ಹುಡುಕು
ಸಂಪಾದಿಸಿಈ ಪುಟವನ್ನು ವೀಕ್ಷಿಸಿಇನ್ನೊಂದು ಭಾಷೆಯಲ್ಲಿ ಓದು
ಸಿದ್ಧಲಿಂಗಯ್ಯ
ಡಾ. ಸಿದ್ಧಲಿಂಗಯ್ಯಜನನ೧೯೫೪
'ಮಾಗಡಿ' ತಾಲ್ಲೋಕಿನ 'ಮಂಚನಬೆಲೆ' ಗ್ರಾಮವೃತ್ತಿಅಧ್ಯಾಪಕ, ಪ್ರಾಧ್ಯಾಪಕ, ಕವಿ, ಹೋರಾಟಗಾರ, ಅಧ್ಯಕ್ಷರು(ಕನ್ನಡ ಪುಸ್ತಕ ಪ್ರಾಧಿಕಾರ)ರಾಷ್ಟ್ರೀಯತೆಭಾರತೀಯಪ್ರಕಾರ/ಶೈಲಿಕಾವ್ಯ, ವಿಮರ್ಶೆ, ನಾಟಕವಿಷಯಕನ್ನಡಸಾಹಿತ್ಯ ಚಳುವಳಿನವೋದಯ
ಪ್ರಭಾವಗಳು
ಶಾಂತವೇರಿ ಗೋಪಾಲಗೌಡ, ಯಶವಂತರಾವ್ ಅಂಬೇಡ್ಕರ್
ಸಿದ್ಧಲಿಂಗಯ್ಯನವರು ಕನ್ನಡದ ಲೇಖಕರಲ್ಲೊಬ್ಬರು. 'ದಲಿತ ಕವಿ' ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿರುವವರು.
ಜನನ, ಜೀವನಸಂಪಾದಿಸಿ
ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ 'ಮಾಗಡಿ' ತಾಲ್ಲೋಕಿನ 'ಮಂಚನಬೆಲೆ' ಗ್ರಾಮದಲ್ಲಿ ೧೯೫೪ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
ಕೃತಿಗಳುಸಂಪಾದಿಸಿ
ಪಿ.ಎಚ್ ಡಿ ಸಂಶೋಧನಾಪ್ರಬಂಧಸಂಪಾದಿಸಿ
೧ ಗ್ರಾಮ ದೇವತೆಗಳು, ೧೯೯೭
ಕವನ ಸಂಕಲನಗಳುಸಂಪಾದಿಸಿ
೧ ಹೊಲೆ ಮಾದಿಗರ ಹಾಡು, ೧೯೭೫
೨ ಮೆರವಣಿಗೆ, ೨೦೦೦
೩ ಸಾವಿರಾರು ನದಿಗಳು, ೧೯೭೯
೪ ಕಪ್ಪು ಕಾಡಿನ ಹಾಡು, ೧೯೮೩
೫ ಆಯ್ದಕವಿತೆಗಳು,೧೯೯೭
೬ ಅಲ್ಲೆಕುಂತವರೆನನ್ನ ಜನಗಳು ಮತ್ತು ಇತರ ಕವಿತೆಗಳು, ೨೦೦೫
೭ ಸಮಕಾಲೀನ ಕನ್ನಡ ಕವಿತೆ ಭಾಗ-೩,೪ (ಸಂಪಾದನೆ ಇತರರೊಂದಿಗೆ), ೨೦೦೩
ವಿಮರ್ಶನಾ ಕೃತಿಗಳುಸಂಪಾದಿಸಿ
೧ ಹಕ್ಕಿನೋಟ೧೯೯೧
೩ ಎಡಬಲ
೪ ಉರಿಕಂಡಾಯ, ೨೦೦೯
ಲೇಖನಗಳ ಸಂಕಲನಸಂಪಾದಿಸಿ
೧ ಅವತಾರಗಳು, ೧೯೯೧
೨ ಸದನದಲ್ಲಿ ಸಿದ್ದಲಿಂಗಯ್ಯ ಭಾಗ -೧, ೧೯೯೬
೩ಸದನದಲ್ಲಿ ಸಿದ್ದಲಿಂಗಯ್ಯ ಭಾಗ -೨, ೨೦೦೪
೪ ಜನಸಂಸ್ಕೃತಿ, ೨೦೦೭
ನಾಟಕಗಳುಸಂಪಾದಿಸಿ
೧ ಏಕಲವ್ಯ, ೧೯೮೬
೨ ನೆಲಸಮ, ೧೯೮೦
೩ ಪಂಚಮ, ೧೯೮೦
ಆತ್ಮಕಥೆಸಂಪಾದಿಸಿ
೧ ಊರುಕೇರಿ- ಭಾಗ-೧, ೧೯೯೭
೨ ಊರುಕೇರಿ- ಭಾಗ-೨, ೨೦೦೬
ಗೌರವ, ಪ್ರಶಸ್ತಿಗಳುಸಂಪಾದಿಸಿ
ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರ್ಕಾರ ಪ್ರಶಸ್ತಿ-೧೯೮೪ರಾಜ್ಯೋತ್ಸವ ಪ್ರಶಸ್ತಿ -ಕರ್ನಾಟಕ ಸರ್ಕಾರ-೧೯೮೬ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ -೧೯೯೨ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ -೧೯೯೬ಜಾನಪದ ತಜ್ಞ ಪ್ರಶಸ್ತಿ -೨೦೦೧೨ ಬಾರಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ.ಸಂದೇಶ್ ಪ್ರಶಸ್ತಿ -೨೦೦೧ಡಾ.ಅಂಬೇಡ್ಕರ್ ಪ್ರಶಸ್ತಿ -೨೦೦೨ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ -೨೦೦೨ಬಾಬುಜಗಜೀವನರಾಮ್ ಪ್ರಶಸ್ತಿ -೨೦೦೫ನಾಡೋಜ ಪ್ರಶಸ್ತಿ -೨೦೦೭ಪ್ರೆಸಿಡೆನ್ಸಿ ಇನ್ಷಿಟ್ಯೂಷನ್ ಪ್ರಶಸ್ತಿ -೨೦೧೨ಆಳ್ವಾಸ್ ನುಡಿಸಿರಿ ಪ್ರಶಸ್ತಿ -೨೦೧೨ಶ್ರವಣಬೆಳಗೊಳದಲ್ಲಿ ನಡೆದ ೮೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.
Last edited ೧೦ months ago by WaIkgcsvdk
RELATED PAGES
ಇಂತಿ ಮಂಜುನಾಥ ಕೆ ಎಂ ಜನತಾ ಸರ್ಕಾರಿಪ್ರಥಮದರ್ಜೆಕಾಲೇಜು ಬಸವಪಟ್ಟಣ [ಚಿರಡೋಣಿ]
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ