ಭಾನುವಾರ, ಜೂನ್ 17, 2018

ವಡ್ಡಾರಾಧನೆಯ 19 ಕಥೆಗಳು

ದಿನಾಂಕ 17/6/2018

ಶಿವಕೋಟ್ಯಾಚಾರ್ಯ

ಶಿವಕೋಟ್ಯಾಚಾರ್ಯ

                 ಪಂಪಯುಗದಲ್ಲಿ ರಚಿತವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ''ವಡ್ಡಾರಾಧನೆ''. ಇದನ್ನು ರಚಿಸಿದವರು ಶಿವಕೋಟ್ಯಾಚಾರ್ಯ. ಇವರು ಸುಮಾರು ಕ್ರಿ.ಶ.೯೨೦ ರ ಸನಿಹದಲ್ಲಿದೆ. ಶ್ರೇಷ್ಠ ಜೈನ ಕವಿಯಾದ ಶಿವಕೋಟ್ಯಾಚಾರ್ಯರು ಹಳೆಗನ್ನಡದಲ್ಲಿ ಸುಂದರವಾದ ಗದ್ಯಕಾವ್ಯವನ್ನು ರಚಿಸಿದರು. ಈ ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ. ಈ ಕಾವ್ಯವು ೯ ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು. ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾರೆ. ನೀತಿ, ಚರಿತ್ರೆ, ಧರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು. ಇದು ಒಂದು ಅದ್ಭುತ ಗದ್ಯ ಕಾವ್ಯ. 

‘ವಡ್ಡಾರಾಧನೆ’ಯಲ್ಲಿ ೧೯ ಕಥೆಗಳಿವೆ. (.Pdf ನಂತೆ download ಮಾಡಲು ಕಥೆಯ ಮೇಲೆ ಕ್ಲಿಕ್ ಮಾಡಿ)

1 ಸುಕುಮಾರಸ್ವಾಮಿಯ ಕಥೆ

2 ಸುಕೌಶಳಸ್ವಾಮಿಯ ಕಥೆ

3 ಗಜಕುಮಾರನ ಕಥೆ

4 ಸನತ್ಕುಮಾರ ಚಕ್ರಚರ್ತಿಯ ಕಥೆ

5 ಅಣ್ಣಿಕಾಪುತ್ರನ ಕಥೆ

6 ಭದ್ರಬಾಹು ಭಟ್ಟಾರರ ಕಥೆ

7 ಲಲಿತಘಟೆಯ ಕಥೆ

8 ಧರ್ಮಘೋಷ ಭಟ್ಟಾರರ ಕಥೆ

9 ಸಿರಿದಣ್ಣ ಭಟ್ಟಾರರ ಕಥೆ

10 ವೃಷಭಸೇನ ಭಟ್ಟಾರರ ಕಥೆ

11 ಕಾರ್ತಿಕ ಋಷಿಯ ಕಥೆ

12 ಅಭಯಘೋಷ ಮುನಿಯ ಕಥೆ

13 ವಿದ್ಯುಚ್ಚೋರನ ಕಥೆ

14 ಗುರುದತ್ತ ಭಟ್ಟಾರರ ಕಥೆ

15 ಚಿಲಾತಪುತ್ರನ ಕಥೆ

16 ದಂಡಕನೆಂಬ ರಿಸಿಯ ಕಥೆ

17 ಮಹೇಂದ್ರದತ್ತಾಚಾರ್ಯನ ಕಥೆ

18 ಚಾಣಾಕ್ಯ ರಿಸಿಯ ಕಥೆ

19 ವೃಷಭಸೇನ ರಿಸಿಯ ಕಥೆ

                                                                                                             ಇಂತಿ
                  ಮಂಜುನಾಥ ಕೆ ಎಂ
      ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
             ಬಸವಪಟ್ಟಣ [ಚಿರಡೋಣಿ]

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ