ಸೋಮವಾರ, ಜೂನ್ 25, 2018

ವಚನ ಸಾಹಿತ್ಯ ಹುಟ್ಟು ಬೆಳವಣಿಗೆ

ಮಂಜುನಾಥ ಕೆ ಎಂ 

ವಚನ ಸಾಹಿತ್ಯ

ಸಮಗ್ರ ವಚನ ಸಾಹಿತ್ಯ ಕನ್ನಡದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದು. ೧೧ನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ ೧೨ನೇ ಶತಮಾನದ ಕಡೆಯವರೆಗೂ ಬಸವಣ್ಣನವರ-ಜನಸಾಮಾನ್ಯರ ಆಂದೋಲನದ ಭಾಗವಾಗಿ ಬೆಳೆದು ಬಂತು. ಇದು ಸಾಹಿತ್ಯ ಪರಿಭಾಷೆಯ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶೇಷ ಕಾವ್ಯ ಪ್ರಕಾರ. ವಚನ ಸಾಹಿತ್ಯವು ತನ್ನ ಕಾಲದಲ್ಲಿನ ಜನರ ಮನೋಭಿವ್ಯಕ್ತಿಗೆ ಸಂಗಾತಿಯಾಯಿತು.ವಚನ ಎಂದರೆ 'ಪ್ರಮಾಣ', 'ಕೊಟ್ಟ ಮಾತು' ಎಂದರ್ಥ.

ಇತಿಹಾಸಸಂಪಾದಿಸಿ

ವಿಸ್ತೃತ ಲೇಖನ:ಕನ್ನಡದಲ್ಲಿ ವಚನ ಸಾಹಿತ್ಯ

೧೧ನೇ ಶತಮಾನದಲ್ಲಿ ಉದಯಿಸಿದ ಧರ್ಮ ಪ್ರೇರಿತ ಸಾಹಿತ್ಯವಾದ ವಚನವು, ಕನ್ನಡದ ಪ್ರಾಚೀನ ಸಾಹಿತ್ಯದಡಿಯಲ್ಲಿ ವರ್ಗಾಯಿಸಲ್ಪಟ್ಟಿದೆ. ಸ್ವಂತಿಕೆಯಿಂದ ಮೆರೆವ ವಚನಗಳು ಕನ್ನಡ ಸಾಹಿತ್ಯದಲ್ಲಿ ಪ್ರಭಾವಶಾಲಿ ಆತ್ಮವಿಮರ್ಶೆಯ ಮಾಧ್ಯಮವಾಗಿ ಸ್ವತಂತ್ರವಾಗಿ ಬೆಳೆದು ವಿಜೃಂಭಿಸಿ ಮುಂದಿನ ಸಾಹಿತ್ಯ ಪರಂಪರೆಗಳ ಮೇಲೆ ಪ್ರಭಾವ ಬೀರಿ ವಿಶ್ವಸಾಹಿತ್ಯದಲ್ಲೂ ಒಂದು ಅವಿಭಾಜ್ಯ ಅಂಗವಾಗಿ ಉಳಿದಿದೆ. ವಚನ ಸಾಹಿತ್ಯವನ್ನು, ವಚನಗುರು ಮಾದಾರ ಚೆನ್ನಯ್ಯ ನವರ ಆದಿಯಾಗಿ ಗುರು ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರು ನೀಡಿದರು.

ವಚನಗುರು ಮಾದಾರ ಚನ್ನಯ್ಯ ರವರು ೧೦ ರಿಂದ ೧೧ನೇ ಶತಮಾನದ ಬಸವ ಪೂರ್ವ ಯುಗ ದಲ್ಲಿಯೇ ಇದ್ದರು ಎಂದು ಸಂಶೋಧನೆಗಳ ಮೂಲಕ ತಿಳಿದುಬಂದಿದೆ. ಶಿವಮೊಗ್ಗ ಜಿಲ್ಲೆಯ ಬಿಳಿಗಾವಲು ಗ್ರಾಮದಲ್ಲಿ ಜನಿಸಿದ್ದರು ಎನ್ನಲಾಗಿದೆ. ಇವರು ರಚಿಸಿದ ಹಲವು ವಚನಗಳಲ್ಲಿ ೧೦ ವಚನಗಳು ಮಾತ್ರ ಲಭ್ಯವಾಗಿದೆ. ಮಾದಾರ ಚನ್ನಯ್ಯ ನವರು ವಚನಕಾರರಲ್ಲಿಯೇ ಮೊದಲಿಗರು ಎಂದು ತಿಳಿಯಲು ಜೇಡರ ದಾಸಿಮಯ್ಯ ತಮ್ಮ ವಚನಗಳಲ್ಲಿ ಸ್ಮರಿಸಿರುವುದನ್ನು ಕಾಣಬಹುದಾಗಿದೆ.

ಪರಿಣಾಮಸಂಪಾದಿಸಿ

ಸಮಾಜದ ಎಲ್ಲಾ ಜಾತಿಯವರೂ ವಚನವನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು ಚಳವಳಿಯೂ ಆಯಿತು. ಬಂಡಾಯ ಸಾಹಿತ್ಯಕ್ಕಿಂತ ಮೊದಲು ಕನ್ನಡ ನಾಡಿನಲ್ಲಿ ವಚನ ಒಂದು ಚಳವಳಿಯ ಮುಖವಾಣಿಯಾಗಿತ್ತೆಂದರೆ ಅದರ ಸಾಮಾಜಿಕ ವ್ಯಾಪಕತೆ ಅಪಾರವಾದುದೆಂಬುದು ಅರಿವಿಗೆ ಬಾರದೆ ಇರದು. ವಚನಗಳು ಅತ್ಯಂತ ಸರಳ ಹಾಗೂ ನೇರವಾಗಿ ದೇಸಿಯ ಸೊಗಡಿನಿಂದ ಕೋಡಿವೆ. ಹಲವಾರು ಕವಿಗಳು, ಮಠಾಧೀಶರು ವೀರಶೈವ ಸಿದ್ಧಾಂತವನ್ನು ಅಳವಡಿಸಿ ಸಾಹಿತ್ಯ ರಚಿಸಿದ್ದರೂ, ಇಡೀ ವೀರಶೈವ ಸಾಹಿತ್ಯದಲ್ಲಿ ಮುಖ್ಯ ಮತ್ತು ಅಪರೂಪದ ಅಭಿವ್ಯಕ್ತಿಯೆಂದರೆ ವಚನ ಸಾಹಿತ್ಯ. ಅದು ಸ್ಥಾವರ ಸಮಾಜವನ್ನು ತಿರಸ್ಕರಿಸಿ ಜಂಗಮ ಸಮಾಜವನ್ನುನಂಬಿದ ಬಹಳ ದೊಡ್ಡ ಮಾನವೀಯ ಮೌಲ್ಯ. ಕಾಯಕ ಮತ್ತು ದಾಸೋಹಗಳ ಮೂಲಕ ಸಮಾಜೋತ್ಪನ್ನಗಳ ಸಮಪಾಲು ಸಿದ್ಧಾಂತವನ್ನು ಮಂಡಿಸುವ ಈ ಚಳವಳಿಭಾರತೀಯ ಸಂಸ್ಕೃತಿಯಲ್ಲೇ ಅತಿ ಪ್ರಮುಖವಾದುದು.

ಪ್ರಮುಖ ವಚನಕಾರರುಸಂಪಾದಿಸಿ

ವಚನ ಸಾಹಿತ್ಯದ ಶ್ರೀಮಂತಿಕೆಗೆ ನೂರಾರು ಜನ ಶರಣರು ಶ್ರಮಿಸಿದ್ದಾರೆ. ತಮ್ಮ ವಚನಗಳಲ್ಲಿ ತಮ್ಮದೇ ಆದಅಂಕಿತನಾಮಗಳನ್ನು ಬಳಸಿದ್ದಾರೆ. ಜೇಡರ ದಾಸಿಮಯ್ಯ'ರಾಮನಾಥ' ಎಂದು ಬಳಸಿದರೆ, ಅಕ್ಕಮಹಾದೇವಿಯು'ಚೆನ್ನಮಲ್ಲಿಕಾರ್ಜುನ' ಹಾಗೂ ಬಸವಣ್ಣನವರು 'ಕೂಡಲ ಸಂಗಮದೇವ'ಮತ್ತು ಎಂದು ಬಳಸಿದ್ದಾರೆ. ಮತ್ತಿತರ ಸುಪ್ರಸಿದ್ಧ ವಚನಕಾರರೆಂದರೆ: ಅಲ್ಲಮ ಪ್ರಭುಅಂಬಿಗರ ಚೌಡಯ್ಯಮಾದಾರ ಚೆನ್ನಯ್ಯಸೂಳೆ ಸಂಕವ್ವೆಏಕಾಂತ ರಾಮಯ್ಯಹಡಪದ ಅಪ್ಪಣ್ಣಒಕ್ಕಲು ಮಾದಯ್ಯ,ಮಡಿವಾಳ ಮಾಚಯ್ಯ,ಆಯ್ದಕ್ಕಿ ಲಕ್ಕಮಹೆಂಡದ ಮಾರಯ್ಯಅಂಗಸೋಂಕಿನ ಲಿಂಗತಂದೆಅಂಬಿಗರ ಚೌಡಯ್ಯಅಕ್ಕಮಹಾದೇವಿಅಕ್ಕಮ್ಮಅಖಂಡ ಮಂಡಲೇಶ್ವರಅಗ್ಘವಣಿ ಹಂಪಯ್ಯಅಗ್ಘವಣಿ ಹೊನ್ನಯ್ಯಅಜಗಣ್ಣ ತಂದೆಅರಿವಿನ ಮಾರಿತಂದೆ,ಅನುಗಲೇಶ್ವರಅನಾಮಿಕ ನಾಚಯ್ಯಅಪ್ರಮಾಣ ಗುಹೇಶ್ವರಅಪ್ಪಿದೇವಯ್ಯಅವಸರದ ರೇಕಣ್ಣ,ಅಮರಗುಂಡದ ಮಲ್ಲಿಕಾರ್ಜುನ ತಂದೆಅಮುಗೆ ರಾಯಮ್ಮಅಮುಗಿದೇವಯ್ಯ,ಅಲ್ಲಮಪ್ರಭುದೇವರು,ಅಶ್ವಥರಾಮಆಯ್ದಕ್ಕಿ ಮಾರಯ್ಯಆಯ್ದಕ್ಕಿ ಲಕ್ಕಮ್ಮಆದಯ್ಯಆನಂದ ಸಿದ್ಧೇಶ್ವರಆನಂದಯ್ಯಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿಈಶ್ವರೀಯ ವರದ ಚೆನ್ನರಾಮ,ಉಗ್ಘಡಿಸುವ ಗಬ್ಬಿದೇವಯ್ಯಉರಿಲಿಂಗದೇವ,ಉರಿಲಿಂಗಪೆದ್ದಿಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ,ಉಪ್ಪರಗುಡಿಯ ಸೋಮಿದೇವಯ್ಯಉಳಿಯುಮೇಶ್ವರ ಚಿಕ್ಕಣ್ಣಎಚ್ಚರಿಕೆ ಕಾಯಕದ ಮುಕ್ತನಾಥಯ್ಯಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮಎಲೆಗಾರ ಕಾಮಣ್ಣಏಕಾಂತ ವೀರಸೊಡ್ಡಳಏಕಾಂತರಾಮಿತಂದೆ,ಏಕೋರಾಮೇಶ್ವರ ಲಿಂಗಏಲೇಶ್ವರ ಕೇತಯ್ಯಒಕ್ಕಲಿಗ ಮುದ್ದಣ್ಣಕಂಬದ ಮಾರಿತಂದೆಕರಸ್ಥಲದ ಮಲ್ಲಿಕಾರ್ಜುನೊಡೆಯಕರುಳ ಕೇತಯ್ಯ,ಕದಿರಕಾಯಕದ ಕಾಳವ್ವೆಕದಿರರೆಮ್ಮವ್ವೆ ಕನ್ನಡಿಕಾಯಕದ ಅಮ್ಮಿದೇವಯ್ಯಕನ್ನಡಿಕಾಯಕದ ರೇಮಮ್ಮಕನ್ನಡ ಮಾರಿತಂದೆಕಲಕೇತಯ್ಯಕಲ್ಲಯ್ಯದೇವರು,ಕುರಂಗಲಿಂಗಕುರಂಗಲಿಂಗಕುರಂಗೇಶ್ವರಲಿಂಗಕುಷ್ಟಗಿ ಕರಿಬಸವೇಶ್ವರಕೂಗಿನ ಮಾರಯ್ಯ,ಕೂಡಲಸಂಗಮೇಶ್ವರಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವೆಕಾಡಸಿದ್ಧೇಶ್ವರಕಾಮಾಟದ ಭೀಮಣ್ಣ,ಕಾಲಕಣ್ಣಿಯ ಕಾಮಮ್ಮಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮಕೊಟ್ಟಣದ ಸೋಮಮ್ಮಕೊಟಾರದ ಸೋಮಣ್ಣಕೋಲ ಶಾಂತಯ್ಯಕಿನ್ನರಿ ಬ್ರಹ್ಮಯ್ಯ,ಕೀಲಾರದ ಭೀಮಣ್ಣಗಂಗಾಂಬಿಕೆಗಜೇಶ ಮಸಣಯ್ಯ,ಗಜೇಶಮಸಣಯ್ಯದ ಪುಣ್ಯಸ್ತ್ರೀಗಣದಾಸಿ ವೀರಣ್ಣ,ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿಗುರು ವಿಶ್ವೇಶ್ವರಾ,ಗುರುಪುರದ ಮಲ್ಲಯ್ಯಗುರುಬಸವೇಶ್ವರಮೋಳಿಗೆ ಮಾರಯ್ಯ,

ವಚನಗಳುಸಂಪಾದಿಸಿ

ಅಲ್ಲಮ ಪ್ರಭುಗಳ ವಚನದ ಒಂದು ಸಣ್ಣ ತುಣುಕು ಹೀಗಿದೆ:

ಹೊನ್ನು ಮಾಯೆ ಎಂಬರು
ಹೆಣ್ಣು ಮಾಯೆ ಎಂಬರು
ಮಣ್ಣು ಮಾಯೆ ಎಂಬರು
ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ ಕಾಣ ಗುಹೇಶ್ವರ ||

ಸಂಕೀರ್ಣ ವ್ಯಕ್ತಿತ್ವವನ್ನು ಪಡೆದು ಬಾಳಿದ ಮಹಾಯೋಗಿಯಾದ ಪ್ರಭುಗಳ ಅನುಭವದ ತೀವ್ರತೆಯು ತಮ್ಮ ಈ ಸಣ್ಣ ವಚನ ಸಾರಿ ಹೇಳುತ್ತದೆ.

ಸಾವನ್ನಕ್ಕ ಸರಸ ಮಾಡಿದರೆ
ಇನ್ನುಕಾಣದುವ ದಿನವಾವುದು?
ಬಾಳುವನ್ನಕ್ಕರ ಭಜಿಸುತ್ತಿದ್ದರೆ
ತಾನಹ ದಿನವಾವುದು?
ಅರ್ಥವುಳ್ಳನ್ನಕ್ಕರ ಅರಿವುತ್ತಿದ್ದರೆ
ನಿಜವನೈದುವ್ ದಿನವಾವುದು?
ಕಾರ್ಯಕ್ಕೆ ಬಂದು ಕಾರ್ಯ
ಕೈಸಾರಿದ ಬಳಿಕ ಇನ್ನು
ಮರ್ತ್ಯಲೋಕದ ಹಂಗೇಕೆ?

ಬಾಹ್ಯ ಸಂಪರ್ಕಗಳುಸಂಪಾದಿಸಿ

ಕನ್ನಡ ವಿಕಿಸೋರ್ಸಿನಲ್ಲಿ ವಚನಗಳು

ವಚನಗಳ ಸಂಗ್ರಹ

ವಿಚಾರ ಮಂಟಪ ತಾಣದಿಂದ ನೂರಾರು

 ವಚನ ಸಂಗ್ರಹ 

ಧ್ವನಿಮುದ್ರಣಗಳುವಚನ 

ಸಂಚಯಸಮಗ್ರವಚನ ಸಾಹಿತ್ಯ

                       ಇಂತಿ
               ಮಂಜುನಾಥ ಕೆ ಎಂ
  ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
            ಬಸವಪಟ್ಟಣ {ಚಿರಡೋಣಿ}



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ