ಶುಕ್ರವಾರ, ಆಗಸ್ಟ್ 17, 2018

ಕನ್ನಡ ಗೀತೆಗಳು

 ಮಂಜುನಾಥ ಕೆ ಎಂ




ಬಾ ಚಕೋರಿ...

- ಕುವೆಂಪು
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ ||
ಜೊನ್ನ ಜೇನಿಗೆ ಬಾಯಾರಿದೆ ಚಕೋರ ಚುಂಬನ 

ಚಂದ್ರಿಕ ಮಧುಪಾನ ಮತ್ತ 
ಪೀನ ಕುಂಭ ಪಯೋಧವಿತ್ತ 
ವಕ್ಷ ಪರಿಲಂಬನ ನಿಮಿತ್ತ ನಿರಾವಲಂಬನ 

ಚರಣ ನೂಪುರ ಕಿಂಕಿಣಿ ಕೊಳ 
ಮದನ ಸಿಂಜಿನಿ ಜನಿತ ನಿಪ್ಪಾಣ 
ಚಿತ್ತ ರಂಜನಿ ತಳುವ ದೀಕ್ಷಣ 
ಚಂದ್ರ ಮಂಚಕೆ ಬಾ ಚಕೋರಿ 

ತೆರೆಯ ಚಿಮ್ಮಿಸಿ ನೊರೆಯ ಹೊಮ್ಮಿಸಿ 
ಕ್ಷೀರ ಸಾಗರದಲ್ಲಿ ತೇಲುವ 
ಬಾಗುಚಂದ್ರನ ತೂಗು ಮಂಚಕೆ 
ಬಾ ಚಕೋರಿ ಬಾ ಚಕೋರಿ 
ಎದೆ ಹಾರಿದೆ ಬಾಯಾರಿದೆ ಚಕೋರ ಚುಂಬನ

ನಿಕುಂಜ ರತಿವನ ಮದನ ಯಾಗಕೆ 
ಅನಂಗರಕ್ತಿಮ ಬಿಂಬ ಭೋಗಕೆ 
ಕಾಂಕ್ಷಿಯಾಗಿದೆ ನಗ್ನ ಯೋಗಕೆ 
ಇಕ್ಷು ಮಂಚ ರಸಾಗ್ನಿ ಪಕ್ಷಿಯ ಅಚಂಚು ಚುಂಬನ 

ನೀಡು ಶಿವ ನಿಡದಿರೂ...

- ಪಂಚಾಕ್ಷರಿ ಗವಾಯಿ


ನೀಡು ಶಿವ ನಿಡದಿರೂ ಶಿವ 
ಬಾಗುಹುದು ನನ್ನ ಕಾಯ ||
ನಾನೇಕೆ ಅಂಜಲಿ ನೀ ನನ್ನ ಅಂಬಲಿ 

ಶೃಂಗಾರ ಕೃತಕ ಬಂಗಾರ ಕ್ಷಣಿಕ 
ಬಾಳಲ್ಲಿ ಬಡಿವಾರವೇಕೆ ?
ನೀ ನಿತ್ತ ಕಾಯ ನಿನ್ನ ಕೈಲೆ ಮಾಯ
ಆಗೋದು ಹೋಗೋದು ನಾ ಕಾಣೆನೆ 

ಮಾಣಿಗೆ ಕೊಟ್ಟರು ಮರದಡಿಯೇ ಇಟ್ಟರು
ನಾನಂತು ನಿನ್ನನ್ನಲಾರೆ 
ಸಾರಂಗ ಮನಕೆ ನೂರಾರು ಬಯಕೆ 
ಮುಂದಿಟ್ಟು ಉಣಿಸೋದು ನಾ ಕಾಣೆನೆ 


ಮೋಡದ ಒಳಗೆ...

- ವಿ. ನಾಗೇಂದ್ರ ಪ್ರಸಾದ್
ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲಿ ಕಾದು ನಿಂತಿದೆ ಭೂಮಿಗೆ ಬರಲು 
ನನ್ನೊಳಗೊಳಗೆ ಒಲವಿನ ಯೋಗ 
ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು 
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ 
ನಿನ್ನೇ ಪ್ರೀತಿ ಮಾಡುವೆ ನಾನು ಇಸ್ಟೇ ಹಂಬಲ || 

ನಿಂತಲಿ ನಾ ನಿಲಲಾರೆ ಎಲ್ಲರು ಹೀಗಂತಾರೆ 
ಏತಕೋ ನಾ ಕಾಣೆನು ಈ ತಳಮಳ 
ಪ್ರೀತಿ ನನ್ನ ಬಲೆಯೊಳಗು
ನಾನೆ ಪ್ರೀತಿ ಬಲೆಯೊಳಗು
ಕಾಡಿದೆ ಕಂಗೆಡಿಸಿದೆ ಸವಿ ಕಳವಳ 
ಖಾಲಿ ಜೇಬಿನ ಮಜುನು ಪ್ರೀತಿ ಒಡೆಯನಾಗುವೆನು 
ನಿನ್ನಾ ಬಿಟ್ಟು ಹೇಗಿರಬೇಕು ಹೇಳೆ ಪ್ರಾಣವೆ?
  
ನಾನು ನಿನ್ನಾ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
ನನ್ನನು ಬರ ಸೆಳೆಯುವ ಕಲೆ ನಿನ್ನದು 
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ 
ಅದ್ಭುತ ಈ ಅತಿಶಯ ನಾ ತಾಳೆನು 
ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ 
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ


ವಿಶ್ವ ವಿನೂತನ...

- ಚೆನ್ನವೀರ ಕಣವಿ
ವಿಶ್ವ ವಿನೂತನ ವಿದ್ಯಾ ಚೇತನ 
ಸರ್ವ ಹೃದಯ ಸಂಸ್ಕಾರಿ, ಜಯ ಭಾರತಿ ||

ಕರುನಾಡ ಸರಸ್ವತಿ ಗುಡಿ ಗೋಪುರ ಸುರ ಶಿಲ್ಪಿ ಕಲಾಕೃತಿ 
ಕೃಷ್ಣೆ ತುಂಗೆ ಕಾವೇರಿ ಪರಿತ್ರಿತ ಕ್ಷೇತ್ರ ಮನೋಹಾರಿ 

ಗಂಗ ಕದಂಬ ರಾಷ್ಟ್ರಕೂಟ ಬಲ ಚಾಲುಕ್ಯ ಹೊಯ್ಸಳ ಬಲ್ಲಾಳ 
ಹಕ್ಕ ಬುಕ್ಕ ಪುಲಕೇಶಿ ವಿಕ್ರಮರ ಚೆನ್ನಮ್ಮಾಜಿಯ ವೀರಶ್ರೀ 

ತ್ಯಾಗ ಭೋಗ ಸಮಯೋಗದ ದೃಷ್ಟಿ ಬೆಳವುಳ ಮಲೆಕರೆ ಸುಂದರ ಶೃಷ್ಟಿ 
ಗ್ಯಾನದ ವಿಜ್ಞಾನದ ಕಲೆ ಐಸಿರಿ ಸಾರೋದಯ ಧಾರಾ ನಗರಿ 

ಅರಿವೇ ಗುರುನುಡಿ ಜ್ಯೋತಿರ್ಲಿಂಗ ದಯವೇ ಧರ್ಮದ ಮೂಲ ತರಂಗ 
ವಿಶ್ವ ಭಾರತಿಗೆ ಕನ್ನಡದಾರತಿ ಮೊಳಗಲಿ ಮಂಗಳ ಜಯಬೇರಿ 


ಹೊತ್ತಿತೊ ಹೊತ್ತಿತೊ ಕನ್ನಡದದೀಪ

 
ಹೊತ್ತಿತೊ ಹೊತ್ತಿತೊ ಕನ್ನಡದ ದೀಪ
ಮುಗಿಯಿತೊ ಮುಗಿಯಿತೊ ಶತಮಾನಗಳ ಶಾಪ ||

ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ 
ಹರ್ಷ ಉಕ್ಕಿಸುವಂತೆ ಶೋಭಾಯಮಾನ
...
ಕನ್ನಡದ ಮನೆಯಾಗೆ ಜ್ಯೊತಿರ್ನಿಧಾನ
ಕನ್ನಡದ ಪ್ರಾಣ ಕನ್ನಡ ಮಾನ ||

ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿದನು ನಿಡು ಬತ್ತಿಯಾಗಿ
ಧರಿಸುವವರು ಬೇಕಿದನು ಸಿರಿ ಹಣತೆಯಾಗಿ
ನನ್ನ ಉಸಿರಾಗಿ ಧರ್ಮಕ್ಕೆ ಬಾಗಿ ||

ಚಿರಕಾಲ ಬೆಳಗಲಿ ಕನ್ನದಡ ದೀಪ
ಜನರೆಲ್ಲರ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕ್ಕೆ ಬಲವಾಗಿ ಭವ್ಯಪ್ರದೀಪ 
ಕಳೆಯುತ್ತ ತಾಪ ಬೆಳೆಸುತ್ತ ಸೈಪ ||

ತಿಳಿಮುಗಿಲ ತೊಟ್ಟಿಲಲಿ...

ತಿಳಿಮುಗಿಲ ತೊಟ್ಟಿಲಲಿ...

-  ಎಸ್.ವಿ. ಪರಮೇಶ್ವರ ಭಟ್ಟ 

ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ ತೂಗುತ್ತಿತ್ತು |
ಗರಿ ಮುದುರಿ ಮಲಗಿದ್ದ ಹಕ್ಕಿಗೂಡುಗಳಲ್ಲಿ
ಇರುಳು ಹೊಂಗನಸೂಡಿ  ಸಾಗುತ್ತಿತ್ತು ||

ಮುಗುಳಿರುವ ಹೊದರಿನಲಿ ನರುಗ೦ಪಿನುದರದಲಿ
ಜೇನುಗನಸಿನ ಹಾಡು ಕೇಳುತ್ತಿತ್ತು |
ತುಂಬು ನೀರಿನ ಹೊಳೆಯೊಳಂಬಿಗನ ಕಿರುದೋಣಿ
ಪ್ರಸ್ಥಾನ ಗೀತೆಯನ್ನು ಹೇಳುತ್ತಿತ್ತು ||

ಬರುವ ಮುಂದಿನ ದಿನದ ನವನವೊದಯಕ್ಕಾಗಿ
ಪ್ರಕೃತಿ ತಪವಿರುವಂತೆ ತೋರುತ್ತಿತ್ತು |
ಶಾಂತ ರೀತಿಯಲಿರುಳು ಮೆಲ್ಲಮೆಲ್ಲನೆ ಉರುಳಿ
ನಾಳಿನ ಶುಭೋದಯ ಸಾರುತ್ತಿತ್ತು ||


ಇದೋ ನಿಮಗೆ ವಂದನೆ



ಕಾರ್ಗಿಲ್ಲಿನ ಗಡಿಗಳಲ್ಲಿ
ಸಿಡಿಗುಂಡಿಗೆ ಎದೆಯನೊಡ್ಡಿ
ಕಾದಾಡುವ ಕಲಿಗಳೇ
ತತ್ತರಿಸುವ ಎತ್ತರದಲಿ
ಧೈರ್ಯದ ಧ್ವಜವೆತ್ತಿ ನಡೆವ
ಪರಾಕ್ರಮದ ಕಿಡಿಗಳೇ
ಇದೋ ನಿಮಗೆ ವಂದನೆ
ಕೃತಜ್ಞತೆಯ ವಂದನೆ.
ಶ್ವೇತ ಶುಭ್ರ ಹಿಮಾಲಯದ
ಭವ್ಯ ಧವಳ ಭಿತ್ತಿಗಳಲಿ
ರಕ್ತಲಿಪಿಯ ಶಾಸನಗಳ
ಬರೆದ ಮಹಾ ಕಲಿಗಳೇ
ಇದೋ ನಿಮಗೆ ವಂದನೆ
ಕೃತಜ್ಞತೆಯ ವಂದನೆ
ದುರ್ಗಮ ಹಿಮ ಶಿಖರದಲ್ಲಿ
ಆಕ್ರಮಣವನೆದುರಿಸುತ್ತ
ಹುತಾತ್ಮರಾದ ಯೋಧರೇ
ಸ್ಪಂದಿಸುತಿದೆ ನಿಮ್ಮ ಹಿಂದೆ
ಕಂಬನಿಯಲಿ ಹೆಮ್ಮೆಯಲ್ಲಿ
ಈ ಅಖಂಡ ದೇಶವೇ
ಇದೋ ನಿಮಗೆ ವಂದನೆ
ಕೃತಜ್ಞತೆಯ ವಂದನೆ.

ಬಳೆಗಾರ ಚೆನ್ನಯ್ಯ...


ಬಳೆಗಾರ ಚೆನ್ನಯ್ಯ...

- ಕೆ. ಎಸ್. ನರಸಿಂಹಸ್ವಾಮಿ

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯೆ ದೊರೆಯೆ ?
ನವಿಲೂರ ಮನೆಯಿಂದ ನುಡಿಯೊಂದು ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ ||

ಮುಡಿದ ಮಲ್ಲಿಗೆಯರಳು ಬಾಡಿಲ್ಲ ರಾಯರೆ
ತೌರಿನಲಿ ತಾಯಿ ನಗುತಿಹರು
ಕುಡಿದ ನೀರಲುಗಿಲ್ಲ ಕೊರಗದಿರಿ ರಾಯರೆ
ಅಮ್ಮನಿಗೆ ಬಳೆಯ ತೊಡಿಸಿದರು

ಅಂದು ಮಂಗಳವಾರ ನವಿಲೂರ ಕೇರಿಯಲಿ
ಓಲಗದ ಸದ್ದು ತುಂಬಿತ್ತು
ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ
ಅಂಗಳದ ತುಂಬ ಜನವಿತ್ತು

ಹಬ್ಬದೂಟವನುಂಡು ಹಸೆಗೆ ಬಂದರು ತಾಯಿ
ಹೊಳೆದಿತ್ತು ಕೊರಳಿನಲಿ ಪದಕ
ಒಬ್ಬರೆ ಹಸೆಗೆ ಬಂದರು ತಾಯಿ ಬಿಂಕದಲಿ
ಕಣ್ತುಂಬ ನೋಡಿದೆನು ಮುದುಕ

ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ
ಸೆರಗಿನಲಿ ಕಣ್ಣೀರನೊರಸಿ
ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ
ದೀಪದಲಿ ಬಿಡುಗಣ್ಣ ನಿಲಿಸಿ

ಬೇಕಾದ ಹಣ್ಣಿಹುದು ಹೂವಿಹುದು ತೌರಿನಲಿ
ಹೊಸ ಸೀರೆ ರತ್ನದಾಭರಣ
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ
ನಿಮಗಿಲ್ಲ ಒಂದು ಹನಿ ಕರುಣ

ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರೆಳೆದು
ಕುದಿಯಬಾರದು ನನ್ನ ದೊರೆಯೆ
ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು
ಒಣಗಬಾರದು ಒಡಲ ಚಿಲುಮೆ

ಮುನಿಸು ಮಾವನ ಮೇಲೆ ಮಗಳೇನ ಮಾಡಿದಳು ?
ನಿಮಗೇತಕೆ ಕಲ್ಲು ಮನಸು ?
ಹೋಗಿ ಬನ್ನಿರಿ ಒಮ್ಮೆ ಕೈ ಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು





  ಇಂತಿ
               ಮಂಜುನಾಥ ಕೆ ಎಂ
  ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
            ಬಸವಪಟ್ಟಣ {ಚಿರಡೋಣಿ}

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ