ಭಾವನೆಗಳು ಬರಹದ ಪ್ರತಿಬಿಂಬ
ಮಂಜುನಾಥ ಕೆ ಎಂ
ಪ್ರೀತಿಯ ಸ್ನೇಹಿತರೇ ಪ್ರಸ್ತುತ ಭಾರತದ ಯುವ ಜನತೆ ಮೊಬೈಲ್ ಎಂಬ ವೈರಸ್ಗೆ ಯಾವ ರೀತಿ ಮಾರು ಹೋಗಿದ್ದಾರೆ ಎಂಬುದನ್ನು ಕುರಿತು ನನ್ನ ಸ್ವಾಸಾಮರ್ಥ್ಯದಿಂದ ನಾನು ರಚಿಸಿರುವ ನಾಲ್ಕನೆಯ ಗೀತೆ ಏನಾದರು ತಪ್ಪಿದ್ದರೆ ಸರಿಪಡಿಸಿ
ಮೂಲಗೀತೆ ಗಣಪ ಚಿತ್ರದ
"ಮುದ್ದಾಗಿ ನೀನು ನನ್ನ ಕೂಗಿದೆ "
" ಸದ್ದಿಲ್ಲದೇನೆ ಸುದ್ದಿಯಾಗಿದೆ "
ನನ್ನ ರಚನೆ
ಫ್ರೇಂಡಾಗಿ ನೀನು ಮೆಸೇಜ್ ಮಾಡಿದೆ
ಗೊತ್ತಿಲ್ಲದೇನೆ ರಿಪ್ಲೆ ಮಾಡಿದೆ
ಸದ್ದಿಲ್ಲದೇನೆ ಸುದ್ದಿಯಾಗಿದೆ
ವಾಟ್ಸಪಲ್ಲಿ ಒಂದು ಮಿಂಚು ತಾಗಿದೆ
ಫೇಸ್ ಬುಕ್ ಮೇಲೆ ಇಂದು ಆಸೆಯಾಗಿದೆ
ಇಂದಲ್ಲ ನಾಳೆ ಮೋಬೈಲಿಂದ ಏನೋ ಕಾದಿದೆ
ವಾಟ್ಸಾಪ್ ಬಂದ ನಂತರ
ಟೆಲಿಗ್ರಾಮ್ ಮಾಯವಾಗಿದೆ
ಮೆಸೇಜ್ ತುಂಬಿಕೊಳ್ಳಲು
ಸ್ಟೋರೇಜ್ ಸಾಲದಾಗಿದೆ
ಮೊದಲೇನೆ ಹೇಳಿ ಬಿಡುವೆನು
ನನಗಂತೂ ಮೊಬೈಲ್ ಬೇಕಿದೆ
ಮೊಬೈಲಲ್ಲಿದ ಒಂಟಿ ಜೀವನ
ನನಗೀಗ ಬೇಡವಾಗಿದೆ
ಉಪಯೋಗ ಇಲ್ಲದಿದ್ದರೂ
ಮೊಬೈಲ್ ಒಂದೇ ಆಸ್ತಿ ಯಾಗಿದೆ
ಸ್ಮಾಟ್ ಫೋನ್ ಬಂದ ಮೇಲೆಯೆ
ಯುವ ಜನತೆ ದಾರಿ ತಪ್ಪಿದೆ
ಫ್ರೇಂಡಾಗಿ ನೀನು ಮೆಸೇಜ್ ಮಾಡಿದೆ
ಗೊತ್ತಿಲ್ಲದೇನೆ ರಿಪ್ಲೆ ಮಾಡಿದೆ
ಸದ್ದಿಲ್ಲದೇನೆ ಸುದ್ದಿಯಾಗಿದೆ
ವಾಟ್ಸಾಪಲ್ಲಿ ಒಂದು ಮಿಂಚು ತಾಗಿದೆ
ಫೇಸ್ ಬುಕ್ ಮೇಲೆ ಇಂದು ಆಸೆ ಮೂಡಿದೆ
ಇಂದಲ್ಲ ನಾಳೆ ಮೋಬೈಲಿಂದ ಏನೋ ಕಾದಿದೆ
ಫೇಸ್ ಬುಕಲ್ಲಿ ನೀನು ಹಾಕಿರೊ
ಫೋಟೋ ಎಷ್ಟು ಪುಣ್ಯ ಮಾಡಿದೆ
ವಾಟ್ಸಾಪಲ್ಲಿ ನೀನು ಕುತಿರೋ
ಡಿಪಿ ಕೂಡ ಧನ್ಯವಾಗಿದೆ
ದಿನನಿತ್ಯ ಆನ್ ಲೈನ್ ನಲ್ಲಿ
ಇರುವಂತ ಆಸೆಯಾಗಿದೆ
ಆನ್ ಲೈನ್ ಗೆ ಬಂದ ನಂತರ
ನಿನ್ನ ನಡತೆನೆ ಬೇರೆಯಾಗಿದೆ
ಮೊಬೈಲಲ್ಲಿದ ಒಂಟಿ ಜೀವನ
ಯುವಜನತೆಗೆ ಬೇಕಾಗಿದೆ
ಯುವಜನತೆ ಹೇಳು ಬೇಗನೆ
ನಿಮಗೂನು ಹೀಗೆಯಾಗಿದೆ
ಫ್ರೇಂಡಾಗಿ ನೀನು ಮೆಸೇಜ್ ಮಾಡಿದೆ
ಗೊತ್ತಿಲ್ಲದೇನೆ ರಿಪ್ಲೆ ಮಾಡಿದೆ
ಸದ್ದಿಲ್ಲದೇನೆ ಸುದ್ದಿಯಾಗಿದೆ
ವಾಟ್ಸಾಪಲ್ಲಿ ಒಂದು ಮಿಂಚು ತಾಗಿದೆ
ಫೇಸ್ ಬುಕ್ ಮೇಲೆ ಇಂದು ಆಸೆ ಮೂಡಿದೆ
ಇಂದಲ್ಲ ನಾಳೆ ಮೋಬೈಲಿಂದ ಏನೋ ಕಾದಿದೆ
ನಾನು ಕವಿಯಲ್ಲ ತೋಚಿದನ್ನ ಗೀಚಿದ್ದೇನೆ ಇಷ್ಟ ಆದ್ರೆ ಲೈಕ್ ಮಾಡಿ ಏನಾದರು ತಪ್ಪಿದ್ದರೆ ಸರಿಪಡಿಸಿ ಅದನ್ನು ಬಿಟ್ಟು ಎಲ್ಲಿ ಕಾಪಿ ಮಾಡಿದೆ ಯಾವುದನ್ನ ನೋಡ್ಕೊಂಡು ಬರ್ದೆ ಅಂತ ಕಾಲು ಎಳಿಯೊದಿಕ್ಕೆ ಹೋಗ್ಬೇಡಿ ಒಂದು ಸಲ ನೀವು ಬರಿಯೊದಿಕ್ಕೆ ಪ್ರಯತ್ನಿಸಿ ಅದರಲ್ಲಿ ಸಿಗುವ ಆನಂದವನ್ನ ನೋಡಿ
ಯಾರೇನೆ ಹೇಳಿದ್ರು ನನಗೇನು ಬೇಜಾರಿಲ್ಲ ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
ಉತ್ತಮ ಪ್ರಯತ್ನ. ಸಾಹಿತ್ಯ ಪಯಣ ಹೀಗೆಯೇ ಮುಂದುವರೆಯಲಿ
ಪ್ರತ್ಯುತ್ತರಅಳಿಸಿ