ಶುಕ್ರವಾರ, ಮೇ 25, 2018

ಗೋವಿಂದ ಪೈ ರವರ ಜೀವನ ಮತ್ತು ಸಾಹಿತ್ಯ ಪರಿಚಯ

ಎಂ. ಗೋವಿಂದ ಪೈ ( ಮಾರ್ಚ್ ೨೩೧೮೮೩ –ಸೆಪ್ಟೆಂಬರ್ ೬೧೯೬೩) ಕನ್ನಡದ ಪ್ರಪ್ರಥಮ "ರಾಷ್ಟ್ರಕವಿ"ಗಳಾಗಿ ಪ್ರಸಿದ್ಧರಾಗಿದ್ದಾರೆ. ಕೇರಳದ ಮಂಜೇಶ್ವರಕ್ಕೆ ಭಾರತದ ಸಾಂಸ್ಕೃತಿಕ ಭೂಪಟದಲ್ಲಿ ಸ್ಥಾನ ಒದಗಿಸಿಕೊಟ್ಟವರು ಗೋವಿಂದ ಪೈ.[೨] ೧೯೫೬ರಲ್ಲಿ ರಾಜ್ಯ ಪುನರ್‌ವಿಂಗಡಣೆಯಾದಾಗ ಕಾಸರಗೊಡು ಕೇರಳದ ಪಾಲಾಯಿತು. ಆಗ ಅವರು ಬಹಳ ಹಳಹಳಿಸಿದರು. ಗೋವಿಂದ ಪೈಗಳು ಕೊನೆಯ ತನಕ ತಮ್ಮ ಹೆಸರಿನೊಂದಿಗೆ ಮಂಜೇಶ್ವರ ವನ್ನು ಜೊತೆಗೂಡಿಸಿಕೊಂಡಿದ್ದರು. ಅವರ ಪಾಲಿಗೆ ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗವಾಗಿತ್ತು.

ಮಂಜೇಶ್ವರ ಗೋವಿಂದ ಪೈ

ಎಂ. ಗೋವಿಂದ ಪೈ

ಜನನ23 ಮಾರ್ಚ್ 1883
ಮಂಜೇಶ್ವರo ,ಕಾಸರಗೋಡು ಜಿಲ್ಲೆ , ಕೇರಳಮರಣಸಪ್ಟೆಂಬರ್ 6, 1963 (ವಯಸ್ಸು 80)ವೃತ್ತಿಸಾಹಿತಿರಾಷ್ಟ್ರೀಯತೆಭಾರತೀಯವಿಷಯಕನ್ನಡ ಸಾಹಿತ್ಯಬಾಳ ಸಂಗಾತಿಕೃಷ್ಣಾ ಬಾಯಿ[೧]

ಗೋವಿಂದ ಪೈಯವರ ಕೈ ಬರಹದಲ್ಲಿ "ತಾಯೆ ಬಾರ ಮೊಗವ ತೋರ" ಕವಿತೆ

ಮಂಜೇಶ್ವರ ಗೋವಿಂದ ಪೈ ಶಿಲ್ಪ.

ಬಾಲ್ಯ ಮತ್ತು ವ್ಯಾಸಂಗಸಂಪಾದಿಸಿ

ಗೋವಿಂದ ಪೈಗಳು ಮೂಲತಃ ಮಂಗಳೂರಿನವರು. ತಂದೆ ಮಂಗಳೂರು ತಿಮ್ಮಪ್ಪ ಪೈಗಳು ಮತ್ತು ತಾಯಿ ದೇವಕಿಯಮ್ಮ. ತಾಯಿಯ ತೌರುಮನೆ ಮಂಜೇಶ್ವರ. ಅವರು ಕಾಸರಗೋಡು ತಾಲೂಕಿನ ಮಂಜೇಶ್ವರದ ಅಜ್ಜನ ಮನೆಯಲ್ಲಿ ಮಾರ್ಚ್ ೨೩, ೧೮೮೩ ರಂದು ಜನಿಸಿ ದರು.[೧][೩] ಅವರ ತಂದೆ ತುಂಬ ಸ್ಥಿತಿವಂತರು. ಆಗಿನ ಕಾಲಕ್ಕೆ ಸಾವಿರಾರು ರೂಪಾಯಿ ವಾರ್ಷಿಕ ಕಂದಾಯ ಕಟ್ಟುತಿದ್ದವರು.ಗೋವಿಂದ ಪೈಗಳ ಪ್ರಾಥಮಿಕ ಶಿಕ್ಷಣ ಮಂಗಳೂರಿನಲ್ಲಿಯೇ ಆಯಿತು. ಅವರು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಇಂಟರ್‍ಮೀಡಿಯೆಟ್ಟಿನವರೆಗೆ ಶಿಕ್ಷಣ ಪಡೆದರು. ಖ್ಯಾತ ನವೋದಯ ಸಾಹಿತ್ಯದ ಆಚಾರ್ಯ ಪುರುಷರಾಗಿದ್ದ ಪಂಜೆ ಮಂಗೇಶರಾಯರು ಇವರಿಗೆ ಕನ್ನಡದ ಅಧ್ಯಾಪಕ ರಾಗಿದ್ದ ರು. ಹೆಚ್ಚಿನ ವ್ಯಾಸಂಗಕ್ಕಾಗಿ ಮದರಾಸಿಗೆ ( ಈಗಿನ ಚೆನ್ನೈಗೆ) ತೆರಳಿದರು. ನಂತರ ಪೈಯವರು ಮದ್ರಾಸಿನ ಕ್ರಿಶ್ಚಿಯನ್ ಕಾಲೇಜು ಸೇರಿದರು. ಅಲ್ಲಿ ಡಾ.ಎಸ್. ರಾಧಾಕೃಷ್ಣನ್ ಅವರು ಇವರ ಸಹಪಾಠಿಯಾಗಿದ್ದರು.ಬಿ.ಎ ತರಗತಿ ಕೊನೇ ವರ್ಷದ ಪರೀಕ್ಷೆ ನಡೆದಾಗಲೇ ತಂದೆಯ ಅನಾರೋಗ್ಯದ ಸುದ್ದಿ ತಿಳಿದು,ವ್ಯಾಸಂಗವನ್ನು ಬಿಟ್ಟು ಬಂದರು. ಅವರ ತಂದೆಯ ಮರಣದ ನಂತರ ಪದವಿ ಪಡೆಯುವ ಗೋಜಿಗೆ ಹೋಗಲೇ ಇಲ್ಲ. ಬರೆದಿದ್ದ ಒಂದೇ ಪ್ರಶ್ನೆಪತ್ರಿಕೆ ಇಂಗ್ಲೀಷಿನಲ್ಲಿ ಪ್ರಥಮಸ್ಥಾನ ಪಡೆದು ಬಂಗಾರದ ಪದಕ ಪಡೆದರು.[೪]ಆದರೂ ಕೂತಿದ್ದ ಪ್ರಥಮ ಭಾಗ ಇಂಗ್ಲಿಷಿನಲ್ಲಿ ವಿಶ್ವವಿದ್ಯಾನಿಲಯದ ಸುವರ್ಣ ಪದಕ ಅವರಿಗೆ ದೊರೆಯಿತು. ಆದರೆ ಅವರ ಸಾಹಿತ್ಯದ ಅಧ್ಯಯನ ಜೀವನಪರ್ಯಂತ ನಿರಂತರವಾಗಿ ಮುಂದುವರೆಯಿತು.[೧]

==ಸಾಹಿತ್ಯ --

ತಂದೆಯವರ ಮರಣದ ನಂತರ ಹಿರಿಯ ಮಗನಾದ ಇವರ ಮೇಲೆ ಮನೆತನದ ಎಲ್ಲ ಜವಾಬ್ದಾರಿ ಬಿತ್ತು. ಬಿ.ಎ ಪದವಿ ಪೂರ್ಣಗೊಳಿಸಲಿಲ್ಲ. ಮನೆಯಲ್ಲಿಯೇ ಅಮೂಲ್ಯ ಗ್ರಂಥಗಳನ್ನು ತರಿಸಿ ಓದಿದರು. ಕಾಲೇಜಿನಲ್ಲಿದ್ದಾಗ ಲ್ಯಾಟಿನ್ , ಫ್ರೆಂಚ್, ಸಂಸ್ಕ್ಕತ, ಪಾಲಿ, ಬಂಗಾಲಿ, ಭಾಷೆಗಳ ನ್ನು ಅಭ್ಯಸಿಸಿದ್ದರು. ಮನೆಯಲ್ಲಿ ಇನ್ನೂ ಹಲವು ಭಾಷೆಗಳನ್ನು ಅಭ್ಯಸಿಸಿ ಬಹುಭಾಷಾ ಪ್ರವೀಣರಾಗಿದ್ದರು. ಇವರ ಗ್ರಂಥಾಲಯದಲ್ಲಿ ೪೩ ಭಾಷೆಗಳ ಸಾವಿರಾರು ಗ್ರಂಥ ಸಂಗ್ರಹವಿತ್ತು. ಇವರ ಮಾತೃಭಾಷೆ ಕೊಂಕಣಿ, ಪರಿಸರದ ಭಾಷೆ ತುಳು, ರಕ್ತಗತವಾದ ಭಾಷೆ ಕನ್ನಡ. *ಕಲಿತದ್ದು ಇಂಗ್ಲೀಷಿನಲ್ಲಿ. ಮಲೆಯಾಳಿ ಮತ್ತು ತಮಿಳು ಆಜು ಬಾಜು ಭಾಷೆಗಳಾಗಿದ್ದವು. ಮರಾಠಿ ಗುಜರಾತಿ ಜರ್ಮನ್ ಗ್ರೀಕ್ ಮೊದಲಾದವು ಆಸಕ್ತ ಭಾಷೆಗಳಾಗಿದ್ದವು. ಮರಾಠಿ, ಜರ್ಮನ್ ಗ್ರೀಕ್ ಮೊದಲಾದ ಭಾಷೆಗಳನ್ನು ಕಲಿತು ಒಟ್ಟು ೨೫ ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದು ಕೊಂಡಿದ್ದರು. ಗೋವಿಂದ ಪೈಯವರು ನಂತರ ಮಂಜೇಶ್ವರದಲ್ಲಿ ನೆಲಸಿದ್ದರಿಂದ ಮಂಜೇಶ್ವರ ಗೋವಿಂದ ಪೈ ಎಂದೇ ಹೆಸರು ಗಳಿಸಿದರು.ಗೋವಿಂದ ಪೈಗಳು 'ಗಿಳಿವಿಂಡು', 'ನಂದಾದೀಪ' ಎಂಬ ಕಾವ್ಯ ಸಂಕಲನಗಳನ್ನು ಹೊರ ತಂದಿದ್ದಾರೆ. ‘ವೈಶಾಖಿ’ ಹಾಗು ‘ಗೊಲ್ಗೊಥಾ’ ಎನ್ನುವ ಎರಡು ಖಂಡಕಾವ್ಯಗಳನ್ನು ಬರೆದಿದ್ದಾರೆ ‘ಹೆಬ್ಬೆರೆಳು’ ಎನ್ನುವ ಪದ್ಯಗಳನ್ನು ಒಳಗೊಂಡ ಏಕಾಂಕ ನಾಟಕವನ್ನೂ, ‘ಚಿತ್ರಭಾನು’ ಎನ್ನುವ ಗದ್ಯನಾಟಕವನ್ನೂ ಬರೆದಿದ್ದಾರೆ. 'ತಾಯಿ‘, 'ಕಾಯಾಯ್ ಕೊಮಾಜಿ' ಎಂಬ ಸಾಮಾಜಿಕ ನಾಟಕಗಳನ್ನು ಬರೆದದ್ದಲ್ಲದೆ, ಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.ಅವರ ‘ಕನ್ನಡದ ಮೊರೆ’ ಎಂಬ ಸಂಕಲನದಲ್ಲಿ ಅವರು ಬರೆದ ಹಲವು ವ್ಯಕ್ತಿ ಚಿತ್ರಗಳು, ಆತ್ಮಕಥನಗಳು ಮತ್ತು ಭಾಷಣಗಳು ಅಡಕವಾಗಿವೆ. ಪ್ರಬಂಧರೂಪದಲ್ಲಿ ಅವರ 'ಆತ್ಮಕಥನ' ಮೂಡಿಬಂದಿದೆ. ಲೇಖಕನ ಕಷ್ಟನಿಷ್ಟುರಗಳನ್ನು ವರ್ಣಿಸುವ ‘ಬರಹಗಾರನ ಹಣೆಬರಹ’.

ತಮ್ಮ ಗುರುಗಳಾದ ಪಂಜೆಯವರಲ್ಲಿದ್ದ ಪೂಜ್ಯಭಾವದ ಪ್ರತೀಕದಂತಿರುವ 'ಕನಸಾದ ನನಸು', ಒಡನಾಡಿಗಳಾದ ಎಂ.ಎನ್. ಕಾಮತ್, ಕಿಲ್ಲೆ ಅವರ ಸ್ನೇಹದ ಬಗ್ಗೆ ಬರೆದಿರುವ ಅವರ ಬರಹಗಳು, ಎಂ.ಆರ್. ಶ್ರೀನಿವಾಸಮೂರ್ತಿಗಳಿಗೆ ನೆನಪು, ಬೇಂದ್ರೆಯವರಿಗೆ ಐವತ್ತು ದಾಟಿದ್ದಕ್ಕೆ ಸಲ್ಲಿಸಿದ ಹರಕೆ ಇವು ಅವರ ಇನ್ನಿತರ ಪ್ರಬಂಧಗಳಾಗಿವೆ.

ಅವರು ಮೂಲತಃ ಕವಿ. ಇನ್ನೂ ಎಂಟನೆಯ ತರಗತಿಯಲ್ಲಿರುವಾಗಲೇ ಬರೆದ ಮೂರು ಕವನಗಳು ಬಹುಮಾನ ಗಳಿಸಿದ್ದವು, ಮತ್ತು “ಸುವಾಸಿನಿ” ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಅವರ ಸಾಹಿತ್ಯ ಯಾತ್ರೆಯ ಪೂರ್ವಾರ್ಧವು ಬಹಳ ಸಮೃದ್ಧ ಮತ್ತು ಬಹುಮುಖಿ. ಕಾವ್ಯ, ನಾಟಕ, ಅನುವಾದ ವಿಮರ್ಶೆಗಳ ಬೆಳಸು ಬಹು ಹುಲುಸಾಗಿದ್ದವು. ಇನ್ನು ಛಂದಸ್ಸಿನ ವಿಷಯದಲ್ಲೂ ಅವರು ಪ್ರಗತಿಪರರು. ಶತಮಾನದ ಹಿಂದೆಯೇ ಕವನದಲ್ಲಿ ಪ್ರಾಸವನ್ನು ಕೈ ಬಿಟ್ಟಿದ್ದರು.ಅನುಕೂಲೆಯಾದ ಮಡದಿ ನೆಮ್ಮದಿಯ ಸಂಸಾರ ಮತ್ತು ನಿರಂತರ ಆದಾಯದಿಂದ ಗೃಹಸೌಖ್ಯವಿದ್ದ ಆ ಕಾಲದಲ್ಲಿ ಗಿಳಿವಿಂಡು, ನಂದಾದೀಪ, ಹೃದಯರಂಗ ಕವನ ಸಂಕಲನಗಳು ಹೊರಬಂದವು. ಏಸುವಿನ ಕೊನೆಯ ದಿನಗಳ ಬಗ್ಗೆ ಗೊಲ್ಗೋಥಾ ಬುದ್ಧನ, ಕೃಷ್ಣನ ಹಾಗೂ ಗಾಂಧೀಜಿ ಯವರ ಕೊನೆಯ ದಿನಗಳ ಕುರಿತು ಬರೆದ ವೈಶಾಖಿ, ಪ್ರಭಾಸ ಹಾಗೂ ದೆಹಲಿ ಖಂಡಕಾವ್ಯಗಳು ನಂತರ ಪ್ರಕಟವಾಗಿವೆ.ವೈಶಾಖಿ, ಪ್ರಾಕೃತದ ಆಳವಾದ ಅಧ್ಯಯನದ ಫಲ ಗೋಲ್ಗೋಥಾ ಖಂಡ ಕಾವ್ಯಕ್ಕೆ ಗ್ರೀಕ್ ಮೂಲ ಸಾಮಗ್ರಿಯ ಅವಲೋಕನ ಕಾರಣ, ಹೆಬ್ಬೆರಳು ಚಿತ್ರಭಾನು ನಾಟಕಗಳು, ಅಲ್ಲದೆ ‘ ನೋ’ ಎಂಬ ಜಪಾನಿ ನಾಟಕಕಾರನ ಎಂಟು ಕೃತಿಗಳ ಅನುವಾದ ಜೊತೆಗೆ ಸಂಶೋಧನೆ ಮತ್ತು ವಿಮರ್ಶೆ ಮೊದಲಾದವು ಬೆಳಕು ಕಂಡವು. ಅವುಗಳಲ್ಲಿ ಸೃಜನಶೀಲ ಕೃತಿಗಳ ಸಂಖ್ಯೆಯೇ ಅಧಿಕ. ಇವರ ಸಾಂಸಾರಿಕ ಜೀವನ ಸುಖದ ಅವಧಿ ಬಹು ಕಡಿಮೆ. ಹುಟ್ಟಿದ ಒಂದು ಹೆಣ್ಣು ಮಗು ಬೇಗನೆ ತೀರಿ ಹೋಯಿತು. 1927 ರಲ್ಲಿ ಇವರ ಹೆಂಡತಿ ಕೃಷ್ಣಾಬಾಯಿ ಮರಣ ಹೊಂದಿದರು. *ಆಗ ಪೈಯವರಿಗೆ 44 ವಯಸ್ಸು. ಅವರು ಮರು ಮದುವೆಯಾಗದೆ ವಾನ ಪ್ರಸ್ಥಾಶ್ರಮ ಸ್ವೀಕರಿಸಿದರು. ಅವರ ಜೀವನದಲ್ಲಿ ಅದು ಹೊಸ ತಿರುವು ನೀಡಿತು. ತಮಗಾದ ಅನಾನುಕೂಲವನ್ನು ಅವರು ತಮ್ಮ ಸಾಹಿತ್ಯ ಸೇವೆಗೆ ಪೂರಕವಾಗಿಸಿ ಕೊಂಡರು. ಅವರ ಬಹುತೇಕ ಸಂಶೋಧನ ಕೃತಿಗಳು ಈ ಅವಧಿಯಲ್ಲಿಯೇ ಹೊರ ಬಂದವು. ಕಾಲಮಾನದ ದೃಷ್ಟಿಯಿಂದ ಸೃಜನ, ಅವರ ಪೂರ್ವಾರ್ಧ ಜೀವನದ ಕೃಷಿ, ಸಂಶೋಧನ ಉತ್ತರಾರ್ಧ ಜೀವನದ ಕೃಷಿ.

ಸಂಶೋಧನೆಸಂಪಾದಿಸಿ

ಉದ್ರಿಕ್ತ ಭಾವನೆಗಳ ನೆಲೆಯಲ್ಲಿ ನಡೆಯುವ ಕಾವ್ಯ ಕ್ರಿಯೆಗಿಂತ ಅನ್ವೇಷಣ ಪ್ರಜ್ಞೆಯ ನೆಲೆಯಲ್ಲಿ ನಡೆಯುವ ಸಂಶೋಧನೆಯು ಅವರಿಗೆ ಆವಶ್ಯಕವೆನಿಸಿತು ಮತ್ತು ಅನಿವಾರ್ಯವೂ ಆಯಿತು. ಅದರ ಪರಿಣಾಮವಾಗಿ ಪೈ ಎಂದರೆ ಸಂಶೋಧನೆ, ಸಂಶೋಧನೆ ಎಂದರೆ ಪೈ ಎನ್ನುವಂತಾ ಯಿತು. ಸಂಶೋಧನೆಯು ಅವರ ಪ್ರಧಾನ ಸಾಹಿತ್ಯ ಕೃಷಿಯಾಯಿತು. ಬಹುಭಾಷಾ ಪಾಂಡಿತ್ಯ ಮತ್ತು ಸಾಹಿತ್ಯದ ಅಧ್ಯಯನವು ಅವರ ಜ್ಞಾನದ ಆಳ ಅಗಲಗಳನ್ನು ಹೆಚ್ಚಿಸಿದವು.ಯಾವುದೇ ವಿಷಯವಾದರೂ ಅನುವಾದವನ್ನು ಆಶ್ರಯಿಸದೆ ಮೂಲ ಕೃತಿಯನ್ನೇ ಓದಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಗಳಿಸಿದ್ದರು. ಇದರಿಂದಲಾಗಿ ಅವರ ಸಂಶೋಧನೆ ತಳಸ್ಪರ್ಶಿಯಾಗಿರುತಿತ್ತು. ಸಂಶೋಧನೆಯ ಮೂಲ ಪರಿಕರಗಳೆಂದರೆ ಶಾಸ್ತ್ರೀಯ ಅಡಿಪಾಯ ಮತ್ತು ಕಲಾತ್ಮಕ ದೃಷ್ಟಿಕೋನ. ಯಾವುದೇ ಶಾಸ್ತ್ರಕ್ಕಿರುವಂತೆ ನಿಗದಿತ ಚೌಕಟ್ಟು ಆಂತರಿಕ ಮತ್ತು ಬಾಹ್ಯ ಸಾಕ್ಷ್ಯಾಧಾರಗಳ ಸಂಗ್ರಹಣೆ, ಪರಿಗಣನೆ ತುಲನೆಮತ್ತು ವಿಶ್ಲೇಷಣೆ ಅಂತಿಮ ನಿರ್ಣಯದಲ್ಲಿ ಕಲಾತ್ಮಕ ಅನ್ವಯತೆಯಿಂದ ಪ್ರಾಯೋಗಿಕ ಮೌಲ್ಯವು ಸಿದ್ಧವಾದಾಗ ಮಾತ್ರ ಸಂಶೋಧನೆ ಸಫಲವಾಗು ತ್ತದೆ. ಅವರು ಹಚ್ಚಿದ ಜ್ಞಾನ ದೀವಿಗೆಯು ಸದಾ ಬೆಳಕು ಬೀರುವಂತೆ ಗೋವಿಂದ ಪೈ ಪ್ರತಿಷ್ಠಾನ ಈಗಲೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ.ಸಂಶೋಧಕ ಪೈ ಅವರ ಹಿರಿಯ ಗುಣ ಸತ್ಯ ಪ್ರಿಯತೆ, ಬೌದ್ಧಿಕ ಪ್ರಮಾಣಿಕತೆ ಮತ್ತು ವಸ್ತು ನಿಷ್ಠತೆ. ಸತ್ಯದ ಎಳೆ ಹಿಡಿದು ಎಷ್ಟೇ ವಾದ ಮಾಡಿದರೂ, ತಮ್ಮ ನಿರ್ಧಾರ ಸರಿ ಅಲ್ಲ ಎಂದು ಮನವರಿಕೆಯಾದಾಗ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವ ಗುಣ ಅವರದಾಗಿತ್ತು. ಸಂಶೋಧನಾ ಫಲಿತವು ಎಂದೂ ನಿತ್ಯ ಸತ್ಯವಲ್ಲ, ಹೊಸ ಪ್ರಮಾಣಗಳು ದೊರೆತಾಗ ಹಳೆಯ ಅಭಿಪ್ರಾಯವನ್ನು ಬದಲಿಸಿಕೊಳ್ಳುವ ಅಗತ್ಯದ ಆಶಯ ಅವರದ್ದಾಗಿತ್ತು.ಅವರ ಅನೇಕ ನಿರ್ಧಾರಗಳು ಕಾಲಾನುಕ್ರಮದಲ್ಲಿ ನಿಲ್ಲದೆ ಇರಬಹುದು ಆದರೆ ಸಂಶೋಧನಾ ವಿಧಾನದ ನಿಖರತೆ ಮತ್ತು ನಿರ್ಧಾರಗಳ ಅಧಿಕೃತತೆಯು ಮಾತ್ರ ಸುಸ್ಥಿರ ಕವಿ ಕಾವ್ಯಗಳ ಕಾಲ ನಿರ್ಣಯದಲ್ಲಿ ಅವರು ವಿದೇಶಿ ವಿದ್ವಾಂಸರು ಅನುಸರಿಸುತ್ತಿದ್ದ ಪದ್ದತಿಯನ್ನು ವಿರೋಧಿಸಿದರು.

ಕ್ರೈಸ್ತ ಪಂಚಾಂಗವನ್ನು ಅನುಕರಿಸಿ ಶಾಸನಗಳ ಕಾಲ ನಿರ್ಣಯ ಮಾಡಲು ನಿರಾಕರಿಸಿದರು.

ಅದರ ಬದಲಾಗಿ ಭಾರತೀಯ ಪಂಚಾಂಗಗಳ ಆಧಾರದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಅದೇ ವಿಧಾನದಿಂದ ಗೌತಮ ಬುದ್ದ, ಮಹಾವೀರ, ಬ್ರಹ್ಮ, ಶಿವ, ಕುಮಾರವ್ಯಾಸ ಮೊದಲಾದವರ ಕಾಲನಿರ್ಣಯ ಮಾಡಿದರು. ಪ್ರಸಿದ್ಧ ಕವಿಗಳಾದ ಪಂಪ, ರನ್ನ, ನಾಗಚಂದ್ರ, ಲಕ್ಷ್ಮೀಶ, ರತ್ನಾಕರ ವರ್ಣಿ ಮತ್ತು ಪಾರ್ತಿಸುಬ್ಬ ಇವರ ಕಾಲದೇಶಗಳ ನಿರ್ಣಯಕ್ಕೆ ವ್ಯಾಪಕ ಸಂಶೋಧನೆ ಮಾಡಿರುವರು. ಅದರಿಂದ ಅವರ ಕಾಲ ಅಂದಿನವರೆಗೆ ಅಂಗೀಕೃತವಾಗಿದ್ದ ಕಾಲಕ್ಕಿಂತ ಬಹು ಹಿಂದೆ ಹೋಗಿರುವುದು ಗಣನೀಯ.ಅವರು ಸಂಶೋಧನೆಗೆ ಆರಿಸಿದ ವಿಷಯಗಳು ಅನೇಕ. ಧರ್ಮಗಳು, ದೇವಾಲಯಗಳು, ರಾಜವಂಶಗಳು, ಶಾಸನಗಳು ಪುರಾತನ ಕವಿಗಳು ಹೀಗೆ ಎಲ್ಲದರಲ್ಲೂ ಅವರ ಸಂಶೋಧನಾತ್ಮಕ ಕೊಡುಗೆ ಇದೆ. ಸಾಹಿತ್ಯ ಸಂಶೋಧನೆಯ ಜೊತೆ ಜೊತೆಗೆ ಹೊಸ ಪದಗಳ ಸೃಷ್ಠಿಗೂ ಅವರು ಪ್ರಾಮುಖ್ಯತೆ ಕೊಟ್ಟಿದ್ದರು. ಭಾಷೆ ಬೆಳೆಯಬೇಕಾದರೆ ಶಬ್ದಸಂಗ್ರಹವನ್ನು ಹೆಚ್ಚಿಸುವುದು ಅನಿವಾರ್ಯ ಎನ್ನುವುದು ಅವರ ಅಚಲ ನಂಬಿಕೆಯಾಗಿತ್ತು.“ ಹೊಸ ಭಾವನೆಗಳು ಹುಟ್ಟುತಿದ್ದಂತೆ ಅವುಗಳನ್ನು ಯಥಾವತ್ತಾಗಿ ಮೂಡಿಸಲು ಹಳೆಯ ಶಬ್ದಸಂಗ್ರಹ ಸಾಲದು" ಎಂಬ ಅವರ ಮಾತು ಆಧುನಿಕ ಮನೋಭಾವದ ಸಂಕೇತ. ತಮ್ಮ ಅನಿಸಿಕೆಯನ್ನು ಮಾತಿನಲ್ಲಿ ಮಾತ್ರವಲ್ಲದೆ ಕೃತಿಯಲ್ಲಿಯೂ ತೋರಿಸಿದರು. ” ಇಸು” ಪ್ರತ್ಯಯ ಬಳಸಿ ಪಾನಿಸು, ಕೋಲಾಹಲಿಸು’ ಪದಗಳನ್ನು ಸೃಷ್ಠಿಸಿದರು. ಕನ್ನಡದಲ್ಲಿ ಪಾರಿಭಾಷಿಕ ಪದಗಳ ಕೊರತೆಯನ್ನು ನೀಗಿಸಲು ಅವರ ಮಾತನ್ನು ಪರಿಶೀಲಿಸಬೇಕಾಗಿದೆ. ಪ್ರಾಚೀನ ಗ್ರೀಕ್‌ ಪ್ರಹಸನದಲ್ಲಿ ಕೆಲವು ಕನ್ನಡ ಪದ ಗಳು ಇರುವುದನ್ನು ಮೊಟ್ಟ ಮೊದಲು ಗುರುತಿಸಿದ ವಿದ್ವಾಂಸರು ಅವರು. *ಅದರಲ್ಲಿ ಬರುವ ಹಬ್ಬ ತೆರಿಗೆ, ಸಂರಕ್ಷಿಸು, ಎತ್ತು ಒಸೆ ಮೊದಲಾದ ಪದಗಳು ಕನ್ನಡ ಮೂಲದ ಪದಗಳೆಂಬುದು ಅವರ ಊಹೆ. ಈ ಗ್ರೀಕ್‌ ಪ್ರಹಸನವು ಕ್ರಿ. ಪೂರ್ವ ಆವಧಿಯದು. ಆದ್ದರಿಂದ ಕನ್ನಡ ಕ್ರಿ. ಪೂರ್ವ ಒಂದನೆಯ ಶತಮಾದಲ್ಲಿಯೇ ಇದ್ದಿತು ಎಂಬುದ ಅವರ ವಾದ. ಇಂದಿಗೆ ಅವರ ಈ ವಾದವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ. ಕನ್ನಡದ ಪ್ರಾಚೀನತೆಯನ್ನು ನಿರ್ಧರಿಸುವಲ್ಲಿಯೂ ಕನ್ನಡಕ್ಕೆ ಕ್ಲಾಸಿಕಲ್‌ ಪಟ್ಟ ದೊರಕುವಲ್ಲಿಯೂ ಇದು ಬಹುಮುಖ್ಯ ಆಧಾರ ಎನ್ನಬಹುದು.ಆದರೆ ಸಂಶೋಧನೆ ಗೋವಿಂದ ಪೈಗಳ ಬರೆವಣಿಗೆಯ ಅತಿ ಮುಖ್ಯ ಭಾಗ. ತುಳುನಾಡಿನ ಇತಿಹಾಸ, ಗೌಡ ಸಾರಸ್ವತರ ಮೂಲ, ಬಸವೇಶ್ವರ ವಂಶಾವಳಿ, ಹಾಗು ಕರ್ನಾಟಕದ ಪ್ರಾಚೀನ ರಾಜಮನೆತನಗಳು, ಭಾರತೀಯ ಇತಿಹಾಸ, ಜೈನ, ಬೌದ್ಧ ಹಾಗು ವೀರಶೈವ ಧರ್ಮಗಳ ಬಗೆಗೆ ಮೌಲಿಕ ಸಂಶೋಧನೆ ಮಾಡಿ, ಅನೇಕ ಲೇಖನಗಳನ್ನು ಬರೆದಿದ್ದಾರೆ. ಪಾರ್ಶ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಟೇಶ್ವರ ಚರಿತೆ, ಭಗವಾನ್ ಬುದ್ಧ ಮುಂತಾದ ಕೆಲವು ಲೇಖನಗಳನ್ನು ಇಲ್ಲಿ ಹೆಸರಿಸಬಹುದು.ಯೇಸುವಿನ ಕಡೆಯ ದಿನವನ್ನು ಕುರಿತು ‘ಗೊಲ್ಗೊಥಾ’ ಮತ್ತು ಬುದ್ಧನ ಕಡೆಯ ದಿನವನ್ನು ಕುರಿತ ‘ವೈಶಾಖಿ’ ಎಂಬ ನೀಳ್ಗವಿತೆಗಳಲ್ಲಿ ಅವರ ಸಂಶೋಧನೆಯ ಅಗಾಧತೆಯನ್ನು ಕಾಣಬಹುದಾಗಿದೆ. ‘ಗೊಲ್ಗೊಥಾ’ದ ವಸ್ತುವನ್ನು ಸಂಗ್ರಹಿಸುವಲ್ಲಿ ಮೂಲ ಆಕರಗಳನ್ನು ಎಷ್ಟು ನಿಷ್ಠೆ ಯಿಂದ ವ್ಯಾಸಂಗ ಮಾಡಿರುವರೆನ್ನುವುದನ್ನು, ‘’ವೈಶಾಖಿ’ಗೆ ಸಂಬಂಧಿಸಿದ ಪಾಳಿಭಾಷೆಯ ಗ್ರಂಥಗಳನ್ನೇ ಅವಲಂಬಿಸಿರುವರೆಂಬುದನ್ನೂ ಅವರು ಕೊಟ್ಟಿರುವ ಟಿಪ್ಪಣಿಗಳಿಂದ ತಿಳಿಯಬಹುದು.ಗೋವಿಂದ ಪೈ ಸಂಶೋಧನ ಸಂಪುಟ 1995ರ ವರ್ಷದಲ್ಲಿ ಪ್ರಕಟವಾಗಿದೆ. ಗೋವಿಂದ ಪೈಗಳ ಪತ್ರಗಳನ್ನು ಜಿ.ಪಿ.ರಾಜರತ್ನಂರವರು ‘ ಮಂಜೇಶ್ವರ ಗೋವಿಂದ ಪೈಗಳ ಪತ್ರಗಳು’ ಎನ್ನುವ ಪುಸ್ತಕರೂಪದಲ್ಲಿ ಹೊರತಂದಿದ್ದಾರೆ.

ನಾಡ ಭಕ್ತಿಗೀತೆಗಳುಸಂಪಾದಿಸಿ

ಗೋವಿಂದ ಪೈ ಅವರ ದೇಶಭಕ್ತಿ ತಮ್ಮ ತವರುನಾಡಾದ ತುಳುನಾಡಿನಿಂದ ಮೊದಲ್ಗೊಂಡು, ಕನ್ನಡನಾಡಿನ ಸುತ್ತಲೂ ಬಳ್ಳಿಯಂತೆ ಹಬ್ಬಿ, ಕಡೆಗೆ ಭಾರತಾಂಬೆಯ ಅಡಿದಾವರೆಗಳಲ್ಲಿ ಪುಷ್ಪವಾಗಿ ಸಮರ್ಪಣೆಗೊಂಡಿದೆ. “ಜಯ ಜಯ ತುಳುವ ತಾಯೆ ಮಣಿವೆ, ತಂದೆ ತಾಯಂದಿರ ತಾಯೆ, ಭುವನದಿ ತ್ರಿದಿವಚ್ಛಾಯೆ” ಎಂಬುದು ಅವರ ತುಳುನಾಡಿನ ಕುರಿತ ಮೊದಲ ಸಾಲುಗಳು.“ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ. ನಮ್ಮ ಜನ್ಮದಾತೆಯೆ” ಎಂಬ ಅವರ ಹಾಡು ನಿರಂತರವಾಗಿ ಕನ್ನಡಿಗರ ತನುಮನ ಗಳಲ್ಲಿ ಮಾರ್ದನಿಸುತ್ತಿದೆ. "ಭಾರತವನಳಿಯುತ್ತ ನನಗೆ ಜೀವನವೆತ್ತ? ಭಾರತವೇ ನನ್ನುಸಿರು, ನನ್ನೊಗೆದ ‘ಬಸಿರು’ ಎಂದು ಭಕ್ತಿಯಿಂದ ನಮಿಸುತ್ತಾ ‘ಭಾರತ ಯಶೋಗಾನವೆನ್ನೆದೆಯ ತಾನ’ “ಭಾರತಾಂಬೆಯ ಭಕ್ತಿ ನನಗಾತ್ಮಶಕ್ತಿ” ಎಂದು ತಾಯಿ ಭಾರತಾಂಬೆಗೆ ಧನ್ಯತೆಯನ್ನು ವ್ಯಕ್ತಪಡಿಸುತ್ತಾರೆ.

ಹಲವು/ಬಹುಭಾಷಾ ಪಾಂಡಿತ್ಯಸಂಪಾದಿಸಿ

ಗೋವಿಂದ ಪೈಗಳು ಕೊಂಕಣಿತುಳುಕನ್ನಡಸಂಸ್ಕೃತ,ಮಲಯಾಳಂತೆಲುಗುತಮಿಳುಮರಾಠಿಒರಿಯಾ,ಬಂಗಾಳಿಪಾಲಿಅರ್ಧಮಾಗಧಿಉರ್ದುಪರ್ಷಿಯನ್,ಗ್ರೀಕ್ಲ್ಯಾಟಿನ್ಜಪಾನಿಇತಾಲಿಯನ್ ,ಸ್ಪಾ ನಿಷ್,ಪ್ರಾಕೃತಹಿಂದಿ ಹಾಗೂ ಗುಜರಾತಿ, ಪಾಂಡಿತ್ಯವನ್ನು ಪಡೆದಿದ್ದರು.

ಕೃತಿಗಳುಸಂಪಾದಿಸಿ

೧ ಗೊಲ್ಗೋಥಾ ಅಥವಾ ಯೇಸುವಿನ ಕಡೆಯ ದಿನ Golgotha

೨ ವೈಶಾಖಿ ಅಥವಾ ಬುದ್ಧನ ಕೊನೆಯ ದಿನ (ಖಂಡ ಕಾವ್ಯ)

೩ ಹೆಬ್ಬೆರಳು     ೪ ಇಂಡಿಯಾನ     ೫ ವಿಟಂಕ

೬ ಇಂಗಡಲು (ಆಯ್ದ ಕವನಗಳು) 

೭ ಶ್ರೀಕೃಷ್ಣ ಚರಿತ್ರೆ

೮ ಆತ್ಮಕಥೆ:- ಕನ್ನಡದ ಮೊರೆ (ಭಾಷಣಗಳು ಮತ್ತು ಲೇಖನಗಳು)

೯ ತಾಯಿ ಮತ್ತು ನೋ ನಾಟಕಗಳು

೧ ಕುಮಸಾಕಾ ೨ ಕಾಯೊಮ್ ಕೋಮಾಚಿ

೩ ಸೊತೋಬಾಕೊಮಾಚಿ ುನೊಡu

೪ ಹಾಗೊರೋವೊ 

೫ ತ್ಸುನೆಮಾಸ 

೬ ಸೊಮಾಗೆಮಂಜಿ 

೭ ಚೊರಿಯೊ ೮ ಶೋಜೊ ೯ ಗಿಳಿವಿಂಡು (ಕವನ ಸಂಕಲನ)

೧೦ ಗೀತಾಂಜಲಿ (ರವೀಂದ್ರನಾಥ ಠಾಗೋರರ ಗೀತಾಂಜಲಿಯ ಕನ್ನಡ ಅನುವಾದ)

೧೧ ಗೋವಿಂದ ಪೈ ಅವರ ಲೇಖನಗಳು ಮತ್ತು ಪ್ರಬಂಧಗಳು

೧೨ ಗೋವಿಂದ ಪೈ ಅವರ ಕೆಲವು ಪತ್ರಗಳು

೧೩ ಚಿತ್ರಭಾನು ಅಥವಾ ೧೯೪೨

೧೪ ಗೋವಿಂದ ಪೈ ಸಂಶೋಧನಾ ಸಂಪುಟ

೧೫ ನಂದಾದೀಪ (ಕವನ ಸಂಕಲನ)

೧೬ ಹೃದಯರಂಗ (ಕವನ ಸಂಕಲನ)

ಗೌರವ/ಪುರಸ್ಕಾರಸಂಪಾದಿಸಿ

ಕನ್ನಡದ ಪ್ರಥಮ 

ರಾಷ್ಟ್ರಕವಿ೧೯೪೯ರಲ್ಲಿ ಮದರಾಸು ಸರಕಾರವು (೧೯೫೬ರಲ್ಲಿಕರ್ನಾಟಕ ಏಕೀಕರಣಕ್ಕಿಂತ ಮೊದಲು ದಕ್ಷಿಣ ಕನ್ನಡಜಿಲ್ಲೆಯು ಆಗಿನ ಮದರಾಸು ರಾಜ್ಯದಲ್ಲಿ ಅಂದರೆ ಈಗಿನ ತಮಿಳುನಾಡಿನಲ್ಲಿದ್ದಿತು.) ಗೋವಿಂದ ಪೈಗಳಿಗೆರಾಷ್ಟ್ರ ಕವಿ ಎಂದು ಸನ್ಮಾನ ನೀಡಿ ಗೌರವಿಸಿತು.ಸಾಹಿತ್ಯ ಸಮ್ಮೇಳನದ 

ಅಧ್ಯಕ್ಷತೆ೧೯೫೦ರಲ್ಲಿಮುಂಬಯಿಯಲ್ಲಿ ಜರುಗಿದ ೩೪ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೋವಿಂದ ಪೈಗಳು ಅಧ್ಯಕ್ಷರಾಗಿದ್ದರು.

ಗೋವಿಂದ ಪೈ ಸಂಶೋಧನ ಕೇಂದ್ರಸಂಪಾದಿಸಿ

ಗೋವಿಂದ ಪೈ ಸಂಶೋಧನಾ ಕೇಂದ್ರ, ಕುಂಜಿಬೆಟ್ಟು ಉಡುಪಿ

ಉಡುಪಿಯಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಎಂ.ಜಿ.ಎಂ ಕಾಲೇಜಿನ ಅಂಗಸಂಸ್ಥೆಯಾಗಿ ೧೯೬೫ರಲ್ಲಿ ಸ್ಥಾಪನೆಗೊಂಡಿತು. ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ, ಕಿರಿಯರಿಗೆ, ಸಂಶೋಧನಕರ್ತರಿಗೆ ಕಾಶಿಯಾಗಿದೆ . ಪಿಹೆಚ್.ಡಿ ಅಧ್ಯಯನ ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಮಂಜೇಶ್ವರ ಗೋವಿಂದ ಪೈಗಳ ಸಂಗ್ರಹದ ಪುಸ್ತಕ ಭಂಡಾರ ಹಾಗೂ ಪ್ರಾಚ್ಯ ವಸ್ತುಸಂಗ್ರಹಾಲಯವೂ ಇದೆ.ಈ ಗ್ರಂಥಾಲಯದಲ್ಲಿ ಸುಮಾರು ಮೂವತ್ತೈದು ಭಾಷೆಗಳ ಐದು ಸಾವಿರ ಪುಸ್ತಕಗಳಿವೆ. ಕನ್ನಡ ಹಾಗೂ ಇಂಗ್ಲಿಷ್ ಪುಸ್ತಕಗಳು ಹಾಗೂ ಹಳೆಯ ನಿಯತಕಾಲಿಕಗಳು ಅಪೂರ್ವವಾಗಿದೆ. ದೇವತಾ ವಿಗ್ರಹಗಳ ಶಿಲ್ಪಕೃತಿಗಳು, ವೀರಗಲ್ಲು, ಮಾಸ್ತಿಗಲ್ಲುಗಳು, ಮರದ ಕೆತ್ತನೆಗಳು, ಕಂಚಿನ ಆಕೃತಿಗಳು ಇಲ್ಲಿ ಕಾಣಬಹುದಾಗಿದೆ. ಸಂಶೋಧಕ ರಿಗೆ ಈ ಕೇಂದ್ರ ಸಂಗ್ರಹದಿಂದ ದೊರಕುವ ಲಾಭ ಸಾಮಾನ್ಯವಾದುದಲ್ಲ.

ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿಯ ಕಲಾಕೃತಿಗಳುಸಂಪಾದಿಸಿ

ಕೇಂದ್ರದ ಪುಸ್ತಕ ಪ್ರಕಟಣೆಗಳುಸಂಪಾದಿಸಿ

Main article: ಗೋವಿಂದ ಪೈ ಸಂಶೋಧನ ಕೇಂದ್ರ § ಕೇಂದ್ರದ ಪುಸ್ತಕ ಪ್ರಕಟಣೆಗಳು

ವಿದಾಯಸಂಪಾದಿಸಿ

೧೯೬೩ರ ಸೆಪ್ಟೆಂಬರ್ ೦೬ ರಂದು ಗೋವಿಂದ ಪೈಯವರು ನಿಧನ ಹೊಂದಿದರು.

ಹೆಚ್ಚಿಗೆ ಓದಲುಸಂಪಾದಿಸಿ

ಗೋವಿಂದ ಪೈ ಸಂಶೋಧನ ಕೇಂದ್ರವಿಕಿಮೀಡಿಯ ಕಣಜದಲ್ಲಿ ಗೋವಿಂದ ಪೈವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ .

ಉಲ್ಲೇಖಗಳುಸಂಪಾದಿಸಿ

↑ ೧.೦ ೧.೧ ೧.೨ ಎಂ. ತಿರುಮಲೇಶ್ವರ ಭಟ್ಟ; 

ನೀರ್ಕಜೆತಿರುಮಲೇಶ್ವರ ಭಟ್ಟ (1 January 1993).ಗೋವಿಂದ ಪೈ. ಸಾಹಿತ್ಯ ಅಕಾದೆಮಿ. ISBN 978-81-7201-540-4

Retrieved 23 July 2013. ವೆಂಕಟ ಮಾಧವರಾವ್ ಇನಾಂದಾರ್: "ಗೋವಿಂದ ಪೈ" [http: //bavivekrai. wordpress. com/ 2012/ 01/ 19/m-govinda-paia-kannada-scholar-poet-an-indian-image-of-universal-religion/ "M.Govinda Pai:A Kannada Scholar-Poet ,an Indian Image of Universal Religion"]Check |url= value (help). "Rashtrakavi M. Govind Pai".

ಬಾಹ್ಯ ಸಂಪರ್ಕಗಳುಸಂಪಾದಿಸಿ

ಕನ್ನಡ ಸಾಹಿತಿಗಳು ರಾಷ್ಟ್ರಕವಿ ಎಂ. ಗೋವಿಂದ ಪೈ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ