ಮಂಜುನಾಥ ಕೆ ಎಂ
ಈ ಕನ್ನಡ ವ್ಯಾಕರಣದ ಕಣಜದಲ್ಲಿ ಬರುವ ಪ್ರತಿಯೊಂದು ಕಣಜವನ್ನು ಸಂಪೂರ್ಣವಾಗಿ ವೀಕ್ಷಿಸಿ ಕನ್ನಡ ವ್ಯಾಕರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜ ಕೇಶೀರಾಜನ ಶಬ್ದಮಣಿದರ್ಪಣ (ಕ್ರಿ.ಶ. ೧೨೬೦) ದ ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ. ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಲಟಞಞಝಬಝಬಞಫಞಫಞಫಟಠಞಫಃಫಠಞಡಃಃಠಃಠ= ಮೂಲಭೂತ ಅಂಶಗಳು =
- ಅಕ್ಷರ
- ೧೩ ಸ್ವರಗಳು - ಅ ಆ ಇ ಈ ಉ ಊ ಋ ಎ ಏ ಐ ಒಓ ಔ
- ೨ ಯೋಗವಾಹಕಗಳು - ಅಂ ಅಃ
- ೨೫+೯ ವ್ಯಂಜನಗಳು - ಕ ಖ ಗ ಘ ಙ ಚ ಛ ಜ ಝ ಞಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಲ ವಶ ಷ ಸ ಹ ಳ.
- ಪದ ಅಥವಾ ಶಬ್ದ
- ನಾಮಪದ
- ಕ್ರಿಯಾಪದ
- ಸರ್ವನಾಮ
- ಗುಣವಾಚಕ
- ಸಾಲು ಅಥವಾ ವಾಕ್ಯ
- ವಿಭಕ್ತಿ ಪ್ರತ್ಯಯಗಳು
- ಆಖ್ಯಾತ ಪ್ರತ್ಯಯ
- ಲಿಂಗ ವಿವಕ್ಷೆ
- ಅಂಕಿ
ಪ್ರಮುಖ ವಿಭಾಗಗಳು
- ತತ್ಸಮ ತದ್ಭವ: ಸಂಸ್ಕೃತದ ಮೂಲ ಪದ, ಅದೇ ಪದದ ಅಪಭ್ರಂಶವಾದ ಕನ್ನಡ ಪದ - ಇವುಗಳನ್ನು ತತ್ಸಮ-ತದ್ಭವಗಳೆಂದು ಕರೆಯುತ್ತಾರೆ.
- ವಿಭಕ್ತಿ ಪ್ರತ್ಯಯಗಳು: 'ಪ್ರತ್ಯಯ' ಎಂದರೆ ಕಾರ್ಯಕಾರಣ ಸಂಭಂಧಗಳುನ್ನು ಸೂಚಿಸುವ ಪದಗಳು. ಸಂಸ್ಕೃತದಲ್ಲಿ ಒಂದು ಪದದ ಕೊನೆಗೆ ಸೇರುವ ಕೆಲವು 'ಅಕ್ಷರಗಳ ಗುಂಪು'ಗಳು. ಇವು ಆ ಪದದ ಕೊನೆಗೆ ಸೇರಿ ಅದರ ಅರ್ಥವನ್ನು ಮಾರ್ಪಡಿಸುವುವು. ಇವು ಬರಿ ಒಂದು ಪದದ ಭಾಗಗಳು ಹೊರತು ಸ್ವತಂತ್ರ ಪದಗಳಲ್ಲ.
- ದ್ವಿರುಕ್ತಿ : ಒಂದು ಪದವು ಎರಡು ಬಾರಿ ಬರುವುದನ್ನು ದ್ವಿರುಕ್ತಿ ಎನ್ನುವರು.ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನ್ನೋ, ಒಂದು ವಾಕ್ಯವನ್ನೋ ಎರಡೆರಡು ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ (ದ್ವಿಃ ಉಕ್ತಿ - ದ್ವಿರುಕ್ತಿ) ಎನ್ನುವರು.
- ಕಾಲ-ವ್ಯಾಕರಣ
- ಜೋಡು ನುಡಿಗಟ್ಟು: ದ್ವಿರುಕ್ತಿಯ ಹಾಗೆಯೇ ಇನ್ನೊಂದು ರೀತಿಯ ಶಬ್ದಗಳನ್ನು ನಾವು ಪ್ರಯೋಗಿಸುವುದುಂಟು. ಅವು ದ್ವಿರುಕ್ತಿಗಳ ಹಾಗೆ ಕಂಡರೂ, ದ್ವಿರುಕ್ತಿಗಳಲ್ಲ. ಅವುಗಳನ್ನು ಜೋಡು ನುಡಿಗಟ್ಟುಗಳೆಂದು ಕರೆಯುತ್ತಾರೆ. ಅವುಗಳಲ್ಲಿ, ಸಾಮಾನ್ಯವಾಗಿ ಎರಡನೆಯ ಪದಕ್ಕೆ ಅರ್ಥವಿರುವುದಿಲ್ಲ.
- ಸಂಧಿ: ಸಂಧಿ/ಕೂಡಿಕೆ ಸಂಧಿಯೆಂದರೆ ಸಂಸ್ಕೃತದಲ್ಲಿ ಕೂಡಿಕೆ/ಕಲೆತ ಎಂದು ಅರ್ಥ. ವ್ಯಾಕರಣದಲ್ಲಿ ಎರಡು ಒರೆ(ಪದ)ಗಳನ್ನು ಕೂಡಿಸಿ/ಸೇರಿಸಿ/ಕಲೆಸಿ ಒಂದು ಒರೆ(ಪದ)ವನ್ನಾಗಿ ಮಾಡಿದರೆ ಅದು ಸಂಧಿ/ಕೂಡಿಕೆ ಯಾಗುವುದು. ಕನ್ನಡದಲ್ಲಿ ಅದನ್ನು "ಒರೆಗೂಡಿಕೆ" ಎಂದು ಕರೆಯಬಹುದು.
- ಸಮಾಸ: ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ.
- ಛಂದಸ್ಸು: ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ. ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು.
- ಅಲಂಕಾರ: ವಿಶಾಲ ಅರ್ಥದಲ್ಲಿ ಕಾವ್ಯದ ರಮಣೀಯತೆ ಅಥವಾ ಅದರ ಸೌಂದರ್ಯಕ್ಕೆ ಕಾರಣವಾಗುವ 'ಶಬ್ದ' ಮತ್ತು 'ಅರ್ಥ'ಗಳ ವೈಚಿತ್ರವನ್ನು "ಅಲಂಕಾರ" ಎನ್ನಬಹುದು.
- ವೃತ್ತ: ಖ್ಯಾತ ಕರ್ನಾಟಕ ವೃತ್ತಗಳು.
- ತ್ರಿಪದಿ: ತ್ರಿಪದಿ ಅಂದರೆ ಮೂರು ಸಾಲಿನ ಪದ್ಯ ,
- ಕಾಂಡ:
- ಷಟ್ಪದಿ: ಷಟ್ಪದಿ ಎಂಬುದು ಛಂದಸ್ಸಿನ ಒಂದು ಪ್ರಕಾರ. ಪದ್ಯವೊಂದರಲ್ಲಿ ಆರು ಪಾದಗಳಿದ್ದರೆ ಅದು ಷಟ್ಪದಿ ಎನಿಸುತ್ತದೆ.
- ಸಾಂಗತ್ಯ: "ಸಾಂಗತ್ಯ " ಇದು ಕನ್ನಡದಲ್ಲಿ ಬಹು ಪ್ರಸಿದ್ಧವಾದ ಒಂದು ಅಂಶಚ್ಛಂದಸ್ಸಿನ ಪ್ರಕಾರ.
- ಪ್ರಾಸಗಳು: ಪದ್ಯದ ಪ್ರತಿಪಾದದ ೨ನೇ ಅಕ್ಷರವು ಪ್ರಾಸವೆಂದು ವರ್ತಿಸುತ್ತದೆ. ಆ ಎರಡನೆ ಅಕ್ಷರವು ಎಲ್ಲಾ ಪಾದಗಳಲ್ಲಿಯೂ ಒಂದೇ ಆಗಿರಬೇಕು.
- ಪರಿಮಾಣ ವಾಚಕಗಳು: ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಸೂಚಿಸುವ ಪದಗಳಿಗೆ ಪರಿಮಾಣ ವಾಚಕಗಳು ಎಂಬ ಹೆಸರು.
- ಸಮುಚ್ಚಯ ಪದಗಳು |ದ್ವಯಗಳು; ತ್ರಯ ; ಚತುಷ್ಟಯಗಳು ; ಪಂಚ ಗಳು; ಇತ್ಯಾದಿ, ಷಷ್ಠಿ (೬೦)ಸಂವತ್ಸರಗಳ ವರೆಗೆ
- ಪ್ರಬಂಧ ರಚನೆ: ಪ್ರಬಂಧ ರಚನೆ - ಅರ್ಥಪೂರ್ಣ ಖಚಿತ ವಾಕ್ಯಗಳ ಮೂಲಕ ವ್ಯಕ್ತಿಯ ಆಲೋಚನೆಗಳನ್ನು ಲಿಖಿತವಾಗಿ ಅಭಿವ್ಯಕ್ತಿಸುವ ಹಾಗೂ ನಿರ್ದಿಷ್ಟ ವಿಷಯಗಳನ್ನು ಕ್ರಮಬದ್ಧ ರೀತಿಯಲ್ಲಿ ಸಮರ್ಪಕವಾಗಿ ನಿರೂಪಿಸುವ ಪರಿ.
ಟಿಪ್ಪಣಿ
- ಸಮುಚ್ಚಯ ಪದಗಳು :- ಇದು ಚತುರ್ವೇದ, ಅಷ್ಟದಿಕ್ಪಾಲಕರು, ಏಕಾದಶ ರುದ್ರರು ಮೊದಲಾದ ಸಮೂಹ ಪದಗಳ ಪಟ್ಟಿ (ಕೋಶ) ; ವಾಸ್ತವವಾಗಿ ಕನ್ನಡ ವ್ಯಾಕರಣ ದಲ್ಲಿ ಬರುವುದಿಲ್ಲ . ಆದರೆ ಇಂಗ್ಲಿಷ್ ವ್ಯಾಕರಣ ದಲ್ಲಿ ಸಮೂಹ ಪದಗಳ ವಿಭಾಗವಿದೆ. (ಕಲೆಕ್ಟಿವ್ ನೌನ್ಸ್ ). ಈ ಬಗೆಯ ಪದಗಳನ್ನು ಹೊಸದಾಗಿ ನಾಮಪದಗಳ ಗುಂಪಿಗೆ ಸೇರಿಸ ಬಹುದು.
ಭಾಷಾ ವಿಶೇಷಗಳು
- ಕನ್ನಡದ ಪ್ರತಿ ಅಕ್ಷರವು ತನ್ನದೇ ಆದ ರೂಪ ಮತ್ತು ಧ್ವನಿ ಹೊಂದಿದೆ.
- ಕನ್ನಡವನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ.
ಹೆಚ್ಚಿನ ಓದಿಗೆ
- ರೈಸ್ ಸಂಪಾದಿಸಿದ ‘ಭಾಷಾಭೂಷಣ’;ಕೆ.ಎಸ್. ಮಧುಸೂದನ:[[೧]]
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ