ಸೋಮವಾರ, ಮೇ 28, 2018

ಬರಗೂರು ರಾಮಚಂದ್ರಪ್ಪ ರವರ ಜೀವನ ಮತ್ತು ಸಾಹಿತ್ಯ ಪರಿಚಯ

ಬರಗೂರು ರಾಮಚಂದ್ರಪ್ಪ

ಬರಗೂರು ರಾಮಚಂದ್ರಪ್ಪನವರು ಬೆಂಗಳೂರು ವಿಶ್ವವಿದ್ಯಾನಿಲಯ ದ ಕನ್ನಡ ಅಧ್ಯಯನ ಕೇಂದ್ರದಲ್ಲಿಕನ್ನಡ ಅಧ್ಯಾಪಕರಾಗಿದ್ದರು. ಆ ಬಳಿಕ ಎರಡು ವರ್ಷಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಕನ್ನಡನಾಡಿನ ಪ್ರಮುಖ ಚಿಂತಕರಲ್ಲಿ ಒಬ್ಬರು. ಬಂಡಾಯ ಸಾಹಿತ್ಯ ಚಳುವಳಿಯ ನೇತಾರರಲ್ಲಿ ಒಬ್ಬರು. ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಪ್ರೊ.
ಡಾ.ಬರಗೂರು ರಾಮಚಂದ್ರಪ್ಪಜನನ18 ಅಕ್ಟೋಬರ್ 1946
ಬರಗೂರು, ಸಿರಾ,ತುಮಕೂರುಕರ್ನಾಟಕ,ಭಾರತರಾಷ್ಟ್ರೀಯತೆಭಾರತೀಯಪೌರತ್ವಭಾರತೀಯವೃತ್ತಿಪ್ರಾಧ್ಯಾಪಕಚಿತ್ರ ನಿರ್ದೇಶಕಕವಿ,ಸಮಾಜವಾದಿNotable workಸುಂಟರಗಾಳಿ,ಒಂದು ಊರಿನ ಕಥೆಗಳು,ಕನ್ನಡಾಭಿಮಾನ, ಕಪ್ಪು ನೆಲದ ಕೆಂಪುಕಾಯಿ,ಮರಕುಟಿಕ,ರಾಜಕಾರಣಿ,ಸೂತ್ರ, ಕಾಂಟೆಸ್ಸಾ ಕಾವ್ಯ"Titleಗೌರವ ಡಾಕ್ಟರೇಟ್ಪ್ರಮುಖ ಪ್ರಶಸ್ತಿ(ಗಳು)ಕಥಾಸಂಕಲನ ಸುಂಟರಗಾಳಿಗೆ ರಾಜ್ಯಸಾಹಿತ್ಯ ಅಕ್ಯಾಡೆಮಿ ಬಹುಮಾನ * ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೃಪತುಂಗಾ ಸಾಹಿತ್ಯ ಪ್ರಶಸ್ತಿ-೨೦೧೩ * ರಾಯಚೂರಿನಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಜನನಸಂಪಾದಿಸಿ

ಬರಗೂರು ರಾಮಚಂದ್ರಪ್ಪನವರು೧೯೪೬ಅಕ್ಟೋಬರ ೧೮ರಂದು ತುಮಕೂರು ಜಿಲ್ಲೆಯ ಬರಗೂರುಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ ; ತಂದೆ ರಂಗದಾಸಪ್ಪ.

ಬೆಂಗಳೂರು ವಿವಿ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಇವರು ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಅವರು ಕೆಲಸ ನಿರ್ವಹಿಸಿದ್ದಾರೆ. 2016 ಡಿಸೆಂಬರ್ 2 ರಂದು ರಾಯಚೂರಿನಲ್ಲಿ ನಡೆಯುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ [೧]ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರನ್ನು ಆಯ್ಕೆಮಾಡಲಾಯಿತು[೨]

ಬರಗೂರು ಅವರ ಸ್ವಂತ ಜೀವನದ ನೆನಪುಗಳುಸಂಪಾದಿಸಿ

5 Dec, 2016೮೨ನೇ ರಾಯಚೂರು ಸಾಹಿತ್ಯ ಸಮ್ಮೇಳನ ಕೊನೆಯ ದಿನವಾದ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬರಗೂರು ಮಾತುದಳು:ಬಾಲ್ಯದ ನೆನಪು: ‘ಬಾಲ್ಯದಲ್ಲಿ ನನಗೆ ಡ್ರೈವರ್ ಆಗಬೇಕು ಎಂಬ ಕನಸು ಇತ್ತು. ಇದಕ್ಕೆ ಕಾರಣ ಮನೆಯಲ್ಲಿ ನನ್ನ ತಂದೆ ಅಣ್ಣನನ್ನು ಕಂಡಕ್ಟರ್ ಮಾಡಬೇಕು ಎಂದುಕೊಂಡಿದ್ದರು. ಅಣ್ಣನಿಗಿಂತ ನಾನು ಒಂದು ಹೆಜ್ಜೆ ಮುಂದಕ್ಕೆ ದೊಡ್ಡವನಾಗಬೇಕು ಎಂಬ ಬಯಕೆ ನನ್ನದು. ಹೀಗಾಗಿ ಕೆಂಪು ಬಸ್ಸಿನ ಚಾಲಕನಾಗಬೇಕು ಎಂದು ಕೊಂಡಿದ್ದೆ. ಆದರೆ, ಮನಸ್ಸಿನ ಆಳದಲ್ಲಿ ಅಸ್ಮಿತೆಯ ಭಾವನೆ ಪುಟಿದೆದ್ದಿತ್ತು. ಇದರಿಂದ ಶಾಲೆಯಲ್ಲಿ ಚೆನ್ನಾಗಿ ಓದಲು ಆರಂಭಿಸಿದ್ದು ಮಾತ್ರವಲ್ಲ. ತರಗತಿಯಲ್ಲಿ ಪ್ರತಿ ವರ್ಷವೂ ಮೊದಲಿಗನಾಗಿರುತ್ತಿದ್ದೆ’ ಎಂದು ನೆನಪಿಸಿಕೊಂಡರು.ಆರೋಗ್ಯದ ಗುಟ್ಟು: ‘ನನ್ನ ಆರೋಗ್ಯ ಚೆನ್ನಾಗಿರಲು ಮುಖ್ಯ ಕಾರಣ ಇನ್ನೊಬ್ಬರ ಕಾಲೆಳೆಯುವ ಗುಣ ನನ್ನಲ್ಲಿ ಇಲ್ಲ. ಹೊಟ್ಟೆಕಿಚ್ಚು ಪಡುವುದಿಲ್ಲ. ಇನ್ನೊಬ್ಬರ ಏಳಿಗೆ ಕಂಡು ಸಂತಸ ಪಡುತ್ತೇನೆ. ಬೆಂಗಳೂರಿನಲ್ಲಿ ಸರಿಯಾದ ಸಮಯದಲ್ಲಿ ಮನೆಗೆ ತಲುಪುವ ಬೆರಳೆಣಿಕೆ ಸಾಹಿತಿಗಳ ಪೈಕಿ ನಾನೂ ಒಬ್ಬ. ಬೇರೆ ಹವ್ಯಾಸಗಳಂತೂ ಇಲ್ಲ. ಕುಟುಂಬದ ಸದಸ್ಯರಿಗೆ ಸಮಯ ಕೊಡುತ್ತೇನೆ.ರಾತ್ರಿ 9 ಗಂಟೆಯ ಬಳಿಕ ಅಥವಾ ಬೆಳಿಗ್ಗೆ ಮುಂಚೆ ಎದ್ದು ಓದುವ ಅಭ್ಯಾಸವನ್ನು ಇಟ್ಟುಕೊಂಡಿದ್ದೇನೆ. ಸಮಯವನ್ನು ಹೇಗೆ ಬೇಕೊ ಹಾಗೆ ನಿರ್ವಹಿಸುತ್ತೇನೆ. ಇವೆಲ್ಲದರ ಜೊತೆಗೆ ಸಾಹಿತಿಯೂ ಹೌದು, ಚಳವಳಿಗಾರನೂ ಹೌದು ಮತ್ತು ಸಿನಿಮಾಗಳನ್ನೂ ಮಾಡಿದ್ದೇನೆ. ಒಳ್ಳೆ ಸಾಹಿತಿ ಹೌದೊ ಅಲ್ಲವೋ ಎಂಬುದನ್ನು ವಿಮರ್ಶಕರು ನಿರ್ಧರಿಸುತ್ತಾರೆ. ಆದರೆ, ಒಳ್ಳೆಯ ಮನುಷ್ಯ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ' ಎಂದು ಹೇಳಿದರು.ಕನಸು ಕಾಣುವುದನ್ನು ಬಿಡಬೇಡಿ: ‘ಏಕಲವ್ಯನಂತೆ ಬೆಳೆದು ಬಂದ ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗುವ ಕನಸು ಎಂದೂ ಕಂಡಿರಲಿಲ್ಲ. ಬೆವರಿನ ಸಂಸ್ಕೃತಿಯ ಹಿನ್ನೆಲೆಯಿಂದ ನಾವೂ ಕೂಡ ಇಂತಹ ಸ್ಥಾನ ಏರಬಹುದು ಎಂಬುದಕ್ಕೆ ನಾನೇ ಉದಾಹರಣೆ. ಹೀಗಾಗಿ ಕನಸು ಕಾಣುವುದನ್ನು ಯಾರೂ ಬಿಡಬಾರದು. ಮೂರನೇ ತರಗತಿಯಷ್ಟೇ ಓದಿದ್ದ ಡಾ. ರಾಜ್‌ಕುಮಾರ್‌ ಅವರಿಗೆ ಜಾತಿ ಹಿನ್ನೆಲೆ ಇರಲಿಲ್ಲ, ಹಣವೂ ಇರಲಿಲ್ಲ. ಆದರೆ, ಅವರ ಶ್ರಮ, ಶ್ರದ್ಧೆ ಮತ್ತು ಸವಾಲುಗಳನ್ನು ಎದುರಿಸಿದ ರೀತಿಯೇ ಅವರು ಅತ್ಯಂತ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು' ಎಂದು ಬರಗೂರು ರಾಮಚಂದ್ರಪ್ಪ ಅವರು ಹೇಳಿದರು.[೩]

ಕೃತಿಗಳುಸಂಪಾದಿಸಿ

೧ ಒಂದು ಊರಿನ ಕತೆಗಳು    ೨ ಕನ್ನಡಾಭಿಮಾನ

೩ ಕಪ್ಪು ನೆಲದ ಕೆಂಪು ಕಾಲು   ೪ ಮರಕುಟಿಗ 

೫ ರಾಜಕಾರಣಿ   ೬  ಸಾಹಿತ್ಯ     ೭ ಸುಂಟರಗಾಳಿ 

            ೮ ಸೂತ್ರ     ೯ ಕಾಂಟೆಸ್ಸಾ ಕಾವ್ಯ 

೯ ಸಂಸ್ಕೃತಿ, ಶ್ರಮ ಮತ್ತು ಸೃಜನಶೀಲತೆ 

೧೦ ನೆತ್ತರಲ್ಲಿ ನೆಂದ ಹೂ 

೧೧ ಗುಲಾಮನ ಗೀತೆ     ೧೨ ಕನ್ನಡ ಪ್ರಜ್ಞೆ [೪]

ನಿರ್ದೇಶಿಸಿದ ಸಿನಿಮಾಗಳುಸಂಪಾದಿಸಿ

೧ ಹಗಲುವೇಷ, ನಿರ್ದೇಶನ

೨ ಶಾಂತಿ, ನಿರ್ದೇಶನ ಭಾಗೀರಥಿ, 

೩ ನಿರ್ದೇಶನ ಕೋಟೆ, ನಿರ್ದೇಶನ  

೪ ಜನುಮದ ಜೋಡಿ, ಸಂಭಾಷಣೆ

ಪುರಸ್ಕಾರಗಳುಸಂಪಾದಿಸಿ

ಬರಗೂರು ರಾಮಚಂದ್ರಪ್ಪನವರ ಕಥಾಸಂಕಲನ ‘ಸುಂಟರಗಾಳಿ’ಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನೃಪತುಂಗ ಸಾಹಿತ್ಯ ಪ್ರಶಸ್ತಿ, ೨೦೧೩.

ರಾಯಚೂರಿನಲ್ಲಿ ಆಯೋಜಿಸಲಾದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.[೫]

ಚಲನಚಿತ್ರ ಪ್ರಶಸ್ತಿಗಳುಸಂಪಾದಿಸಿ

೧ 1978–79: ಉತ್ತಮ ಕಥೆ ಬರಹಗಾರ–ಒಂದು ಊರಿನ ಕಥೆ

೨ 1978–79: ಅತ್ಯುತ್ತಮ ಸಂಭಾಷಣೆ ಬರಹ–ಒಂದು ಊರಿನ ಕಥೆ

೩ 1983–84: ಅತ್ಯುತ್ತಮ ಸಂಭಾಷಣೆ ಬರಹ:ಬೆಂಕಿ 

೪ 1986–87: ಎರಡನೆಯ ಅತ್ಯುತ್ತಮ ಚಿತ್ರ-ಸೂರ್ಯ

೫ 1988–89: ಚಿತ್ರ ಸಂಭಾಷಣೆಗಾಗಿ ಜ್ಯುರಿಯವರ ವಿಶೇಷ ಪ್ರಶಸ್ತಿ–ಕೋಟೆ

೬ 1996–97: ಅತ್ಯುತ್ತಮ ಸಾಮಾಜಿಕ ಪ್ರಜ್ಞೆಯ ಕಥೆ-ಕರಡಿ ಪುರ

೭ 1996–97: ಅತ್ಯುತ್ತಮ ಸಂಭಾಷಣೆ ಬರಹ Best- ಜನುಮದ ಜೋಡಿ

೮ 1999–00:ಅತ್ಯುತ್ತಮ ಸಂಭಾಷಣೆ ಬರಹ-ಹಗಲು ವೇಷ

೯ 1999–00:ಅತ್ಯುತ್ತಮ ಸಂಭಾಷಣೆ ಬರಹ-ಹಗಲು ವೇಷ

೧೦ 2002–03: ಎರಡನೆಯ ಅತ್ಯುತ್ತಮ ಚಿತ್ರ-ಕ್ಷಾಮ

೧೧ 2003–04: ಎರಡನೆಯ ಅತ್ಯುತ್ತಮ ಚಿತ್ರ-ಶಾಂತಿ

೧೨ 2005–06: ಅತ್ಯುತ್ತಮ ಸಾಮಾಜಿಕ ಪ್ರಜ್ಞೆಯ ಕಥೆ-ತಾಯಿ

೧೩ 2005–06: ಅತ್ಯುತ್ತಮ ಸಂಭಾಷಣೆ ಬರಹ-ತಾಯಿ

೧೪ 2007–08: ಅತ್ಯುತ್ತಮ ಮಕ್ಕಳ ಚಿತ್ರ-ಏಕಲವ್ಯ

೧೫ 2008–09:ಅತ್ಯುತ್ತಮ ಕಥೆ ಬರಹಗಾರ -ಉಗ್ರಗಾಮಿ

೧೬ 2009–10: ಅತ್ಯುತ್ತಮ ಸಾಮಾಜಿಕ ಪ್ರಜ್ಞೆಯ ಕಥೆ-ಶಬರಿ 

೧೭ 2011: ಅತ್ಯುತ್ತಮ ಸಂಭಾಷಣೆ ಬರಹ-ಭಾಗೀರಥಿ

೧೮ 2012: ಅತ್ಯುತ್ತಮ ಸಂಭಾಷಣೆ ಬರಹ-ಅಂಗುಲಿಮಾಲ

ಹೊರ ಸಂಪರ್ಕಸಂಪಾದಿಸಿ

‘1 ಮೌಢ್ಯಾಚರಣೆಗೆ ಬಲಿಯಾದ ಅಕ್ಕ–ತಂಗಿ’;ನೆನಪು ಮೆಲುಕು ಹಾಕಿದ ಬರಗೂರು;ಪ್ರಜಾವಾಣಿ ;18 Dec, 2016

ಉಲ್ಲೇಖಗಳುಸಂಪಾದಿಸಿ

 82ನೇ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ಪ್ರಜಾವಾಣಿ ಸುದ್ದಿ,೦೩-೧೨-೨೦೧೬

2'  ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ

ಬಂಡಾಯ ಸಾಹಿತ್ಯದ ನಾಯಕತ್ವ ವಹಿಸಲು ಸಿದ್ಧ:ಬರಗೂರು;ಎಸ್‌. ರವಿಪ್ರಕಾಶ್‌;5 Dec, 2016 

ಕರ್ನಾಟಕ ಮಲ್ಲ,ಮುಂಬಯಿ, ೨೧,ನವೆಂಬರ್,೨೦೧೬, ಪ್ರೊ.ಬರಗೂರು ಅವರ ಕನ್ನಡ ಪ್ರಜ್ಞೆ, ಮತ್ತು ಕಟುವಾಸ್ತವ-ಡಾ.ಜಿ.ಎನ್.ಉಪಾಧ್ಯ,ಮುಖ್ಯಸ್ಥರು,ಮುಂಬಯಿ ವಿಶ್ವವಿದ್ಯಾಲಯ "

ಕನ್ನಡಿಗರು ಉಳಿದರೆ ಕನ್ನಡ ಉಳಿದೀತು", ವಿ.ಕ.ಸುದ್ದಿಲೋಕ,೧೦,ಅಕ್ಟೋಬರ್,೨೦೧೬

ಬಾಹ್ಯ ಸಂಪರ್ಕಗಳು

Last edited ೧೨ months ago by Shreekant.mishrikoti

RELATED PAGES

ಬಿ.ಸುರೇಶ

ಶ್ಯಾಮಲಾ ಮಾಧವ

ಕರ್ನಾಟಕ ರಾಜ್ಯ ಪ್ರಶಸ್ತಿಗಳು

                 ಇಂತಿ                                                                    ಮಂಜುನಾಥಕೆಎಂ                                          ಜನತಾ ಸರ್ಕಾರಿಪ್ರಥಮದರ್ಜೆಕಾಲೇಜು                                  ಬಸವಪಟ್ಟಣ {ಚಿರಡೋಣಿ}

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ