ಮಂಜುನಾಥ ಕೆ ಎಂ
ಬಾ ಚಕೋರಿ...
ಜೊನ್ನ ಜೇನಿಗೆ ಬಾಯಾರಿದೆ ಚಕೋರ ಚುಂಬನ
ಚಂದ್ರಿಕ ಮಧುಪಾನ ಮತ್ತ
ಪೀನ ಕುಂಭ ಪಯೋಧವಿತ್ತ
ವಕ್ಷ ಪರಿಲಂಬನ ನಿಮಿತ್ತ ನಿರಾವಲಂಬನ
ಚರಣ ನೂಪುರ ಕಿಂಕಿಣಿ ಕೊಳ
ಮದನ ಸಿಂಜಿನಿ ಜನಿತ ನಿಪ್ಪಾಣ
ಚಿತ್ತ ರಂಜನಿ ತಳುವ ದೀಕ್ಷಣ
ಚಂದ್ರ ಮಂಚಕೆ ಬಾ ಚಕೋರಿ
ತೆರೆಯ ಚಿಮ್ಮಿಸಿ ನೊರೆಯ ಹೊಮ್ಮಿಸಿ
ಕ್ಷೀರ ಸಾಗರದಲ್ಲಿ ತೇಲುವ
ಬಾಗುಚಂದ್ರನ ತೂಗು ಮಂಚಕೆ
ಬಾ ಚಕೋರಿ ಬಾ ಚಕೋರಿ
ಎದೆ ಹಾರಿದೆ ಬಾಯಾರಿದೆ ಚಕೋರ ಚುಂಬನ
ನಿಕುಂಜ ರತಿವನ ಮದನ ಯಾಗಕೆ
ಅನಂಗರಕ್ತಿಮ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ
ಇಕ್ಷು ಮಂಚ ರಸಾಗ್ನಿ ಪಕ್ಷಿಯ ಅಚಂಚು ಚುಂಬನ
ನೀಡು ಶಿವ ನಿಡದಿರೂ...
- ಪಂಚಾಕ್ಷರಿ ಗವಾಯಿ
ನೀಡು ಶಿವ ನಿಡದಿರೂ ಶಿವ
ಬಾಗುಹುದು ನನ್ನ ಕಾಯ ||
ನಾನೇಕೆ ಅಂಜಲಿ ನೀ ನನ್ನ ಅಂಬಲಿ
ಶೃಂಗಾರ ಕೃತಕ ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರವೇಕೆ ?
ನೀ ನಿತ್ತ ಕಾಯ ನಿನ್ನ ಕೈಲೆ ಮಾಯ
ಆಗೋದು ಹೋಗೋದು ನಾ ಕಾಣೆನೆ
ಮಾಣಿಗೆ ಕೊಟ್ಟರು ಮರದಡಿಯೇ ಇಟ್ಟರು
ನಾನಂತು ನಿನ್ನನ್ನಲಾರೆ
ಸಾರಂಗ ಮನಕೆ ನೂರಾರು ಬಯಕೆ
ಮುಂದಿಟ್ಟು ಉಣಿಸೋದು ನಾ ಕಾಣೆನೆ
ಮೋಡದ ಒಳಗೆ...
ಒಂಟಿ ಕಾಲಲಿ ಕಾದು ನಿಂತಿದೆ ಭೂಮಿಗೆ ಬರಲು
ನನ್ನೊಳಗೊಳಗೆ ಒಲವಿನ ಯೋಗ
ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ
ನಿನ್ನೇ ಪ್ರೀತಿ ಮಾಡುವೆ ನಾನು ಇಸ್ಟೇ ಹಂಬಲ ||
ನಿಂತಲಿ ನಾ ನಿಲಲಾರೆ ಎಲ್ಲರು ಹೀಗಂತಾರೆ
ಏತಕೋ ನಾ ಕಾಣೆನು ಈ ತಳಮಳ
ಪ್ರೀತಿ ನನ್ನ ಬಲೆಯೊಳಗು
ನಾನೆ ಪ್ರೀತಿ ಬಲೆಯೊಳಗು
ಕಾಡಿದೆ ಕಂಗೆಡಿಸಿದೆ ಸವಿ ಕಳವಳ
ಖಾಲಿ ಜೇಬಿನ ಮಜುನು ಪ್ರೀತಿ ಒಡೆಯನಾಗುವೆನು
ನಿನ್ನಾ ಬಿಟ್ಟು ಹೇಗಿರಬೇಕು ಹೇಳೆ ಪ್ರಾಣವೆ?
ನಾನು ನಿನ್ನಾ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
ನನ್ನನು ಬರ ಸೆಳೆಯುವ ಕಲೆ ನಿನ್ನದು
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ
ಅದ್ಭುತ ಈ ಅತಿಶಯ ನಾ ತಾಳೆನು
ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ
ವಿಶ್ವ ವಿನೂತನ...
ಸರ್ವ ಹೃದಯ ಸಂಸ್ಕಾರಿ, ಜಯ ಭಾರತಿ ||
ಕರುನಾಡ ಸರಸ್ವತಿ ಗುಡಿ ಗೋಪುರ ಸುರ ಶಿಲ್ಪಿ ಕಲಾಕೃತಿ
ಕೃಷ್ಣೆ ತುಂಗೆ ಕಾವೇರಿ ಪರಿತ್ರಿತ ಕ್ಷೇತ್ರ ಮನೋಹಾರಿ
ಗಂಗ ಕದಂಬ ರಾಷ್ಟ್ರಕೂಟ ಬಲ ಚಾಲುಕ್ಯ ಹೊಯ್ಸಳ ಬಲ್ಲಾಳ
ಹಕ್ಕ ಬುಕ್ಕ ಪುಲಕೇಶಿ ವಿಕ್ರಮರ ಚೆನ್ನಮ್ಮಾಜಿಯ ವೀರಶ್ರೀ
ತ್ಯಾಗ ಭೋಗ ಸಮಯೋಗದ ದೃಷ್ಟಿ ಬೆಳವುಳ ಮಲೆಕರೆ ಸುಂದರ ಶೃಷ್ಟಿ
ಗ್ಯಾನದ ವಿಜ್ಞಾನದ ಕಲೆ ಐಸಿರಿ ಸಾರೋದಯ ಧಾರಾ ನಗರಿ
ಅರಿವೇ ಗುರುನುಡಿ ಜ್ಯೋತಿರ್ಲಿಂಗ ದಯವೇ ಧರ್ಮದ ಮೂಲ ತರಂಗ
ವಿಶ್ವ ಭಾರತಿಗೆ ಕನ್ನಡದಾರತಿ ಮೊಳಗಲಿ ಮಂಗಳ ಜಯಬೇರಿ