ಸಾಮಾಜಿಕ -ಆರ್ಥಿಕ ಅಸಮಾನತೆ, ಸಾಂಸ್ಕೃತಿಕ ಭಿನ್ನತೆ, ವೈವಿಧ್ಯ- ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಗುಣಾತ್ಮಕ ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ದೊರಕುವಂತೆ ಮಾಡುವುದು ಇಂದಿನ ತುರ್ತು ಅಗತ್ಯವಷ್ಟೇ ಅಲ್ಲ, ಸವಾಲೂ ಕೂಡ ಹೌದು.
ಆದುದರಿಂದ ಅಂತರ್ಶಾಸ್ತ್ರೀಯ, ಬಹುಶಾಸ್ತ್ರೀಯ ಮತ್ತು ವಿಷಯಶಾಸ್ತ್ರೀಯ ನಿರ್ದೇಶಿತ ಆಧಾರದ ಮೇಲೆ ಸ್ಥಳಿಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಶಿಕ್ಷಣದ ಗುರಿ ಮತ್ತು ಉದ್ದೇಶಗಳನ್ನು ಕಾಲಕಾಲಕ್ಕೆ ಪುನರ್ ರೂಪಿಸಬೇಕಿದೆ.
ಹಣವಂತರಿಗೆ ಮಾತ್ರ ಸೀಮಿತವಾಗಿದ್ದ ಉನ್ನತ ಶಿಕ್ಷಣದ ಅವಕಾಶವು ಇಂದು ಭಾರತದ ಪ್ರತಿ ವಿದ್ಯಾರ್ಥಿಗೂ ದೊರಕುವಂತಾಗಿದೆ. ಭಾರತದ ಉನ್ನತ ಶಿಕ್ಷಣದ ಬೆಳವಣಿಗೆ ಕಂಡು ಅಮೆರಿಕ ಕೂಡ ಹೆದರುವಂತೆ ಆಗಿದೆ. ಈ ಮಾನವ ಸಂಪನ್ಮೂಲವನ್ನು ವೈಜ್ಞಾನಿಕ ರೀತಿಯಲ್ಲಿ ಬೆಳೆಸಬೇಕಿದೆ.
ಉನ್ನತ ಶಿಕ್ಷಣದಲ್ಲಿ ನಮ್ಮ ಸಾಧನೆ ದೇಶದ ಆರ್ಥಿಕ ಬೆಳವಣಿಗೆಯ ಮೇಲೂ ಆಗಾಧ ಪರಿಣಾಮ ಬೀರಲಿದೆ. ದೇಶದ ವೈಜ್ಞಾನಿಕ ರಂಗದಲ್ಲಿ ನೂತನ ಆವಿಷ್ಕಾರಗಳಿಂದ ದೇಶದ ಪ್ರತಿಷ್ಠೆ ಮತ್ತು ಕೀರ್ತಿ ಹೆಚ್ಚಲಿದೆ.
ಇದು ಕೋಟಿ ಕೋಟಿ ಮನುಕುಲಕ್ಕೆ ಅಗಾಧವಾದ ಒಳಿತನ್ನು ಉಂಟುಮಾಡುತ್ತದೆ. ಇದೇ ಉನ್ನತ ಶಿಕ್ಷಣದ ಧ್ಯೇಯವಾಗಬೇಕು ಮತ್ತು ಮಾನವೀಯ ಮೌಲ್ಯಗಳು ಉನ್ನತ ಶಿಕ್ಷಣದ ಗುರಿಗಳನ್ನು ನಿರ್ದೇಶಿಸುವಂತಿರಬೇಕು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ