ಹುಡುಕು
ಸಂಪಾದಿಸಿಈ ಪುಟವನ್ನು ವೀಕ್ಷಿಸಿಇನ್ನೊಂದು ಭಾಷೆಯಲ್ಲಿ ಓದು
ಯು.ಆರ್.ಅನಂತಮೂರ್ತಿ
ಕನ್ನಡ ಬರಹಗಾರ ಮತ್ತು ವಿಮರ್ಶಕ
ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಅವರು ಚಿಂತಕರೂ ವಿಮರ್ಶಕರೂ ಆಗಿ ಪ್ರಸಿದ್ಧರಾಗಿದ್ದವರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದರು. ತಮ್ಮ ಸಮಗ್ರ ಸಾಹಿತ್ಯಕ್ಕಾಗಿ ೧೯೯೪ರಲ್ಲಿಜ್ಞಾನಪೀಠ ಪ್ರಶಸ್ತಿ ಪಡೆದರು.
ಯು.ಆರ್. ಅನಂತಮೂರ್ತಿಜನನ21 ಡಿಸೆಂಬರ್ 1932
ಮೇಳಿಗೆ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ,ಮೈಸೂರು ಸಂಸ್ಥಾನ, ಭಾರತಮರಣ22 ಆಗಸ್ಟ್ 2014 (ವಯಸ್ಸು 81)
ಬೆಂಗಳೂರು, ಕರ್ನಾಟಕ, ಭಾರತವೃತ್ತಿಪ್ರಾಧ್ಯಾಪಕರು, ಕನ್ನಡದ ಪ್ರಸಿದ್ಧ ಸಾಹಿತಿರಾಷ್ಟ್ರೀಯತೆಭಾರತೀಯಪ್ರಕಾರ/ಶೈಲಿಕವಿತೆ, ಕತೆ, ಕಾದಂಬರಿ, ಪ್ರಬಂಧ, ಸಾಹಿತ್ಯವಿಮರ್ಶೆ, ನಾಟಕಸಾಹಿತ್ಯ ಚಳುವಳಿನವ್ಯ
ಪ್ರಭಾವಗಳು
ರಾಮ್ ಮನೋಹರ್ ಲೋಹಿಯ, ಗೋಪಾಲಕೃಷ್ಣ ಅಡಿಗ, ಶಾಂತವೇರಿ ಗೋಪಾಲಗೌಡ, ಮಹಾತ್ಮಾ ಗಾಂಧಿ
'ಡಾ.ಅನಂತಮೂರ್ತಿ, ಪತ್ನಿಯವರ ಜೊತೆ'
ಕನ್ನಡ ವಿಕಿಪೀಡಿಯದ ೯ನೇ ವಾರ್ಷಿಕೋತ್ಸವ ಸಮಯದಲ್ಲಿ - ಯು.ಆರ್ ಅನಂತಮೂರ್ತಿ
ಜನನಸಂಪಾದಿಸಿ
ಅನಂತಮೂರ್ತಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯತೀರ್ಥಹಳ್ಳಿ ತಾಲ್ಲೂಕಿನ 'ಮೇಳಿಗೆ' ಹಳ್ಳಿಯಲ್ಲಿ, ೧೯೩೨ರಡಿಸೆಂಬರ್ ೨೧ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ, ತಾಯಿ ಸತ್ಯಮ್ಮ (ಸತ್ಯಭಾಮ).
ವಿದ್ಯಾಭ್ಯಾಸಸಂಪಾದಿಸಿ
'ದೂರ್ವಾಸಪುರ'ದ ಸಾಂಪ್ರದಾಯಿಕ ಸಂಸ್ಕೃತಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದ ಅನಂತಮೂರ್ತಿಯವರ ಓದು ಅನಂತರ ತೀರ್ಥಹಳ್ಳಿ,ಮೈಸೂರುಗಳಲ್ಲಿ ಮುಂದುವರೆಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆಹೋದರು. ಕಾಮನ್ವೆಲ್ತ್ ವಿದ್ಯಾರ್ಥಿ ವೇತನ ಪಡೆದ ಇವರು ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾನಿಲಯದಿಂದಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ೧೯೬೬ರಲ್ಲಿ ಪಿಎಚ್.ಡಿ ಪದವಿ ಪಡೆದರು."ಋಜುವಾತು "ಪತ್ರಿಕೆಯನು ಪ್ರಾರಂಭಿಸಿದರು.
ವೃತ್ತಿ ಜೀವನಸಂಪಾದಿಸಿ
ಹಾಸನ, ಶಿವಮೊಗ್ಗ , ಮೈಸೂರುಗಳಲ್ಲಿ ಇಂಗ್ಲೀಷ್ ಉಪನ್ಯಾಸಕಮೈಸೂರು ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ರೀಡರ್, ೧೯೫೬-೧೯೭೦
ಮೈಸೂರು ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರಾಧ್ಯಾಪಕ, ೧೯೭೦-೮೭
ಉಪಕುಲಪತಿ, ಮಹಾತ್ಮಗಾಂಧಿವಿವಿ,ಕೊಟ್ಟಾಯಂ,ಕೇರಳ, ೧೯೮೭-೯೧
ಸಂದರ್ಶಕಪ್ರಾಧ್ಯಾಪಕ,ಟ್ಯೂಬಿಂಗನ್ ವಿವಿ, ಜರ್ಮನಿ೧೯೯೨
ಸಂದರ್ಶಕಪ್ರಾಧ್ಯಾಪಕ,ಶಿವಾಜಿ ವಿಶ್ವವಿದ್ಯಾಲಯಕೊಲ್ಲಾಪುರ (೧೯೮೨), ಜವಾಹರಲಾಲ್ವಿಶ್ವವಿದ್ಯಾಲಯ, ದೆಹಲಿ (೧೯೮೫)
ಅಧ್ಯಕ್ಷರು, ಕೇಂದ್ರ ಸಾಹಿತ್ಯ ಅಕಾಡೆಮಿ (ದೆಹಲಿ), ೧೯೯೩
ಸಂದರ್ಶಕ ಪ್ರಾಧ್ಯಾಪಕ, ಪೆನ್ವಿಲ್ವೇನಿಯಾ ವಿವಿ, ೨೦೦೦
ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯದ ಅಧ್ಯಕ್ಷ, ೧೯೯೨ಸಂದರ್ಶಕ ಪ್ರಾಧ್ಯಾಪಕ, ಅಯೋವಾ ವಿಶ್ವವಿದ್ಯಾಲಯ (೧೯೭೫,೧೯೮೫), ಟೆಕ್ಸಾಸ್ ವಿಶ್ವವಿದ್ಯಾಲಯ (೧೯೭೮, ೧೯೯೭)
ಗುಲ್ಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ (೨೦೧೨)
ಇಂದಿರಾಗಾಂಧಿ ಮುಕ್ತ ವಿ.ವಿ. ಟ್ಯಾಗೋರ್ ಪೀಠದ ಅಧ್ಯಕ್ಷ
ಅಧ್ಯಕ್ಷ, ಆಡಳಿತ ಮಂಡಳಿ, ಫಿಲಂ ಮತ್ತು ಟೆಲಿವಿಶನ್ ಸಂಸ್ಥೆ, ಪುಣೆ (೨೦೦೦-೨೦೦೪)[೧]
ಕೃತಿಗಳುಸಂಪಾದಿಸಿ
ಕಥಾ ಸಂಕಲನಸಂಪಾದಿಸಿ
೧ ಎಂದೆಂದೂ ಮುಗಿಯದ ಕತೆ (೧೯೫೫)
೨ ಪ್ರಶ್ನೆ (೧೯೬೩) ೨ ಮೌನಿ (೧೯೭೨)
೩ ಆಕಾಶ ಮತ್ತು ಬೆಕ್ಕು (೨೦೦೧)
೪ ಕ್ಲಿಪ್ ಜಾಯಿಂಟ್ ೫ ಘಟಶ್ರಾದ್ದ
೬ ಸೂರ್ಯನ ಕುದುರೆ (೧೯೮೧)
೭ ಪಚ್ಚೆ ರೆಸಾರ್ಟ್ (೨೦೧೧)
೮ ಬೇಟೆ, ಬಳೆ ಮತ್ತು ಓತಿಕೇತ
೯ ಎರಡು ದಶಕದ ಕತೆಗಳು
೧೦ ಮೂರು ದಶಕದ ಕಥೆಗಳು (೧೯೮೯)
೧೧ ಐದು ದಶಕದ ಕತೆಗಳು (೨೦೦೨)
ಕಾದಂಬರಿಗಳುಸಂಪಾದಿಸಿ
೧ ಸಂಸ್ಕಾರ (೧೯೬೫) ೨ ಭಾರತೀಪುರ (೧೯೭೩)
೩ ಅವಸ್ಥೆ (೧೯೭೮) ೪ ಭವ (೧೯೯೪)
೫ ದಿವ್ಯ (೨೦೦೧)
೬ ಪ್ರೀತಿ ಮೃತ್ಯು ಮತ್ತು ಭಯ (೨೦೧೨)
ವಿಮರ್ಶೆ ಮತ್ತು ಪ್ರಬಂಧ ಸಂಕಲನಸಂಪಾದಿಸಿ
೧ ಪ್ರಜ್ಞೆ ಮತ್ತು ಪರಿಸರ (೧೯೭೧)
೨ ಪೂರ್ವಾಪರ (೧೯೮೦)
೩ ಸಮಕ್ಷಮ (೧೯೮೦)
೪ ಸನ್ನಿವೇಶ (೧೯೭೪)
೫ ಯುಗಪಲ್ಲಟ (೨೦೦೧)
೬ ವಾಲ್ಮೀಕಿಯ ನೆವದಲ್ಲಿ (೨೦೦೬)
೭ ಮಾತು ಸೋತ ಭಾರತ (೨೦೦೭)
೮ ಸದ್ಯ ಮತ್ತು ಶಾಶ್ವತ (೨೦೦೮)
೯ ಬೆತ್ತಲೆ ಪೂಜೆ ಏಕೆ ಕೂಡದು (೧೯೯೯)
೧೦ ಋಜುವಾತು (೨೦೦೭)
೧೧ ಶತಮಾನದ ಕವಿ ಯೇಟ್ಸ್ (೨೦೦೮)
೧೨ ಕಾಲಮಾನ (೨೦೦೯)
೧೩ ಮತ್ತೆ ಮತ್ತೆ ಬ್ರೆಕ್ಟ್ (೨೦೦೯)
೧೪ ಶತಮಾನದ ಕವಿ ವರ್ಡ್ಸ್ ವರ್ತ್ (೨೦೦೯)
೧೫ ಶತಮಾನದ ಕವಿ ರಿಲ್ಕೆ (೨೦೦೯)
೧೬ ರುಚಿಕರ ಕಹಿಸತ್ಯಗಳ ಕಾಲ (೨೦೧೧)
೧೭ ಆಚೀಚೆ (೨೦೧೧)
ನಾಟಕಸಂಪಾದಿಸಿ
೧ ಆವಾಹನೆ (೧೯೬೮)
ಕವನ ಸಂಕಲನಸಂಪಾದಿಸಿ
೧ ಹದಿನೈದು ಪದ್ಯಗಳು (೧೯೬೭)
೨ ಮಿಥುನ (೧೯೯೨)
೩ ಅಜ್ಜನ ಹೆಗಲ ಸುಕ್ಕುಗಳು (೧೯೮೯)
೪ ಅಭಾವ (೨೦೦೯)
೫ ಸಮಸ್ತ ಕಾವ್ಯ (೨೦೧೨)
ಆತ್ಮಕತೆಸಂಪಾದಿಸಿ
೧ ಸುರಗಿ (೨೦೧೨)
ಚಲನಚಿತ್ರವಾದ ಕೃತಿಗಳುಸಂಪಾದಿಸಿ
೧ ಸಂಸ್ಕಾರ ೨ ಬರ ೩ಅವಸ್ಥೆ ೪ ಮೌನಿ (ಸಣ್ಣಕಥೆ)ದೀಕ್ಷಾ (ಹಿಂದಿ ಚಿತ್ರ)ಪ್ರಕೃತಿ (ಸಣ್ಣಕಥೆ)
ಪ್ರಮುಖ ಉಪನ್ಯಾಸಗಳುಸಂಪಾದಿಸಿ
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ,ತುಮಕೂರು, 2002ಫ್ರೆಂಚ್ ಸಾಹಿತ್ಯ ಉತ್ಸವ, 2002ಬರ್ಲಿನ್ ಸಾಹಿತ್ಯ ಉತ್ಸವ, 2002ಕರ್ನಾಟಕವನ್ನು ಕುರಿತ ವಿಚಾರ ಸಂಕಿರಣ, ಅಯೋವಾವಿವಿ, 1997ಭಾರತವನ್ನು ಕುರಿತ ವಿಚಾರ ಸಂಕಿರಣ, ಬರ್ಲಿನ್, ಜರ್ಮನಿ, 1997'ದಿ ವರ್ಡ್ ಆ್ಯಸ್ ಮಂತ್ರ: ಎ ಸೆಲೆಬ್ರೇಷನ್ ಆಫ್ ರಾಜಾರಾವ್' ವಿಚಾರ ಸಂಕಿರಣ, ಟೆಕ್ಸಾಸ್ ವಿವಿ, 1997'ಟ್ರಾನ್ಸ್ಲೇಟಿಂಗ್ ಸೌತ್ ಏಷ್ಯನ್ ಲಿಟರೇಚರ್' ವಿಚಾರ ಸಂಕಿರಣ, ಲಂಡನ್, 1993ಭಾರತೀಯ ಲೇಖಕರ ನಿಯೋಗದ ಮುಖ್ಯಸ್ಥ, ಚೀನಾ, 1993ಗಾಂಧಿ ಸ್ಮಾರಕ ಉಪನ್ಯಾಸ, ರಾಜಘಾಟ್, ವಾರಣಾಸಿ, 1989'ಮಾರ್ಕ್ಸಿಸಂ ಅಂಡ್ ಲಿಟರೇಚರ್', ಅಂಗನ್ಗಲ್ ಸ್ಮಾರಕ ಉಪನ್ಯಾಸ, ಮಣಿಪುರ, 1976
ಪ್ರಶಸ್ತಿ ಮತ್ತು ಪುರಸ್ಕಾರಗಳುಸಂಪಾದಿಸಿ
ಕೃಷ್ಣರಾವ್ ಚಿನ್ನದ ಪದಕ (೧೯೫೮)ಸಂಸ್ಕಾರ, ಘಟಶ್ರಾದ್ಧ ಮತ್ತು ಬರ ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಪ್ರಶಸ್ತಿ (ಕ್ರಮವಾಗಿ ೧೯೭೦, ೧೯೭೮, ೧೯೮೯)ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೩)ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೪)ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಮಾಸ್ತಿ ಪ್ರಶಸ್ತಿ (೧೯೯೪)ಜ್ಞಾನಪೀಠ ಪ್ರಶಸ್ತಿ (೧೯೯೪)ಬಷೀರ್ ಪುರಸ್ಕಾರ, ಕೇರಳ ಸರ್ಕಾರ (೨೦೧೨)ರವೀಂದ್ರ ಟ್ಯಾಗೋರ್ ಸ್ಮಾರಕ ಪದಕ (೨೦೧೨)ಗಣಕ ಸೃಷ್ಟಿ ಪ್ರಶಸ್ತಿ, ಕೋಲ್ಕತ (೨೦೦೨)ಪದ್ಮಭೂಷಣ (೧೯೯೮)ಶಿಖರ್ ಸಮ್ಮಾನ್ (ಹಿಮಾಚಲ ಪ್ರದೇಶ ಸರ್ಕಾರ) (೧೯೯೫)೬೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ (ತುಮಕೂರು)
ನಿಧನಸಂಪಾದಿಸಿ
ಡಾ.ಅನಂತ ಮೂರ್ತಿಯವರು ೨೦೦೨ರಿಂದ ಮೂತ್ರಪಿಂಡದ ಕಾಯಿಲೆಯಿಂದ ನರಳುತ್ತಿದ್ದರು. ಜೊತೆಗೆ ಸಕ್ಕರೆ ಕಾಯಿಲೆ ಕಾಡುತ್ತಿತ್ತು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ 'ಮಣಿಪಾಲ್ ಆಸ್ಪತ್ರೆ'ಯಲ್ಲಿ ೧೦ ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಹೊಂದದೆ ಮೂತ್ರಪಿಂಡ ವೈಫ಼ಲ್ಯ ಹಾಗು ಲಘು ಹೃದಯಾಘಾತದಿಂದ 2014ರ ಆಗಸ್ಟ್ 22ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬೆಂಗಳೂರಿನ ಡಾಲರ್ ಕಾಲೊನಿಯಲ್ಲಿ ವಾಸಿಸುತ್ತಿದ್ದ ಮೂರ್ತಿಯವರ ಅಂತಿಮ ಸಂಸ್ಕಾರ, ಬೆಂಗಳೂರಿನ 'ಜ್ಞಾನಭಾರತಿ ಕಲಾಗ್ರಾಮ'ದಲ್ಲಿ2014ರ ಆಗಸ್ಟ್ 23 ನೆಯ ತಾರೀಖಿನ ಮಧ್ಯಾಹ್ನ ಸುಮಾರು ೪ ಗಂಟೆಗೆ ಜರುಗಿತು.[೨]ಮೂರ್ತಿಯವರು ಪತ್ನಿ ಎಸ್ತರ್, ಮಗ ಶರತ್ ಮತ್ತು ಮಗಳು ಅನುರಾಧರನ್ನು ಆಗಲಿದ್ದಾರೆ.
ಒಂದಿಷ್ಟು ಹೆಚ್ಚಿನ ಮಾಹಿತಿಗಳುಸಂಪಾದಿಸಿ
೧೯೫೫ರಲ್ಲಿ ಎಂದೆಂದೂ ಮುಗಿಯದ ಕತೆ ಕಥಾ ಸಂಕಲನದಿಂದ ಅವರ ಸಾಹಿತ್ಯ ಕೃಷಿ ಆರಂಭವಾಯಿತು.೧೯೬೫ರಲ್ಲಿ ಮೊದಲ ಕಾದಂಬರಿ ಸಂಸ್ಕಾರಪ್ರಕಟವಾಯಿತು. ಇದು ವ್ಯಾಪಕ ಚರ್ಚೆಗೆ ಒಳಗಾದ ಕಾದಂಬರಿ. ಈ ಕಾದಂಬರಿ ಭಾರತದ ಹಲವು ಭಾಷೆಗಳಲ್ಲದೆ, ಇಂಗ್ಲಿಷ್, ರಷ್ಯನ್, ಫ್ರೆಂಚ್, ಜರ್ಮನ್, ಹಂಗೇರಿಯನ್ ಮತ್ತಿತರ ಭಾಷೆಗಳಿಗೆ ಅನುವಾದವಾಗಿದೆ.ಯು.ಆರ್.ಅನಂತಮೂರ್ತಿಯವರ ಮೊದಲ ಕಾದಂಬರಿ ಸಂಸ್ಕಾರ ಎಂದೇ ಎಲ್ಲರೂ ಭಾವಿಸಿದ್ದರು. ಅದಕ್ಕೂ ಮೊದಲೇ ಅನಂತಮೂರ್ತಿ ೧೯೫೮ ರಲ್ಲಿ ಬರೆದು ಪ್ರಕಟವಾಗಿರದಿದ್ದ ಪ್ರೀತಿ-ಮೃತ್ಯು-ಭಯಎಂಬ ಕಾದಂಬರಿ ೨೦೧೨ ಜೂನ್ ೧೦ಕ್ಕೆ ಬಿಡುಗಡೆಯಾಯಿತು.ಇಂಗ್ಲೀಷಿನಲ್ಲಿ ಇವರು ಬರೆದಿರುವ ಹಲವಾರು ಪ್ರಬಂಧಗಳು ದೇಶ-ವಿದೇಶಗಳ ಸಾಹಿತ್ಯಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಹಿರಿಯ ಸಮಾಜವಾದಿ ರಾಜಕಾರಣಿ ಜೆ. ಎಚ್. ಪಟೇಲರ ಸಮೀಪವರ್ತಿಯಾಗಿದ್ದ ಅನಂತಮೂರ್ತಿ ಅವರು ಶಾಂತವೇರಿ ಗೋಪಾಲಗೌಡ ಮತ್ತು ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದವರು. ಇವರ ಬರಹದಲ್ಲಿ ಈ ಇಬ್ಬರ ಪ್ರಭಾವಗಳು ಎದ್ದು ಕಾಣುತ್ತವೆ.೧೯೮೧ರಲ್ಲಿ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಿಷಯಗಳಿಗೆಂದು ಋಜುವಾತು ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದರು.ಅನಂತಮೂರ್ತಿಯವರ ಹಲವು ಕತೆಗಳು ಕನ್ನಡ ಸಾಹಿತ್ಯ ವಿಮರ್ಶಕರ ಗಮನ ಸೆಳೆದಿವೆ ಮತ್ತು ಚರ್ಚೆಗೂ ವಿವಾದಕ್ಕೂ ಒಳಗಾಗಿವೆ. ಸೂರ್ಯ ಕುದುರೆ, ನವಿಲುಗಳು, ಬರ, ಘಟಶ್ರಾದ್ಧ, ತಾಯಿ, ಹುಲಿಯ ಹೆಂಗರಳು ಈ ಸಾಲಿಗೆ ಸೇರುತ್ತವೆ.ಅನಂತಮೂರ್ತಿಯವರ ಸಂಸ್ಕಾರ, ಅವಸ್ಥೆಕಾದಂಬರಿಗಳನ್ನು ಮತ್ತು ಬರ, ಘಟಶ್ರಾದ್ಧ ಕತೆಗಳನ್ನು ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿವೆ. ಇವೆಲ್ಲವೂ ಮಹತ್ವದ ಚಿತ್ರಗಳಾಗಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ಸಂಸ್ಕಾರ ಮತ್ತು ಘಟಶ್ರಾದ್ಧ ಚಲನಚಿತ್ರಗಳು ಭಾರತಸರಕಾರದಿಂದ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದಿವೆ.ಘಟಶ್ರಾದ್ಧ ಕತೆಯನ್ನು ಆಧರಿಸಿ ದೀಕ್ಷಾ ಎಂಬ ಹಿಂದಿ ಚಲನಚಿತ್ರವೂ ತಯಾರಾಗಿದೆ.ಬರಹಗಾರರಾಗಿ, ಭಾಷಣಕಾರರಾಗಿ ಅನಂತಮೂರ್ತಿಯವರು ದೇಶದ ಒಳಗೆ ಮತ್ತು ಹೊರಗೆ ಹಲವಾರು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ, ಉಪನ್ಯಾಸ ನೀಡಿದ್ದಾರೆ.೧೯೮೦ರಲ್ಲಿ ಸೋವಿಯತ್ ರಷ್ಯಾ, ಹಂಗೇರಿ, ಪಶ್ಚಿಮ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಗೆ ಭೇಟಿ ನೀಡಿದ ಭಾರತೀಯ ಲೇಖಕರ ಬಳಗದ ಸದಸ್ಯರಾಗಿದ್ದರು.ಮಾರ್ಕ್ಸ್ವಾದದಿಂದ ಬಹಳ ಪ್ರಭಾವಿತರಾಗಿದ್ದ ಇವರು ತಮ್ಮ ಹಲವಾರು ಅಭಿಪ್ರಾಯಗಳನ್ನು ಪರೀಕ್ಷಿಸಿ ನೋಡಲು ಈ ಭೇಟಿ ನೆರವಾಯಿತು.ಸೋವಿಯತ್ ಪತ್ರಿಕೆಯೊಂದರ ಸಲಹಾ ಸಮಿತಿಯ ಸದಸ್ಯರಾಗಿ ೧೯೮೯ರಲ್ಲಿ ಮಾಸ್ಕೋಗೆ ಭೇಟಿ ನೀಡಿದರು. ೧೯೯೩ರಲ್ಲಿ ಚೀನಾ ದೇಶಕ್ಕೆ ಭೇಟಿ ನೀಡಿದ ಭಾರತೀಯ ಬರಹಗಾರರ ಬಳಗಕ್ಕೆ ಇವರು ನಾಯಕರಾಗಿದ್ದರು. ಇವಲ್ಲದೆ ದೇಶ ವಿದೇಶಗಳ ಹಲವಾರು ವೇದಿಕೆಗಳಿಂದ ನೂರಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ.ಅನಂತಮೂರ್ತಿಯವರು ಕನ್ನಡದ ಹಲವಾರು ಸಾಹಿತ್ಯ ದಿಗ್ಗಜರನ್ನು ರೇಡಿಯೋ ಮತ್ತು ದೂರದರ್ಶನಗಳಲ್ಲಿ ಸಂದರ್ಶಿಸಿದ್ದಾರೆ. ಮೈಸೂರು ಆಕಾಶವಾಣಿಗಾಗಿಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಆರ್.ಕೆ. ನಾರಾಯಣ್, ಆರ್.ಕೆ .ಲಕ್ಷ್ಮಣ್ ಮತ್ತು ಜನರಲ್ ಕಾರಿಯಪ್ಪ ಅವರನ್ನು ಸಂದರ್ಶಿಸಿದ್ದಾರೆ.ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರುಗಳನ್ನು ಕುರಿತು ದೂರದರ್ಶನವು ನಿರ್ಮಿಸಿದ ಸಾಕ್ಷ್ಯ ಚಿತ್ರಗಳಲ್ಲಿ ಸಂದರ್ಶಕರಾಗಿ ಭಾಗವಹಿಸಿದ್ದಾರೆ.ವಿನಾಯಕ ಕೃಷ್ಣ ಗೋಕಾಕರ ಅನಂತರ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎರಡನೆಯ ಕನ್ನಡಿಗ.ಮ್ಯಾನ್ ಬುಕರ್ ಪ್ರಶಸ್ತಿಗೆ ನಾಮನಿರ್ದೇಶಗೊಂಡ ೧೦ ಸಾಹಿತಿಗಳಲ್ಲಿ ಒಬ್ಬರು.೧೯೮೦ರ ಗೋಕಾಕ್ ಚಳುವಳಿಯನ್ನು ವಿರೋಧಿಸಿದ ಅನಂತಮೂರ್ತಿ, ಅದನ್ನು ದಂಗೆ ಎಂದು ಕರೆದರು.[೩]೧೯೯೭ರಲ್ಲಿ ಅವರಿಗೆ ಕರ್ನಾಟಕ ಸರ್ಕಾರದ ವತಿಯಿಂದ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಮನೆ ನೀಡಲಾಯ್ತು. ಅಂದಿನ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ರಿಗೆ ಅನಂತಮೂರ್ತಿಯವರು ಆಪ್ತರಾದುದರಿಂದ ಅದು ವಿವಾದಕ್ಕೆ ಕಾರಣವಾಯಿತು. ಕವಿಗಳಿಗೆ ಸರ್ಕಾರ ನೀಡುವ ನಿವೇಶನವನ್ನು ಹಿಂದಿರುಗಿಸಿದ ನಂತರ ಮನೆ ಪಡೆದದ್ದು ಎಂದು ತಮ್ಮ ಆತ್ಮ ಚರಿತ್ರೆ ಸುರಗಿಯಲ್ಲಿ ಅನಂತಮೂರ್ತಿ ವಿವರಿಸಿದ್ದಾರೆ.
ಉಲ್ಲೇಖಗಳುಸಂಪಾದಿಸಿ
↑ http://www.ftiindia.com/management.html↑ ಪಂಚಭೂತಗಳಲ್ಲಿ ಅನಂತಮೂರ್ತಿ ಲೀನ↑ http://www.thehindu.com/todays-paper/tp-national/tp-karnataka/writers-oppose-ananthamurthys-candidature-for-rajya-sabha/article3168762.ece
ಹೊರಕೊಂಡಿಗಳುಸಂಪಾದಿಸಿ
ಡಾ. ಯು.ಆರ್. ಅನಂತಮೂರ್ತಿಯವರ ಕಿರುಪರಿಚಯ -ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆDr. Udupi Rajagopala Acharya Anantha Murthy - ಉಡುಪಿ ಪೇಜಸ್ಅನಂತಮೂರ್ತಿಯವರ ಬ್ಲಾಗ್ಅನಂತಮೂರ್ತಿಯವರ ಸಮಗ್ರ ಸಾಹಿತ್ಯ, ಕಣಜ ತಾಣ'ಹೊಸಪ್ರಜ್ಞೆಯ ಕತೆಗಾರ ಯು.ಆರ್.ಅನಂತ ಮೂರ್ತಿ, ಮಯೂರ, ೧ ಆಗಸ್ಟ್ ೨೦೧೪, ಸಂದರ್ಶನ, ಎಚ್ಚೆಸ್ಕೆ, ಪುಟ ೮-೧೬'The Educated Have Lost Touch With Their Local Almanac' Aug, 20, 2001OCTOBER 6, 2013 india factsಯು.ಆರ್.ಅನಂತಮೂರ್ತಿ ಅವರನ್ನು ಕಾಡಿದ ವಿವಾದಗಳು, kannada.oneindia, Saturday, August 23, 2014'ಯು.ಆರ್.ಅನಂತಮೂರ್ತಿ; ಮತ್ತೆಂದೂ ಮರಳದ ಚೇತನ:ಹೃದಯಶಿವ' ಆಗಸ್ಟ್,೨೫,೨೦೧೪,ಸಂಪಾದಕ,'ಪಂಜು ಇ-ಪತ್ರಿಕೆ''ಅನಂತಮೂರ್ತಿ ನಿಧನಕ್ಕೆ ಸಂತಾಪ ಸೂಚಿಸಿದ ಮೋದಿ' 'One India Kannada, August 22, 2014ವಿಕಿಮೀಡಿಯ ಕಣಜದಲ್ಲಿ U. R. Ananthamurthy ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ .
Last edited ೨ months ago by an anonymous user
RELATED PAGES
ಭಾರತದ ಪ್ರಸಿದ್ಧ ಲೇಖಕರು ಹಾಗೂ ಕಾದಂಬರಿಕಾರರು
ಇಂತಿ ಮಂಜುನಾಥಕೆಎಂ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸವಪಟ್ಟಣ {ಚಿರಡೋಣಿ}
Let me have the pleasure of knowing a T.P.Kailasam’s Drama...Details ...Where Exists Only three Characters. One is a Muslim,Shreshti (who speaks Telugu).......and another speaks Kannada.Sri.G.T.Diwakar of Modur is having a copy of the book, and Late Sri Ramaswaroop of CVS & Brother's Madikeri read it, Loudly......!!!. To Get Best Out of the .............Thrill, Enjoyment , Humour.......!!!!!!!..
ಪ್ರತ್ಯುತ್ತರಅಳಿಸಿ