ಶುಕ್ರವಾರ, ನವೆಂಬರ್ 9, 2018

SP Sir for History: Question Papers 2015-May/June {Davangere Universit...

SP Sir for History: Question Papers 2015-May/June {Davangere Universit...: Dear Students, I hereby uploading QUESTION PAPERS of B.A.Semester Scheme- New Syllabus(2012) for the Session 2015 May/June ........ CL...

SP Sir for History: Question Papers 2015-May/June {Davangere Universit...

SP Sir for History: Question Papers 2015-May/June {Davangere Universit...: Dear Students, I hereby uploading QUESTION PAPERS of B.A.Semester Scheme- New Syllabus(2012) for the Session 2015 May/June ........ CL...

SP Sir for History: Question Papers 2015-May/June {Davangere Universit...

SP Sir for History: Question Papers 2015-May/June {Davangere Universit...: Dear Students, I hereby uploading QUESTION PAPERS of B.A.Semester Scheme- New Syllabus(2012) for the Session 2015 May/June ........ CL...

ಶುಕ್ರವಾರ, ಆಗಸ್ಟ್ 17, 2018

ಕನ್ನಡ ಗೀತೆಗಳು

 ಮಂಜುನಾಥ ಕೆ ಎಂ




ಬಾ ಚಕೋರಿ...

- ಕುವೆಂಪು
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ ||
ಜೊನ್ನ ಜೇನಿಗೆ ಬಾಯಾರಿದೆ ಚಕೋರ ಚುಂಬನ 

ಚಂದ್ರಿಕ ಮಧುಪಾನ ಮತ್ತ 
ಪೀನ ಕುಂಭ ಪಯೋಧವಿತ್ತ 
ವಕ್ಷ ಪರಿಲಂಬನ ನಿಮಿತ್ತ ನಿರಾವಲಂಬನ 

ಚರಣ ನೂಪುರ ಕಿಂಕಿಣಿ ಕೊಳ 
ಮದನ ಸಿಂಜಿನಿ ಜನಿತ ನಿಪ್ಪಾಣ 
ಚಿತ್ತ ರಂಜನಿ ತಳುವ ದೀಕ್ಷಣ 
ಚಂದ್ರ ಮಂಚಕೆ ಬಾ ಚಕೋರಿ 

ತೆರೆಯ ಚಿಮ್ಮಿಸಿ ನೊರೆಯ ಹೊಮ್ಮಿಸಿ 
ಕ್ಷೀರ ಸಾಗರದಲ್ಲಿ ತೇಲುವ 
ಬಾಗುಚಂದ್ರನ ತೂಗು ಮಂಚಕೆ 
ಬಾ ಚಕೋರಿ ಬಾ ಚಕೋರಿ 
ಎದೆ ಹಾರಿದೆ ಬಾಯಾರಿದೆ ಚಕೋರ ಚುಂಬನ

ನಿಕುಂಜ ರತಿವನ ಮದನ ಯಾಗಕೆ 
ಅನಂಗರಕ್ತಿಮ ಬಿಂಬ ಭೋಗಕೆ 
ಕಾಂಕ್ಷಿಯಾಗಿದೆ ನಗ್ನ ಯೋಗಕೆ 
ಇಕ್ಷು ಮಂಚ ರಸಾಗ್ನಿ ಪಕ್ಷಿಯ ಅಚಂಚು ಚುಂಬನ 

ನೀಡು ಶಿವ ನಿಡದಿರೂ...

- ಪಂಚಾಕ್ಷರಿ ಗವಾಯಿ


ನೀಡು ಶಿವ ನಿಡದಿರೂ ಶಿವ 
ಬಾಗುಹುದು ನನ್ನ ಕಾಯ ||
ನಾನೇಕೆ ಅಂಜಲಿ ನೀ ನನ್ನ ಅಂಬಲಿ 

ಶೃಂಗಾರ ಕೃತಕ ಬಂಗಾರ ಕ್ಷಣಿಕ 
ಬಾಳಲ್ಲಿ ಬಡಿವಾರವೇಕೆ ?
ನೀ ನಿತ್ತ ಕಾಯ ನಿನ್ನ ಕೈಲೆ ಮಾಯ
ಆಗೋದು ಹೋಗೋದು ನಾ ಕಾಣೆನೆ 

ಮಾಣಿಗೆ ಕೊಟ್ಟರು ಮರದಡಿಯೇ ಇಟ್ಟರು
ನಾನಂತು ನಿನ್ನನ್ನಲಾರೆ 
ಸಾರಂಗ ಮನಕೆ ನೂರಾರು ಬಯಕೆ 
ಮುಂದಿಟ್ಟು ಉಣಿಸೋದು ನಾ ಕಾಣೆನೆ 


ಮೋಡದ ಒಳಗೆ...

- ವಿ. ನಾಗೇಂದ್ರ ಪ್ರಸಾದ್
ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲಿ ಕಾದು ನಿಂತಿದೆ ಭೂಮಿಗೆ ಬರಲು 
ನನ್ನೊಳಗೊಳಗೆ ಒಲವಿನ ಯೋಗ 
ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು 
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ 
ನಿನ್ನೇ ಪ್ರೀತಿ ಮಾಡುವೆ ನಾನು ಇಸ್ಟೇ ಹಂಬಲ || 

ನಿಂತಲಿ ನಾ ನಿಲಲಾರೆ ಎಲ್ಲರು ಹೀಗಂತಾರೆ 
ಏತಕೋ ನಾ ಕಾಣೆನು ಈ ತಳಮಳ 
ಪ್ರೀತಿ ನನ್ನ ಬಲೆಯೊಳಗು
ನಾನೆ ಪ್ರೀತಿ ಬಲೆಯೊಳಗು
ಕಾಡಿದೆ ಕಂಗೆಡಿಸಿದೆ ಸವಿ ಕಳವಳ 
ಖಾಲಿ ಜೇಬಿನ ಮಜುನು ಪ್ರೀತಿ ಒಡೆಯನಾಗುವೆನು 
ನಿನ್ನಾ ಬಿಟ್ಟು ಹೇಗಿರಬೇಕು ಹೇಳೆ ಪ್ರಾಣವೆ?
  
ನಾನು ನಿನ್ನಾ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
ನನ್ನನು ಬರ ಸೆಳೆಯುವ ಕಲೆ ನಿನ್ನದು 
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ 
ಅದ್ಭುತ ಈ ಅತಿಶಯ ನಾ ತಾಳೆನು 
ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ 
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ


ವಿಶ್ವ ವಿನೂತನ...

- ಚೆನ್ನವೀರ ಕಣವಿ
ವಿಶ್ವ ವಿನೂತನ ವಿದ್ಯಾ ಚೇತನ 
ಸರ್ವ ಹೃದಯ ಸಂಸ್ಕಾರಿ, ಜಯ ಭಾರತಿ ||

ಕರುನಾಡ ಸರಸ್ವತಿ ಗುಡಿ ಗೋಪುರ ಸುರ ಶಿಲ್ಪಿ ಕಲಾಕೃತಿ 
ಕೃಷ್ಣೆ ತುಂಗೆ ಕಾವೇರಿ ಪರಿತ್ರಿತ ಕ್ಷೇತ್ರ ಮನೋಹಾರಿ 

ಗಂಗ ಕದಂಬ ರಾಷ್ಟ್ರಕೂಟ ಬಲ ಚಾಲುಕ್ಯ ಹೊಯ್ಸಳ ಬಲ್ಲಾಳ 
ಹಕ್ಕ ಬುಕ್ಕ ಪುಲಕೇಶಿ ವಿಕ್ರಮರ ಚೆನ್ನಮ್ಮಾಜಿಯ ವೀರಶ್ರೀ 

ತ್ಯಾಗ ಭೋಗ ಸಮಯೋಗದ ದೃಷ್ಟಿ ಬೆಳವುಳ ಮಲೆಕರೆ ಸುಂದರ ಶೃಷ್ಟಿ 
ಗ್ಯಾನದ ವಿಜ್ಞಾನದ ಕಲೆ ಐಸಿರಿ ಸಾರೋದಯ ಧಾರಾ ನಗರಿ 

ಅರಿವೇ ಗುರುನುಡಿ ಜ್ಯೋತಿರ್ಲಿಂಗ ದಯವೇ ಧರ್ಮದ ಮೂಲ ತರಂಗ 
ವಿಶ್ವ ಭಾರತಿಗೆ ಕನ್ನಡದಾರತಿ ಮೊಳಗಲಿ ಮಂಗಳ ಜಯಬೇರಿ 


ಹೊತ್ತಿತೊ ಹೊತ್ತಿತೊ ಕನ್ನಡದದೀಪ

 
ಹೊತ್ತಿತೊ ಹೊತ್ತಿತೊ ಕನ್ನಡದ ದೀಪ
ಮುಗಿಯಿತೊ ಮುಗಿಯಿತೊ ಶತಮಾನಗಳ ಶಾಪ ||

ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ 
ಹರ್ಷ ಉಕ್ಕಿಸುವಂತೆ ಶೋಭಾಯಮಾನ
...
ಕನ್ನಡದ ಮನೆಯಾಗೆ ಜ್ಯೊತಿರ್ನಿಧಾನ
ಕನ್ನಡದ ಪ್ರಾಣ ಕನ್ನಡ ಮಾನ ||

ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿದನು ನಿಡು ಬತ್ತಿಯಾಗಿ
ಧರಿಸುವವರು ಬೇಕಿದನು ಸಿರಿ ಹಣತೆಯಾಗಿ
ನನ್ನ ಉಸಿರಾಗಿ ಧರ್ಮಕ್ಕೆ ಬಾಗಿ ||

ಚಿರಕಾಲ ಬೆಳಗಲಿ ಕನ್ನದಡ ದೀಪ
ಜನರೆಲ್ಲರ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕ್ಕೆ ಬಲವಾಗಿ ಭವ್ಯಪ್ರದೀಪ 
ಕಳೆಯುತ್ತ ತಾಪ ಬೆಳೆಸುತ್ತ ಸೈಪ ||

ತಿಳಿಮುಗಿಲ ತೊಟ್ಟಿಲಲಿ...

ತಿಳಿಮುಗಿಲ ತೊಟ್ಟಿಲಲಿ...

-  ಎಸ್.ವಿ. ಪರಮೇಶ್ವರ ಭಟ್ಟ 

ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ ತೂಗುತ್ತಿತ್ತು |
ಗರಿ ಮುದುರಿ ಮಲಗಿದ್ದ ಹಕ್ಕಿಗೂಡುಗಳಲ್ಲಿ
ಇರುಳು ಹೊಂಗನಸೂಡಿ  ಸಾಗುತ್ತಿತ್ತು ||

ಮುಗುಳಿರುವ ಹೊದರಿನಲಿ ನರುಗ೦ಪಿನುದರದಲಿ
ಜೇನುಗನಸಿನ ಹಾಡು ಕೇಳುತ್ತಿತ್ತು |
ತುಂಬು ನೀರಿನ ಹೊಳೆಯೊಳಂಬಿಗನ ಕಿರುದೋಣಿ
ಪ್ರಸ್ಥಾನ ಗೀತೆಯನ್ನು ಹೇಳುತ್ತಿತ್ತು ||

ಬರುವ ಮುಂದಿನ ದಿನದ ನವನವೊದಯಕ್ಕಾಗಿ
ಪ್ರಕೃತಿ ತಪವಿರುವಂತೆ ತೋರುತ್ತಿತ್ತು |
ಶಾಂತ ರೀತಿಯಲಿರುಳು ಮೆಲ್ಲಮೆಲ್ಲನೆ ಉರುಳಿ
ನಾಳಿನ ಶುಭೋದಯ ಸಾರುತ್ತಿತ್ತು ||


ಇದೋ ನಿಮಗೆ ವಂದನೆ



ಕಾರ್ಗಿಲ್ಲಿನ ಗಡಿಗಳಲ್ಲಿ
ಸಿಡಿಗುಂಡಿಗೆ ಎದೆಯನೊಡ್ಡಿ
ಕಾದಾಡುವ ಕಲಿಗಳೇ
ತತ್ತರಿಸುವ ಎತ್ತರದಲಿ
ಧೈರ್ಯದ ಧ್ವಜವೆತ್ತಿ ನಡೆವ
ಪರಾಕ್ರಮದ ಕಿಡಿಗಳೇ
ಇದೋ ನಿಮಗೆ ವಂದನೆ
ಕೃತಜ್ಞತೆಯ ವಂದನೆ.
ಶ್ವೇತ ಶುಭ್ರ ಹಿಮಾಲಯದ
ಭವ್ಯ ಧವಳ ಭಿತ್ತಿಗಳಲಿ
ರಕ್ತಲಿಪಿಯ ಶಾಸನಗಳ
ಬರೆದ ಮಹಾ ಕಲಿಗಳೇ
ಇದೋ ನಿಮಗೆ ವಂದನೆ
ಕೃತಜ್ಞತೆಯ ವಂದನೆ
ದುರ್ಗಮ ಹಿಮ ಶಿಖರದಲ್ಲಿ
ಆಕ್ರಮಣವನೆದುರಿಸುತ್ತ
ಹುತಾತ್ಮರಾದ ಯೋಧರೇ
ಸ್ಪಂದಿಸುತಿದೆ ನಿಮ್ಮ ಹಿಂದೆ
ಕಂಬನಿಯಲಿ ಹೆಮ್ಮೆಯಲ್ಲಿ
ಈ ಅಖಂಡ ದೇಶವೇ
ಇದೋ ನಿಮಗೆ ವಂದನೆ
ಕೃತಜ್ಞತೆಯ ವಂದನೆ.

ಬಳೆಗಾರ ಚೆನ್ನಯ್ಯ...


ಬಳೆಗಾರ ಚೆನ್ನಯ್ಯ...

- ಕೆ. ಎಸ್. ನರಸಿಂಹಸ್ವಾಮಿ

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯೆ ದೊರೆಯೆ ?
ನವಿಲೂರ ಮನೆಯಿಂದ ನುಡಿಯೊಂದು ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ ||

ಮುಡಿದ ಮಲ್ಲಿಗೆಯರಳು ಬಾಡಿಲ್ಲ ರಾಯರೆ
ತೌರಿನಲಿ ತಾಯಿ ನಗುತಿಹರು
ಕುಡಿದ ನೀರಲುಗಿಲ್ಲ ಕೊರಗದಿರಿ ರಾಯರೆ
ಅಮ್ಮನಿಗೆ ಬಳೆಯ ತೊಡಿಸಿದರು

ಅಂದು ಮಂಗಳವಾರ ನವಿಲೂರ ಕೇರಿಯಲಿ
ಓಲಗದ ಸದ್ದು ತುಂಬಿತ್ತು
ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ
ಅಂಗಳದ ತುಂಬ ಜನವಿತ್ತು

ಹಬ್ಬದೂಟವನುಂಡು ಹಸೆಗೆ ಬಂದರು ತಾಯಿ
ಹೊಳೆದಿತ್ತು ಕೊರಳಿನಲಿ ಪದಕ
ಒಬ್ಬರೆ ಹಸೆಗೆ ಬಂದರು ತಾಯಿ ಬಿಂಕದಲಿ
ಕಣ್ತುಂಬ ನೋಡಿದೆನು ಮುದುಕ

ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ
ಸೆರಗಿನಲಿ ಕಣ್ಣೀರನೊರಸಿ
ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ
ದೀಪದಲಿ ಬಿಡುಗಣ್ಣ ನಿಲಿಸಿ

ಬೇಕಾದ ಹಣ್ಣಿಹುದು ಹೂವಿಹುದು ತೌರಿನಲಿ
ಹೊಸ ಸೀರೆ ರತ್ನದಾಭರಣ
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ
ನಿಮಗಿಲ್ಲ ಒಂದು ಹನಿ ಕರುಣ

ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರೆಳೆದು
ಕುದಿಯಬಾರದು ನನ್ನ ದೊರೆಯೆ
ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು
ಒಣಗಬಾರದು ಒಡಲ ಚಿಲುಮೆ

ಮುನಿಸು ಮಾವನ ಮೇಲೆ ಮಗಳೇನ ಮಾಡಿದಳು ?
ನಿಮಗೇತಕೆ ಕಲ್ಲು ಮನಸು ?
ಹೋಗಿ ಬನ್ನಿರಿ ಒಮ್ಮೆ ಕೈ ಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು





  ಇಂತಿ
               ಮಂಜುನಾಥ ಕೆ ಎಂ
  ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
            ಬಸವಪಟ್ಟಣ {ಚಿರಡೋಣಿ}

ಕನ್ನಡ ಗೀತೆಗಳು

 ಮಂಜುನಾಥ ಕೆ ಎಂ



ನಮ್ಮೂರ ಮಂದಾರ...

- ದೊಡ್ಡರಂಗೆ ಗೌಡ
ನಮ್ಮೂರ ಮಂದಾರ ಹೂವೆ 
ನನ್ನೊಲುಮೆ ಬಾಂದಳದ ಚೆಲುವೆ 
ಬಳಿಬಂದು ಬಾಳನ್ನು ಬೆಳಗು 
ನನ್ನ ಬರಿದಾದ ಮನದಲ್ಲಿ ಮಿನುಗು || 

ಕಣ್ಣಲ್ಲೆ ಕರೆದು ಹೊಂಗನಸ ತೆರೆದು 
ಸಂಗಾತಿ ಸಂಪ್ರೀತಿ ಸೆಳೆದೆ 
ಅನುರಾಗ ಹೊಳೆದು ಅನುಬಂಧ ಬೆಳೆದು 
ಸಮ್ಮೋಹ ಸಂಬಂಧ ಮಿಡಿದೆ 
ಮೂಡಿದ ಪ್ರೇಮದ ಸೊಗಸಾದ ಕಾರಂಜಿ ಬಿರಿದೆ 

ಒಡಲಾಡ ಮೊರೆದು ಒಡನಾಟ ಮೆರೆದು 
ಒಡನಾಡಿ ಭಾಂದವ್ಯ ಕಂಡೆ 
ಋತುಮಾನ ಮೀರಿ ಹೊಸಗಾನ ತೋರಿ 
ಹಿತವಾದ ಮಾಧುರ್ಯ ಮಿಂದೆ 
ತೀರದ ಮೋಹದ ಇನಿದಾದ ಆನಂದ ತಂದೆ 


  ಇಂತಿ
               ಮಂಜುನಾಥ ಕೆ ಎಂ
  ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
            ಬಸವಪಟ್ಟಣ {ಚಿರಡೋಣಿ}

ಕನ್ನಡ ಗೀತೆಗಳು

 ಮಂಜುನಾಥ ಕೆ ಎಂ


ಕನ್ನಡ ಗೀತೆಗಳು

 ಮಂಜುನಾಥ ಕೆ ಎಂ


ಶುಕ್ರವಾರ, ಆಗಸ್ಟ್ 10, 2018

ಕನ್ನಡ ಗೀತೆಗಳು


 ಮಂಜುನಾಥ ಕೆ ಎಂ

ತನುವು ನಿನ್ನದು...

- ಕುವೆಂಪು
ತನುವು ನಿನ್ನದು ಮನವು ನಿನ್ನದು ||
ಎನ್ನ ಜೀವನ ಧನವು ನಿನ್ನದು 
ನಾನು ನಿನ್ನವನೆಂಬ ಹೆಮ್ಮೆಯ 
ಋಣವು ಮಾತ್ರವೇ ನನ್ನದು 

ನೀನು ಹೊಳೆದರೆ ನಾನು ಹೊಳೆವೆನು 
ನೀನು ಬೆಳೆದರೆ ನಾನು ಬೆಳೆವೆನು 
ನನ್ನ ಹರಣದ ಹರಣ ನೀನು 
ನನ್ನ ಮರಣದ ಮರಣವು 

ನನ್ನ ಮನದಲಿ ನೀನೆ ಯುಕ್ತಿ 
ನನ್ನ ಹೃದಯದಿ ನೀನೆ ಭಕ್ತಿ 
ನೀನೆ ಮಾಯಾ ಮೋಹ ಶಕ್ತಿ 
ನನ್ನ ಜೀವನ ಮುಕ್ತಿಯು 


                                                         ಇಂತಿ
         ಮಂಜುನಾಥ ಕೆ ಎಂ
  ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
            ಬಸವಪಟ್ಟಣ {ಚಿರಡೋಣಿ}

ಕನ್ನಡ ಗೀತೆಗಳು



ಕೋಡಗನ ಕೋಳಿ..


ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ 
ಕೋಡಗನ ಕೋಳಿ ನುಂಗಿತ್ತ ! ||

ಆಡು ಆನೆಯ ನುಂಗಿ, ಗೋಡೆ ಸುಣ್ಣಾವ ನುಂಗಿ !
ಆಡಲು ಬಂದ ಪಾತರದವಳ ಮದ್ದಲಿ ನುಂಗಿತ್ತ !

ಒಳ್ಳು ಒನಕೆಯ ನುಂಗಿ, ಕಲ್ಲು ಗೂಟಾವ ನುಂಗಿ !
ಮೆಲ್ಲಲು ಬಂದ ಮುದುಕಿಯನ್ನೇ ನೆಲ್ಲು ನುಂಗಿತ್ತ !

ಹಗ್ಗ ಮಗ್ಗಾವ ನುಂಗಿ, ಮಗ್ಗಾವ ಲಾಲಿ ನುಂಗಿ !
ಮಗ್ಗದಾಗಿರುವ ಅಣ್ಣಾನನ್ನೇ ಮಣಿಯು ನುಂಗಿತ್ತ !

ಗುಡ್ಡ ಗವಿಯನ್ನು ನುಂಗಿ, ಗವಿಯು ಇರುವೇಯ ನುಂಗಿ ! 
ಗೋವಿಂದ ಗುರುವಿನ ಪಾದ ನನ್ನನೆ ನುಂಗಿತ್ತ ! 

                 ಶಿಶುನಾಳ ಶರೀಫ


  ಇಂತಿ
               ಮಂಜುನಾಥ ಕೆ ಎಂ
  ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
            ಬಸವಪಟ್ಟಣ {ಚಿರಡೋಣಿ}

ಶುಕ್ರವಾರ, ಆಗಸ್ಟ್ 3, 2018

ಕನ್ನಡ ಗೀತೆಗಳು


 ಮಂಜುನಾಥ ಕೆ ಎಂ

ಕಾಣದ ಕಡಲಿಗೆ...

- ಜಿ. ಎಸ್. ಶಿವರುದ್ರಪ್ಪ
ಕಾಣದ ಕಡಲಿಗೆ ಹಂಬಲಿಸಿದೆ ಮನ ||
ಕಾಣಬಲ್ಲೆನೆ ಒಂದು ದಿನ ?
ಕಡಲನು ಕೂಡಬಲ್ಲೆನೆ ಒಂದು ದಿನ ?

ಕಾಣದ ಕಡಲಿನ ಮೊರೆತದ ಜೋಗುಳ 
ಒಳಗಿವಿಗಿಂದು ಕೇಳುತಿದೆ 
ನನ್ನ ಕಲ್ಪನೆಯು ತನ್ನ ಕಡಲನೆ 
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ 
ಎಲ್ಲಿರುವುದೋ ಅದು ಎಂತಿರುವುದೋ ಅದು 
ನೋಡಬಲ್ಲೆನೆ ಒಂದು ದಿನ ?
ಕಡಲನು ಕೂಡಬಲ್ಲೆನೆ ಒಂದು ದಿನ ?

ಸಾವಿರ ಹೊಳೆಗಳು ತುಂಬಿ ಹರಿದರು 
ಒಂದೇ ಸಮನಾಗಿಹುದಂತೆ 
ಸುನೀಲ ವಿಸ್ತರ ತರಂಗ ಶೋಭಿತ 
ಗಂಭೀರಾಂಭುಧಿ ತಾನಂತೆ 
ಮುನ್ನೀರಂತೆ ಅಪಾರವಂತೆ 
ಕಾಣಬಲ್ಲೆನೆ ಒಂದು ದಿನ ?
ಅದರೊಳು ಕರಗಲಾರೆನೆ ಒಂದು ದಿನ ?

ಜಟಿಲ ಕಾನನದ ಕುಟಿಲ ಪತಗಳಲಿ 
ಹರಿವ ತೊರೆಯು ನಾನು 
ಎಂದಿಗಾದರು ಕಾಣದ ಕಡಲನು 
ಸೇರಬಲ್ಲೆನೆನು ?
ಸೇರಬಹುದೆ ನಾನು ?
ಕಡಲ ನೀಲಿಯೊಳು ಕರಗಬಹುದೆ ನಾನು ?
ಕಡಲ ನೀಲಿಯೊಳು ಕೂಡಬಲ್ಲೆನೆ ನಾನು ?





  ಇಂತಿ
               ಮಂಜುನಾಥ ಕೆ ಎಂ
                   ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
              ಬಸವಪಟ್ಟಣ {ಚಿರಡೋಣಿ}

ಕನ್ನಡ ಗೀತೆಗಳು


 ಮಂಜುನಾಥ ಕೆ ಎಂ


ಕನ್ನಡ ಎನೆ...

- ಕುವೆಂಪು
ಕನ್ನಡ ಎನೆ ಕುಣಿದಾಡುವುದೆನ್ನೆದೆ 
ಕನ್ನಡ ಎನೆ ಕಿವಿ ನಿಮಿರುವುದು ||
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು 

ಕನ್ನಡ ಕನ್ನಡ ಹ! ಸವಿಗನ್ನಡ 
ಕನ್ನಡದಲಿ ಹರಿ ಬರೆಯುವನು 
ಕನ್ನಡದಲಿ ಹರ ತಿರಿಯುವನು

ಕನ್ನಡದಲ್ಲಿಯೇ ಬಿನ್ನಹ ಗೈದೊಡೆ 
ಹರಿ ವರಗಳ ಮಳೆ ಕರೆಯುವನು 
ಹರ ಮುರಿಯದೆ ತಾ ಪೊರೆಯುವನು

ಬಾಳುಹುದೇತಕೆ ? ನುಡಿ, ಎಲೆ ಜೀವ 
ಸಿರಿಗನ್ನದದಲಿ ಕವಿತೆಯ ಹಾಡೆ
ಸಿರಿಗನ್ನಡದೇಳಿಗೆಯನು ನೋಡೆ
ಕನ್ನಡ ತಾಯಿಯ ಸೇವೆಯ ಮಾಡೆ 

               ಮಂಜುನಾಥ ಕೆ ಎಂ
  ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
            ಬಸವಪಟ್ಟಣ {ಚಿರಡೋಣಿ}

ಕನ್ನಡ ಗೀತೆಗಳು


 ಮಂಜುನಾಥ ಕೆ ಎಂ


ಓ! ನನ್ನ ಚೇತನ...

-ಕುವೆಂಪು
ಓ! ನನ್ನ ಚೇತನ 
ಆಗು ನೀ ಅನಿಕೇತನ ||

ರೂಪ ರೂಪಗಳನು ದಾಟಿ 
ನಾಮ ಕೋಟಿಗಳನು ಮೀಟಿ 
ಎದೆಯ ಬಿರಿಯ ಭಾವದೀಟಿ 

ನೂರು ಮತದ ಹೊಟ್ಟ ತೂರಿ 
ಎಲ್ಲ ತತ್ವದೆಲ್ಲೆ ಮೀರಿ 
ನಿರ್ದಿಗಂತವಾಗಿ ಏರಿ 

ಎಲ್ಲಿಯೂ ನಿಲ್ಲದಿರು 
ಮನೆಯನೆಂದು ಕಟ್ಟದಿರು 
ಕೊನೆಯನೆಂದು ಮುಟ್ಟದಿರು 
ಓ! ಅನಂತವಾಗಿರು 

ಅನಂತ ತಾನ್ ಅನಂತವಾಗಿ 
ಆಗುತಿಹನೆ ನಿತ್ಯಯೋಗಿ 
ಅನಂತ ನೀ ಅನಂತವಾಗು 
ಆಗು ಆಗು ಆಗು ಆಗು 

ಕನ್ನಡ ಗೀತೆಗಳು


 ಮಂಜುನಾಥ ಕೆ ಎಂ


ಇಳಿದು ಬಾ ತಾಯಿ...

- ದ.ರಾ. ಬೇಂದ್ರೆ
ಇಳಿದು ಬಾ ತಾಯಿ ಇಳಿದು ಬಾ ||

ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ 
ದೇವದೇವರನು ತಣಿಸಿ ಬಾ ದಿಗ್ ದಿಗಂತದಲಿ ಹನಿಸಿ ಬಾ 
ಚರಾಚರಗಳಿಗೆ ಉಣಿಸಿ ಬಾ, ಇಳಿದು ಬಾ ತಾಯಿ ಇಳಿದು ಬಾ

ನಿನಗೆ ಪೂಡಮಾಡುವೆ ನಿನ್ನ ನುಡುತಡುವೆ ಏಕೆ ತಡೆತಡೆವಿ ಸುರಿದು ಬಾ 
ಸ್ವರ್ಗ ತೊರೆದು ಬಾ ಬಯಲ ಜರೆದು ಬಾ ನೆಲದಿ ಹರಿದು ಬಾ 
ಬಾರೆ ಬಾ ತಾಯಿ ಇಳಿದು ಬಾ, ಇಳಿದು ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ, ನೀರಿರದ ಮೀನ ಕರೆಕರೆವ ಬಾ 
ಕರು ಕಂಡ ಕರುಳೆ ಮನ ಉಂಡ ಮರುಳೆ, ಉದಂಡ ಅರುಳೆ ಸುಳಿ ಸುಳಿದು ಬಾ 
ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ, ವಾತ್ಸಲ್ಯ ವರಣೆ ಇಳಿ ಇಳಿದು ಬಾ 

ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ 
ಸಿರಿವಾರಿಜಾತ ವರಪಾರಿಜಾತ ತಾರ ಕುಸುಮದಿಂದೆ 
ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ 
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ 

ಬಂದಾರೆ ಬಾರೆ ಒಂದಾರೆ ಸಾರೆ ಕಂಧಾರೆ ತಡೆವರೇನೆ 
ಅವತಾರವೆಂದೆ ಎಂದಾರೆ ತಾಯೆ ಈ ಅಧಪಾತವನ್ನೆ 
ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ

ದುಮು ದುಮು ಎಂದಂತೆ ದುಡುಕಿ ಬಾ 
ನಿನ್ನ ಕಂದನ್ನ ಹುಡುಕಿ ಬಾ ಹುಡುಕಿ ಬಾ ತಾಯೆ ದುಡುಕಿ ಬಾ 
ಹರನ ಹೊಸತಾಗಿ ಹೊಳೆದು ಬಾ, ಬಾಳು ಬೆಳಕಾಗಿ ಬೆಳೆದು ಬಾ 
ಶಂಭು ಶಿವಹರನ ಚಿತ್ತೇ ಬಾ, ದತ್ತ ನರಹರಿಯ ಮುತ್ತೆ ಬಾ 
ಅಂಬಿಕಾತನಯ ನತ್ತೆ ಬಾ, ಇಳಿದು ಬಾ ತಾಯಿ ಇಳಿದು ಬಾ 



                          ಇಂತಿ
               ಮಂಜುನಾಥ ಕೆ ಎಂ
  ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
            ಬಸವಪಟ್ಟಣ {ಚಿರಡೋಣಿ}