ಬುಧವಾರ, ಸೆಪ್ಟೆಂಬರ್ 4, 2019

ಶಿಕ್ಷಕರ ದಿನಾಚರಣೆ


ಗುರುಬ್ರಹ್ಮ ಗುರುರ್ವಿಷ್ಣುಗುರುಃದೇವೋ ಮಹೇಶ್ವರಃಗುರುಸಾಕ್ಷಾತ್ ಪರಃ ಬ್ರಹ್ಮ.                 ತಸ್ಮೈಶ್ರೀ ಗುರವೇ ನಮಃ....




 ಮಂಜುನಾಥ ಕೆ ಎಮ್ 


ಮಾಜಿ ರಾಷ್ಟ್ರಪತಿ ರಾಧಾಕೃಷ್ಣನ್ 

 

ಪುಸ್ತಕದ ಪುಟದೊಳಗೆ ಸ್ಪಷ್ಟವಾಗಿ ಬರೆಸಿ 
ಮನಸ್ಸೊಳಗೆ ಜ್ಞಾನ ದೀವಿಗೆಯನ್ನು ಬೆಳೆಸಿ 
ಬದುಕಲ್ಲಿ ದಿಟ್ಟವಾಗಿ ನಡೆಯುವಂತೆ ಹರಸಿದ 
ಬದುಕಿನ ನಿಜವಾದ ನಡೆ ನುಡಿಯನ್ನು ಕಲಿಸಿದ ನುಡಿಯೊಂದಿಗೆ ಉತ್ತಮ ನಡೆಯನ್ನು ಕಲಿಸಿದ 

ಭೋದನೆಯ ಮೂಲಕ ಸಾಧನೆಯ ಹಾದಿಗೆ ನಡೆಸಿದ ನನ್ನ ಪ್ರೀತಿಯ ಎಲ್ಲಾ ಗುರುಗಳಿಗು ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ಗುರುವಿಲ್ಲದೆ ಬದುಕಿಲ್ಲ ಗುರುವನರಿತರೆ ಬದುಕು ಬೆಲ್ಲ  ಎನ್ನುವ ಮಾತನ್ನು ಈ ಶುಭಸಂದರ್ಭದಲ್ಲಿ ಹೇಳುವುದಕ್ಕೆ ಇಷ್ಟಪಡ್ತಿನಿ 

                     ಮತ್ತೆ ಶಿಕ್ಷಕರ ದಿನಾಚರಣೆ ಬಂದಿದೆ ಅದೇ ಬಾಲ್ಯದ ನೆನಪುಗಳನ್ನು ಹೊತ್ತು ತಂದಿದೆ ಈ ದಿನದಂದು ನಮಗೆ ಆಗ ಹಬ್ಬದ ಸಂಭ್ರಮ. ಡಾ. ರಾಧಾಕೃಷ್ಣನ್ ಅವರ ಭಾವಚಿತ್ರವಿರುವ ಚಿಕ್ಕ ಪೋಸ್ಟರ್ ಗಳನ್ನು ನೋಟ್ ಬುಕ್ ಮೇಲೆ ಅಂಟಿಸಿ ಸಂತಸಪಡುತ್ತಿದ್ದೆವು. ಶಿಕ್ಷಕರ ಕುರಿತು ಮನೆಯಲ್ಲಿ ಅಪ್ಪ ಅಮ್ಮನಿಂದ ಬರೆಯಿಸಿಕೊಂಡು ಬಂದ ಪುಟ್ಟ ಭಾಷಣ ಮಾಡಿ ಸಂತಸಪಡುತ್ತಿದ್ದೆವು- ಇದು ಪ್ರಾಥಮಿಕ ಶಾಲೆಯಲ್ಲಿನ ಸಂಭ್ರಮ.

ಮುಂದೆ ಮಾಧ್ಯಮಿಕ ಶಾಲೆಗೆ ಬಂದಾಗ, ಶಿಕ್ಷಕ ದಿನಾಚರಣೆಗೆ ಚಿಕ್ಕವರಿದ್ದಾಗ ಕೊಡುತ್ತಿದ್ದ ಗೌರವ ಕೊಂಚ ಕಡಿಮೆಯಾಗಿತ್ತು. ಯಾಕೆಂದರೆ, ಪ್ರಾಥಮಿಕ ಶಾಲೆಯಲ್ಲಿ ಯಾವ ಶಿಕ್ಷಕರು ನಮ್ಮ "ಹೀರೋ"ಗಳಾಗಿ ಕಂಗೊಳಿಸುತ್ತಿದ್ದರೋ, ಅವರು ಈಗ ಕೊಂಚ ದುರ್ಬಲರಾಗಿ ಗೋಚರಿಸತೊಡಗಿದ್ದರು. ಹಾಗಂತ ಅವರಿಗೆ ಗೌರವ ಕೊಡುತ್ತಿರಲಿಲ್ಲವೆಂತಲ್ಲ. ಗೌರವದಲ್ಲಿ ಸ್ವಲ್ಪ ವ್ಯತ್ಯಾಸವಾಗಿರುತ್ತದೆ ಅಷ್ಟೆ.

ಇನ್ನು ಕಾಲೇಜ್ ಮೆಟ್ಟಿಲು ಹತ್ತಿದಾಗಲಂತೂ ಶಿಕ್ಷಕರು  ಅವರೇನು ಮಹಾ ಎಂಬ ಉಡಾಫೆ ಮನೋಭಾವ ಬೆಳೆದಿರುತ್ತದೆ. ಇಂಥ ಮನೋಭಾವ ಎಲ್ಲರಲ್ಲಿಯೂ ಇರುತ್ತದೆ ಎಂದು ಹೇಳುತ್ತಿಲ್ಲ. ಬಹುಶಃ ನೂರು ಕಾಲೇಜ್ ಹುಡುಗರಲ್ಲಿ ಸುಮಾರು 80ರಷ್ಟು ಹುಡುಗರು ಇದೇ ಮನೋಭಾವ ಹೊಂದಿರಬಹುದೇನೋ. ಹೀಗಿರುವಾಗ ಶಿಕ್ಷಕ ದಿನಾಚರಣೆಯ ಮಹತ್ವ ಹೇಗೆ ಗೊತ್ತಾಗಬೇಕು? ಶಿಕ್ಷಕರ ಮಹತ್ವದಬಗ್ಗೆ ತಿಳಿದು ಕೊಳ್ಳುವುದಾದರು ಹೇಗೆ? ಅಲ್ವಾ ಅದಕ್ಕೆ ಪುರಂದರ ದಾಸರು.                     "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ " ಎಂದು ಹೇಳಿದ್ದಾರೆ  ಏಕೆಂದರೆ ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಬಹಳ ಅನನ್ಯವಾದದ್ದು, ಪ್ರತಿಯೊಬ್ಬರೂ ತಮಗೆ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುಗಳನ್ನು ನೆನೆಯುವ ದಿನವೇ ಸೆ.5, ಶಿಕ್ಷಕರ ದಿನಾಚರಣೆ. 

ಮಾಜಿ ಉಪರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ 132ನೇ ಜನ್ಮದಿನವನ್ನು ಇಂದು ನಾವು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ಶಿಕ್ಷಕರೆಂದರೆ ಇಂದಿನ ಪೀಳಿಗೆಗೆ ಒಂದು ವೃತ್ತಿಯಾಗಷ್ಟೇ ಸೀಮಿತವಾಗಿಬಿಟ್ಟಿದೆ. ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಅದರಲ್ಲಿ ಶಿಕ್ಷಕರೇ ಜೀವಾಳವಾಗಿರುತ್ತಾರೆ. ಯಾವುದೇ ಕ್ಷೇತ್ರದಲ್ಲಾದರೂ ಶಿಕ್ಷಕ ಇಲ್ಲದೇ ಅಭಿವೃದ್ಧಿ ಅಸಾಧ್ಯ. ಓರ್ವ ಶಿಕ್ಷಕ ದೇಶದ ರಾಷ್ಟ್ರಪತಿಯಾಗಿ ಮಾದರಿ ವ್ಯಕ್ತಿತ್ವವಾಗಿ ಹೊರಹೊಮ್ಮಲು ಸಾಧ್ಯ ಎಂಬುದಕ್ಕೆ ಸರ್ವಪಲ್ಲಿ ರಾಧಾಕೃಷ್ಣನ್ ಅವರೇ ಉತ್ತಮ ಉದಾಹರಣೆ. ಪ್ರಸ್ತುತ ಭಾರತದಲ್ಲಿ ಮೌಲ್ಯಾಧಾರಿತ ಶಿಕ್ಷಣ ಕಳೆಗುಂದುತ್ತಿರುವುದು ಮೌಲ್ಯಾಧಾರಿತ ಶಿಕ್ಷಕರ ಕೊರತೆಯನ್ನೂ ಎತ್ತಿ ಹಿಡಿಯುತ್ತಿದೆ!

ಇಂದಿನ ಪೀಳಿಗೆಯವರನ್ನು ಕೇಳಿ ನೋಡಿ, ನೀನು ಏನಾಗಬೇಕೆಂದು ಕೇಳಿದರೆ, ಅಪ್ಪಿ ತಪ್ಪಿ ಕೂಡ ನಾನೋರ್ವ ಶಿಕ್ಷಕನಾಗಬೇಕು ಎಂದು ಹೇಳುವುದಿಲ್ಲ. ಅವರ ದೃಷ್ಠಿಯೇನಿದ್ದರೂ ಇಂಜಿನಿಯರೋ ಡಾಕ್ಟರಾಗುವ ಗುರಿಯತ್ತ ಪಯಣ ಬೆಳೆಸಿರುತ್ತದೆ. ಹೀಗೆ ಎಲ್ಲರೂ ಶಿಕ್ಷಕ ವೃತ್ತಿಯಿಂದ ದೂರ ಉಳಿದರೆ ದೇಶದ ಸ್ಥಿತಿ ಏನಾಗಬೇಡ? ಪ್ರತಿಷ್ಠಿತ ಕಾಲೇಜು ಶಿಕ್ಷಕರನ್ನು ಬಿಡಿ, ಅವರಿಗೆ ಲಕ್ಷಗಟ್ಟಳೆ ಸಂಬಳ ಸವಲತ್ತು ಎಲ್ಲವೂ ದೊರೆಯುತ್ತದೆ. ಆದರೆ ಸಾಮಾನ್ಯ ಸರ್ಕಾರಿ ಶಿಕ್ಷಕರ ಪಾಡು ಅಂದುಕೊಂಡಷ್ಟು ಸುಲಭವಲ್ಲ. ಸರ್ಕಾರಿ ಕೆಲಸವೆಂದರೆ ಜೀವನದಲ್ಲಿ ಸೆಕ್ಯೂರ್ಡ್ ಎಂಬ ಭಾವನೆ ಮೂಡುತ್ತದೆ. ಆದರೆ ಶಿಕ್ಷಕ ವೃತ್ತಿಗೆ ಹಾಗಲ್ಲ, ಅದರಲ್ಲಿಯೂ ಇಂದಿನ ಸರ್ಕಾರಿ ಶಾಲಾ ಶಿಕ್ಷಕರ ಸ್ಥಿತಿ ಉತ್ತಮವಾಗಿಲ್ಲ ಎಂಬುದಂತೂ ಸತ್ಯ!. 

ಆದರೆ ಶಿಕ್ಷಣದ ಗುಣಮಟ್ಟ, ಶಿಕ್ಷಕರ ಮೌಲ್ಯಗಳೂ ಸಹ ಕಡಿಮೆಯಾಗುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಪ್ರಪಂಚವನ್ನೇ ಅರಿಯದ ಮಕ್ಕಳಿಗೆ ಪ್ರಪಂಚ ಜ್ನಾನ ತಿಳಿಸುವ ಶಿಕ್ಷಕರು ನಿಜವಾಗಿಯೂ ನಮ್ಮ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತಿದ್ದಾರ ಎಂಬ ಸಂಶಯ ಕಾಡುತ್ತದೆ.! ಹಾಗಂತ ವಿವಿಧ ಕಾರಣಗಳಿಂದಾಗಿ ದೇಶ ಅದಃಪತನದತ್ತ ಮುಖ ಮಾಡಿರುವುದಕ್ಕೆ ಶಿಕ್ಷಕರೇ ನೇರ ಕಾರಣ ಎಂದು ಹೇಳಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದೇವೆ ನಾವು.....

ಇಂದಿನ ಶಿಕ್ಷಣ ಹಾಗೂ ಶಿಕ್ಷಕರನ್ನು ನೋಡಿದರೆ ಖಂಡಿತವಾಗಿಯೂ ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಶಂಕೆ ಮೂಡುತ್ತದೆ. ಇಂದು ಅದೆಷ್ಟು ಕಾಲೇಜುಗಳಲ್ಲಿ ಅವ್ಯವಹಾರ ನಡೆಯುತ್ತಿಲ್ಲ, ಅದೆಷ್ಟು ವಿದ್ಯಾ ಸಂಸ್ಥೆಗಳಲ್ಲಿ(ಪ್ರಮುಖವಾಗಿ ಕಾಲೇಜುಗಳಲ್ಲಿ) ಶಿಕ್ಷಕರೇ ಅವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲ ಹೇಳಿ.... ಇದನ್ನೂ ಸಹಿಸಬಹುದು. ಎಷ್ಟೋ ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿನಿಗಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇದ್ದಲ್ಲಿ ಎಷ್ಟೋ ಕಾಲೇಜುಗಳಲ್ಲಿ ಹಣ ಪಡೆದು ಹಾಜರಾತಿ ನೀಡುತ್ತಾರೆ. ಅದು ಹೋಗಲಿ, ನಕಲು ಮಾಡಲು, ಪರೀಕ್ಷೆಗಳಲ್ಲಿ ವಾಮಮಾರ್ಗದಿಂದ ಪಾಸಾಗಲು ಅದೆಷ್ಟು ಶಿಕ್ಷಕರು ಸಹಾಯಮಾಡುವುದಿಲ್ಲ ಹೇಳಿ.....? 

ಓರ್ವ ವಿದ್ಯಾರ್ಥಿಗೆ ತನ್ನ ಭವಿಷ್ಯದ ಬಗ್ಗೆ ಒಂದು ಗುರಿ ಕಟ್ಟಿಕೊಡುವ ಶಿಕ್ಷಕರೇ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದರೇ ದೇಶ ಹೇಗೆ ತಾನೇ ಉದ್ಧಾರವಾದೀತು....? ಇಂತಹ ಕೆಲವು ಮೌಲ್ಯರಹಿತವಾದ ಶಿಕ್ಷಕರಿಂದ ಇಡೀ ಶಿಕ್ಷಕ ವರ್ಗದವರಿಗೇ ಕಳಂಕ ಅಲ್ಲವೇ....? ಟಿಸಿ ಹೆಚ್ ಮುಗಿಸಿದ ನಂತರ ಶಿಕ್ಷಕರಿಗೆ ಶಿಕ್ಷಣ ನೀಡುವುದರ ಕುರಿತು ತರಬೇತಿ ನೀಡಲಾಗುತ್ತದೆ ಆದರೆ ಅದರಲ್ಲಿಯೂ ಯಾವುದೇ ಪರಿಣಾಮಕಾರಿಯಾದ ತರಬೇತಿ ನೀಡುವುದಿಲ್ಲ. ಪರಿಣಾಮ ನಮ್ಮ ದೇಶದಲ್ಲಿ ರಾಧಾಕೃಷ್ಣನ್ ಅವರು ಕಂಡಿದ್ದ ಕನಸಿನ ಶಿಕ್ಷಣ ಹಾಗೂ ಶಿಕ್ಷಕರ ವರ್ಗ ಕನಸಾಗಿಯೇ ಉಳಿದಿದೆ. ಅದೆಷ್ಟೋ ಶಿಕ್ಷಕರು ತಮಗೇ ಗುರಿಯಿಲ್ಲದೇ ವಿದ್ಯಾರ್ಥಿಗಳಿಗೆ ಗುರಿ ಕಟ್ಟಿಕೊಡುವ ಸ್ಥಿತಿ ಎದುರಾಗಿದೆ ಮೇಲಾಗಿ ಶಿಕ್ಷಕರ ಕೊರತೆ ತಾಂಡವಾಡುತ್ತಿದೆ.

ಶಿಕ್ಷಕರ ವರ್ಗವನ್ನೇ ಕೀಳರಿಮೆ ದೃಷ್ಠಿಯಿಂದ ನೋಡುವ ಸ್ಥಿತಿಗೆ ನಾವು ತಲುಪಿದ್ದೇವೆ ಎಂದರೆ ಅದಕ್ಕಿಂತಲೂ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಇಂದಿಗೂ ಸಹ ಸರ್ಕಾರಿ ಶಾಲೆಗಳ ಸ್ಥಿತಿ ಬದಲಾಗಿಲ್ಲ. ಶಿಕ್ಷಕರನ್ನು ನಿಯೋಜಿಸಲು ಸರ್ಕಾರ ಮೀನಾ-ಮೇಷ ಎಣಿಸುತ್ತಿದೆ. ಇದು ಪ್ರತಿ ಸರ್ಕಾರ ಬಂದಾಗಲೂ ಶಾಲಾ ಶಿಕ್ಷಕರ ಸಂಖ್ಯೆ ಬಹಳ ಕಡಿಮೆಯಿರುತ್ತದೆ. 5 ವರ್ಷಗಳು ಸರ್ಕಾರ ಅಸ್ಥಿತ್ವದಲ್ಲಿದ್ದರೂ ಸಹ ಶಿಕ್ಷಕರನ್ನು ನೇಮಿಸುವ ಕಾರ್ಯಕ್ಕೆ ಮುಕ್ತಿದೊರೆಯುವುದಿಲ್ಲ. 

ಸರಿಯಾದ ಸೌಲಭ್ಯ ಒದಗಿಸದೇ ಇದ್ದರೆ ಯಾರಿಗೆ ತಾನೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಬೇಕೆಂಬ ಭಾವನೆ ಮೂಡುತ್ತದೆ ಹೇಳಿ...? ಅದೆಷ್ಟು ಸರ್ಕಾರಿ ಶಿಕ್ಷಕರು ಇಂದು ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿಲ್ಲ....? ಇವೆಲ್ಲದರ ಪರಿಣಾಮ ಭಾರತಕ್ಕೆ ಉತ್ತಮ ನಾಗರಿಕರನ್ನು ತಯಾರು ಮಾಡುವ ಕ್ರಿಯೆಯಲ್ಲಿ ಗುಣಮಟ್ಟ ಕಡಿಮೆಯಾಗುತ್ತಿದೆ. 

ಈ ವರ್ಷದ ಶಿಕ್ಷಕರ ದಿನಾಚರಣೆಯಿಂದಲಾದರೂ ನಾವು ಉತ್ತಮ ಗುಣಮಟ್ಟದ, ಮೌಲ್ಯಾಧಾರಿತ ಶಿಕ್ಷಕರಿಗೆ ನಿರೀಕ್ಷಿಸೋಣ.... ನಮ್ಮ ಉನ್ನತಿಗೆ ಕಾರಣಕರ್ತರಾದ ಗುರುಗಳಿಗೆ ವಂದಿಸೋಣ.... ಹ್ಯಾಪಿ ಟೀಚರ್ಸ್ ಡೇ....



  ಇಂತಿ
               ಮಂಜುನಾಥ ಕೆ ಎಂ
                   ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
              ಬಸವಪಟ್ಟಣ {ಚಿರಡೋಣಿ}

ಸೋಮವಾರ, ಜುಲೈ 1, 2019

ಸ್ವಾತಂತ್ರ್ಯ ದಿನಾಚರಣೆ

  ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ

 ಮಂಜುನಾಥ ಕೆ ಎಂ

ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ 

                     ಬ್ರಿಟೀಷರ ಕುತಂತ್ರದಿಂದಾಗಿ  ಅತಂತ್ರ ಪರರಿಸ್ಥಿತಿಯಲ್ಲಿದ್ದ  ನಮ್ಮ ದೇಶವನ್ನು ಹೋರಾಡಿ  ಪ್ರಾಣ ತ್ಯಾಗ ಮಾಡಿ  ಸ್ವಾತಂತ್ರ್ಯವನ್ನಾಗಿಸಿದ ಮಹಾತ್ಮರೆಲ್ಲರನ್ನೂ  ತುಂಬು ಹೃದಯದಿಂದ ಸ್ಮರಿಸಿಕೊಳ್ಳುತ್ತ  ನಾಡಿನ ಸಮಸ್ತ ಜನತೆಗೂ 73 ನೇ ಸ್ವಾತಂತ್ರೋತ್ಸವದ ಶುಭ ಕಾಮನೆಗಳು

ಉತ್ತರದಲ್ಲಿ ಉತ್ತುಂಗ ಹಿಮವಂತ ದಕ್ಷಿಣದ ತುದಿಯಲ್ಲಿ ಅಗಾಧ ಶರತ್ತು ತಾಯಿಯ ಶಿರದಲ್ಲಿ ಸದಾ ಹಿಮ ವರ್ಷ ತಾಯಿಯ ಚರಣದಲ್ಲಿ ನೀಲ ಸಿಂಧೂವಿನ ಜಲ ಸ್ಪರ್ಶ ಒಂದೆಡೆ ದಟ್ಟ ಕಾಡು ಇನ್ನೊಂದೆಡೆ ವಿಶಾಲವಾದ ನದಿ ಬಯಲು ಒಂದೆಡೆ ಬಣಗುಡುವ ಮರುಭೂಮಿ ಇನ್ನೊಂದೆಡೆ ಧುಮುಕಿ ಧುಮಿಸುವ ನದಿ ಎತ್ತ ನೋಡಿದರತ್ತಾ ಸುಂದರವಾದ ಹಚ್ಚ ಹಸುರಿನ ಲೋಕ ಬೆಟ್ಟ ಗುಡ್ಡಗಳ ಸಾಲು ಸಾಲು  ಇದು ನಮ್ಮ ಭಾರತ

         
ಸ್ವರ್ಗಕ್ಕು ಮುಕ್ತಿಗು ದ್ವಾರವಾದಂತಹ.             
ಭಾರತ ದೇಶದಲ್ಲಿ ಜನಿಸಿರುವ ಪ್ರತಿಯೊಂದು ಜೀವಿಯು ಕೂಡ ಆ ದೇವತೆ ಗಳಿಗಿಂತ ಮಿಗಿಲು ಇದು ನಾವು ಹೇಳಿದ ಮಾತಲ್ಲ ಆ ದೇವತೆಗಳೇ ಭಾರತವನ್ನು ಕೊಂಡಾಂಡಿ ದಂತಹ ಮಾತುಗಳು ಅಂತಹ ಭಾರತ ದೇಶದಲ್ಲಿ ನಾವುಗಳಿಂದು ಪುಣ್ಯ ಜೀವಿಗಳಾಗಿ ಜನಿಸಿದ್ದೇವೆ ಅದು ವಿಶೇಷ

ಆತ್ಮೀಯರೆ ಭಾರತಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳಾಯ್ತು ಒಬ್ಬ ಮಾನವನ ವಯಸ್ಸಿಗೆ ಓಲಿಸಿಕೊಂಡರೆ ಇದು ವೃದ್ಧಾಪ್ಯದ ಕಾಲ ಆದರೆ ಭಾರತಕ್ಕಿದು ‌ಯೌವನದ ಕಾಲ ಯಾಕೆ ಅಂತ ಹೇಳಿದ್ರೆ ಭಾರತ ಅತಿ ಹೆಚ್ಚಿನ ಪ್ರಮಾಣದಲ್ಲಿ ಯುವಜನತೆಯನ್ನು ಹೊಂದಿದೆ ಎನ್ನುವಂತದ್ದು ಈ ಮಾತನ್ನು ನಾನು ಕಳೆದ ವರ್ಷ ಕೂಡ ಹೇಳಿದ್ದೆ

ಮಾತನ್ನು ಮತ್ತೆ ಯಾಕೆ ಹೇಳಿದೆ ಅಂದರೆ ಒಂದು ರಾಷ್ಟ್ರ ಅಭಿವೃದ್ಧಿ ಹೋಂದಬೇಕು ಅಂದರೆ ಆ ರಾಷ್ಟ್ರ ಆ ರಾಷ್ಟ್ರದ ಯುವ ಜನತೆಯನ್ನ ಅವಲಂಭಿಸಿರುತ್ತೆ ಪ್ರಸ್ತುತ ನಮ್ಮ ದೇಶದಲ್ಲಿ ಶೇಕಡಾ 60 ರಷ್ಟು ಯುವಜನತೆಯನ್ನು ಹೊಂದಿದ್ದರು ಸಹ ಯಾಕೆ ನಮ್ಮ ಭಾರತ ಅಮೇಗತಿಯಲ್ಲಿ ಅಭಿವೃದ್ಧಿ ಹೋಂದುತ ಇದೆ ಹಾಗಾದರೆ ಯುವ ಜನತೆ ಸರಿಯಾದ ದಾರಿಯಲ್ಲಿ ಸಾಗ್ತ ಇಲ್ವ ನಮ್ಮ ಯುವ ಪೀಳಿಗೆ ದಾರಿ ತಪ್ತ ಇರೋದಾದ್ರು ಎಲ್ಲಿ

1985ರ ನಂತರ ಭಾರತದಲ್ಲಿ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬವನ್ನು "ರಾಷ್ಟ್ರೀಯ ಯುವ ದಿನ"ವನವನ್ನಾಗಿ ಆಚರಿಸುತ್ತೆವೆ ಮೊದಲಿಗೆ ಯುವ ಜನತೆ ಎಂದು ಗುರುತಿಸುವುದು ನಿರ್ದಿಷ್ಟ ವಯಸ್ಸಿನಿಂದ ಅದು ಸುಮಾರು 18-20 ರಿಂದ 35 ವರ್ಷದವರೆಗೆಗಿನ ವಯಸ್ಸಿನವರೆಗೆ ಯುವಜನತೆ ಎಂದು ಕರೆಯಬಹುದು 

ಯುವಕರೆ ಎದ್ದೇಳಿ ಗುರಿ ಮುಟ್ಟುವವರೆಗೆ ಮುನ್ನಡೆಯಿರಿ” ಈ ಮಾತು ಎಂದಿಗೂ ಅಮರ ವಾಕ್ಯವಾಗಿ ಉಳಿದಿದೆ. ಯುವಜನತೆಗೆ ಈ ಮನ ಮುಟ್ಟುವಂಥ ಮಾತನ್ನು ಹೇಳಿದವರೇ ಬೇರಾರೂ ಅಲ್ಲ ಭಾರತದ ಮಹಾನ್ ಚಿಂತಕ, ತತ್ವಜ್ಞಾನಿ ದೇಶ ಭಕ್ತ ಎಂದೇ ಖ್ಯಾತಿಯಾಗಿರುವ ಸಂತ ಸ್ವಾಮಿ ವಿವೇಕಾನಂದ . ಆದರೆ ಸಂಸ್ಕೃತಿಯ ತವರೂರು ಎಂದೇ ಕರೆಯಲ್ಪಡುವ ಈ ಭಾರತ ದೇಶಕ್ಕೆ ಈಗಿನ ಯುವಜನತೆ ಎಷ್ಟರ ಮಟ್ಟಿಗೆ ಸಂಸ್ಕೃತಿ ಹಾಗೂ ಭಾಷೆಗೆ ಮಾನ ಹಾಗೂ ಗೌರವ ಕೊಡುತ್ತಾರೆ? ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ. ಇವತ್ತು ನಮ್ಮ ಸಂಸ್ಕೃತಿ, ಭಾಷೆ, ವೇಷ ಭೂಷಣ ಬಿಟ್ಟು ಬೇರೆ ದೇಶದ ಭಾಷೆಗೆ ಸಂಸ್ಕೃತಿಗೆ ಯುವಜನತೆ ಹೆಚ್ಚು ಹೆಚ್ಚು ಅಕರ್ಷಿತರಾಗುತ್ತಿದ್ದಾರೆ.
ಆದುನಿಕ ಕಾಲದಲ್ಲಿ ಯುವಜನತೆಯ ಪಾತ್ರ ಎಷ್ಟು ಎಂಬುದು ಚರ್ಚಾ ವಿಷಯವಾಗಿದೆ.

ಇಂದಿನ ಯುವಜನತೆಯಲ್ಲಿ ಹೊಸ ರೀತಿಯಲ್ಲಿ ಆಗುವಂತಹ ಬದಲಾವಣೆ! ದೇಶದಲ್ಲಿ ಹೊಸದು ಏನು ಮಾಡುವುದು ಎಂಬ ಚಿಂತೆ! ಇದು ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಮೊಬೈಲ್, ಕಂಪ್ಯೂಟರ್‌ನ ಬಳಕೆ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಯುವ ಜನತೆ ದಾರಿ ತಪ್ಪುತ್ತಿದೆ


ಒಂದು ದೇಶದ ಪ್ರಗತಿಯಲ್ಲಿ ಯುವಜನತೆಯ ಪಾತ್ರ ಬಹಳ ದೊಡ್ಡದು..ಸಮಾಜದ ಕೆಟ್ಟವ್ಯವಸ್ಥೆಯಾಗಿರಲಿ ,ಜಾತಿಭೇದವಾಗಿರಲಿ , ದ್ವಂದ್ವನೀತಿಗಳಾಗಿರಲಿ ,
ಹೀಗೆ ಯಾವುದೇ ಅನಾಚಾರಗಳನ್ನ ,ಅತಂತ್ರ ಸ್ಥಿತಿಗಳನ್ನ ,ಸರಿಪಡಿಸಬಲ್ಲ ಸಾಮರ್ಥ್ಯ ಇರೋದು ಯುವಕರಿಗೆ."ಹೆಣ್ಣೊಂದು ಕಲಿತರೆ ಶಾಲೆಯೊಂದು" ತೆರೆದಂತೆ ಎಂಬ ಮಾತಿನಂತೆ ಒಬ್ಬ ಯುವಕ ನಿದ್ದೆಯಿಂದೆದ್ದರೆ ,ಅಂದರೆ ಜಾಗೃತನಾದರೆ
ಬರೀ ಸಮಾಜವೇನು , ರಾಷ್ಟ್ರೋದ್ಧಾರವನ್ನೇ ಮಾಡಬಹುದು . ನಿಖರತೆಯ ನಡೆಯಿಂದ ಏಕಚಿತ್ತತೆಯ ಭಾವದಿಂದ, ಛಲಬಿಡದೇ ಗುರಿಮುಟ್ಟುವ ಅಗಮ್ಯ
ಹುಮ್ಮಸ್ಸಿನಿಂದ , ರೊಚ್ಚಿಗೆದ್ದು ಪರರ ಮನಸಲ್ಲೂ ಕಿಚ್ಚು ತುಂಬಿ ಅಧರ್ಮ, ಅನೀತಿ ಅನ್ಯಾಯ ,ಅಕ್ರಮ , ಗಳಿಗೆ ತಡೆಯೊಡ್ಡಿ
ಒಂದು ಮಾದರಿ ಸಮಾಜವನ್ನ ರೂಪಿಸುವ ಶಕ್ತಿ ,
ಸಾಮರ್ಥ್ಯ ಇರೋದು ಯುವ ಪೀಳಿಗೆಗೆ ಮಾತ್ರ 


ಒಂದು ದೇಶದ ಯುವಜನತೆ ಆ ದೇಶದ ಅಭಿವೃದ್ಧಿಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.ದೇಶದಲ್ಲಿ ಯುವಜನತೆಯ ಪ್ರಮಾಣ ಹೆಚ್ಚಾದಂತೆ ದೇಶ ಬಲಿಷ್ಠವಾಗುತ್ತಾ ಹೋಗುತ್ತದೆ. ಅಂತೆಯೇ ಭಾರತವೂ ಕೂಡಾ ಒಂದು ಯುವರಾಷ್ಟ್ರ. ನಮ್ಮ ದೇಶದ ಒಟ್ಟು ಜನಸಂಖ್ಯೆಯು ಶೇ ೬೦ ರಷ್ಟು ಯುವಜನತೆಯನ್ನು ಹೊಂದಿದೆ. ಯುವಜನತೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ದೇಶ ಅತಿವೇಗವಾಗಿ ಅತ್ಯುನ್ನತ ಸ್ಥಾನಕ್ಕೆ ಹೋಗುವುದು ೧೦೦ ಕ್ಕೆ ೧೦೦ ಸತ್ಯ.ಹೀಗಿದ್ದೂ ಭಾರತ ಏಕೆ ಇನ್ನೂ ಆಮೆಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ?? ಯುವಶಕ್ತಿಯ ಪ್ರಮಾಣ ಹೆಚ್ಚಿದ್ದರೂ ಏಕೆ ಇಂತಹ ಸ್ಥಿತಿ? ಅವಲೋಕನ ಮಾಡಿದರೆ ಗೊತ್ತಾಗುವುದಿಷ್ಟೇ, ಯುವಶಕ್ತಿಯ ಉಪಯೋಗ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಯುವಜನತೆ ತಮ್ಮ ಜೀವನವನ್ನು ದೇಶಕ್ಕೋಸ್ಕರ ಸದ್ವಿನಿಯೋಗ ಮಾಡುತ್ತಿಲ್ಲ.ಹಾಗಾದರೆ ನಮ್ಮ ಯುವಶಕ್ತಿ ಹಾದಿ ತಪ್ಪುತ್ತಿರುವುದಾದರೂ ಎಲ್ಲಿ 


ಮೊದಲೆನೆಯದಾಗಿ, ಇತ್ತೀಚೆಗೆ ಯುವಜನತೆ ಹೆಚ್ಚಾಗಿ ದಾರಿ ತಪ್ಪುತ್ತಿರುವುದು ಅಂತರ್ಜಾಲದಿಂದ…!!! ಹೌದು, ಇಂದಿನ ಪೀಳಿಗೆಯ ಯುವಕ-ಯುವತಿಯರು ತಮ್ಮ ಬಹುತೇಕ ಸಮಯವನ್ನು ಅಂತರ್ಜಾಲ ಯಾ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿದ್ದಾರೆ.ದಿನದ ಇಪ್ಪತ್ನಾಲ್ಕು ಗಂಟೆಯೂ ಫ಼ೇಸ್ಬುಕ್, ವಾಟ್ಸ್ಆಪ್, ವಿ ಚಾಟ್ ಮುಂತಾದ ಜಾಲತಾಣಗಳಲ್ಲಿ ಕಾಲಕಳೆಯುತ್ತಾರೆ.ಅದಕ್ಕೆ ಪೂರಕವಾಗಿರು ಮೊಬೈಲ್ ಕಂಪನಿಗಳು ಇವರಿಗೆ ಸ್ನೇಹಿಯಾಗಿ ಕೆಲಸ ಮಾಡುತ್ತಿವೆ.ಇವುಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಬಹುದಾದರೂ ನಮ್ಮ ಯುವಜನತೆ ಉಪಯೋಗಿಸಿಕೊಳ್ಳುತ್ತಿಲ್ಲ.ಗುರುತು ಪರಿಚಯ ಇಲ್ಲದವರೊಂದಿಗೆ ಸಮಯದ ಮಿತಿ ಇಲ್ಲದೇ ವ್ಯವಹರಿಸುವುದು ಒಂದು ಹವ್ಯಾಸವಾಗಿಬಿಟ್ಟಿದೆ. ಅಪಾಯಕಾರಿ ಅಂಶವೆಂದರೆ ಇಂತಹ ಕೆಲಸ ಮಾಡುತ್ತಿರುವುದರಲ್ಲಿ ವಿದ್ಯಾವಂತರೇ ಹೆಚ್ಚಾಗಿರುವುದು ನಮ್ಮ ದುರ್ದೈವವೇ ಸರಿ…..


ಪ್ರಸ್ತುತದಲ್ಲಿ ರಾಜಕಾರಣಿಗಳು ಯುವಶಕ್ತಿಯನ್ನು ಹಾಳುಮಾಡುವುದರಲ್ಲಿ ಒಬ್ಬರಿಗೆ ಮತ್ತೊಬ್ಬರಿಗೆ ಪೈಪೋಟಿ ನೀಡಬಲ್ಲವರಾಗಿದ್ದಾರೆ.ಏಕೆಂದರೆ ತಮ್ಮ ಎಲ್ಲಾ ರೀತಿಯ ನೈತಿಕ ಹಾಗೂ ಅನೈತಿಕ ಕೆಲಸಗಳಿಗೆ ಯುವಜನತೆಯನ್ನು ಬೇಕಾಬಿಟ್ಟಿಯಾಗಿ ನದಿನೀರಿನಂತೆ ಉಪಯೋಗಿಸುತ್ತಿದ್ದಾರೆ. ಚುನಾವಣೆ ಘೋಷಣೆಯಾದಾಗ ತಮ್ಮ ಪರ ಪ್ರಚಾರ ಮಾಡುವುದರಿಂದ ಹಿಡಿದು ಜನರನ್ನು ಮತಗಟ್ಟೆಗೆ ಕರೆದುಕೊಂಡು ಬರುವವರೆಗೆ ಯುವಶಕ್ತಿಯನ್ನು ಅವಲಂಬಿಸಿರುತ್ತಾರೆ. 

ಅಂತರ್ಜಾಲ, ಭೂಗತಲೋಕ,ರಾಜಕಾರಣ ಒಂದೆಡೆಯಾದರೆ ನಿರುದ್ಯೋಗ ಇನ್ನೊಂದು ಕಡೆ ನಿಲ್ಲುತ್ತದೆ. ಪದವಿ ಮುಗಿಸಿದ ಕೋಟ್ಯಂತರ ವಿದ್ಯಾರ್ಥಿಗಳು ಕೆಲಸವಿಲ್ಲದೆ ಸುಮ್ಮನೆ ಕೂರುವಂತ ಪರಿಸ್ಥಿತಿ ಬಂದಿದೆ.ಕೆಲಸವಿಲ್ಲದೇ ಅಲೆಯುವವರ ಸಮಸ್ಯೆ ಒಂದೆಡೆಯಾದರೆ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಅಲೆಯುವವರ ಸಮಸ್ಯೆ ಇನ್ನೊಂದೆಡೆ. ಉತ್ತಮ ರೀತಿಯಲ್ಲಿ ಶೈಕ್ಷಣಿಕ ಅರ್ಹತೆ ಹೊಂದಿದ್ದರೂ ಸರ್ಕಾರಿ ಕೆಲಸ ಸಿಗುವುದು ಕಬ್ಬಿಣದ ಕಡಲೆಯಂತಾಗಿದೆ. 

ಒಂದು ವೇಳೆ ಕೆಲಸಗಳಿಗೆ ಅರ್ಜಿ ಆಹ್ವಾನಿಸಿದರೂ, ಕೆಲಸಗಾರರ ಅಗತ್ಯ ಇರುವ ಇಲಾಖೆಗೆ ಸರಿಯಾದ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುವುದಿಲ್ಲ ಮತ್ತು ಅಗತ್ಯವಿರುವಷ್ಟು ಕೆಲಸಗಾರರನ್ನು ನಿಯೋಜನೆ ಮಾಡಿಕೊಳ್ಳುವುದಿಲ್ಲ. ಕಾರಣ ಧರ್ಮ-ಜಾತಿ ಆಧಾರಿತ ಮೀಸಲಾತಿ. ಇದಕ್ಕೆಲ್ಲಾ ನಮ್ಮನ್ನಾಳುವ ಸರ್ಕಾರವೇ ನೇರ ಹೊಣೆ ಹೊರಬೇಕು. ಒಟ್ಟಾರೆಯಾಗಿ ಸರ್ಕಾರದ ನಿರ್ಲಕ್ಷ್ಯದಿಂದ ಯುವಶಕ್ತಿ ಪೋಲಾಗುತ್ತಿದೆ.


ಇದಲ್ಲದೇ ಇನ್ನು ಕಾಲೇಜು ವಿದ್ಯಾರ್ಥಿಗಳ ವಿಷಯದ ಬಗ್ಗೆ ಗಮನಿಸುವುದಾದರೆ ಅವರದ್ದೂ ಕೂಡ ಭಿನ್ನವಾಗಿಲ್ಲ. ಉಜ್ವಲ ಸಮಾಜವನ್ನು ನಿರ್ಮಾಣ ಮಾಡಬೇಕಾದಂತಹ ವಿದ್ಯಾರ್ಥಿಗಳು ಬೀದಿ-ಬೀದಿಗಳಲ್ಲಿ ಪೊರ್ಕಿಗಳಂತೆ ಅಡ್ಡಾಡುತ್ತಾರೆ. ಸಮಾಜದಲ್ಲಿ ಭಯ ಹುಟ್ಟಿಸುವಂತಹ ಕೆಲಸ ಮಾಡುತ್ತಿದ್ದಾರೆ 

ಸ್ವಾಮಿ ವಿವೇಕಾನಂದರು “ನನಗೆ ನೂರು ಜನ ಸದೃಢ ಯುವಕರನ್ನು ನೀಡಿ, ನಾನು ಬಲಾಢ್ಯ ಜಗದ್ಗುರು ಭಾರತವನ್ನು ಕಟ್ಟುತ್ತೇನೆ, ಭಾರತದ ಯುವಶಕ್ತಿಗೆ ಸರಿಸಾಟಿಯಾಗಿ ನಿಲ್ಲುವಂತದ್ದು ಯಾವುದೂ ಇಲ್ಲ ” ಎಂದು ಜಗತ್ತಿಗೇ ಸಾರುತ್ತರೆ. ಎಂತಹ ಛಾತಿ ಇದೆ ಅವರ ಆ ಮಾತಿನಲ್ಲಿ. ಅಂದು ಅವರಾಡಿದ ಮಾತಿಗೆ ಇಂದು ಬೆಲೆಯೇ ಇಲ್ಲದಂತಾಗಿದೆ. ಅವರು ಕೇಳಿದ್ದು ಕೇವಲ ನೂರೇ ನೂರು ಸದೃಢ ಯುವಕರನ್ನು. ನೋಡಿ ಕೇವಲ ನೂರು ಜನ ಸದೃಢ ಯುವಕರೊಂದಿಗೆ ವಿಶ್ವಗುರು ಭಾರತ ಕಟ್ಟುತ್ತೇನೆ ಎನ್ನುವ ಸ್ವಾಮೀಜಿ, ಇನ್ನೇನಾದರೂ ದೇಶದ ಸಂಪೂರ್ಣ ಯುವಶಕ್ತಿ ಸರಿಯಾದ ರೀತಿಯಲ್ಲಿ ವಿನಿಯೋಗವಾದರೆ ಎಂತಹ ಮಟ್ಟದ ಭಾರತ ನಿರ್ಮಾಣವಾಗಬಹುದು ನೀವೇ ಅಂದಾಜಿಸಿ. ಸಂಶಯವೇ ಇಲ್ಲ ಯುವಶಕ್ತಿ ಜಲಪಾತದಂತೆ ಭೋರ್ಗರೆದು , ದೇಶಸೇವೆಗೆ ನಾ ಮುಂದು ತಾ ಮುಂದು ಎಂದು ಧುಮ್ಮಿಕ್ಕಿದರೆ ನಾವು ನೀವು ಬಿಡಿ ಪ್ರಪಂಚದ ಯಾವ ನಾಯಕರೂ ಊಹಿಸದಂತಹ ಬಲಿಷ್ಠ ಭಾರತ ನಿರ್ಮಾಣ ಖಂಡಿತಾ ಸಾಧ್ಯ.

ಉದ್ಯೋಗವಿಲ್ಲ ಎನ್ನುವ ಬದಲು ಉದ್ಯೋಗವನ್ನು ಸೃಷ್ಟಿಸಬೇಕು. ಇತರರಿಗೆ ನಾವೇ ಉದ್ಯೋಗ ನೀಡುವಂತಾಗಬೇಕು. ಸಾಧ್ಯವಾದರೆ ಯುವಕರ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿ ನಿಸ್ವಾರ್ಥದಿಂದ ಸಮಾಜ ಸೇವೆಯನ್ನು ಮಾಡುತ್ತ ದಿನದ ಕೆಲ ಗಂಟೆಗಳು ಅಥವಾ ವಾರದಲ್ಲಿ ಒಂದೋ ಎರಡೋ ದಿನ ಸಮಾಜಕ್ಕಾಗಿ ಮೀಸಲಿಟ್ಟರೆ ಸಾಕು ಅಬ್ದುಲ್ ಕಲಾಂ ರ 2020ರ ಭಾರತದ ಕನಸು ಖಂಡಿತವಾಗಿಯೂ ನನಸಾಗುತ್ತದೆ. 

ಇದೆಲ್ಲದಕ್ಕೂ ಮೊದಲು ನಮ್ಮಲ್ಲಿ ದೇಶಭಕ್ತಿ ಜಾಗೃತವಾಗಬೇಕು. ನನ್ನ ದೇಶ, ನನ್ನ ಜನ,ನನ್ನ ಸಮಾಜ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಹಿಂದೂ ಮುಸ್ಲಿಂ ಕ್ರಿಸ್ಚಿಯನ್ ಜೈನ ಬೌದ್ಧ ಎಂಬ ಧರ್ಮ ಸಂಕೋಲೆಗಳಿಂದ ಹೊರ ಬಂದು ನಾವೆಲ್ಲರೂ ಭಾರತೀಯರು ಎಂಬ ಒಂದೇ ಧರ್ಮದಡಿ ಸೇರಿಕೊಂಡು ವಿವೆಕಾನಂದರ ವಾಕ್ಯದಂತೆ ಏಳಿ ಎದ್ದೇಳಿ ಯುವಕ-ಯುವತಿಯರೇ, ಗುರಿ ಮುಟ್ಟುವವರೆಗೂ ನಿಲ್ಲದಿರಿ, ವಿಶ್ರಮಿಸದಿರಿ. ತಾಯಿ ಭಾರತಾಂಬೆಯ ಪಾದಕ್ಕೆನಮ್ಮನ್ನು ಅರ್ಪಿಸಿಕೊಂದು ಅವಳ ಸೇವೆಗೆ ಕಂಕಣ ಬದ್ಧರಾಗೋಣ. ಇಡೀ ಪ್ರಪಂಚವೇ ಸಹಾಯಕ್ಕಾಗಿ ನಮ್ಮತ್ತ ಕೈ ಚಾಚುವಂತಹ ಜಗದ್ಗುರು ಭಾರತವನ್ನು ನಿರ್ಮಾಣ ಮಾಡಿ ನಮ್ಮ ಸನಾತರಿಗೆ ಗೌರವ ಸಲ್ಲಿಸೋಣ…….

ಅದ್ಬುತ ಅದಮ್ಯ ಭಾರತ ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರವನ್ನು ನಿರ್ಮಾಣ ಮಾಡೋಣ ಅಂತ ಹೇಳುತ ನನ್ನ ಮಾತುಗಳನ್ನು ಮುಗುಸ್ತ ಇದಿನಿ.....

||ಜೈ ಹಿಂದ್|| ||ವಂದೇ ಮಾತರಂ||



  ಇಂತಿ
               ಮಂಜುನಾಥ ಕೆ ಎಂ
                   ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
              ಬಸವಪಟ್ಟಣ {ಚಿರಡೋಣಿ }

ಶುಕ್ರವಾರ, ಏಪ್ರಿಲ್ 19, 2019

ಭಾವನೆಗಳು ಬರಹದ ಪ್ರತಿಬಿಂಬ

ಭಾವನೆಗಳು ಬರಹದ ಪ್ರತಿಬಿಂಬ

 ಮಂಜುನಾಥ ಕೆ ಎಂ


ಪ್ರೀತಿಯ ಸ್ನೇಹಿತರೇ ಪ್ರಸ್ತುತ ಭಾರತದ ಯುವ ಜನತೆ ಮೊಬೈಲ್ ಎಂಬ ವೈರಸ್ಗೆ ಯಾವ ರೀತಿ ಮಾರು ಹೋಗಿದ್ದಾರೆ ಎಂಬುದನ್ನು ಕುರಿತು  ನನ್ನ ಸ್ವಾಸಾಮರ್ಥ್ಯದಿಂದ ನಾನು ರಚಿಸಿರುವ ನಾಲ್ಕನೆಯ ಗೀತೆ ಏನಾದರು ತಪ್ಪಿದ್ದರೆ ಸರಿಪಡಿಸಿ 


ಮೂಲಗೀತೆ ಗಣಪ ಚಿತ್ರದ


"ಮುದ್ದಾಗಿ ನೀನು ನನ್ನ ಕೂಗಿದೆ "

" ಸದ್ದಿಲ್ಲದೇನೆ ಸುದ್ದಿಯಾಗಿದೆ "


ನನ್ನ ರಚನೆ 

ಫ್ರೇಂಡಾಗಿ ನೀನು ಮೆಸೇಜ್ ಮಾಡಿದೆ 

ಗೊತ್ತಿಲ್ಲದೇನೆ ರಿಪ್ಲೆ ಮಾಡಿದೆ 

ಸದ್ದಿಲ್ಲದೇನೆ ಸುದ್ದಿಯಾಗಿದೆ

ವಾಟ್ಸಪಲ್ಲಿ ಒಂದು ಮಿಂಚು ತಾಗಿದೆ 

ಫೇಸ್ ಬುಕ್ ಮೇಲೆ ಇಂದು ಆಸೆಯಾಗಿದೆ

ಇಂದಲ್ಲ ನಾಳೆ ಮೋಬೈಲಿಂದ ಏನೋ ಕಾದಿದೆ 

ವಾಟ್ಸಾಪ್ ಬಂದ ನಂತರ 

ಟೆಲಿಗ್ರಾಮ್ ಮಾಯವಾಗಿದೆ 

ಮೆಸೇಜ್ ತುಂಬಿಕೊಳ್ಳಲು 

ಸ್ಟೋರೇಜ್ ಸಾಲದಾಗಿದೆ 

ಮೊದಲೇನೆ ಹೇಳಿ ಬಿಡುವೆನು 

ನನಗಂತೂ ಮೊಬೈಲ್ ಬೇಕಿದೆ 

ಮೊಬೈಲಲ್ಲಿದ ಒಂಟಿ ಜೀವನ 

ನನಗೀಗ ಬೇಡವಾಗಿದೆ 

ಉಪಯೋಗ ಇಲ್ಲದಿದ್ದರೂ 

ಮೊಬೈಲ್ ಒಂದೇ ಆಸ್ತಿ ಯಾಗಿದೆ

ಸ್ಮಾಟ್ ಫೋನ್ ಬಂದ ಮೇಲೆಯೆ

ಯುವ ಜನತೆ ದಾರಿ ತಪ್ಪಿದೆ

ಫ್ರೇಂಡಾಗಿ ನೀನು ಮೆಸೇಜ್ ಮಾಡಿದೆ

ಗೊತ್ತಿಲ್ಲದೇನೆ ರಿಪ್ಲೆ ಮಾಡಿದೆ 

ಸದ್ದಿಲ್ಲದೇನೆ ಸುದ್ದಿಯಾಗಿದೆ 

ವಾಟ್ಸಾಪಲ್ಲಿ ಒಂದು ಮಿಂಚು ತಾಗಿದೆ 

ಫೇಸ್ ಬುಕ್ ಮೇಲೆ ಇಂದು ಆಸೆ ಮೂಡಿದೆ 

ಇಂದಲ್ಲ ನಾಳೆ ಮೋಬೈಲಿಂದ ಏನೋ ಕಾದಿದೆ 

ಫೇಸ್ ಬುಕಲ್ಲಿ ನೀನು ಹಾಕಿರೊ

ಫೋಟೋ ಎಷ್ಟು ಪುಣ್ಯ ಮಾಡಿದೆ 

ವಾಟ್ಸಾಪಲ್ಲಿ ನೀನು ಕುತಿರೋ

ಡಿಪಿ ಕೂಡ ಧನ್ಯವಾಗಿದೆ 

ದಿನನಿತ್ಯ ಆನ್ ಲೈನ್ ನಲ್ಲಿ 

ಇರುವಂತ ಆಸೆಯಾಗಿದೆ

ಆನ್ ಲೈನ್ ಗೆ ಬಂದ ನಂತರ 

ನಿನ್ನ ನಡತೆನೆ ಬೇರೆಯಾಗಿದೆ 

ಮೊಬೈಲಲ್ಲಿದ ಒಂಟಿ ಜೀವನ 

ಯುವಜನತೆಗೆ ಬೇಕಾಗಿದೆ 

ಯುವಜನತೆ ಹೇಳು ಬೇಗನೆ 

ನಿಮಗೂನು ಹೀಗೆಯಾಗಿದೆ

ಫ್ರೇಂಡಾಗಿ ನೀನು ಮೆಸೇಜ್ ಮಾಡಿದೆ

 ಗೊತ್ತಿಲ್ಲದೇನೆ ರಿಪ್ಲೆ ಮಾಡಿದೆ 

ಸದ್ದಿಲ್ಲದೇನೆ ಸುದ್ದಿಯಾಗಿದೆ 

ವಾಟ್ಸಾಪಲ್ಲಿ ಒಂದು ಮಿಂಚು ತಾಗಿದೆ 

ಫೇಸ್ ಬುಕ್ ಮೇಲೆ ಇಂದು ಆಸೆ ಮೂಡಿದೆ 

ಇಂದಲ್ಲ ನಾಳೆ ಮೋಬೈಲಿಂದ ಏನೋ ಕಾದಿದೆ 


ನಾನು ಕವಿಯಲ್ಲ ತೋಚಿದನ್ನ ಗೀಚಿದ್ದೇನೆ ಇಷ್ಟ ಆದ್ರೆ ಲೈಕ್ ಮಾಡಿ ಏನಾದರು ತಪ್ಪಿದ್ದರೆ ಸರಿಪಡಿಸಿ ಅದನ್ನು ಬಿಟ್ಟು ಎಲ್ಲಿ ಕಾಪಿ ಮಾಡಿದೆ ಯಾವುದನ್ನ ನೋಡ್ಕೊಂಡು ಬರ್ದೆ ಅಂತ ಕಾಲು ಎಳಿಯೊದಿಕ್ಕೆ ಹೋಗ್ಬೇಡಿ  ಒಂದು ಸಲ ನೀವು ಬರಿಯೊದಿಕ್ಕೆ ಪ್ರಯತ್ನಿಸಿ ಅದರಲ್ಲಿ ಸಿಗುವ ಆನಂದವನ್ನ ನೋಡಿ 

          ಯಾರೇನೆ ಹೇಳಿದ್ರು ನನಗೇನು ಬೇಜಾರಿಲ್ಲ ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ







  ಇಂತಿ
               ಮಂಜುನಾಥ ಕೆ ಎಂ
                   ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
              ಬಸವಪಟ್ಟಣ {ಚಿರಡೋಣಿ

ಸೋಮವಾರ, ಏಪ್ರಿಲ್ 1, 2019

ಸರಕಾರಿ ಯೋಜನೆಗಳು, ಸೌಲಭ್ಯಗಳು ಮತ್ತು ಮಹಿಳಾ ಸಬಲೀಕರಣ

ಸರಕಾರಿ ಯೋಜನೆಗಳು, ಸೌಲಭ್ಯಗಳು ಮತ್ತು ಮಹಿಳಾ ಸಬಲೀಕರಣ

ಇತ್ತೀಚೆಗೆ ನಾನೊಂದು ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಮಹಿಳಾ ದಿನಾಚರಣೆ ಸಂದರ್ಬ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕಾನೂನು ನುರಿತ ತಜ್ಞರು, ಮಹಿಳಾ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ವಿರಾಜಮಾನರಾಗಿದ್ದರು. ಇವರೆಲ್ಲರೂ ತಮ್ಮ ಭಾಷಣದಲ್ಲಿ ಮಹಿಳೆಯರು ಮುಂದೆ ಬರಬೆಕು. ಬಹಳ ದೌರ್ಜನ್ಯ ನಡೀತಾ ಇದೆ, ಶೋಷಣೆ ನಡೀತಾ ಇದೆ, ಪುರುಷರು ಮಹಿಳೆಯರಿಗೆ ಅವಕಾಶ ಕೊಡ”ಕು, ಸರಕಾರ ಈ ದೌರ್ಜನ್ಯ ತಡೆಗಟ್ಟುವಲ್ಲಿ ಕ್ರಮ ಕೆಗೊಳ್ಳಬೆಕು, ಹೀಗೆ ತಮ್ಮ-ತಮ್ಮ ವಿಚಾರ ಧಾರೆಗಳನ್ನು ಮುಂದಿಟ್ಟರು. ಈ ಎಲ್ಲಾ ಮಾತುಗಳನ್ನು ಕೇಳುವಾಗ ನನ್ನ ಮನದಲ್ಲಿ ಒಂದು ಜಿಜ್ಞಾಸೆ ಮೂಡಿತು. ಮಹಿಳೆಯರು ಮುಂದೆ ಬರುವಲ್ಲಿ ಇಂದು ನಿಜವಾಗಿಯೂ ಅಡ್ಡಿ ಇದೆಯೇ? ಈ ಪ್ರಶ್ನೆಯು ನನ್ನನ್ನು ನಿರಂತರವಾಗಿ ಕಾಡಿತ್ತು ಮತ್ತು ಈಗಲೂ ಕಾಡುತ್ತಿದೆ.


ಹಾಗಿದ್ದರೆ ಮಹಿಳೆಯರು ಮುಂದೆ ಬರಲು ಇಂದು ಯಾವುದೇ ಅಡ್ಡಿ-ಆತಂಕಗಳು ಇಲ್ಲವೇ? ಈ ಪ್ರಶ್ನೆಗೂ ನನ್ನಲ್ಲಿ ಉತ್ತರವಿಲ್ಲ, ಆದರೆ ಇಂದು ಭಾರತ ಸರಕಾರ, ರಾಜ್ಯ ಸರಕಾರಗಳು, ಸಾವಿರಾರು ಸಂಘ-ಸಂಸ್ಥೆಗಳು, ಮಹಿಳೆಯರಿಗೆ ಪ್ರಾಧನ್ಯತೆ ನೀಡುವ ಯೋಜನೆಗಳನ್ನು ಹಾಕಿಕೊಂಡಿದೆ. ರಾಜಕೀಯ, ಸಾಮಾಜಿಕ ಸಂಘಟನೆಗಳು ಮಹಿಳೆಯರ ಸಹಭಾಗಿತ್ವಕ್ಕಾಗಿ ಮಿಸಲಾತಿಯನ್ನು ಇಟ್ಟಿದೆ. ಹಾಗಿದ್ದಲ್ಲಿ ಯಾಕೆ ಇಂದು ಪ್ರತೀ ವೇದಿಕೆಯಲ್ಲಿಯೂ ಈ ಜಿಜ್ಞಾಸೆಯು ಪ್ರಶ್ನಾರ್ಥವಾಗಿಯೇ ಉಳಿದಿದೆ? ಈ ಬಗ್ಗೆ ಬಹಳ ಗಾಢವಾಗಿ ಆಲೋಚನೆ ಮಾಡಿದಾಗ ನಮ್ಮಲ್ಲಿ ಯೋಜನೆಗಳಿವೆ, ಅವಕಾಶಗಳಿವೆ, ಮಹಿಳಾಪರ ಕಾನೂನುಗಳೂ ಇವೆ. ಆದರೆ ಇದನ್ನು ತಳಮಟ್ಟಕ್ಕೆ ತಲುಪಿಸುವಂತಹ I.E.C ಅಂದರೆ (Information Education & Communication) ಮಾಹಿತಿ ನೀಡುವುದು, ತಿಳುವಳಿಕೆ ನೀಡುವುದು ಮತ್ತು ಸಂಪರ್ಕಿಸುವ ವ್ಯವಸ್ಥೆ ಇದ್ದರೂ, ಯೋಜನೆಗಳು, ಅವಕಾಶಗಳು, ಕಾನೂನುಗಳು ಬರೀ ಪುಸ್ತಕ-ವರದಿಗಳಗೆ ಸೀಮಿತವಾಗಿದೆ ಎಂಬ ಭಾವನೆ ಬೇರೂರಿದೆ. ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ತೋರಿಸುತ್ತಿರುವ ಆಸಕ್ತಿ, ಬದ್ದತೆ ಮತ್ತು ನೆಪುಣ್ಯತೆಯೂ ಕಾರಣವಾಗಿದೆ.


ಕೆಲವು ಯೋಜನೆಗಳಂತೂ ಬರೀ ದುಡ್ಡು ಮಾಡುವುದಾಕ್ಕಾಗಿ ರೂಪಿಸಲಾಗುತ್ತಿದೆ ಎಂಬ ಮಾತೂ ಇದೆ, ಕಾನೂನು ಇಂದು ಕೆಗೆಟುಕದ ಸ್ಥಿತಿಯಲ್ಲಿ ಇದೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಇದೆ. ಏನೇ ಇರಲಿ ಇಂದು ಮಹಿಳಾ ಸಬಲೀಕರಣಕ್ಕೆ ಪೂರಕವಾದ ಆಯುಧಗಳು ನಮ್ಮ ಸಮಾಜದಲ್ಲಿ ಬಹಳಷ್ಟು ಇದೆ. ಇದನ್ನು ತಿಳಿದುಕೊಂಡು ಬಳಕೆ ಮಾಡಿದರೆ ನಾವು ಯಾರನ್ನು ದೂರಬೇಕಾಗಿಲ್ಲ, ಯಾರನ್ನು ಬೇಡ ಬೇಕಾಗಿಲ್ಲ.


ಈ ನಿಟ್ಟಿನಲ್ಲಿ ಮಹಿಳೆಯರ ಅಭಿವೃದ್ಧಿಗೆ, ಸಬಲೀಕರಣಕ್ಕೆ ಪ್ರಸ್ತುತ ಇರುವ ಸರಕಾರಿ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಸಣ್ಣ ಬೆಳಕನ್ನು ಚೆಲ್ಲುವ ಪ್ರಯತ್ನವನ್ನು ನಾನು ಮಾಡಿದ್ದೇನೆ. ಇದು ಎಲ್ಲರಿಗೂ ಉಪಯೋಗವಾಗಬಹುದು ಎಂದು ನಾನು ನಂಬಿದ್ದೇನೆ. ಹೆಣ್ಣು ಮಗು ಈ ಭೂಮಿಗೆ ಕಾಲಿಡುವ ಸಂದರ್ಭದಿಂದ ಇರುವ ಯೋಜನೆಯ ಬಗ್ಗೆ ಪ್ರಾರಂಭಿಸುತ್ತೇನೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಬಿವೃದ್ಧಿ ಇಲಾಖೆ:

ಈ ಇಲಾಖೆಯಡಿಯಲ್ಲಿ ಮಕ್ಕಳ ಕಲ್ಯಾಣ, ಮಹಿಳಾ ಕಲ್ಯಾಣ ಮತ್ತು ಸಾಮಾಜಿಕ ರಕ್ಷಣೆಯಡಿಯಲ್ಲಿ ಹಲವಾರು ಕಾರ್ಯ ಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ.

ಮಕ್ಕಳ ಕಲ್ಯಾಣ ಯೋಜನೆಯಡಿಯಲ್ಲಿ:


೧) ಭಾಗ್ಯಲಕ್ಷ್ಮಿ ಯೋಜನೆ :: ಶಾಶ್ವತ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿರತಕ್ಕಂತಹ ಬಡತನ ರೇಖೆಗಿಂತ ಕೆಳಗಿರುವ(BPL) ಮೂರು ಮಕ್ಕಳಿರುವ BPL ಕುಟುಂಬಗಳ ಮೊದಲ ಎರಡು ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ದೊರೆಯುತ್ತಿದೆ. ರೂ.೧೯,೩೦೦/- ಮೊತ್ತ ನಿರಖು ಠೇವಣಿಯನ್ನು ಮೊದಲ ಮಗುವಿನ ಹೆಸರಿನಲ್ಲಿಡಲಾಗುವುದು ಮತ್ತು ಎರಡನೇಯ ಮಗುವಿನ ಹೆಸರಿನಲ್ಲಿ ರೂ.೧೮,೩೫೦/- ಇಡಲಾಗುವುದು. ಮತ್ತು ಮಗುವಿಗೆ ೧೮ ವರ್ಷ ಪೂರ್ಣಗೊಂಡ ನಂತರ ಮೊದಲ ಮಗುವಿಗೆ ರೂ.೧,೦೦,೦೯೭/- ಮತ್ತು ಎರಡನೇಯ ಮಗುವಿಗೆ ರೂ.೧,೦೦,೦೫೨/- ಮೊತ್ತ ನೀಡಲಾಗುತ್ತದೆ.


ಈ ಮಗುವಿಗೆ ೧೫ ವರ್ಷ ತುಂಬಿದ ನಂತರ ೧೦ನೇ ತರಗತಿಯಲ್ಲಿ ಉತ್ತಿರ್ಣಳಾಗಿ, ಮುಂದಿನ ವಿದ್ಯಾಬ್ಯಾಸಕ್ಕಾಗಿ ಈ ಭಾಗ್ಯಲಕ್ಷ್ಮಿ ಬಾಂಡನ್ನು ಅಂಗೀಕೃತ ಬ್ಯಾಂಕ್ಗಳಲ್ಲಿ ಅಡಮಾನವಿರಿಸಿ, ಗರಿಷ್ಠ ರೂ.೫೦,೦೦೦/- ಸಾಲ ಪಡೆಯಬಹುದಾಗಿದೆ.

ಈ ಯೋಜನೆಯನ್ನು ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ.

ಈ ಯೋಜನೆಯಡಿಯಲ್ಲಿ ಇತರ ಅರ್ಹತೆಯ ಅಂಶಗಳು:

೧) ಮಗುವಿನ ಜನನವನ್ನು ಖಡ್ಡಾಯವಾಗಿ ನೋಂದಾಯಿಸಿರಬೆಕು.

೨) ಆರೋಗ್ಯ ಇಲಾಖೆಯ ಕಾರ್ಯಕ್ರಮದಂತೆ ರೋಗ ನಿರೋಧಕ ಲಸಿಕೆ ಹಾಕಿಸಿರಬೆಕು.

೩) ಅಂಗನವಾಡಿ ಕೇಂದ್ರಕ್ಕೆ ನೊಂದಾವಣೆ ಆಗಿರಬೆಕು.

೪) ಶಿಕ್ಷಣ ಇಲಾಖೆಯು ನೋಂದಾಯಿಸಿದ ಶಾಲೆಗಳಲ್ಲಿ ಮಗುವನ್ನು ಶಾಲೆಗೆ ದಾಖಲಿರಿಸಬೆಕು.

೫) ಮಗು ಬಾಲಕಾರ್ಮಿಕಳಾಗಿರಬಾರದು.

೬) ೧೮ ವರ್ಷತನಕ ವಿವಾಹವಾಗಬಾರದು.


೨. ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ: (Integrated Child Development Scheme (ICDS)


ಈ ಯೋಜನೆಯು ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಆರೋಗ್ಯ, ಶಿಶುಗಳ ಆರೋಗ್ಯ ಮತ್ತು ಆರೆಕೆ, ಮತ್ತು ಹದಿಹರೆಯದ ಮಕ್ಕಳ ಆರೋಗ್ಯಕ್ಕೆ ಪೂರಕವಾದಂತಹ ಯೋಜನೆ ಕರ್ನಾಟಕ ಸರಕಾರವು ೧೯೭೫ರಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಿಸಿ ಪ್ರಸ್ತುತ ರಾಜ್ಯಾದ್ಯಾಂತ ಎಲ್ಲಾ ತಾಲೂಕುಗಳಲ್ಲಿ ಅನುಷ್ಠಾನವಾಗುತ್ತಿದೆ.

ಈ ಯೋಜನೆಯ ಉದ್ದೇಶ:


೧) ಆರು ವರ್ಷದೊಳಗಿನ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಕಾಪಾಡುವುದು.

೨) ಮಗುವಿನ ದೆಹಿಕ, ಬೌದ್ದಿಕ, ಮಾನಸಿಕ ಮತ್ತು ಭಾವಾನಾತ್ಮಕ ಬೆಳವಣಿಗೆ ಸಮಗ್ರವಾಗುವಂತೆ ಮಾಡುವುದು.

೩) ಶಿಶುಗಳ ಮರಣ, ಅನಾರೋಗ್ಯ, ಅಪೌಷ್ಠಿಕತೆಯ ಸಮಸ್ಯೆಗಳ ನಿವಾರಣೆ ಮತ್ತು ಶಾಲೆ ಬಿಡುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವುದು.

೪) ಮಕ್ಕಳ ಅಭಿವೃದ್ಧಿಗೆ ಇರುವಂತಹ ವಿವಿಧ ಇಲಾಖೆಗಳ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುವಂತೆ ನೋಡುವುದು.

೫) ಮುಖ್ಯವಾಗಿ ತಾಯಂದಿರು ತಮ್ಮ ಆರೋಗ್ಯ ನಿರ್ವಹಣೆ ಮತ್ತು ಮಕ್ಕಳ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವಂತೆ ಮಾಹಿತಿ ಕಾರ್ಯಕ್ರಮಗಳ ಆಯೋಜನೆ ಮಾಡುವುದು.


ಸೇವೆಗಳು:


ಸೇವೆಗಳು ಯಾರಿಗೆ? ಸೇವೆ ನೀಡುವವರು

ಪೌಷ್ಟಿಕ ಆಹಾರ ಒದಗಣೆ ಆರುವರ್ಷದೊಳಗಿನ ಮಕ್ಕಳಿಗೆ, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ, ಹದಿಹರೆಯದ ಹೆಣ್ಣುಮಕ್ಕಳಿಗೆ. ಅಂಗನವಾಡಿ ಕಾರ್ಯಕರ್ತೆಯರು.

ಲಸಿಕೆಗಳು ಆರುವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರು. ANM

ಉಚಿತ ಆರೋಗ್ಯ ತಪಾಸಣೆ ಆರುವರ್ಷದೊಳಗಿನ ಮಕ್ಕಳು, ಗರ್ಭಿಣಿ ಮಹಿಳೆ, ಹಾಲುಣಿಸುವ ತಾಯಿ. ಡಾಕ್ಟgಗಳು/ANM/ ಅಂಗನವಾಡಿ ಕಾರ್ಯಕರ್ತರು

ರೆಫರ ಹದಿಹರೆಯದ ಹೆಣ್ಣುಮಕ್ಕಳು. ಡಾಕ್ಟgಗಳು/ANM/ ಅಂಗನವಾಡಿ ಕಾರ್ಯಕರ್ತರು.

ಪ್ರಾಥಮಿಕ ಶಾಲೆ, ವಿದ್ಯಾಭ್ಯಾಸ ೩-೬ ವರ್ಷದ ಮಕ್ಕಳಿಗೆ. ಅಂಗನವಾಡಿ ಕಾರ್ಯಕರ್ತರು.

ಪೌಷ್ಠಿಕತೆ ಮತ್ತು ಆರೋಗ್ಯ ಶಿಕ್ಷಣ ೧೫ ರಿಂದ ೪೫ ವರ್ಷದ ಮಹಿಳೆಯರು, ಹದಿಹರೆಯದ ಮಕ್ಕಳು. ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು.

ಈ ಸೇವೆಗಳ ಅನುಷ್ಠಾನದಲ್ಲಿ ಹಲವಾರು ಮಾಹಿತಿ ಕಾರ್ಯಕ್ರಮಗಳು, ಉಚಿತ ಆರೋಗ್ಯ ತಪಸಣಾ ಶಿಬಿರಗಳು, ಗರ್ಬಿಣಿ/ಬಾಣಂತಿಯರ ಆರೆಕೆ, ಶಿಶುಗಳ ಆರೆಕೆಗೆ ಕ್ರಮಗಳನ್ನು ಮಾಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಸಮಗ್ರ ಅನುಷ್ಠಾನ ಮಾಡಲಾಗುತ್ತಿದೆ. ಗ್ರಾಮೀಣ ನಗರ ಪ್ರದೇಶಗಳ ಕುಟುಂಬಗಳು ಸೌಲಭ್ಯ ಪಡಕೊಳ್ಳಬಹುದಾಗಿದೆ.


೩. ಚೈಲ್ಡ್ ಟ್ರ್ಯಾಕಿಂಗ್ ಸಿಸ್ಟಂ (Child Tracking System): ೧೮ ವರ್ಷದೊಳಗಿನ ಮಕ್ಕಳ ಸಂಖ್ಯೆ ಒಟ್ಟು ಜನಸಂಖ್ಯೆಗೆ ಹೋಲಿಸಿದಾಗ ಅಧಿಕವಾಗಿರುವ ನಿಟ್ಟಿನಲ್ಲಿ, ಈ ಮಕ್ಕಳ ಪಾಲನೆ, ಪೋಷಣೆ-ರಕ್ಷಣೆಗಾಗಿ, ಮಕ್ಕಳ ಟ್ರ್ಯಾಕಿಂಗ್ ಪದ್ಧತಿಯನ್ನು NIC (ನ್ಯಾಷನಲ್ ಇನ್ಫೋಮೆಟ್ರಿಕ್ಸ್ ಸೆಂಟರ್) ಸಂಸ್ಥೆಯ ಸಹಯೋಗದೊಂದಿಗೆ ಅನುಷ್ಠಾನಿಸಲಾಗುತ್ತಿದೆ. ಈ ವ್ಯವಸ್ಥೆಯ ಪ್ರಕಾರ ೧೮ ವರ್ಷದೊಳಗಿನ ಮಕ್ಕಳ ಮಾಹಿತಿ ಅವರಿಗೆ ವಿವಿಧ ಇಲಾಖೆಗಳಿಂದ ಕೊಡಿಸಲಾದ ಸೌಲಭ್ಯ, ಅವರ ಶಿಕ್ಷಣ ವ್ಯವಸ್ಥೆ, ಆರೋಗ್ಯ ಮತ್ತು ವಲಸೆ ಹೀಗೆ ಎಲ್ಲಾ ವಿಚಾರಗಳನ್ನು ಸಾಫ್ಟ್ ವೆರ್ ನಲ್ಲಿ ದಾಖಲಿಸಿ ಟ್ರ್ಯಾಕ್ ಮಾಡಲಾಗುತ್ತಿದೆ. ಇದು ಮಕ್ಕಳ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮವಾಗಿರುತ್ತದೆ.

 

೪. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ತರಗತಿ ಹಾಜರಾತಿಗೆ ಸ್ಕಾಲರ್ ಶಿಪ್ ಪಾವತಿ: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಹಾಜರಾತಿ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೆಕೆಂಬ ಉದ್ದೇಶದಿಂದ ಪ್ರತಿ ತಿಂಗಳು ರೂ.೨೫/-ರಂತೆ, ಹತ್ತು ತಿಂಗಳು-೭ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಅದೇ ರೀತಿಯಲ್ಲಿ ೮-೧೦ ನೇ ತರಗತಿಯವರೆಗೆ ಹೆಣ್ಣು-ಮಕ್ಕಳಿಗೆ ರೂ.೭೫/-ರಂತೆ ನೀಡಲಾಗುತ್ತಿದೆ. ಕನಿಷ್ಠ ೮೦% ಹಾಜರಾತಿ ಖಡ್ಡಾಯ. ಕುಟುಂಬದ ಆದಾಯ ರೂ.೧೦,೦೦೦/-ಕ್ಕೆ ಮೀರಿರಬಾರದು ಮತ್ತು ಹಳ್ಳಿಯ ಜನಸಂಖ್ಯೆ ೨೦,೦೦೦ ದೊಳಗೆ ಇದ್ದರೆ ಮಾತ್ರ ಈ ಯೋಜನೆ ಅನ್ವಯಿಸುವುದು. ಜಿಲ್ಲಾ ಪಂಚಾಯತಿ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ.

೫. ವಿದ್ಯಾರ್ಥಿನಿಯರಿಗೆ ವಸತಿ ವ್ಯವಸ್ಥೆ: ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ರೂ.೧೦,೦೦೦/-ಕ್ಕಿಂತ ಆದಾಯ ಕಡಿಮೆಯಿರುವ ಕುಟುಂಬದ ಹೆಣ್ಣುಮಕ್ಕಳಿಗೆ ಆರನೇ ತರಗತಿ ನಂತರದ ವಿದ್ಯಾಭ್ಯಾಸಕ್ಕಾಗಿ ಉಚಿತ ಹಾಸ್ಟೇಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಒಟ್ಟು ೪೪ ಹಾಸ್ಟೆಗಳನ್ನು ರಾಜ್ಯಾದ್ಯಂತ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ.

೬. ಮಕ್ಕಳ ರಕ್ಷಣೆ ಮತ್ತು ಜಾಗರೂಕತೆಗಾಗಿ ಮತ್ತು ಕಲ್ಯಾಣಕ್ಕಾಗಿ ಯೋಜನೆಗಳು: ಅನಾಥ ಹಾಗೂ ನಿರ್ಗತಿಕ ಮಕ್ಕಳ ರಕ್ಷಣೆಗಾಗಿ, ಅವರ ಪಾಲನೆ ಪೋಷಣೆಗಾಗಿ ಅನಾಥಾಲಯಗಳನ್ನು ಸ್ಥಾಪಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳಿಗೆ ಇದರ ನಿರ್ವಹಣೆ ಜವಾಬ್ದಾರಿಯನ್ನು ನೀಡಲಾಗಿದೆ. ಒಟ್ಟು ೨೬೯ ಅನಾಥಾಲಯಗಳು ಕಾರ್ಯನಿರ್ವಸುತ್ತಿದೆ.

೭. ಕೆಲಸ ಮಾಡುವ ಮಹಿಳೆಯರ, ಮಕ್ಕಳ ಪಾಲನೆಗಾಗಿ ಶಿಶುಧಾಮ: ಗಾಮೀಣ ಪ್ರದೇಶಗಳಲ್ಲಿ ಕೃಷಿ ಹಾಗೂ ಇತರ ಕೆಲಸಗಳಿಗೆ ತೆರಳುವ ಮಹಿಳೆಯರ ೩ ವರ್ಷದೊಳಗಿನ ಮಕ್ಕಳ ರಕ್ಷಣೆಗಾಗಿ ಶಿಶುಧಾಮ, ಶಿಶು ಮಂದಿರಗಳನ್ನು ನಡೆಸುವರೇ ಮಹಿಳಾ ಮಂಡಳಿ, ಸ್ವಯಂ ಸೇವಾ ಸಂಸ್ಥೆಗಳಿಗೆ ಆರ್ಥಿಕ ಸಹಾಯದ ಸೌಲಭ್ಯವಿದೆ. ಈ ಸೌಲಭ್ಯದಲ್ಲಿ ಆರೋಗ್ಯ ರಕ್ಷಣೆ, ಪೌಷ್ಠಿಕ ಆಹಾರ, ಮಗುವಿಗೆ ವಸತಿ ವ್ಯವಸ್ಥೆ, ಲಸಿಕೆ ಹಾಕುವುದು, ಆಟಗಳು ಇವೆಲ್ಲವೂ ಒಳಗೊಂಡಿದೆ.

೮. ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ತಡೆಗೆ ಯೋಜನೆಗಳು: ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಈ ವಿಚಾರದ ಬಗ್ಗೆ ಮಾಹಿತಿ ಕೊಡುವ ನಿಟ್ಟಿನಲ್ಲಿ ಮತ್ತು ಈ ವಿಚಾರದ ಬಗ್ಗೆ ಮನದಟ್ಟು ಮಾಡುವಂತೆ ಪ್ರತೀ ತಾಲೂಕು ಮತ್ತು ಗ್ರಾಮ ಪಂಚಾಯv ಮಟ್ಟದಲ್ಲಿ ಒಂದು ದಿನದ ಮಾಹಿತಿ ಕಾರ್ಯಕ್ರಮಗಳನ್ನು ಜಾಥಾ, ಬೀದಿ ನಾಟಕ, ರ್‍ಯಾಲಿಗಳ ಮೂಲಕ ಸಂಘಟಿಸಲಾಗುತ್ತಿದೆ.

೯. ಬಾಲ್ಯವಿವಾಹ ತಡೆ ಕಾಯಿದೆ ೨೦೦೬ರ ಅನುಷ್ಠಾನ: ಬಾಲ್ಯ ವಿವಾಹ ತಡೆ ಕಾಯಿದೆಯ ಅನುಷ್ಠಾನ ಜವಾಬ್ದಾರಿಯನ್ನು ಇಲಾಖೆ ನೋಡಿಕೊಳ್ಳುತ್ತಿದೆ. ಇಲಾಖೆಯ ಉಪ ಕಮಿಷನರ್, ಉಪನಿರ್ದೇಶಕರು, ಕಾರ್ಯನಿರ್ವಹಣಾ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ತಹಶೀಲ್ದಾರರು, ಕಾರ್ಮಿಕ ಇಲಾಖಾ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ರೆವನ್ಯೂ ಅಧಿಕಾರಿ ಮತ್ತು ಗ್ರಾಮ ಲೆಕ್ಕಿಗರು ಇವರೆಲ್ಲರೂ ಈ ಕಾಯಿದೆಯ ಅನುಷ್ಠಾನದ ಜವಾಬ್ದಾರಿ ಇರುವವರು, ಬಾಲ್ಯವಿವಾಹ ಕಂಡು ಬಂದಲ್ಲಿ ಈ ಅಧಿಕಾರಿಗಳಿಗೆ ಯಾರು ಬೇಕಾದರೂ (ಸಾರ್ವಜನಿಕರು) ಸೂಚಿಸಬಹುದು.


೧೦. ಹೆಣ್ಣು ಮಕ್ಕಳ ದಿನ ಆಚರಣೆ: ಜನವರಿ ೨೪ರಂದು ಹೆಣ್ಣು ಮಗುವಿನ ದಿನ ಎಂದು ಭಾರತ ಸರಕಾರವು ಘೋಷಿಸಿದೆ. ಈ ದಿನದಂದು ಹೆಣ್ಣು ಮಗುವಿನ ಪ್ರಾಮುಖ್ಯತೆ, ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಜಾಗೃತಿ, ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಶೋಷಣೆ, ಅಪೌಷ್ಠಿಕತೆ ಬಗ್ಗೆ ಜಾಗೃತಿ ಹೀಗೆ ಈ ವಿಚಾರಗಳ ಬಗ್ಗೆ ವ್ಯಾಪಕವಾದಂತಹ ಮಾಹಿತಿ ಒದಗಣೆ ಮತ್ತು ತಿಳುವಳಿಕೆ ಹೆಚ್ಚಿಸುವ ಕಾರ್ಯಕ್ರಮವನ್ನು ಇಲಾಖೆ ಹಮ್ಮಿಕೊಳ್ಳುತ್ತಿದೆ.

೧೧. ಉಜ್ವಲ ಯೋಜನೆ: ಲೆಂಗಿಕ ಶೋಷಣೆಗೆ ಒಳಗಾದ ಮಕ್ಕಳು/ಮಹಿಳೆಯರ ರಕ್ಷಣೆ, ಆರೆಕೆ ಮತ್ತು ಅವರನ್ನು ಕುಟುಂಬದ ಜೊತೆ ಜೋಡಿಸುವ ಯೋಜನೆ, ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಅಕ್ರಮ ಸಾಗಾಣಿಕೆ ಮತ್ತು ಬಲಾತ್ಕಾರವಾದ ಲೆಂಗಿಕತೆ, ಇಂತಹ ದೌರ್ಜನ್ಯವನ್ನು ತಡೆಯುವುದಕೋಸ್ಕರ ಸಮಾಜದಲ್ಲಿ ಸಾರ್ವಜನಿಕರಿಗೆ ಮಹಿಳೆಯರ ಪರವಾಗಿ ಗೌರವಯುತ ಭಾವನೆಯನ್ನು ತರುವಂತೆ ಮತ್ತು ಲೆಂಗಿಕ ಬಲಾತ್ಕಾರ ಮತ್ತು ಶೋಷಣೆಯ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಉಜ್ವಲ ಯೋಜನೆ ಶ್ರಮಿಸುತ್ತಿದೆ. ಇಂತಹ ಸಮಸ್ಯೆಗೆ ಸಿಲುಕಿದಂತಹ ಮಹಿಳೆಯರ ರಕ್ಷಣೆ ಮತ್ತು ಅವರಿಗೆ ಸಮಾಜದಲ್ಲಿ ಸ್ಥಾನಮಾನ ಕಲ್ಪಿಸುವಲ್ಲಿ, ದೇಶದ ಗಡಿ ಪ್ರದೇಶದಲ್ಲಿ ಈ ಸಮಸ್ಯೆಗೆ ಒಳಗಾದಂತಹ ಮಹಿಳೆಯರನ್ನು ಅವರ ಸ್ವದೇಶಕ್ಕೆ ಮರಳುವಂತೆ ಮಾಡುವಂತೆ, ವಸತಿ ವ್ಯವಸ್ಥೆ, ಊಟ-ಉಪಚಾರ, ಮೂಲಭೂತ ಸೌಕರ್ಯಗಳ ಒದಗಣೆ ಹೀಗೆ ಈ ರೀತಿಯಾದಂತಹ ಸೇವೆಗಳನ್ನು ಕಲ್ಪಿಸಲಾಗುತ್ತಿದೆ. ಈ ಯೋಜನೆಯನ್ನು ಸಮಾಜಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮಗಳು, ಇತರ ಸ್ವಯಂ ಸೇವಾ ಸಂಸ್ಥೆಗಳು ಅನುಷ್ಠಾನ ಮಾಡುತ್ತಿದೆ.

೧೨. ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನಾ (IGMSY) (ಹೆರಿಗೆ ಸೌಲ”s ಯೋಜನೆ): ಕೇಂದ್ರ ಸರಕಾರದ ಕಾರ್ಯಕ್ರಮ: ಈ ಯೋಜನೆಯ ಪ್ರಕಾರ ಗರ್ಭಿಣಿ, ಬಾಣಂತಿ ಮತ್ತು ಹಾಲುಣಿಸುವ ತಾಯಂದಿರ ಮತ್ತು ಶಿಶುಗಳ ಆರೋಗ್ಯ, ನೆರ್ಮಲ್ಯ ಮತ್ತು ಪೌಷ್ಟಿಕತೆ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾದ ಹೆಜ್ಜೆಗಳು, ಪದ್ಧತಿಗಳು, ಆರೆಕೆ ಕ್ರಮಗಳು, ಸುರಕ್ಷಾ ಹೆರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ನೀಡಬೆಕಾದ ಆಹಾರ ಪದ್ಧತಿ ಹೀಗೆ ಈ ವಿಚಾರಗಳ ಬಗ್ಗೆ ಕಾಳಜಿಯನ್ನು ವಹಿಸಲಾಗುತ್ತದೆ. ವಯೋಮಿತಿ ಹತ್ತೊಂಬತ್ತು ಮತ್ತು ಹೆಚ್ಚಿನ ಪ್ರಾಯದ ಗರ್ಭಿಣಿ ಮಹಿಳೆಯರ ಎರಡು ಮಕ್ಕಳಿಗೆ ಈ ಯೋಜನೆ ಅನ್ವಯಿಸುತ್ತದೆ. ಗರ್ಭವತಿಯಾದ ಸಂದರ್ಭ ಮತ್ತು ಹೆರಿಗೆ ಸಂದರ್ಭ ಉದ್ಯೋಗ/ಕೂಲಿ ಕೆಲಸಕ್ಕೆ ಹೋಗಲು ಅಸಾಧ್ಯವಾಗುವುದರಿಂದ ಅದಕ್ಕೆ ಪೂರಕವಾಗಿ ರೂ.೪,೦೦೦/- ಸಹಾಯ ಧನವನ್ನು ಮೂರು ಕಂತಿನಲ್ಲಿ ಮಹಿಳೆಯರಿಗೆ, ಗರ್ಭಿಣಿಯಾಗಿ ಆರು ತಿಂಗಳು ಪೂರ್ತಿಯಾಗಿ ಮತ್ತು ಹೆರಿಗೆಯಾಗಿ ಆರು ತಿಂಗಳು ಆಗುವ ಅವಧಿಯಲ್ಲಿ ನೀಡಲಾಗುತ್ತದೆ. ಈ ಯೋಜನೆಯು ಸಮಗ್ರ ಮಕ್ಕಳ ಕಲ್ಯಾಣ ಯೋಜನೆ (ICDS) ಉಸ್ತುವಾರಿಯಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನವಾಗುತ್ತದೆ. ಮಹಿಳೆ ಗರ್ಭಿಣಿ ಆಗಿರುವಾಗ ಉತ್ತಮ ಆಹಾರ ಸೇವನೆ ಬಗ್ಗೆ ಜಾಗೃತಿ ವಹಿಸಿ ತನ್ನನ್ನು ಆರೆಕೆ ಮಾಡಿಕೊಂಡು ಆರೋಗ್ಯವಂತ ಶಿಶುಗಳ ಸುರಕ್ಷಿತ ಜನನ ಮತ್ತು ಶಿಶುಗಳ ಜನನವಾದ ತಕ್ಷಣದಲ್ಲಿ ಖಡ್ಡಾಯವಾಗಿ ಎದೆಹಾಲನ್ನು ಉಣಿಸುವ ಬಗ್ಗೆ ಜಾಗೃತಿ ಮತ್ತು ಬಾಣಂತಿ ಆರೆಕೆ ಸಮಗ್ರವಾಗಿ ಆಗಿ ತಾಯಿ ಮತ್ತು ಮಗು ಆರೋಗ್ಯವಂತರಾಗಿ ಇರುವಂತೆ ನೋಡಿಕೊಳ್ಳುವ ಯೋಜನೆ.

ಇದಕ್ಕೆ ಮಾಡಬೆಕಾದದ್ದು ಇಷ್ಟೇ:

  • ಗರ್ಭವತಿ ಆದ ೪ ತಿಂಗಳೊಳಗಾಗಿ ಸ್ಥಳೀಯ ಅಂಗನವಾಡಿಯಲ್ಲಿ ನೊಂದಾವಣೆ ಮಾಡಿಸಿಕೊಳ್ಳಬೆಕು.
  • ಪ್ರಸವ ಪೂರ್ವ ಆರೆಕೆ ಸ್ಥಳೀಯ ಅಂಗನವಾಡಿಯ ಮೂಲಕ ಪಡಕೊಳ್ಳಬೆಕು. ಪ್ರತೀ ತಿಂಗಳಲ್ಲಿ ಒಂದು ದಿನ ಗ್ರಾಮ ಆರೋಗ್ಯ ಮತ್ತು ಪೌಷ್ಟಿಕ ದಿನವನ್ನು ಆಚರಿಸುವ ಸಂದರ್ಭ ಹಾಜರಿರಬೆಕು.
  • ಹೆರಿಗೆ: ಹೆರಿಗೆಯನ್ನು ಖಡ್ಡಾಯವಗಿ ನರ್ಸಿಂಗ್ ಹೋಮ್, ಆಸ್ಪತ್ರೆಗಳಲ್ಲಿ ನುರಿತ ಡಾಕ್ಟರ್ಗಳಿಂದ/ ನರ್ಸ್ ಗಳಿಂದ ಮಾಡಿಸಬೆಕು. ಮನೆಯಲ್ಲಿ ಹೆರಿಗೆ ಮಾಡಿಸಬಾರದು.
  • ಶಿಶುವಿನ ಆರೆಕೆ: ಕಾಲಕಾಲಕ್ಕೆ ಸರಿಯಾಗಿ ಲಸಿಕೆ ಹಾಕಿಸಿಕೊಳ್ಳುವುದು, ಮಗುವಿನ ಬೆಳವಣಿಗೆ ಬಗ್ಗೆ ನಿಗಾ ಇಡುವುದು, ಶಿಶುವಿನ ೬ ತಿಂಗಳ ತನಕ ಕಡ್ಡಾಯ, ಎದೆಹಾಲು ಮಾತ್ರ ನೀಡುವುದು. ನಂತರ ಇತರ ಪೂರಕ ಆಹಾರದ ಜೊತೆಗೆ ಎರಡುವರ್ಷ ತುಂಬುವ ತನಕ ಎದೆಹಾಲು ನೀಡುವುದು. ಇದರಿಂದ ಮಗುವಿನ ಬೆಳವಣಿಗೆ, ರೋಗ ನಿರೋಧಕ ಶಕ್ತಿ ಅಧಿಕವಾಗಲು ಸಾಧ್ಯ. ಈ ರೀತಿಯ ಆರೆಕೆಯನ್ನು ಮಾಡಿದಲ್ಲಿ ಮಾತ್ರ ಆರೋಗ್ಯವಂತವಾಗಿ ಮಗು ಬೆಳೆಯಲು ಸಾಧ್ಯ.

೧೩. ಜನನಿ ಸುರಕ್ಷಾ ಯೋಜನಾ: ರಾಷ್ರೀಯ ಗ್ರಾಮೀಣ ಆರೋಗ್ಯ ಮಿಷನ್ – ಗ್ರಾಮೀಣ ಭಾಗದ ಮಹಿಳೆಯರು ಸುರಕ್ಷಿತ ಹೆರಿಗೆ ಮತ್ತು ಆರೆಕೆ ಮಾಡಿಸಿ ಕೊಳ್ಳಬೆಕೆಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಕಾರ್ಯಕ್ರಮವು ಕೇಂದ್ರ ಸರಕಾರದ ಕಾರ್ಯಕ್ರಮವಾಗಿದೆ.

ಆಶಾ ಕಾರ್ಯಕರ್ತರು ಈ ಯೋಜನೆಯನ್ನು ಗ್ರಾಮೀಣ ಭಾಗದಲ್ಲಿ ಅನುಷ್ಠಾನ ಮಾಡುತ್ತಾರೆ. (ಆಶಾ ಅಂದರೆ: ASHA: Accredited Social Health Activist) ಗ್ರಾಮಿಣ ಪ್ರದೇಶದಲ್ಲಿ ಗರ್ಭಿಣಿ ಸ್ತ್ರೀಯರನ್ನು ಗುರುತಿಸಿ ಅವರು ಪ್ರಸವ ಪೂರ್ವ ಆರೆಕೆ ಪಡಕೊಳ್ಳುವಂತೆ ಮತ್ತು ಹೆರಿಗೆ ಸಂದರ್ಭ ಆಕೆಯ ಸಂಪೂರ್ಣ ಆರೆಕೆ, ಹೆರಿಗೆಯ ನಂತರ ಶಿಶು ಹಾಗೂ ತಾಯಿಯ ಆರೋಗ್ಯ ಸ್ಥಿತಿ ಬಗ್ಗೆ ನಿಗಾವಹಿಸುವಿಕೆ, ಶಿಶುವಿಗೆ ಲಸಿಕೆ ಹಾಕಿಸುವುದು, ಮಗುವಿಗೆ ಎದೆಹಾಲು ಉಣಿಸುವಂತೆ ಮಾಡುವುದು, ಆಸ್ಪತ್ರೆಯಲ್ಲಿಯೇ ಹೆರಿಗೆ ಆಗುವಂತೆ ನೋಡಿಕೊಳ್ಳುವುದು ಇತ್ಯಾದಿ ಜವಾಬ್ದಾರಿಗಳು ಆಶಾ ಕಾರ್ಯಕರ್ತೆಯರಿಗೆ ಇದೆ.
ಈ ಯೋಜನೆ ಯಾರಿಗೆ ಅನ್ವಯಿಸುತ್ತದೆ?

ದೇಶದಲ್ಲಿ ಕೆಲವೊಂದು ರಾಜ್ಯಗಳನ್ನು ಉತ್ತಮ ನಿರ್ವಹಣೆಯ ರಾಜ್ಯಗಳು ಮತ್ತು ಸಾಮಾನ್ಯ ನಿರ್ವಹಣೆಯ ರಾಜ್ಯಗಳು (ಆರೋಗ್ಯ ಕೇಂದ್ರ ಆಸ್ಪತ್ರೆಗಳಲ್ಲಿ ಹೆರಿಗೆ ಆಗುವ ಸಂಖ್ಯೆಗಳ ಆಧಾರದಲ್ಲಿ) ಎಂದು ವಿಂಗಡಣೆ ಮಾಡಲಾಗಿದೆ. ಈ ರಾಜ್ಯಗಳಿಗೆ ಸೂಕ್ತವಾದ ಸೌಲಭ್ಯಗಳು ಅನ್ವಯಿಸುತ್ತದೆ.

ರಾಜ್ಯಗಳುಚಿಕಿತ್ಸೆ ಪಡಕೊಳ್ಳ ಬೆಕಾದ ಸ್ಥಳಗ್ರಾಮೀಣ ಪ್ರದೇಶ (ಲಗವಾಗುವ ಮೊತ್ತ)ನಗರ ಪ್ರದೇಶ (ಲಗವಾಗುವಮೊತ್ತ)
ಸಾಮಾನ್ಯ ನಿರ್ವಹಣೆ ರಾಜ್ಯಗಳು (LPS)
Low Preparing States
ಸರಕಾರಿ ಆಸ್ಪತ್ರೆ, ಸಮುದಾಯ, ಆರೋಗ್ಯ ಕೇಂದ್ರ, ಜಿಲ್ಲಾ, ರಾಜ್ಯ ಆಸ್ಪತ್ರೆಗಳಲ್ಲಿ ಮತ್ತು ಗುರುತಿಸಿದ ಖಾಸಗೀ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಕೊಳ್ಳುವ ಮಹಿಳೆಯರಿಗೆ.೧,೪೦೦೧,೦೦೦
ಉತ್ತಮ ನಿರ್ವಹಣೆ ರಾಜ್ಯಗಳು(HPS)High Preparing Statesಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ೧೯ ವರ್ಷ ಮೇಲ್ಪಟ್ಟ ಮಹಿಳೆಯರಿಗೆ೭೦೦೬೦೦
ಸಾಮಾನ್ಯ ಮತ್ತು ಉತ್ತಮ ನಿರ್ವಹಣೆ ರಾಜ್ಯಗಳು
(  LPS, HPS)
ಎಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮಹಿಳೆಯರು, ಸರಕಾರಿ ಆಸ್ಪತ್ರೆ, ಪ್ರಾಥಮಿಕ೧,೪೦೦೧,೦೦೦

 

೧೪. ನ್ಯಾಶನಲ್ ಚಾರ್ಟರ್ ಫಾರ್ ಚಿಲ್ಡ್ರನ್ (National Charter For Children)-೨೦೦೩: ಮಕ್ಕಳ ಏಳಿಗೆಗಾಗಿ ಅಭ್ಯುದಯಕ್ಕಾಗಿ ಕೇಂದ್ರ ಸರಕಾರವು ೨೦೦೩ ರಲ್ಲಿ ನ್ಯಾಶನ ಚಾರ್ಟರ್ ಫಾರ್ ಚಿಲ್ಡ್ರನ್ನ್ನು ಜಾರಿಗೆ ತಂದಿತು. ಈ ಚಾರ್ಟರ್ನ ಪ್ರಕಾರ ಯಾವುದೇ ಮಗು ಹಸಿವಿನಿಂದ ಬಳಲಬಾರದು, ಶಿಕ್ಷಣ ವಂಚಿತನಾಗಬಾರದು ಮತ್ತು ಅನಾರೋಗ್ಯ ಪೀಡಿತನಾಗಬಾರದು ಎಂಬುದಾಗಿದೆ. ಈ ಚಾರ್ಟರ್ನ ಪ್ರಕಾರ ಸಮುದಾಯವು/ಸಮಾಜವು ಪ್ರತಿಯೊಂದು ಮಗುವಿಗೆ ಕೆಳಗಿನ ವಿಚಾರಗಳಲ್ಲಿ ನ್ಯಾಯಸಮ್ಮತವಾದದನ್ನೇ ಮಾಡಬೆಕು.


ಬದುಕಲು, ಜೀವಿಸಲು ಮತ್ತು ಸ್ವತಂತ್ರ್ಯವಾಗಿರಲು ಅವಕಾಶ.

ಆರೋಗ್ಯ ಮತ್ತು ಪೌಷ್ಟಿಕತೆಗೆ ಪೂರಕವಾದ ಅತ್ಯುತ್ತಮವಾದ ಆಹಾರ ಪದ್ಧತಿ ಅನುಸರಣೆ ಮಾಡುವುದು.

 ಮೂಲಭೂತ ಸೌಕರ್ಯಗಳ ಅವಶ್ಯಕತೆಯನ್ನು ಪೂರೆಸುವುದು ಮತ್ತು ಭದ್ರತೆ ಒದಗಿಸುವುದು.

ಆಟವಾಡಲು ಮತ್ತು ಬಿಡುವಿನ ವೇಳೆ ನೀಡುವುದು.

ಮಗುವಿನ ಬೆಳವಣಿಗೆ , ಅಭಿವೃದ್ಧಿ ಮತ್ತು ಬದುಕು ಸಾಗಿಸುವುದಕ್ಕಾಗಿ ಅದರ ಆರೆಕೆ.

ಉಚಿತ ಮತ್ತು ಖಡ್ಡಾಯ ಪ್ರಾಥಮಿಕ ಶಿಕ್ಷಣ ಒದಗಿಸುವುದು.

ಸಮಾಜದಲ್ಲಿ ಆಗುವ ಶೋಷಣೆಗಳು ಮತ್ತು ಇತರ ದುಷ್ಟಶಕ್ತಿಗಳಿಂದ ಮಗುವಿನ ರಕ್ಷಣೆ.

ಹೆಣ್ಣು ಮಗವಿನ ರಕ್ಷಣೆ.

ಹದಿಹರೆಯದ ಮಕ್ಕಳ ಸಬಲೀಕರಣ.

ತನ್ನ ವಿಚಾರಗಳನ್ನು ಮಂಡನೆ ಮಾಡುವುದಕ್ಕೆ, ಮಾಹಿತಿಯನ್ನು ಪಡೆಯುವುದಕ್ಕೆ ಮತ್ತು ಉಪಯೋಗಿಸುವುದಕ್ಕೆ, ಇನ್ನೊಬ್ಬರ ಜೊತೆ ಸಹವಾಸ ಮತ್ತು ಶಾಂತಿಯುತವಾಗಿ ಸೇರುವ ಬಗ್ಗೆ ಸ್ವಾತಂತ್ಯ.

ಮಗುವಿನ ಕುಟುಂಬದ ಜೊತೆ ಬಲ ವರ್ಧನೆ.

ಪೋಷಕರ ಜವಾಬ್ದಾರಿಗಳು.

ಅಂಗವಿಕಲ/ವಿಕಲಚೇತನ ಮಕ್ಕಳ ರಕ್ಷಣೆ.

ಇತರ ಜನಾಂಗದ ಕುಟುಂಬಗಳ, ಮಕ್ಕಳ ಆರೆಕೆ, ರಕ್ಷಣೆ, ಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ.

ಮಕ್ಕಳಿಗೆ ಹಿತವಾಗುವ ಪದ್ಧತಿಗಳ ಅನುಕರಣೆ.

ಹೀಗೆ ಮೇಲಿನ ಎಲ್ಲಾ ವಿಚಾರಗಳಲ್ಲಿ ಸಮುದಾಯವು, ಸಮಾಜವು, ಜನರು ಹೇಗೆ ಜವಾಬ್ದಾರಿಯುತವಾಗಿ ವರ್ತಿಸಬೆಕೆಂದು ಇದರಲ್ಲಿ ವಿವರಿಸಲಾಗಿದೆ.


ಮೇಲೆ ಉಲ್ಲೇಖಿಸಿದ ಅಷ್ಟೂ ಕಾರ್ಯಕ್ರಮಗಳು ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಇರುವ ಕಾರ್ಯಕ್ರಮಗಳು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರಕಾರದಿಂದ ನಡೆಸಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳು ಹಿಂದುಳಿದ ಗ್ರಾಮೀಣ ಭಾಗದ ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳು.

ಅದೇ ರೀತಿಯಲ್ಲಿ ಈ ಇಲಾಖೆಗಳಿಂದ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಇರುವ ಕಾರ್ಯಕ್ರಮಗಳು:

೧. ಸ್ತ್ರೀ ಶಕ್ತಿ ಸಂಘಗಳು: ಮಹಿಳಾ ಸಶಕ್ತೀಕರಣ ಮತ್ತು ಅವರನ್ನು ಸ್ವಾವಲಂಬಿಗಲಾಗಿಸುವ ನಿಟ್ಟಿನಲ್ಲಿ ೨೦೦೦-೦೧ರಲ್ಲಿ ಆಗಿನ ಕರ್ನಾಟಕ ಘನ ಸರಕಾರವು ಸ್ತ್ರೀಶಕ್ತಿ ಸಂಘಗಳ ರಚನೆಯನ್ನು ಪ್ರಾರಂಭಿಸಿತು. ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬ, ಕೃಷಿ ಕೂಲಿ ಕಾರ್ಮಿಕರು, ಭೂರಹಿತ ಕುಟುಂಬಗಳು, ಮಹಿಳೆಯರು ಸಂಘ ರಚನೆ ಮಾಡುತ್ತಾರೆ. ಸಣ್ಣ ಉಳಿತಾಯವನ್ನು ಪ್ರಾರಂಭಿಸಿ ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಇದರ ಮೂಲ ಉದ್ದೇಶ. ಮಹಿಳೆಯರನ್ನು ಸಂಘಟಿಸಿ ಅವರು ಆದಾಯವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಂಡು ತಮ್ಮ ಕುಟುಂಬದ ಏಳಿಗೆ ಮಾಡುವ ಅವಕಾಶ ಈ ಸ್ತ್ರೀಶಕ್ತಿ ಸಂಘಗಳ ಮೂಲಕ ಸಾಧ್ಯವಿದೆ, ಅಲ್ಲದೆ ಇಲಾಖೆಯ ಇತರ ಸೌಲ”sಗಳನ್ನೂ ಈ ಸಂಘಗಳ ಮೂಲಕ ನೇರವಾಗಿ ನೀಡುವಲ್ಲಿಯೂ ಇದು ಸಹಕಾರಿಯಾಗಿದೆ.

೨. ಕರ್ನಾಟಕ ಮಹಿಳಾ ಅಭಿವೃದ್ಧಿ ಯೋಜನೆ: ೨೦೦೩ರಲ್ಲಿ ಕರ್ನಾಟಕ ಘನ ಸರಕಾರವು ಈ ಕೇಂದ್ರವನ್ನು ಸ್ಥಾಪನೆ ಮಾಡಿತು. ಈ ಕೇಂದ್ರದ ಉದ್ದೇಶ ಲಿಂಗ ತಾರತಮ್ಯ ನಿವಾರಣೆ ಮತ್ತು ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳಲ್ಲಿ ೧/೩ ರಷ್ಟು ಮಹಿಳೆಯರಿಗೆ ಮೀಸಲಿರಿಸಿ ಅನುಷ್ಠಾನ ಮಾಡುವುದಾಗಿದೆ. ೨೦೧೪-೧೫ ರಲ್ಲಿ ಇಂತಹ ೨೩೭ ಯೋಜನೆಗಳನ್ನು ಗುರುತಿಸಲಾಗಿದ್ದು ೫೮೦೦ ಕೋಟಿ ಮೊತ್ತ ಮಹಿಳೆಯರ ಯೋಜನೆಗಳಿಗಾಗಿ ಇಟ್ಟುಕೊಳ್ಳಲಾಗಿದೆ.

೩. ಉದ್ಯೋಗಿನಿ: ಮಹಿಳೆಯರು ಸ್ವಂತ ಉದ್ಯೋಗವನ್ನು ಕೆಗೊಳ್ಳುವ ನಿಟ್ಟಿನಲ್ಲಿ ಆರ್ಥಿಕ ಸೌಲಭ್ಯವನ್ನು ಒದಗಿಸುವ ಯೋಜನೆ. ಕರ್ನಾಟಕ ಮಹಿಳಾ ಅಭಿವೃದ್ಧಿ ಪ್ರಾಧಿಕಾರವು ಉದ್ಯೋಗ ಕೆಗೊಂಡ ಮಹಿಳೆಯರಿಗೆ ಪ್ರೋತ್ಸಾಹಧನವನ್ನು ನೀಡುತ್ತದೆ. ವರ್ಷಕ್ಕೆ ರೂ.೪೦,೦೦೦ ಆದಾಯದೊಳಗಿನ ಕುಟುಂಬದ ೧೮ ರಿಂದ ೪೫ ವರ್ಷಪ್ರಾಯದ ಮಹಿಳೆಯರಿಗೆ ರೂ.೧,೦೦,೦೦೦/- ಮೊತ್ತ ಆರ್ಥಿಕ ಸೌಲಭ್ಯ ನೀಡಲಾಗುತ್ತದೆ. ಇದರಲ್ಲಿ ಪರಿಶಿಷ್ಟ ಜಾತಿ/ಪಂಗಡದ ಮಹಿಳೆಯರಿಗೆ ೩೦% ಅಥವಾ ರೂ.೧೦,೦೦೦/-ಯಾವುದು ಕಡಿಮೆಯೋ ಅದು ಮತ್ತು ಇತರ ಮಹಿಳೆಯರಿಗೆ ೨೦% ಅಥಯಾ ರೂ.೭,೫೦೦/- ಯಾವುದು ಕಡಿಮೆಯೋ ಅದು ಪ್ರೋತ್ಸಾಹ ಧನ ಲಭ್ಯವಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಅರ್ಜಿ ವಿಲೇವಾರಿ ಮಾಡಲಾಗುತ್ತದೆ.

೪. ಸಾಂತ್ವಾನ ಕೇಂದ್ರ: ಈ ಯೋಜನೆಯು ೨೦೦೦ನೇ ಇಸವಿಯಲ್ಲಿ ಪ್ರಾರಂಭವಾಯಿತು. ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಲೆಂಗಿಕ ಕಿರುಕುಳ, ವರದಕ್ಷಿಣೆ ಇತ್ಯಾದಿಗಳಿಗೆ ಒಳಗಾದ ಮಹಿಳೆಯರಿಗೆ ಸಾಂತ್ವಾನ, ಆಶ್ರಯ ನೀಡುವ ಉದ್ದೇಶದಿಂದ ಈ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ಈ ಕೇಂದ್ರದ ಮೂಲಕ ಕಾನೂನು ಸಹಾಯ, ತಾತ್ಕಾಲಿಕ ಆಶ್ರಯ, ಆರ್ಥಿಕವಾಗಿ ಸ್ವಾಲಂಬನೆ ಹೊಂದುವುದಕ್ಕೆ ಪೂರಕ ತರಬೆತಿಗಳ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಸ್ವಯಂ ಸೇವಾ ಸಂಸ್ಥೆಗಳು ಈ ಸಾಂತ್ವಾನ ಕೇಂದ್ರಗಳನ್ನು ನಡೆಸುತ್ತಿದ್ದು ೨೪ ಗಂಟೆಗಳ ಸೇವೆಯನ್ನು ಪ್ರತೀ ತಾಲೂಕುಗಳಲ್ಲಿ ನೀಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಸಮಿತಿ ಇದ್ದು ಈ ಸಮಿತಿಯ ನಿರ್ದೇಶನದಂತೆ ಕೇಂದ್ರ ಕಾರ್ಯಾಚರಿಸುತ್ತದೆ. ಮಹಿಳೆಗೆ ಅಗತ್ಯವಿದ್ದಾಗ ರೂ.೨,೦೦೦/- ದಿಂದ ರೂ.೧೦,೦೦೦/- ದವರೆಗೆ ಆರ್ಥಿಕ ನೆರವೂ ನೀಡಲಾಗುತ್ತಿದೆ.


೫. ಉದ್ಯೋಗಸ್ಥ ಮಹಿಳೆಯರ ವಸತಿ ವ್ಯವಸ್ಥೆ: ಅತೀ ಕಡಿಮೆ ದರದಲ್ಲಿ ಮತ್ತು ಸುರಕ್ಷಿತ ವಸತಿ ವ್ಯವಸ್ಥೆ, ಉದ್ಯೋಗಸ್ಥ ಮಹಿಳೆಯರಿಗೆ ಪಟ್ಟಣ ಪ್ರದೇಶಗಳಲ್ಲಿ ಒದಗಿಸಲಾಗುತ್ತಿದೆ. ಕೇಂದ್ರ ಸರಕಾರ ೭೫% ಕಟ್ಟಡ ನಿರ್ಮಾಣ ವೆಚ್ಚ ಭರಿಸುತ್ತಿದೆ. ರಾಜ್ಯ ಸರಕಾರ ೨೫% ಮತ್ತು ಸ್ವಯಂ ಸೇವಾ ಸಂಸ್ಥೆ ೧೨.೫% ವೆಚ್ಚ ಭರಿಸುತ್ತದೆ. ಇದರ ನಿವಹಣೆಯು ಸ್ವಯಂ ಸೇವಾ ಸಂಸ್ಥೆ ನಡೆಸುತ್ತಿದ್ದು ಒಟ್ಟು ೬೬ ವಸತಿ ಗೃಹಗಳಿವೆ.

೬. ಸಾಮಾಜಿಕ ದುಷ್ಟ ಶಕ್ತಿಗಳ ತಡೆಗೆ ವಿಶೇಷ ಕೇಂದ್ರ ಸ್ಥಾಪನೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶನಾಲಯದಲ್ಲಿ ವರದಕ್ಷಿಣೆ ಪಿಡುಗು, ಬಾಲ್ಯವಿವಾಹ, ಕೌಟುಂಬಿಕ ದೌರ್ಜನ್ಯ, ಮಹಿಳೆಯರ ಶೋಷಣೆಗಳ ವಿರುದ್ಧ ಜಾಗೃತಿ ಮೂಡಿಸುವಲ್ಲಿ ನಿರಂತರವಾಗಿ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಈ ಕೇಂದ್ರದ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ.

೭. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆ ೨೦೦೫ರ ಅನುಷ್ಠಾನ: ಇಲಾಖೆಯ ಉಪ ನಿರ್ದೇಶಕರು, ಯೋಜನಾಧಿಕಾರಿಗಳು, ಈ ಕಾಯಿದೆಯ ಪ್ರಕಾರ ರಕ್ಷಣಾ ಅಧಿಕಾರಿಗಳಾಗಿರುತ್ತಾರೆ. ಉಚಿತ ಕಾನೂನು ನೆರವು ಕೇಂದ್ರಗಳ ರಚನೆ ಮಾಡಲಾಗಿದೆ. ಅನುಭವ ಇರುವ ಕಾನೂನು ತಜ್ಞರು ವಾರದಲ್ಲಿ ಎರಡುದಿನ ಈ ಕೇಂದ್ರದಲ್ಲಿ ಲಭ್ಯವಿರುತ್ತಾರೆ. ಮಹಿಳೆಯರ ಆರೆಕೆಗಾಗಿ, ಆರೋಗ್ಯ ನಿರ್ವಹಣೆಗಾಗಿ ಮತ್ತು ವಸತಿಗಾಗಿ ಸ್ವಧಾರ್ ಕೇಂದ್ರ, ಸ್ಟೇ ಹೋಮ ಗಳು ಮತ್ತು ಸಾಂತ್ವಾನ ಕೇಂದ್ರಗಳು ಇವೆ. ಅಲ್ಲದೇ ೧೧೬ ಸ್ವಯಂ ಸೇವಾ ಸಂಸ್ಥೆಗಳು, ಕಾನೂನು, ವೆದ್ಯಕೀಯ ಮತ್ತು ಇತರ ಸೇವೆಗಳನ್ನು ನೀಡುವುದಕ್ಕೆ ಗುರುತಿಸಲ್ಪಟ್ಟಿದೆ.

೮. ಕಾನೂನು ಅರಿವು ಕಾರ್ಯಕ್ರಮ: ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಇಲಾಖೆಯ ಬಾಲ್ಯವಿವಾಹ ತಡೆ ಕಾಯಿದೆ, ವರದಕ್ಷಿಣೆ ತಡೆ ಕಾಯಿದೆ, ಮಹಿಳಾ ದೌರ್ಜನ್ಯ ತಡೆ ಕಾಯಿದೆ ಇತ್ಯಾದಿ. ಕಾನೂನುಗಳ ಬಗ್ಗೆ ವ್ಯಾಪಕ ಮಾಹಿತಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ.

೯. ಸ್ವಾಧಾರ್ ಕೇಂದ್ರ: ಮಹಿಳೆಯರ ಸಂಕಷ್ಟಗಳ ಪರಿಸ್ಥಿತಿಯಲ್ಲಿ ನೆರವಾಗುವ ಯೋಜನೆ: ನಿರ್ಗತಿಕ ಮಹಿಳೆ, ವಿಧವಾ ಮಹಿಳೆ, ಜೆಲಿನಿಂದ ಹೊರಬಂದ ಮಹಿಳಾ ಖೆದಿಗಳು, ಪ್ರಾಕೃತಿಕ ವಿಕೋಪದಿಂದಾಗಿ ಉಳಿದಿರುವ ಮಹಿಳೆಯರು/ಹೆಣ್ಣು ಮಕ್ಕಳು, ಮಾನಸಿಕವಾಗಿ ಅಸ್ವಸ್ಥರಾಗಿರುವ ಮಹಿಳೆಯರು ಮತ್ತು ಯಾವುದೇ ಆಧಾರ, ಬೆಂಬಲವಿಲ್ಲದ ಮಹಿಳೆಯರನ್ನು ರಕ್ಷಣೆ ಮಾಡುವ ಕೇಂದ್ರವೇ “ಸ್ವಾಧಾರ್ ಕೇಂದ್ರ“. ಈ ಕೇಂದ್ರವು ಮಹಿಳೆಯರಿಗೆ ಆಹಾರ, ವಸತಿ, ಬಟ್ಟೆ, ಆರೋಗ್ಯ ರಕ್ಷಣೆ, ಸಮಾಲೋಚನೆ, ಕಾನೂನು ನೆರವು ಮತ್ತು ಸಾಮಾಜಿಕವಾಗಿ ಆರ್ಥಿಕವಾಗಿ ಅವರು ಮುಂದೆ ಬರುವಂತೆ ತರಬೆತಿ ಸೇವೆಗಳನ್ನು ನೀಡುತ್ತದೆ. ಈ ಯೋಜನೆಯನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಇಲಾಖೆಯ ಸಹಯೋಗದೊಂದಿಗೆ ಇತರ ಮಹಿಳಾ ಅಭಿವೃದ್ಧಿ ಸಂಸ್ಥೆಗಳ ಸಹಯೋಗದೊಂದಿಗೆ ಅನುಷ್ಠಾನ ಮಾಡಲಾಗುತ್ತಿದೆ. ಅಲ್ಲದೆ ಈ ಕೇಂದ್ರದಲ್ಲಿ ಮಹಿಳಾ ಸಹಾಯ ವಾಣಿಯ ಸೇವೆಯೂ ಲಭ್ಯವಿರುತ್ತದೆ. ಒಟ್ಟು ೩೨ ಸ್ವಧಾರ್ ಕೇಂದ್ರಗಳು ಕಾರ್ಯಾಚರಣೆ ಮಾಡುತ್ತಿದೆ.

೧೦. ಮದ್ಯಪಾನ, ಏದ್ಸ್ ಮತ್ತು ಡ್ರಗ್ಸ್ ಬಳಕೆ ತಡೆ ಯೋಜನೆ: ಮದ್ಯವರ್ಜನ ಶಿಬಿರಗಳು ಮತ್ತು ಸಮಾಲೋಚನೆ, ಆರೆಕೆ ಮತ್ತು ಪುನರ್ ವಸತಿ ಸೌಲಭ್ಯಗಳನ್ನು ಒದಗಿಸುವ ಸ್ವಯಂ ಸೇವಾ ಸಂಸ್ಥೆಗಳಿಗೆ ಕೇಂದ್ರಸರಕಾರದಿಂದ ವಿಶೇಷ ನೆರವು ಒದಗಿಸಲಾಗುತ್ತಿದೆ. ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವುದು, ಶಿಬಿರಗಳ ಆಯೋಜನೆ, ಮಾಹಿತಿ, ಜಾಥಾ, ಆಂದೋಲನಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.


೧೧. ತರಬೆತಿ ಹಾಗೂ ಉದ್ದಿಮೆಗೆ ಉತ್ತೇಜನ ಕಾರ್ಯಕ್ರಮ (STEP- Support to Training & Employment Project): ಕೇಂದ್ರಸರಕಾರದ ಮಹತ್ತರವಾದ ಈ ಯೋಜನೆಯ ಉದ್ದೇಶ ಮಹಿಳೆಯರು ಉದ್ಯೋಗಿಗಳಾಗುವಂತೆ ತಯಾರುಗೊಳಿಸುವುದು ಮತ್ತು ಸ್ವ ಉದ್ಯೋಗ ಕೆಗೊಳ್ಳುವಂತೆ ಸಬಲರನ್ನಾಗಿ ಮಾಡುವುದು. ಹದಿನಾರು ವರ್ಷಕ್ಕಿಂತ ಮೇಲ್ಪಟ್ಟ ಹೆಣ್ಣು ಮಕ್ಕಳಿಗೆ/ಮಹಿಳೆಯರಿಗೆ ಈ ಯೋಜನೆ ಅನ್ವಯಿಸುತ್ತದೆ. ಕೃಷಿ, ತೋಟಗಾರಿಕೆ, ಆಹಾರ ಸಂಸ್ಕರಣೆ, ಕೆಮಗ್ಗ, ಹೊಲಿಗೆ, ಕಸೂತಿ, ಕರ-ಕುಶಲ ವಸ್ತು ತಯಾರಿ, ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ಸೇವೆ, ಇಂಗ್ಲೀಷ್ ಮಾತನಾಡುವ ಕಲೆ, ಕೃತಕ ಆಭರಣದ ತಯಾರಿ, ಪ್ರವಾಸೋದ್ಯಮ ಮತ್ತು ಆರೆಕೆ ಕ್ಷೇತ್ರಗಳಲ್ಲಿ ನಿರಂತರ ವಿಶೇಷ ತರಬೆತಿ ಮತ್ತು ಉದ್ಯೋಗವಕಾಶಗಳನ್ನು ಕಲ್ಪಿಸಲಾಗುವುದು.

೧೨. ರಾಜೀವ್ ಗಾಂಧಿ ಯುವತಿಯರ ಸಬಲೀಕರಣ ಯೋಜನೆ (RGMSY): ಈ ಯೋಜನೆಯೂ ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನವಾಗುತ್ತದೆ. ಈ ಯೋಜನೆಯ ಉದ್ದೇಶ ಹದಿಹರೆಯದ ಯುವತಿಯರ ಸ್ವಯಂ ಅಭಿವೃದ್ಧಿ ಮತ್ತು ಸಬಲೀಕರಣ, ಅವರ ಆರೋಗ್ಯ ಮತ್ತು ಪೌಷ್ಟಿಕತೆ, ಸ್ಥಿತಿಗತಿಯನ್ನು ಅಭಿವೃದ್ಧಿ ಪಡಿಸುವುದು, ಆರೊಗ್ಯ, ಸ್ವಚ್ಚತೆ, ನೆರ್ಮಲ್ಯ, ಲೆಂಗಿಕ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೆ, ಯುವತಿಯರಲ್ಲಿರುವ ಕೌಶಲ್ಯಗಳನ್ನು ಗುರುತಿಸಿ, ಅದನ್ನು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಜೋಡಿಸಿ ಸ್ವ ಉದ್ಯೋಗಕ್ಕೆ ಪ್ರೇರಣೆ ನೀಡುವುದು. ಶಾಲೆ ಬಿಟ್ಟ ಯುವತಿಯರನ್ನು ಶಾಲೆಗೆ ಸೇರಿಸುವುದು ಹಾಗೂ ಸಾರ್ವಜನಿಕ ಸೇವೆಗಳ ಬಗ್ಗೆಯೂ ಅಂದರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಬ್ಯಾಂಕ್, ಅಂಚೆಕಛೇರಿ, ಪೋಲಿ ಸ್ಟೇಷಗಳ ಬಗ್ಗೆ ಮಾಹಿತಿ ಒದಗಿಸುವುದು. ೧೧ ರಿಂದ ೧೮ ವರ್ಷದ ವಯೋಮಿತಿ ಒಳಗಿನ ಹೆಣ್ಣು ಮಕ್ಕಳು ಈ ಯೋಜನೆಯಡಿಯಲ್ಲಿ ಬರುತ್ತಾರೆ.


ಈ ಯೋಜನೆಯ ಸೇವೆಗಳು:
೧) ಪೌಷ್ಟಿಕ ಆಹಾರ ಒದಗಣೆ.
೨) ಕಬ್ಬಿಣ ಮತ್ತು ಫೋಲಿಕ್ ಆಸಿದ್ ಮಾತ್ರೆಗಳ ಒದಗಣೆ.
೩) ಉಚಿತ ಆರೋಗ್ರ ತಪಾಸಣೆ ಮತ್ತು ಮುಂದಿನ ಹಂತದ ಚಿಕಿತ್ಸೆಗಾಗಿ ಕಳುಹಿಸುವುದು.
೪) ಪೌಷ್ಟಿಕತೆ ಮತ್ತು ಆರೋಗ್ಯದ ಬಗ್ಗೆ ಶಿಕ್ಷಣ.
೫) ಕೌಟುಂಬಿಕ ಕ್ಷೇಮ, ವಿಚಾರಗಳ ಬಗ್ಗೆ, ಮಗುವಿನ ಆರೆಕೆ ಮತ್ತು ಗೃಹಾಡಳಿತದ ಬಗ್ಗೆ ಸಮಾಲೋಚನೆ/ಮಾಹಿತಿ ಕಾರ್ಯಕ್ರಮಗಳು.
೬) ಜೀವನ ಕೌಶಲ್ಯ ಶಿಕ್ಷಣ ಮತ್ತು ಸಾರ್ವಜನಿಕ ಸೇವೆಗಳನ್ನು ಪಡಕೊಳ್ಳುವುದು.
೭) ೧೬ ವರ್ಷ ಮೇಲ್ಪಟ್ಟ ಹೆಣ್ಣಿಗೆ ಉದ್ಯೋಗ ಪೂರಕ ಕೌಶಲ್ಯಾಭಿವೃದ್ಧಿ ತರಬೆತಿ ಅವಕಾಶ.

ಅನುಷ್ಠಾನ ಮಾದರಿ:
೧) “ಕಿಶೋರಿ ಸಮೂಹ” ಎಂಬ ತಂಡಗಳನ್ನು ಮಾಡಿ ಸುಮಾರು ೧೫-೨೦ ಹೆಣ್ಣು ಮಕ್ಕಳು ಅಂಗನವಾಡಿಯಲ್ಲಿ ಸೇರುತ್ತಾರೆ. ಅಲ್ಲಿ ಮಾಹಿತಿಗಳನ್ನು ನೀಡಲಾಗುತ್ತಿದೆ.
೨) ಇದಕ್ಕಾಗಿ ಪ್ರತೀ ಅಂಗನವಾಡಿ ಕೇಂದ್ರಕ್ಕೆ ತರಬೆತಿ ಕಿಟಗಳನ್ನು ನೀಡಲಾಗುತ್ತದೆ.
೩) “ಕಿಶೋರಿ ದಿನ” ಎಂದು ಒಂದು ದಿನ ಆಚರಣೆ ಮಾಡಿ ಉಚಿತ ವೆದ್ಯಕೀಯ ಚಿಕಿತ್ಸೆ ಹಮ್ಮಿಕೊಳ್ಳುತ್ತಾರೆ.
೪) ಆರೋಗ್ಯ ಕಾರದ್ ಗಳನ್ನು ನೀಡಲಾಗುತ್ತದೆ.
೫) ಜಿಲ್ಲಾ ಯೋಜನಾಧಿಕಾರಿ ಈ ಕಾರ್ಯಕ್ರಮವನ್ನು ಅನುಷ್ಠಾನಿಸಿ ಮಕ್ಕಳ ಅಭಿವೃದ್ಧಿ ಅಧಿಕಾರಿ ತಾಲೂಕು ಮಟ್ಟದಲ್ಲಿ ಅನುಷ್ಠಾನಿಸುತ್ತಾರೆ. ಅಂಗನವಾಡಿ ಕಾರ್ಯಕರ್ತೆ ಸಂಯೋಜಕಿಯಾಗಿರುತ್ತಾರೆ.

ಶಿಕ್ಷಣ ಇಲಾಖೆ:
೧. ಸೆಕಲ್ ವಿತರಣೆ :ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಹೆಣ್ಣು ಮಕ್ಕಳಿಗೆ ಸರಕಾರಿ/ಅನುದಾನಿತ ಸರಕಾರಿ ಶಾಲೆಗಳಲ್ಲಿ ಓದುತ್ತಿದ್ದರೆ ಅವರಿಗೆ ಸೆಕಲ್ ನೀಡುವ ಯೋಜನೆಯನ್ನು ೨೦೦೬-೦೭ರಲ್ಲಿ ಕರ್ನಾಟಕ ಘನ ಸರಕಾರವು ಜಾರಿಗೆ ತಂದಿತು. ೮ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ನೀಡಲಾಯಿತು. ಮುಖ್ಯವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ, ಬಹಳ ದೂರದಿಂದ ಶಾಲೆಗೆ ಬರಬೆಕಾಗಿದ್ದು, ಸಂಚಾರ ವ್ಯವಸ್ಥೆ ಇಲ್ಲದಿರುವ ಸ್ಥಳಗಳಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ನೂತನ ಕಾರ್ಯಕ್ರಮ ಜಾರಿಗೆ ಬಂತು.

೨. ಉಚಿತ ಯೂನಿಫಾರಮ್, ಸ್ಕೂಲ್ ಬ್ಯಾಗ್: ೧೪ ವರ್ಷದ ತನಕ ಮಕ್ಕಳಿಗೆ ಖಡ್ಡಾಯ ಶಿಕ್ಷಣ ಸಿಗಬೆಕು ಎಂಬ ನಿರ್ದೇಶನ, ನಮ್ಮ ಸಂವಿಧಾನದಡಿ “ಡೆರೆಕ್ಟ ಪ್ರಿಸೀಪಲ್ ಆಫ್ ಸ್ಟೇಟ ಪಾಲಿಸಿ”ಯಲ್ಲಿ ಉಲ್ಲೇಖವಾದ ನಿಟ್ಟಿನಲ್ಲಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು “ಯೂನಿವರ್ಸಲೆಸೇಶನ್ ಆಫ್ ಎಲಿಮೆಂಟರಿ ಎಜುಕೇಶ”ನ್ನು ಅನುಷ್ಠಾನ ಮಾಡಿದ ನಂತರ ಪ್ರಾಥಮಿಕ ಶಿಕ್ಷಣಕ್ಕೆ ಮಕ್ಕಳು ನೋಂದಾವಣೆಗೊಳ್ಳುವುದು ಹೆಚ್ಚಳವಾಯಿತು. ಬಡತನ ಹಾಗೂ ಆರ್ಥಿಕ ಸೌಲಭ್ಯ ವಂಚಿತರಾದ ಕುಟುಂಬಗಳ ಮಕ್ಕಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡದಿರುವುದು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಖಡ್ಡಾಯ ಶಿಕ್ಷಣಕ್ಕಾಗಿ ಸರಕಾರದಿಂದ ವಿಶೇಷ ಯೋಜನೆಗಳನ್ನು ಮಾಡಿ, ಅಂಥಹ ಮಕ್ಕಳು ಶಿಕ್ಷಣ ಪಡೆಯುವಂತೆ ಮಾಡಲೇ ಬೆಕಾಗಿದೆ. ಅಲ್ಲದೇ ಶಾಲೆಗೆ ಸೇರಿದ ಮಕ್ಕಳು ಶಿಕ್ಷಣ ಮುಂದುವರೆಸಿಕೊಂಡು ಹೋಗುವಂತೆ ಮಾಡುವುದು ಕೂಡಾ ಅಷ್ಟೇ ಪ್ರಮುಖವಾದ ವಿಚಾರವಾಗಿದೆ. ಈ ಎಲ್ಲಾ ವಿಚಾರಗಳಿಂದಾಗಿ ರಾಜ್ಯ ಸರಕಾರವು ಉಚಿತ ಶಿಕ್ಷಣ, ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ಒದಗಿಸಿತ್ತಿದೆ. ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳಲ್ಲಿ ಓದಿತ್ತಿರುವ ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ.


೩. ಬಿಸಿಯೂಟ : ಕೇಂದ್ರ ಸರಕಾರದ “ಯೂನಿವರ್ಸಲೆಸೇಶನ್ ಆಫ್ ಪ್ರೆಮರಿ ಎಜುಕೇಶನ್” (Universalisation of Priamary Education) ಯೋಜನೆ ಪ್ರಕಾರ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನು ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಾಡಲಾಗುತ್ತಿದೆ.

೪. ಕ್ಷೀರ ಭಾಗ್ಯ: ಕರ್ನಾಟಕ ಘನ ಸರಕಾರವು ಸರಕಾರೀ ಮತ್ತು ಸರಕಾರೀ ಅನುದಾನಿತ ಶಾಲೆಗಳ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

೫. ಸುವರ್ಣ ಆರೋಗ್ಯ ಚೆತನ್ಯ ಕಾರ್ಯಕ್ರಮ: ಆರೋಗ್ಯ ತಪಸಾಣಾ ಕಾರ್ಯಕ್ರಮವನ್ನು ಎಲ್ಲಾ ಶಾಲೆಗಳ ಒಂದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ೨೦೦೬-೦೭ರಿಂದ ನಡೆಸಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸರಕಾರೀ ಆಸ್ಪತ್ರೆಗಳ ವೆದ್ಯರು, ಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡುತ್ತಾರೆ. ಯಾವುದೇ ವಿದ್ಯಾರ್ಥಿಗೆ ತೀವ್ರ ತರವಾದ ಕಾಯಿಲೆಯ ಲಕ್ಷಣಗಳು ಕಂಡು ಬಂದಲ್ಲಿ ಸೂಕ್ತ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೇ ದೇಹದ ಪ್ರಮುಖ ಅಂಗಗಳಾದ ಹೃದಯ, ಕಿವಿ, ಕಣ್ಣು, ಮೂಳೆಗಳಲ್ಲಿ ತೀವ್ರ ಸಮಸ್ಯೆಗಳು ಕಂಡುಬಂದಲ್ಲಿ ಉತ್ತಮ ಆಸ್ಪತ್ರೆಗಳಲ್ಲಿ ಉಚಿತ ಕಾರಡ್ಗಳನ್ನು ನೀಡಿ ಅದರಲ್ಲಿ ಚಿಕಿತ್ಸೆಯ ತಪಾಸಣೆ ಸಂಪೂರ್ಣ ವಿವರಗಳನ್ನು ದಾಖಲಿಸಲಾಗುತ್ತದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ:

೬. ಅನ್ನಭಾಗ್ಯ : ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅನ್ನಭಾಗ್ಯ ಯೋಜನೆಯಡಿಯಲ್ಲಿ ಒಂದು ಕೆ.ಜಿ ಅಕ್ಕಿಗೆ ರೂ.೧/-ರಂತೆ ೩೦ ಕೆ.ಜಿ ಅಕ್ಕಿ ಪ್ರತೀ ತಿಂಗಳಿಗೆ ನೀಡಲಾಗುವುದು. ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳ ಒಬ್ಬ ಸದಸ್ಯನಿಗೆ ೧೦ ಕೆ.ಜಿ ಅಕ್ಕಿ ರೂ.೧/-ರಲ್ಲಿ ನೀಡಲಾಗುತ್ತಿದೆ.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ:

೭. ಸುವರ್ಣ ಗ್ರಾಮೋದಯ ಯೋಜನೆ: ಆಯ್ಕೆಯಾದ ಹಳ್ಳಿಗಳ ಸಮಗ್ರ ಅಭಿವೃದ್ಧಿ ಹಳ್ಳಿಯಲ್ಲಿ ಲಭ್ಯವಿರುವ ಭೌತಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಆದಾಯಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಜನರಿಗೆ ಪ್ರೇರಣೆ ನೀಡಿ ಪ್ರತೀ ಕುಟುಂಬಗಳ ಅಭಿವೃದ್ಧಿಗಾಗಿ ಈ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಜನರನ್ನು ಸ್ವಸಹಾಯ ಸಂಘಗಳನ್ನಾಗಿ ಸಂಘಟಿಸಿ ಮಾಹಿತಿ, ತರಬೆತಿ ಕಾರ್ಯಕ್ರಮಗಳ ಮೂಲಕ ಅವರನ್ನು ಸಬಲರನ್ನಾಗಿ ಮಾಡಿ, ಹಳ್ಳಿಯ ಅಭಿವೃದ್ಧಿ ಸಾಧಿಸುವಲ್ಲಿ ಈ ಯೊಜನೆ ಶ್ರಮಿಸುತ್ತಿದೆ.

೮. ಕೇಂದ್ರ ಸರಕಾರದ ಇತರ ಯೋಜನೆಗಳು: ಮಹಿಳಾ ಕಿಸಾನ್ ಸಶಕ್ತೀಕಿರಣ ಪರಿಯೋಜನಾ:
ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಕೃಷಿ ಕಾರ್ಮಿಕರಾಗಿ, ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಇವರನ್ನು ನೇರವಾಗಿ ಸರಕಾರದ ಸೌಲಭ್ಯಗಳು ಒದಗುವಂತೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಇವರು ಭೂಮಾಲೀಕರು ಅಲ್ಲ. ಅಲ್ಲದೇ ದಿನಗೂಲಿ ವ್ಯತ್ಯಾಸ ಪುರುಷರಿಗೆ ಅಧಿಕ ಮಹಿಳೆಯರಿಗೆ ಕಡಿಮೆ ಎಂಬ ತಾರತಮ್ಯವೂ ಇದೆ. ತನ್ನ ಕೃಷಿ ಭೂಮಿಯಲ್ಲಿ ತನ್ನನ್ನು ತಾನೂ ಹೆಚ್ಚಾಗಿ ತೊಡಗಿಸಿಕೊಂಡರೂ ಕೂಡಾ ಆಕೆಯ ಹಲವಾರು ಜವಾಬ್ದಾರಿಗಳ ನಡುವೆ ಇದು ನಗಣ್ಯ ವೆನಿಸುತ್ತಿದೆ. ಇದರಿಂದಾಗಿ ಆಕೆ ಕೃಷಿಗೆ ಪೂರಕವಾದ ಮಾಹಿತಿ ತಂತ್ರಜ್ಞಾನಗಳನ್ನು ಪಡಕೊಳ್ಳುವಲ್ಲಿ ಅಶಕ್ತಳಾಗುತ್ತಾಳೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಕೃಷಿಕರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೇಂದ್ರಸರಕಾರವು ಮಹಿಳಾ ಕಿಸಾ ಸಶಕ್ತೀಕರಣಾ ಪರಿಯೋಜನಾ ಎಂಬ ಹೊಸಯೋಜನೆಯನ್ನು “ನ್ಯಾಷನ ರೂರಲ್ ಲೆವ್ಲಿಹುದ್ ವಿಷನ್”ನ ಯೋಜನೆಯಲ್ಲಿ ತಂದಿತು.


ಈ ಯೋಜನೆಯ ಮೂಲಭೂತ ಉದ್ದೇಶ:

  • ಕೃಷಿಯಲ್ಲಿ ಮಹಿಳೆಯರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು.
  • ಕೃಷಿಯಲ್ಲಿ ನಿರಂತರ ಜೀವನೋಪಾಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಪ್ರೇರಣೆ.
  • ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ಮಹಿಳೆಯರ ಕೌಶಲ್ಯ ಹಾಗೂ ಸಾಮರ್ಥ್ಯ ಹೆಚ್ಚಿಸುವ ಕಾರ್ಯಕ್ರಮಗಳ ಆಯೋಜನೆ.
  • ಸಮುದಾಯದಲ್ಲಿ ಮಹಿಳೆಯರ ಆಹಾರ ಮತ್ತು ಪೌಷ್ಟಿಕತೆ ಭದ್ರತೆ.
  • ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಸೇವೆಗಳನ್ನು ಸುಲಲಿತವಾಗಿ ಪಡೆಯುವಂತೆ ಮಾಡುವುದು.
  • ಕೃಷಿಯಲ್ಲಿ ಅತ್ಯುತ್ತಮವಾದ ಸಾಧನೆ ಮಾಡುವಂತೆ ನಿಯಂತ್ರಣವನ್ನು ಹೊಂದುವಂತೆ ಮಾಡುವುದು, ಕೃಷಿಯಲ್ಲಿ ಮಹಿಳೆಯರ ಜ್ಞಾನ ಹೆಚ್ಚಿಸುವ ಪ್ರಯತ್ನ ಮಾಡಲಾಗುವುದು.

೯. ರಾಷ್ಟ್ರೀಯ ಮಹಿಳಾ ನಿಧಿ (ರಾಷ್ಟ್ರೀಯ ಮಹಿಳಾ ಕೋಶ್)(RMK): ಅತ್ಯಂತ ಕಡಿಮೆ ಆದಾಯ ಇರುವ ಮಹಿಳೆಯರಿಗೆ ಈ ನಿಧಿಯಿಂದ ಕಿರು ವ್ಯವಹಾರ ಪ್ರಾರಂಭಿಸಲು ಸಾಲ ಸೌಲಭ್ಯ ನೀಡಲಾಗುತ್ತಿದೆ.

೧೦. ರಾಷ್ಟ್ರೀಯ ಮಹಿಳಾ ಸಬಲೀಕರಣ ಪ್ರಾಧಿಕಾರ: ೨೦೧೦ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭ ಈ ಪ್ರಾಧಿಕಾರವನ್ನು ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ ಮತ್ತು ಸರಕಾರೀ ಇಲಾಖೆಗಳ ವಿವಿಧ ಯೋಜನೆಗಳನ್ನು ಸಮನ್ವಯಗೊಳಿಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು.

ಮಹಿಳೆಯರ ಯೋಗ ಕ್ಷೇಮಕ್ಕಾಗಿ, ಅಭಿವೃದ್ಧಿಗಾಗಿ ಇರುವ ಎಲ್ಲಾ ಸೇವೆಗಳನ್ನು ಒಂದೇ ಕೇಂದ್ರದಿಂದ ಒದಗಿಸುವ ವ್ಯವಸ್ಥೆ, ಈ ಪ್ರಾಧಿಕಾರ ಮಾಡುವುದರಿಂದ “ಮಿಷನ್ ಪೂರ್ಣ ಶಕ್ತಿ” ಎಂದೂ ಇದಕ್ಕೆ ನಾಮಕರಣ ಮಾಡಲಾಗಿದೆ. ರಾಷ್ಟ್ರೀಯ ಸಂಪನ್ಮೂಲ ಕೇಂದ್ರವನ್ನು (ನ್ಯಾಷನ ರಿಸೋರ್ಸ್ ಸೆಂಟರ್) ಇದಕೋಸ್ಕರ ಪ್ರಾರಂಭ ಮಾಡಲಾಗಿದ್ದು, ವಿವಿಧ ಯೋಜನೆಗಳ, ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ತಂತ್ರಜ್ಞಾನ, ತಿಳುವಳಿಕೆ, ಸಂಶೋಧನೆಗಳ ಅಂಕಿ ಅಂಶಗಳು ಮತ್ತು ಲಿಂಗತಾರತಮ್ಯ, ಲಿಂಗನುಪಾತ ವಿಚಾರಕ್ಕೆ ಸಂಬಂಧಿಸಿದ ವಿಚಾರಗಳು. ಹೀಗೆ ಸಮಗ್ರ ವಿಚಾರಗಳು ಈ ಕೇಂದ್ರದಲ್ಲಿ ಲಭ್ಯವಿರುತ್ತದೆ. ಅಲ್ಲದೇ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಪ್ರಾಧಿಕಾರಿಗಳಿಗೆ ನಿರ್ದೇಶನ ಮತ್ತು ಸೇವೆಯನ್ನು ನೀಡುವ ಪ್ರಮುಖ ಸಂಸ್ಥೆಯಾಗಿದೆ. ಈ ಸಂಸ್ಥೆಯು ಕೆಳಗಿನ ವಿಚಾರಗಳ ಬಗ್ಗೆ ಕರ್ತವ್ಯ ನಿರ್ವಹಿಸುತ್ತಿದೆ.

  • ಮಹಿಳಾ ದೌರ್ಜನ್ಯ.
  • ಲಿಂಗ ತಾರತಮ್ಯ.
  • ಬಾಲ್ಯವಿವಾಹ.
  • ಅಕ್ರಮ ಸಾಗಣಿಕೆ.
  • ಆರೋಗ್ಯ ಮತ್ತು ಶೌಚಾಲಯ.
  • ಕುಡಿಯುವ ನೀರು.
  • ಟೆಂಡರ್ ಬಜೆಟಿಂಗ್.
  • ಖಡ್ಡಾಯ ಶಿಕ್ಷಣ ಹಕ್ಕು.
  • ಮಹಿಳಾ ರಾಜಕಾರಣೀಗಳು.
  • IEC ಚಟುವಟಿಕೆ.
  • ಒತ್ತಡ/ಶ್ರಮ ಕಡಿಮೆ ಮಾಡುವುದು.
  • ಆರ್ಥಿಕ ಸೇರ್ಪಡೆ.
  • ಜೀವನೋಪಾಯ ಚಟುವಟಿಕೆ/ತರಬೆತಿ ಕಾರ್ಯಕ್ರಮ.

೧೧. ನ್ಯಾಶನ ಬಯೋಫ್ಯೂಯೆಲ್ ಅಭಿವೃದ್ಧಿ ಯೋಜನೆ: ಈ ಯೋಜನೆಯ ಮಹಿಳೆಯರ ಕ್ಷೇಮಕ್ಕಾಗಿ ಇರುವುದು. ಜೆವಿಕ ಅನಿಲ ಸ್ಥಾನದ ರಚನೆಗಾಗಿ ಕೇಂದ್ರಸರಕಾರ ಹಾಗೂ ರಾಜ್ಯ ಸರಕಾರಗಳಿಂದ ಅನುದಾನ ರೂ.೧೧,೦೦೦/- ಲಭ್ಯವಿದೆ.

೧೨. ನಿರ್ಮಲ್ ಭಾರತ್ ಅಭಿಯಾನ: ಕೇಂದ್ರ ಸರಕಾರದ “ಟೋಟಲ್ ಸ್ಯಾನೀಟೇಶ ಕ್ಯಾಂಪ್” ಯೋಜನೆಯನ್ನು ಮರು ನಾಮಾಕರಣ “ನಿರ್ಮಲ್ ಭಾರತ್ ಅಭಿಯಾನ” ಎಂದು ಮಾಡಲಾಯಿತು. ಈ ಯೋಜನೆಯಡಿಯಲ್ಲಿ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ರೂ.೧೨,೦೦೦/ ಮತ್ತು ಪರಿಶಿಷ್ಠ ಜಾತಿ/ಪಂಗಡದ ಕುಟುಂಬಗಳಿಗೆ ರೂ.೧೫,೦೦೦/- ಮೊತ್ತ ಅನುದಾನ ನೀಡಲಾಗುವುದು. ಜೊತೆಯಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ, ಅಂಗನವಾಡಿಗಳ ಮೂಲಕ ಶೌಚಾಲಯ ಬಳಕೆ ಬಗ್ಗೆ ಮತ್ತು ನೆರ್ಮಲ್ಯ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಇತರ ಯೋಜನೆಗಳು

೧೩. ಜನ್ ಧನ್ ಯೋಜನೆ: ಕೇಂದ್ರ ಸರಕಾರವು ಪ್ರತಿಯೊಂದು ಕುಟುಂಬವನ್ನು ಆರ್ಥಿಕ ಸೇರ್ಪಡೆ ಮಾಡಿಸುವ ನಿಟ್ಟಿನಲ್ಲಿ “ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆ ತೆರೆಯುವ ವಿಶೇಷ ಯೋಜನೆಯನ್ನು ಅಗ ೨೦೧೪ ರಲ್ಲಿ ಜಾರಿಗೆ ತಂದಿತು. ಈ ಯೋಜನೆಯನ್ನು ಅತ್ಯಂತ ಸರಳ ಕೆ.ವೆ.ಸಿ ದಾಖಲೆಗಳನ್ನು ಒದಗಿಸಿ ಯಾವುದೇ ಆರಂಭಿಕ ಮೊತ್ತ ಜಮೆ ಮಾಡದೇ ಝೀರೋ ಬ್ಯಾಲೆನಲ್ಲಿ ನಲ್ಲಿ ಖಾತೆ ಪ್ರಾರಂಭಿಸಬಹುದಾಗಿದೆ. ಈ ಖಾತೆ ತೆರೆದಲ್ಲಿ ಸದಸ್ಯರಿಗೆ ರೂ. ೧ ಲಕ್ಷ ತನಕ ಅಪಘಾತ ವಿಮೆ ಮತ್ತು ರೂ.೩೦,೦೦೦/- ಜೀವ ವಿಮೆಯ ಸೌಲಭ್ಯ ದೊರಕುತ್ತದೆ. ಅಲ್ಲದೇ ಖಾತೆದಾರರು ಮಹಿಳೆಯರಾಗಿದ್ದಲ್ಲಿ, ಆರು ತಿಂಗಳ ನಂತರ ರೂ.೫,೦೦೦/- ತನಕ ಓವg ಡ್ರಾಫಟ್ ಸೌಲಭ್ಯ ಸಿಗುತ್ತದೆ. ಸರಕಾರದಿಂದ ದೊರೆಕುವ ಸೌಲಭ್ಯಗಳು ನೇರವಾಗಿ ಸದಸ್ಯರ ಈ ಖಾತೆಗೆ ವರ್ಗಾವಣೆಗೊಳ್ಳುತ್ತದೆ.

೧೪. “ಬೆಟಿ ಬಚಾವೋ ಬೆಟಿ ಪಡಾವೋ” ಆಂದೋಲನವು ಕೇಂದ್ರಸರಕಾರದ ನೂತನ ಕಾರ್ಯಕ್ರಮ. ದೇಶದಲ್ಲಿ ಲಿಂಗಾನುಪಾತ ಕುಸಿದಿರುವ ಕಾರಣದಿಂದಾಗಿ ಹೆಣ್ಣು ಮಕ್ಕಳ/ಮಹಿಳೆಯರ/ಅಬಾಲ ವೃದ್ಧೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರಗಳಿಂದಾಗಿ ಭವಿಷ್ಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣದ ಆದ್ಯತೆ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗಳು ಜಂಟಿಯಾಗಿ ಅನುಷ್ಠಾನ ಮಾಡಲಾಗುವುದು. ಹೆಣ್ಣು ಮಗು ಹುಟ್ಟಿದಾಗ ಸಂಭ್ರಮ ಆಚರಣೆ ಮಾಡುವುದು ಮತ್ತು ಅವಳ ವಿದ್ಯೆಗೆ ಆದ್ಯತೆ ನೀಡುವಂತೆ ಮಾಡುವುದು, ಈ ಬಗ್ಗೆ ತೀವ್ರ ತರವಾದ ತಿಳುವಳಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಲಿಂಗನುಪಾತ ಕಡಿಮೆ ಇರುವ ಜಿನ್ಯಗಳನ್ನು ಆಯ್ಕೆ ಮಾಡಿ ನಿರಂತರ ಮಾಹಿತಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತೆ ಮಾಡುವುದು, ಇವೇ ಮೊದಲಾದ ಕಾರ್ಯಕ್ರಮಗಳನ್ನು ಈ ಯೋಜನೆ ಒಳಗೊಂಡಿರುತ್ತದೆ.
೧೫. ಸುಕನ್ಯ ಸಮೃದ್ಧಿ ಯೋಜನೆ: ಹತ್ತು ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆಯುವ ಹೊಸ ಯೋಜನೆಯನ್ನು ಕೇಂದ್ರಸರಕಾರ ಆರಂಭಿಸಿದೆ. ಪ್ರತೀ ವರ್ಷ ಕನಿಷ್ಟ ರೂ.೧,೦೦೦/- ಮೊತ್ತ ಗರಿಷ್ಟ ರೂ.೧.೫ ಲಕ್ಷ ಈ ಖಾತೆಗೆ ಜಮಾ ಮಾಡಿದರೆ ಪ್ರಸ್ತುತ ೯.೧% ಬಡ್ಡಿದರ ನೀಡಲಾಗುತ್ತದೆ. ಮಗುವಿಗೆ ೨೧ ವರ್ಷ ಆದ ನಂತರ ಖಾತೆಯನ್ನು ಮುಚ್ಚ ಬಹುದಾಗಿದೆ. ಮತ್ತು ಮಗುವಿಗೆ ೧೮ ವರ್ಷ ನಂತರ ಖಾತೆಯಲ್ಲಿ ಜಮೆ ಇರುವ ೫೦% ಮೊತ್ತ ಶಿಕ್ಷಣಕ್ಕಾಗಿ ಹಿಂಪಡೆಯಬಹುದು.
೧೬. ಪ್ರಧಾನ ಮಂತ್ರಿ ಜೀವ ಜ್ಯೋತಿ ಭಿಮಾ ಯೋಜನೆ (PMJJBY): ಈ ಯೋಜನೆಯ ಪ್ರಕಾರ ಬ್ಯಾಂಕ್ ಖಾತೆ ಹೊಂದಿರುವಂತಹ ಎಲ್ಲಾರಿಗೆ ಅನ್ವಯವಾಗುತ್ತದೆ. ರೂ.೩೮೦/- ಪ್ರತೀ ವರ್ಷಕ್ಕೆ ಪ್ರಿಮಿಯಂ ಮೊತ್ತ ಖಾತೆಯಿಂದ ಈ ಯೋಜನೆಗೆ ವರ್ಗಾವಣೆಯಾಗುತ್ತದೆ. ಈ ವಿಮಾದಾರರು ಯಾವುದೇ ಕಾರಣಕ್ಕೆ ಮರಣ ಹೊಂದಿದ ಸಂದರ್ಭದಲ್ಲಿ ರೂ. ೨ ಲಕ್ಷ ವಿಮೆ ಮೊತ್ತ ಸಿಗುತ್ತದೆ. ೧೮ ರಿಂದ ೫೦ ವರ್ಷದೊಳಗಿನ ಎಲ್ಲರೂ ಮಾಡಬಹುದು. ಈ ವಿಮೆಯು ಒಂದು ವರ್ಷಕ್ಕೆ ಮಾತ್ರ ಅನ್ವಯವಾಗುವುದು. ಉದಾರಹಣೆಗೆ: ೨೪.೦೫.೨೦೧೫ರ ದಿನಾಂಕದಂದು ವಿಮೆ ಮಾಡಿಸಿದಲ್ಲಿ, ೨೩.೦೫.೨೦೧೬ರ ತನಕ ಮಾತ್ರ ವಿಮೆ ಚಾಲ್ತಿಯಲ್ಲಿರುವುದು. ಬ್ಯಾಂಕ್ನಲ್ಲಿ ಈ ವಿಮೆಯ ಅರ್ಜಿ ಲಭ್ಯವಿರುವುದು.

೧೭. ಪ್ರಧಾನ ಮಂತ್ರಿ ಜೀವ ಸುರಕ್ಷಾ ಯೋಜನೆ((PMJSY): ಈ ಯೋಜನೆಯೂ ಕೂಡ ಬ್ಯಾಂಕ್ ಉಳಿತಾಯ ಖಾತೆ ಹೊಂದಿರುವ ಸದಸ್ಯರಿಗೆ ಅನ್ವಯಿಸುತ್ತದೆ. ವಯೋಮಿತಿ ೧೮ ರಿಂದ ೭೦ ವರ್ಷ ಆಗಿರುವುದೇ. ಇದರ ಪ್ರಕಾರ ಸದಸ್ಯರು ಅಪಘಾತದಲ್ಲಿ ಮರಣ ಹೊಂದಿದಲ್ಲಿ/ಎರಡು ಕೆ/ಎರಡು ಕಾಲು/ಎರಡು ಕಣ್ಣುಗಳನ್ನು ಕಳೆದುಕೊಂಡಲ್ಲಿ ರೂ. ೨ ಲಕ್ಷ ಪರಿಹಾರ ಧನವಿರುತ್ತದೆ. ಇದಕ್ಕೆ ನೀಡಬೆಕಾದ ಮೊತ್ತ ರೂ. ೧೨ ನೇರವಾಗಿ ಬ್ಯಾಂಕ್ ಖಾತೆಯಿಂದ ಜಮೆ ಮಾಡಿ ಕೊಳ್ಳಲಾಗುತ್ತದೆ.

೧೮. ಅಟಲ್ ಪಿಂಚಣಿ ಯೋಜನೆ: ಇದು ರಾಷ್ರೀಯ ಪಿಂಚಣಿ ಯೋಜನೆಯಾಗಿದ್ದು-ಪ್ರಸ್ತುತ ಅಟಲ್ ಪಿಂಚಣಿ ಎಂದು ಮರು ನಾಮಕರಣಗೊಂಡಿದೆ. ಕೂಲಿಕಾರ್ಮಿಕರು, ಇತರ (ಪಿಂಚಣಿ ಸೌಲಭ್ಯ ಕೊಳ್ಳಗಾದ) ಸದಸ್ಯರು ಈ ಯೋಜನೆಗೆ ಸೇರಬಹುದು. ವಯೋಮಿತಿ ೧೮ ರಿಂದ ೪೦ ವರ್ಷ ಆಗಿರುತ್ತದೆ. ಪ್ರತೀ ವರ್ಷವು ಪಿಂಚಣಿ ಖಾತೆಗೆ ಕನಿಷ್ಠ ರೂ.೧,೦೦೦/- ಗರಿಷ್ಠ ೧೨,೦೦೦/- ಮೊತ್ತ ಜಮೆ ಮಾಡಬೆಕು. ಕನಿಷ್ಠ ಇಪತ್ತು ವರ್ಷಗಳ ಕಾಲ ನಿರಂತರವಾಗಿ ಮೊತ್ತ ಜಮೆ ಮಾಡಿದರೆ ೬೦ ವರ್ಷ ಪ್ರಾಯದ ನಂತರ ಪಿಂಚಣಿ ಸೌಲಭ್ಯ ಪಡೆಯಬಹುದು. ಇಪ್ಪತ್ತು ವರ್ಷಗಲಲ್ಲಿ ಸದಸ್ಯರ ಪಿಂಚಣಿ ಖಾತೆಯಲ್ಲಿ ಕ್ರೋಢಿಕರಣವಾದ ಮೊತ್ತದ ಆಧಾರದಲ್ಲಿ ನೀಡಲಾಗುವ ಮಾಸಿಕ ಪಿಂಚಣಿ ಮೊತ್ತ ನಿರ್ಧರಿತವಾಗುತ್ತದೆ. ಪ್ರಥಮ ೫ ವರ್ಷದಲ್ಲಿ ಕೇಂದ್ರ ಸರಕಾರವೂ ಕೂಡ ಗರಿಷ್ಠ ರೂ.೧,೦೦೦/- ಮೊತ್ತ ಸದಸ್ಯರ ಪಿಂಚಣಿ ಖಾತೆಗೆ ಜಮೆ ಮಾಡುತ್ತದೆ.

ವೇತನ ಯೋಜನೆಗಳು:
೧) ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ: ಇದು ರೂ.೧೧,೮೦೦/- ಕ್ಕಿಂತ ಕಡಿಮೆ ಆದಾಯ ಇರುವ ಕುಟುಂಬಕ್ಕೆ ಮಾಸಿಕ ರೂ.೫೦೦/- ವೇತನ ನೀಡಲಾಗುವುದು.

೨) ಸಂಧ್ಯಾ ಸುರಕ್ಷಾ ಯೋಜನೆ: ಕರ್ನಾಟಕ ಘನ ಸರಕಾರವು ೨೦೦೭ನೇ ಇಸವಿಯಿಂದ ರೂ.೧,೦೦೦ ಮಾಸಿಕಈ ವೇತನ ಪ್ರಾರಂಭಿಸಿತು. ಇದು ಮೇಲೆ ಉಲ್ಲೇಖಿಸಿದ ರೀತಿಯಲ್ಲಿಯೇ ಅನುಷ್ಠಾನ ಆಗುತ್ತಿದೆ. ಆದರೆ ಇಲ್ಲಿ ವಾರ್ಷಿಕ ಆದಾಯ ರೂ.೨೦,೦೦೦/- ಕ್ಕಿಂತ ಕಡಿಮೆ ಇರುವವರಿಗೆ ಮಾತ್ರ ಅನ್ವಯಿಸುವುದು.

೩) ನಿರ್ಗತಿಕ ವಿಧವಾ ವೇತನಾ: ೧೮ ವರ್ಷಕ್ಕಿಂತ ಅಧಿಕ ವಯೋಮಿತಿಯ ವಿಧವೆಯರಿಗೆ ಇದು ಅನ್ವಯಿಸುತ್ತದೆ. ರೂ.೪೦೦/- ಮಾಸಿಕ ವೇತನ ನೀಡಲಾಗುತ್ತದೆ. ಒಂದು ವೇಳೆ ಆಕೆ ಇನ್ನೊಂದು ಮದುವೆ ಆದಲ್ಲಿಯೂ ಮಕ್ಕಳು ಅವಳನ್ನು ನೋಡಿಕೊಳ್ಳುವ ಹಂತಕ್ಕೆ ಬಂದಾಗ ಅಥವಾ ಆಕೆಯ ಆದಾಯ ವರ್ಷಕ್ಕೆ ರೂ.೧೧,೮೦೦/- ಕ್ಕಿಂತ ಹೆಚ್ಚಾದರೆ ಈ ಸೌಲಭ್ಯ ಒದಗಿಸಲಾಗುವುದಿಲ್ಲ.

೪) ಅಂಗವಿಕಲ ಮಾಸಾಶನ: ವಾರ್ಷಿಕ ಆದಾಯ ರೂ.೬,೦೦೦/- ಕ್ಕಿಂತ ಆದಾಯ ಕಡಿಮೆ ಇರುವ ಮತ್ತು ೭೫% ಅಂಗವೆಕಲ್ಯತೆ ಇದ್ದರೆ ರೂ.೧,೦೦೦/- ಮಾಸಾಶನ ನೀಡಲಾಗುವುದು.

೫) ಮದುವೆಯಾಗದ ಮದ್ಯವಯಸ್ಸಿನ ಮಹಿಳೆಯರಿಗೆ (೪೫-೬೦ ವರ್ಷ): ರೂ.೧,೦೦೦/- ದಂತೆ ವೇತನ ನೀಡಲಾಗುತ್ತಿದೆ. ಇದು ಮಹಿಳೆಯರಿಗೆ ಮಾತ್ರ. ಇವರು ಇತರ ಯಾವುದೇ ಪಿಂಚಣಿ ಯೋಜನೆಯಲ್ಲಿ ನೋದಾವಣೆಗೊಂಡಿರಬಾರದು.


ಉಪಸಂಹಾರ:

ಹೀಗೆ ಸರಕಾರದ ವಿವಿಧ ಇಲಾಖೆಗಳಿಂದ, ನಿಗಮಗಳಿಂದ ಬಡ ಕುಟುಂಬಗಳ ಸ್ವಾವಲಂಬಿಗಳಾಗುವಂತೆ ಹಲವಾರು ಆರ್ಥಿಕ ಸೌಲಭ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಕೆಗೊಳ್ಳುತ್ತಿವೆ. ಜಲಾನಯನ ಇಲಾಖೆಯಿಂದ ಸೌಲಭ್ಯಗಳು, ತೋಟಾಗಾರಿಕಾ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳಿಂದ ಸೌಲಭ್ಯಗಳು ಅಲ್ಲದೇ ಅಲ್ಪ ಸಂಖ್ಯಾತರ ನಿಗಮ, ಅಂಬೆಡ್ಕರ್ ಅಭಿಮಾನಿ ನಿಗಮ, ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ, ಮಹಿಳಾ ಅಭಿವೃದ್ಧಿ ನಿಗಮ, ಕರ್ನಾಟಕ ಸಣ್ಣ ಕೆಗಾರಿಕೆ ಅಭಿವೃದ್ಧಿ ನಿಗಮ ಹೀಗೆ ವಿವಿಧ ನಿಗಮಗಳ ಮೂಲಕ ಸೌಲಭ್ಯಗಳು ಜಾರಿಯಲ್ಲಿದೆ. ಇಷ್ಟೆಲ್ಲ ಸೌಲಭ್ಯಗಳಿದ್ದು ಇಂದಿಗೂ ಜನರಲ್ಲಿ ಅಸಹಾಯಕತೆಯ ಭಾವನೆ ಯಾಕೆ ಇದೆ? ಹಲವಾರು ಉತ್ತರಿಸಲಾಗದ ಪ್ರಶ್ನೆಗಳು! ನಿಜವಾಗಿಯೂ ಈ ಸೌಲಭ್ಯಗಳು ತಲುಪಬೆಕಾದಲ್ಲಿ ತಲುಪುತ್ತಿದೆಯೇ? ಈ ಸೌಲಭ್ಯಗಳಲ್ಲಿ ಡೂಪ್ಲಿಕೇಷ ಆಗುತ್ತಿಲ್ಲವೇ? ಒಂದು ವೇಳೆ ಈ ಎಲ್ಲಾ ಯೋಜನೆಗಳು ತಲುಪಬೆಕಾದಲ್ಲಿ ತಲುಪಿದರೆ ಮುಂದಕ್ಕೆ ಹೊಸ ಯೋಜನೆಗಳ ಅವಶ್ಯಕತೆ ಇದೆಯೇ? ಜನರು ಬಿಟ್ಟು ಅವಲಂಬಿತರಾಗುತ್ತಿದ್ದಾರೆಯೇ? ಸ್ವಾವಲಂಬಿಗಳಾಗುವುದು ಯಾವಾಗ? ನಿಜವಾಗಿಯೂ ಈ ಎಲ್ಲಾ ಕಾರ್ಯಕ್ರಮಗಳ ಮಾಹಿತಿಯು ಸಾಮಾನ್ಯ ಜನರಲ್ಲಿ, ಗ್ರಾಮಗಳಲ್ಲಿ, ಕುಟುಂಬಗಳಲ್ಲಿ ಇದೆಯೇ? ಮಾಹಿತಿ ತಿಳಿದ ಮೇಲೂ ಈ ಸೌಲಭ್ಯಗಳನ್ನು ಪಡೆಯಲು ಅವರು ಶಕ್ತರೇ?
ಬಹುಶ” ಸೌಲಭ್ಯಗಳನ್ನು ಪಡಕೊಳ್ಳುವಲ್ಲಿ ಜನಸಾಮಾನ್ಯರ ಸಾಮರ್ಥ್ಯವನ್ನು ಹೆಚ್ಚಿಸ ಬೆಕಾಗಿದೆ. ಅವರ ದನಿಯನ್ನು ಬಲಗೊಳಿಸ ಬೆಕಾಗಿದೆ. ಜಾಗೃತಿಯನ್ನು ಮೂಡಿಸಬೆಕಾಗಿದೆ.
ಸರಕಾರೀ ಸೌಲಭ್ಯಗಳ ಸಾರ್ಥಕತೆಯು ಜನರನ್ನು ತಲುಪುವಲ್ಲಿ ಇದೆ. ಅವರ ಜೀವನದಲ್ಲಿ ಪರಿವರ್ತನೆಯನ್ನು ತರುವಲ್ಲಿ ಇದೆ.