ಮಂಗಳವಾರ, ಮೇ 29, 2018

ದಾಸ ಸಾಹಿತ್ಯ ಪರಿಚಯ


ಹುಡುಕು

ಸಂಪಾದಿಸಿಈ ಪುಟವನ್ನು ವೀಕ್ಷಿಸಿಇನ್ನೊಂದು ಭಾಷೆಯಲ್ಲಿ ಓದು

ಹರಿದಾಸ

ಹರಿದಾಸ ಭಕ್ತಿ ಚಳುವಳಿಯು ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ಒಂದು ಮಹತ್ವದ ತಿರುವು ನೀಡಿತ್ತು. ಆರು ಶತಮಾನಗಳ ಅವಧಿಯಲ್ಲಿ ಹಲವು ಸಂತರು ಹಾಗು ಯೊಗಿಗಳು ದಕ್ಷಿಣ ಭಾರತ ಅದರಲ್ಲೂ ವಿಶೇಷವಾಗಿಕರ್ನಾಟಕದ ಸಂಸ್ಕಾರ, ತತ್ವ ಹಾಗು ಕಲೆಯನ್ನು ರೂಪಗೊಳಿಸುವಲ್ಲಿ ಸಹಾಯ ಮಾಡಿದ್ದಾರೆ, ಅವರು ಸಾಕಷ್ಟು ಧಾರ್ಮಿಕ ಪ್ರಭಾವವನ್ನು ಜನ ಸಮೂಹ ಹಾಗು ದಕ್ಷಿಣ ಭಾರತವನ್ನು ಆಳಿದ ರಾಜ್ಯಗಳ ಮೇಲೆ ಬೀರಿದರು.[೧]

ಈ ಚಳುವಳಿಯನ್ನು ಪ್ರಾರಂಭಿಸಿದ್ದು ಹರಿದಾಸರು(ಕನ್ನಡ:ಹರಿದಾಸರು,ಇದರ ಅಕ್ಷರಶಃ ಅರ್ಥವೆಂದರೆ 'ಹರಿಯ ಸೇವಕರು') ಹಾಗು ಆಕಾರ ಪಡೆದದ್ದು ೧೩ನೆಯ- ೧೪ನೆಯ ಶತಮಾನದ, ಕಾಲಮಾನದಲ್ಲಿ, ವಿಜಯನಗರಸಾಮ್ರಾಜ್ಯ ಆಳ್ವಿಕೆಯಾ ಕಾಲದಲ್ಲಿ ಹಾಗು ಅದರ ಮುನ್ನ. ಈ ಚಳುವಳಿಯ ಮುಕ್ಯ ಗುರಿ ಮಧ್ವಾಚಾರ್ಯರ ದ್ವೈತತತ್ತ್ವಶಾಸ್ತ್ರ (ಮಧ್ವ ಸಿದ್ಧಾಂತ )ವನ್ನು ಜನಸಾಮಾನ್ಯರಲ್ಲಿದಾಸ ಸಾಹಿತ್ಯ (ಭಗವಂತನ ಸೇವಕರ ಸಾಹಿತ್ಯ)ದ ಮಾಧ್ಯಮದಲ್ಲಿ ಪ್ರಸಾರಿಸುವುದು.[೨]

ಶ್ರೀಪಾದರಾಯ, ವ್ಯಾಸತೀರ್ಥ, ವಾದಿರಾಜತೀರ್ಥ,ಪುರಂದರ ದಾಸ ಹಾಗು ಕನಕ ದಾಸರಂತಹ ಪ್ರಖ್ಯಾತಹಿಂದೂ ತತ್ವಜ್ಞಾನಿಗಳು, ಕವಿಗಳು ಹಾಗು ವಿದ್ವಾಂಸ ಈ ಸಮಯದಲ್ಲಿ ಮುಖ್ಯ ಪಾತ್ರ ವಹಿಸಿದರು.[೨] ಈ ಚಳುವಳಿ ಕನ್ನಡನಾಡಿನಲ್ಲಿ ಆರಂಭವಾಗಿ ನಂತರ ದಕ್ಷಿಣ ಭಾರತದ ಬೇರೆಡೆ ಹಬ್ಬಿದರೂ, ಇದು ಮುಂಚಿನ ಭಕ್ತಿ ಚಳುವಳಿಗಳಾದ ಬಸವಣ್ಣನವರು ೧೨ನೆಯ ಶತಮಾನದಲ್ಲಿ ಉತ್ತರ ಕರ್ನಾಟಕದಲ್ಲಿ ನಡೆಸಿದ್ದ ವೀರಶೈವ ಚಳುವಳಿ (ಕನ್ನಡದ ವಚನ ಸಾಹಿತ್ಯ ) ಹಾಗುತಮಿಳು ನಾಡಿನ ಆಳ್ವಾರ್ ಸಂತರ ೧೦ನೆಯ ಶತಮಾನದ ಚಳುವಳಿಗಳ ಫಲ.[೩][೪] ಮುಂದೆ, ವಲ್ಲಭಾಚಾರ್ಯಗುಜರಾತ್‌ನಲ್ಲಿ ಹಾಗು ಗುರು ಚೈತನ್ಯ ಮಹಾಪ್ರಭು ಮಧ್ವಾಚಾರ್ಯರ ಬೋಧನೆಗಳಿಂದ ಪ್ರಭಾವಿತರಾದರು. ಅವರ ಭಕ್ತರು ವಿಶ್ವಾದ್ಯಂತ ಇಸ್ಕಾನ್(ISKCON) ಚಳುವಳಿ ಶುರುಮಾಡಿದರು.[೫]

ಹರಿದಾಸರು ಸಂತರು, ಕೆಲವರು ಅಲೆದಾಡುವ ಹಾಡುಗರು, ಹಾಗು ತಮ್ಮನು ತಾವು - ಹರಿಯಾ ಸೇವಕರೆಂದು ಭಾವಿಸುತಿದ್ದರು. ಈ ಚಳುವಳಿ ಮುಖ್ಯವಾಗಿ ಬ್ರಾಹ್ಮಣರುನಡೆಸಿದರೂ, ಸಮಾಜದ ಎಲ್ಲ ವರ್ಗದವರು ಇದಕ್ಕೆ ಕೊಡುಗೆಯನ್ನು ನೀಡಿದ್ದಾರೆ.[೬]ಹರಿದಾಸ ಚಳುವಳಿ ಕನ್ನಡ ಭಕ್ತಿ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದೆ.[೭]

ಹುಟ್ಟುಸಂಪಾದಿಸಿ

ಹರಿದಾಸ ಚಳುವಳಿಯಾ ಮೂಲ ಸರಿಯಾಗಿ ಗುರ್ತಿಸಲಾಗದು, 9ನೆಯ ಶತಮಾನದಲ್ಲಿ ಈ ಚಳುವಳಿ ಶುರುವಾಯಿತು ಎನ್ನಲಾಗುತದೆ. ಆದರೆ ೧೩ನೆಯ ಶತಮಾನದಲ್ಲಿ ಉಡುಪಿಯಾ ಮಧ್ವಾಚಾರ್ಯರ(೧೨೩೮-೧೩೧೭) ಆಶ್ರಯದಿಂದ ದಾಸ ಕೂಟ ಎಂಬ ವೈಷ್ಣವ ಭಕ್ತಿ ಚಳುವಳಿ ಕರ್ನಾಟಕದಲ್ಲಿಶುರುವಾಯಿತು.[೩]

ಈ ಕಾಲಮಾನದಲ್ಲಿ, ಈ ಚಳುವಳಿ ಒಂದು ಬಲಶಾಲಿ ಧಾರ್ಮಿಕ ಶಕ್ತಿಯಾಯಿತು,ಇದರಿಂದಾಗಿ ಹಿಂದೂಮನೋಭಾವನೆ ದಕ್ಷಿಣ ಭಾರತದಲ್ಲಿ ನವಚೈತನ್ಯಭರಿತವಾಯಿತು, ಈ ವೇಳೆ ಉತ್ತರ ಭಾರತ ಆಗಲೇ ಮುಸ್ಲಿಂ ಆಳ್ವಿಕೆಗೆ ಸಿಲಿಕಿತ್ತು. ಹರಿದಾಸರಿಗೆವಿಜಯನಗರ ಸಾಮ್ರಾಜ್ಯದಲ್ಲಿ ಪೋಷಣೆ ದೊರಕಿತು.[೮]ವ್ಯಾಸತೀರ್ಥ, ಕೃಷ್ಣದೇವರಾಯನ ಗುರುವೆಂದು ಭಾವಿಸಲಾಗುತ್ತದೆ.[೯][೧೦][೧೧]

ಹರಿದಾಸರು ಹಿಂದೂಧರ್ಮದ ವೈಷ್ಣವ ಭಕ್ತರು ಹಾಗು ವಿಠ್ಠಲ, ವಿಷ್ಣುವಿನ ಅವತಾರ ಹಾಗು ಕೃಷ್ಣನನ್ನುಪುಜಿಸ್ಸುತಿದ್ದರು.[೧೨] ಹರಿದಾಸ ಚಳುವಳಿಯಲ್ಲಿ,ಮಹಾರಾಷ್ಟ್ರದ ಪಂಢರಪುರದ ಭೀಮನದಿ ತೀರದಲ್ಲಿರುವ ವಿಠ್ಠಲನಾಥ ದೇವಸ್ತಾನ, ಕರ್ನಾಟಕದ ಹಂಪಿಯಲ್ಲಿನ ವಿಠ್ಠಲ ಸ್ವಾಮಿ ದೇವಸ್ತಾನ ಹಾಗು ಆಂಧ್ರ ಪ್ರದೇಶದತಿರುಮಲ ಬೆಟ್ಟದಲ್ಲಿರುವ ಶ್ರೀನಿವಾಸ ದೇವಸ್ತಾನ ಅತಿ ಪವಿತ್ರವಾದ ಸ್ಥಳಗಳು.

ಬೋಧಕರುಸಂಪಾದಿಸಿ

ಹರಿದಾಸರು' ಸಾಮಾನ್ಯವಾಗಿ ಕರ್ನಾಟಕದವರಾಗಿದರು, ಕೆಲವರನ್ನು ಹೊರಿತುಪಡಿಸಿ, ಜಯತೀರ್ಥ ಮಹಾರಾಷ್ಟ್ರದಪಂಢರಪುರದ ಹತ್ತಿರದ ಮಂಗಳ್ವೆಧೆ [೧೩] ಹಾಗು ಶ್ರೀ ನರಹರಿ ತೀರ್ಥ (ಮಧ್ವಾಚಾರ್ಯರ ಭಕ್ತ) ಇವರು ಆಂಧ್ರ ಪ್ರದೇಶ ಅಥವಾ ಒರಿಸ್ಸಾದವರು.[೧೪]

ಮಧ್ವಾಚಾರ್ಯ ಪಂಥದ ವಿಜಯನಗರ ಸಾಮ್ರಾಜ್ಯ ಕಾಲಮಾನದ ಹೆಸರುವಾಸಿ ಹರಿದಾಸರು:

ಮಾಧವತೀರ್ಥ - ೧೨೧೫–೧೩೫೦

ಅಕ್ಶೋಭ್ಯತೀರ್ಥ

ವಿಜಯೀಂದ್ರತೀರ್ಥ

ರಘೋತ್ತಮತೀರ್ಥ

ನರಹರಿ ತೀರ್ಥರು

ಜಯತೀರ್ಥರು

ಶ್ರೀಪಾದರಾಯರು (೧೪೦೪ - ೧೫೦೨.)

ವ್ಯಾಸತೀರ್ಥರು (೧೪೪೭ - ೧೫೩೯)

ಪುರಂದರ ದಾಸ (೧೪೮೦-೧೫೬೪)

ಕನಕ ದಾಸ (೧೫೦೮ - ೧೬೦೬.)

ವಾದಿರಾಜತೀರ್ಥರು (೧೪೮೦ - ೧೬೦೦.).

ಟೊಳ್ಳ ರಾಜ ತೀರ್ಥ(೧೯೯೮-____)

ಬೆಳವಣಿಗೆ ಹಾಗು ಪೋಷಣೆಸಂಪಾದಿಸಿ

ಶ್ರೀಪಾದರಾಯರುವ್ಯಾಸತೀರ್ಥರು ಹಾಗುವಾದಿರಾಜತೀರ್ಥರನ್ನು "ಮೂರು ವ್ಯಾಪಕದ ಸಂತರು" (ಯತಿ ರಾಜ ತ್ರಯರು, ಸನ್ಯಾಸರಾದರು ಇವರಿಗೆ ಸಮಕಾಲೀನ ರಾಜರು ವಿಶೇಷ ಸಹಾಯವನ್ನೀಡಿದರು) ಎಂದು ಹರಿದಾಸ ಚಳುವಳಿ ಭಾವಿಸಲಾಗುತ್ತದೆ ಆದರೆ "ವೈಷ್ಣವ ಕವಿ ತ್ರಿಮೂರ್ತಿ" ಗಳ ಪಟ್ಟ ಶ್ರೀಪಾದರಾಯ, ಪುರಂದರದಾಸ ಹಾಗು ಕನಕದಾಸರದ್ದು. [೧೫]

ಕನ್ನಡ ಸಾಹಿತ್ಯಕ್ಕೆ ಕೊಡುಗೆಸಂಪಾದಿಸಿ

ಪುರಂದರ ದಾಸ

ಹರಿದಾಸ ಚಳುವಳಿ ಕನ್ನಡ ಸಾಹಿತ್ಯ ಭಕ್ತಿ ಸಾಹಿತ್ಯದ ರೂಪದಲ್ಲಿ ಮಹತ್ವದ ಕೊಡಿಗೆ ಮಾಡಿದೆ. ಭಕ್ತಿ ಚಳುವಳಿ ಇಂದ ಹುಟ್ಟಿದ ಸಾಹಿತ್ಯವನ್ನು ದಾಸ ಸಾಹಿತ್ಯ (ಅಥವಾದಾಸರ ಪದಗಳು - ದಾಸರ ಸಾಹಿತ್ಯ) ಎಂದು ಕರೆಯಲಾಗುತ್ತದ್ದೆ. ಜಗನ್ನಾಥದಾಸ, ವಿಜಯ ದಾಸ ಹಾಗು ಗೋಪಾಲದಾಸ,ಕನ್ನಡ ಸಾಹಿತ್ಯದ ಬೆಳವಣಿಗೆಗೆ ದುಡಿದ ಪ್ರಸಿದ್ದ ಕವಿಗಳು .[೧೬][೧೭]

ಇವರ ಲೇಖನಗಳನ್ನು ಮೂರು ಬಾಗದಲ್ಲಿ ವಿಂಗಡಿಸಬಹುದು:

ಕಾವ್ಯ

ತತ್ವ

ಸಾವ್ರತ್ರಿಕವಾದ ಒಡ್ಡವ.

(ಅಂಕಿತ ನಾಮ )ಸಂಪಾದಿಸಿ

ಪ್ರತಿಯೊಬ್ಬ ಹರಿದಾಸ ನು ಪ್ರತ್ಯೇಕವಾದ ಅಂಕಿತ ನಾಮದಿಂದ ಆತನ ಕಾವ್ಯವನ್ನು ಅಂಕಿತ ಗೊಳಿಸುತ್ತಿದ್ದರು . ಕೆಲವು ಪ್ರಖ್ಯಾತ ಹರಿದಾಸರ ಅಂಕಿತ ನಾಮಗಳು ಹೀಗಿವೆ:[೧೮]

ಹರಿದಾಸರು          ಕಾಲ(ಕ್ರೀಸ್ತುಶಕ)           ಅಂಕಿತ ನಾಮ    

ನರಹರಿತೀರ್ಥರು    ೧೩೨೪-೧೩೩೩   ನರಹರಿರಘುಪತಿ 

ಶ್ರೀಪಾದರಾಯರು   ೧೪೦೪-೧೫೦೨       ರಂಗವಿಠ್ಠಲ  

ವ್ಯಾಸತೀರ್ಥರು        ೧೪೬೦-೧೫೩೯       ಶ್ರೀಕೃಷ್ಣ 

ವಾದಿರಾಜತೀರ್ಥರು    ೧೪೮೦-೧೬೦೦    ಹಯವದನ

ರಾಘವೇಂದ್ರತೀರ್ಥರು ೧೫೯೫-೧೬೭೧     ಧೀರವೇಣು                                                                        ಗೋಪಾಲ

ಪುರಂದರದಾಸರು    ೧೪೮೪-೧೫೬೪    ಪುರಂದರ ವಿಠ್ಠಲ

ಕನಕದಾಸರು        ೧೫೦೮-೧೬೦೬           ಆದಿ ಕೇಶವ

ವಿಜಯದಾಸರು       ೧೬೮೨-೧೭೫೫      ವಿಜಯ ವಿಠ್ಠಲ

ಗೋಪಾಲದಾಸರು   ೧೭೨೨-೧೭೬೨    ಗೋಪಾಲ ವಿಠ್ಠಲ

ಹೆಳವನಕಟ್ಟೆ ಗಿರಿಯಮ್ಮನ ೧೮ನೆಯಶತಮಾನ                                                                          ಹೆಳವನಕಟ್ಟೆ ರಂಗ

ಜಗನ್ನಾಥದಾಸರು     ೧೭೨೭-೧೮೦೯           ಜಗನ್ನಾಥ 

ವಿಠ್ಠಲಮಹಿಪತಿದಾಸರು   ೧೬೧೧-೧೬೮೧                                                                                  ಮಹಿಪತಿಪ್ರಸನ್ನ 

ವೆಂಕಟದಾಸರು     ೧೬೮೦-೧೭೫೨                    ಪ್ರಸನ್ನ 

ವೆಂಕಟವೇಣುಗೋಪಾಲದಾಸರು ೧೮ನೆಯ ಶತಮಾನ                                                              ವೇಣುಗೋಪಾಲ 

ವಿಠ್ಠಲಮೋಹನದಾಸರು     ೧೮ನೆಯಶತಮಾನ                                                                    ಮೋಹನ ವಿಠ್ಠಲನೆಕ್ಕರ

 ಕೃಷ್ಣದಾಸರು        ೧೮ನೆಯಶತಮಾನ                                                     ವರಾಹತಿಮ್ಮಪ್ಪಗುರುಗೋವಿಂದದಾಸರು--


ಕರ್ನಾಟಕ ಸಂಗೀತಕ್ಕೆ ಕೊಡಿಗೆಸಂಪಾದಿಸಿ

ಹರಿದಾಸ ಚಳುವಳಿ ಕರ್ನಾಟಕ ಸಂಗೀತಬೆಳವಣಿಗೆಯನ್ನು ಹಿಂದೂಸ್ತಾನಿ ಇಂದ ಬೇರೆ ಒಂದು ಪ್ರತ್ಯೇಕ ರೀತಿಯಲ್ಲಿ ಮುದುವರಿಸಿತು, ಇದರಿಂದಾಗಿ ಭಾರತದ ಶಾಸ್ತ್ರೀಯ ಸಂಗೀತ ಒಂದು ನವೋದಯವಾಯಿತು. ಪುರಂದರ ದಾಸರನ್ನು (ಕರ್ನಾಟಕ ಸಂಗೀತ ಪಿತಾಮಹ)ಎನಲಾಗುತ್ತದ್ದೆ..[೧೯][೨೦][೨೧] ಅವರ ಕರ್ಯಗಾಳು ಈ ವಿಂಗಡಣೆಯಲ್ಲಿ ಬರುತ್ತದೆ: ಪದಗಳು , ಕೃತಿ ,ಉಗಾಭೋಗ , ಸುಳಾದಿ , ವ್ರುತ್ತನಾಮ , ದಂಡಕ , ತ್ರಿಪದಿ(ಮೂರು ಸಾಲಿನ ಕಾವ್ಯ), ಪಟ್ಟದಿ , ಸಾಂಗತ್ಯ "ಕೋಲಾಟ ಪಂಕಿನ"[೨೨] ಹಾಗು ರಗಳೆ .

ಇದನ್ನು ನೋಡಿಸಂಪಾದಿಸಿ

ದ್ವೈತವಿಜಯನಗರ ಸಾಮ್ರಾಜ್ಯಕರ್ನಾಟಕ ಸಂಗೀತ

ಬಾಹ್ಯ ಕೊಂಡಿಗಳು

ಟಿಪ್ಪಣಿಗಳು

ಉಲ್ಲೇಖಗಳು

Last edited ೯ days ago by an anonymous user

RELATED PAGES

ಭಾರತೀಯ ಸಂಸ್ಕೃತಿ

ಕನ್ನಡ ಸಾಹಿತ್ಯದ ಮೈಲಿಗಲ್ಲುಗಳ ಪಟ್ಟಿ

ಕಲೆ ಮತ್ತು ಕರ್ನಾಟಕ ಸಂಸ್ಕೃತಿ

2 ಕಾಮೆಂಟ್‌ಗಳು: