು. ಅವರು ವಿದ್ವಾಂಸರಾಗಿ, ಉತ್ತಮ ಪ್ರಾಧ್ಯಾಪಕರಾಗಿ, ಪ್ರಾಚೀನ ಅರ್ವಾಚೀನ ಕೃತಿಗಳ ಅನುಸಂಧಾನಕಾರರಾಗಿ ಅಪಾರವಾಗಿ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಸಾರ್ಥಕವಾದ ಗಂಭೀರವಾದ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಂಡು ಆ ಎಲ್ಲ ಪ್ರಕಾರಗಳಲ್ಲೂ ಅತ್ಯಂತ ಗಂಭೀರವಾದ ಹಾಗೂ ಸ್ವೋಪಜ್ಞಶೀಲತೆಯ ಚಿಂತನೆಗಳಿಂದ ಕೂಡಿದ ಮೌಲಿಕ ಕೊಡುಗೆಗಳನ್ನು ನೀಡಿದ್ದಾರೆ.
ಜನನ, ಅಧ್ಯಯನಸಂಪಾದಿಸಿ
ಕಮಲಾ ಹಂಪನಾ ಇವರು ೧೯೩೫ರಲ್ಲಿ ಜನಿಸಿದರು. ಮೈಸೂರಿನಲ್ಲಿ ಬಿ.ಎ (ಆನರ್ಸ್)ಹಾಗು ಎಂ.ಎ.ಪದವಿ ಪಡೆದ ಬಳಿಕ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕಿಯಾದರು. ಹಂ.ಪ.ನಾಗರಾಜಯ್ಯನವರು ಇವರ ಪತಿ. ಸ್ತ್ರೀ ಸಂವೇದನೆಗೆ ಸಂಬಂಧಿಸಿದ ಅವರ ಸಂಶೋಧನೆಗಳು ಅವರಿಗೆ ಅಪಾರ ಕೀರ್ತಿ ಗೌರವಗಳನ್ನು ತಂದುಕೊಟ್ಟಿವೆ. ಜೈನ ಕೃತಿಗಳನ್ನು ಕುರಿತು ಆಳವಾದ ವಿವೇಚನೆಯನ್ನು ಒಳನೋಟವನ್ನು ಅವರು ತಮ್ಮ ಬರಹಗಳಲ್ಲಿ ಹೊಮ್ಮಿಸಿದ್ದಾರೆ.
ಸಾಹಿತ್ಯ ಕೃತಿಗಳು
ಕೃತಿಗಳುಸಂಪಾದಿಸಿ
ಕಥಾಸಂಕಲನಸಂಪಾದಿಸಿ
೧ ನಕ್ಕಿತು ಹಾಲಿನ ಬಟ್ಟಲು
೨ ರೆಕ್ಕೆ ಮುರಿದಿತ್ತು
೩ ಚಂದನಾ
೪ ಬಣವೆ
ಸಂಶೋಧನೆಸಂಪಾದಿಸಿ
೧ ತುರಂಗ ಭಾರತ - ಒಂದು ಅಧ್ಯಯನ
೨ ಶಾಂತಿನಾಥ
೩ ಆದರ್ಶ ಜೈನ ಮಹಿಳೆಯರು
೪ ಅನೇಕಾಂತವಾದ
೫ ನಾಡು ನುಡಿ ನಾವು
೬ ಜೈನ ಸಾಹಿತ್ಯ ಪರಿಸರ
೭ ಬದ್ದವಣ
೮ ರೋಣದ ಬಸದಿ
ವಿಮರ್ಶೆ-ವೈಚಾರಿಕಸಂಪಾದಿಸಿ
೧ ಬಾಸಿಂಗ
೨ ಬಾಂದಳ
೩ ಬಡಬಾಗ್ನಿ
೪ ಬಿತ್ತರ
೫ ಬೊಂಬಾಳ
೬ ಗುಣದಂಕಕಾರ್ತಿ ಅತ್ತಿಮಬ್ಬೆ
ಸಂಪಾದನೆಸಂಪಾದಿಸಿ
೧ ಸುಕುಮಾರ ಚರಿತೆಯ ಸಂಗ್ರಹ
೨ ಭರತೇಶ ವೈಭವ
೩ ಕೆ.ಎಸ್.ಧರಣೇಂದ್ರಯ್ಯನವರ ಸ್ಮೃತಿಗ್ರಂಥ
೪ ಶ್ರೀ ಪಚ್ಚೆ
೫ ಸಹಸ್ರಾಭಿಷೇಕ
೬ಚಾವುಂಡರಾಯಪುರಾಣ
೭ ಡಾ.ಡಿ.ಎನ್.ನರಸಿಂಹಾಚಾರ್ಯರ ಆಯ್ದ ಲೇಖನಗಳು
೮ ಹಳೆಯ ಗದ್ಯ ಸಾಹಿತ್ಯ
೯ ದಾನಚಿಂತಾಮಣಿ - ಸ್ಮರಣಸಂಚಿಕೆ
೧೦ ಜೈನಧರ್ಮ
೧೧ ಸುವರ್ಣ ಭಾರತಿ, ಸಂಪುಟ - ೩
೧೨ ಜೈನಕಥಾಕೋಶ (ಸಹ ಸಂಪಾದಕಿ)
೧೩ ಷೋಡಶ ಭಾವಾನಾ ಕಾವ್ಯ
ಜೀವನ ಪರಿಚಯಸಂಪಾದಿಸಿ
೧ ಮಹಾವೀರರ ಜೀವನ ಸಂದೇಶ
೨ ಮುಡಿಮಲ್ಲಿಗೆ
೩ ಆ ಮುಖ
ವಚನ ಸಂಕಲನಸಂಪಾದಿಸಿ
೧ ಬಿಂದಲಿ
೨ ಬುಗುಡಿ
ಶಿಶು ಸಾಹಿತ್ಯಸಂಪಾದಿಸಿ
೧ ಅಕ್ಕ ಮಹಾದೇವಿ
೨ ಹೆಳವನಕಟ್ಟೆ ಗಿರಿಯಮ್ಮ
೩ ವೀರವನಿತೆ ಓಬವ್ವ
೪ ಜನ್ನ
೫ ಚಿಕ್ಕವರಿಗಾಗಿ ಚಿತ್ರದುರ್ಗ
೬ ಡಾ.ಬಿ.ಆರ್.ಅಂಬೇಡ್ಕರ್
೭ ಮುಳಬಾಗಿಲು
೮ ಮಕ್ಕಳೊಡನೆ ಮಾತುಕತೆ
ಅನುವಾದಸಂಪಾದಿಸಿ
೧ ಬೀಜಾಕ್ಷರ ಮಾಲೆ(ಸರಸ್ವತಿ ಬಾಯಿಗಿರಿಯವರು ತೆಲುಗಿನಲ್ಲಿ ಬರೆದಿರುವ ೬೫ ಪದ್ಯಗಳ ಭಾವಾನುವಾದ)
೨ ಜಾತಿ ನಿರ್ಮೂಲನೆ (ಡಾ.ಅಂಬೇಡಕರರವರ Annihilation of caste ಕೃತಿಯ ಅನುವಾದ)
೩ ಭಾರತದಲ್ಲಿ ಜಾತಿಗಳು
೪ ಏಷಿಯಾದ ಹಣತೆಗಳು,
೫ ಜಾತಿಮೀಮಾಂಸೆ
ಆಕಾಶವಾಣಿ ನಾಟಕ - ರೂಪಕಗಳುಸಂಪಾದಿಸಿ
೧ ಬಕುಳ
೨ ಬಾನಾಡಿ
೩ ಬೆಳ್ಳಕ್ಕಿ
ಗೌರವ ಪುರಸ್ಕಾರಸಂಪಾದಿಸಿ
೨೦೦೩ ಡಿಸೆಂಬರ್ ತಿಂಗಳಲ್ಲಿ ಮೂಡುಬಿದಿರೆಯಲ್ಲಿ ಜರುಗಿದ ೭೧ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಮಲಾ ಹಂಪನಾ ಅಧ್ಯಕ್ಷರಾಗಿದ್ದರು -ಹೀಗೆ ಸೃಜನಶೀಲ ಲೇಖಕಿಯಾಗಿ, ಶ್ರೇಷ್ಠ ವಾಗ್ಮಿಯಾಗಿ, ನಿರ್ಭೀತ ವಿಚಾರವಂತರಾಗಿ, ಪ್ರೌಢ ವಿಮರ್ಶಕಿಯಾಗಿ ಮತ್ತು ಸಂಶೋಧಕರಾಗಿ ಅವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಗಟ್ಟಿಯಾದುದು ಮತ್ತು ಚಿರಂತನವಾದುದು.
ಇಂತಿ
ಮಂಜುನಾಥ ಕೆ ಎಂ
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಬಸವಪಟ್ಟಣ (ಚಿರಡೋಣಿ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ