

ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಬಸವಪಟ್ಟಣ {ಚಿರಡೋಣಿ)
ಕನ್ನಡ ರಕ್ಷಣಾ ವೇದಿಕೆ
ನಾಡಿನ ಸಮಸ್ತ ಜನತೆಗೆ ಸುಭಾಷ್ ಚಂದ್ರ ಬೋಸ್ ಅವರ 124ನೇ ಜನ್ಮದಿನಾಚರಣೆ ಹಾಗೂ ಪರಾಕ್ರಮ ದಿನದ ಶುಭಾಶಯಗಳು
ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ ದಾವಣಗೆರೆ ವಿಶ್ವವಿದ್ಯಾಲಯ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸವಾಪಟ್ಟಣದ ಕಾಲೇಜಿನಲ್ಲಿ ಇತಿಹಾಸ ವೇದಿಕೆ ವತಿಯಿಂದ ಸುಭಾಷ್ ಚಂದ್ರ ಬೋಸ್ ಅವರ 124ನೇ ಜನ್ಮದಿನಾಚರಣೆ ಹಾಗೂ ಪರಾಕ್ರಮ ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದರಿ ಕಾಲೇಜಿನ ಪ್ರಾಂಶುಪಾಲರಾದ ಯೋಗೇಶ್ ಕೆ ಜೆ ಅವರು ವಹಿಸಿಕೊಂಡಿದ್ದರು ಮತ್ತು ಈ ಕಾರ್ಯಕ್ರಮದ ನೇತೃತ್ವವನ್ನು ಮಲ್ಲಯ್ಯ ಎನ್ ಇತಿಹಾಸ ವಿಭಾಗದ ಮುಖ್ಯಸ್ಥರು (ಸ.ಪ್ರಾ) ಇವರು ವಹಿಸಿದ್ದರು ಹಾಗೂ ರವಿಕುಮಾರ್ ಎಸ್ ಹೆಚ್ (ಸ.ಪ್ರಾ) ಹನುಮಂತಪ್ಪ (ಸ.ಪ್ರಾ) ಜ್ಯೋತಿ ಎನ್ (ಸ.ಪ್ರಾ) ಮಧುಸೂದನ್ (ಸ.ಪ್ರಾ) ಪ್ರಕಾಶ್ ಜಿ ಪಿ (ಸ.ಪ್ರಾ) ಸೇರಿದಂತೆ 150 ಕ್ಕು ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಈ ಕಾರ್ಯಕ್ರಮವನ್ನು ವಿದ್ಯಾರ್ಥಿ ಮಂಜುನಾಥ ಕೆ ಎಮ್ ನಿರೂಪಿಸಿದರು ಈ ಕಾರ್ಯಕ್ರಮದ ಸರ್ವರನ್ನೂ ವಿಧ್ಯಾರ್ಥಿನಿ ಪೂಜಾ ಕೆ ಎಸ್ ಅವರು ಸ್ವಾಗತಿಸಿದರು ಹಾಗೂ ವಿದ್ಯಾರ್ಥಿ ನಿಖಿಲ್ ರವರು ಈ ಕಾರ್ಯಕ್ರಮದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದರು
ಈ ಕಾರ್ಯಕ್ರಮವು ರಾಷ್ಟ್ರ ಗೀತೆಯನ್ನು ಹಾಡಿ ರಾಷ್ಟ್ರ ನಾಯಕ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಗೌರವವನ್ನು ಸಮರ್ಪಿಸುವ ಮೂಲಕ ಪ್ರಾರಂಭವಾಯಿತು ನಂತರದಲ್ಲಿ ರವಿಕುಮಾರ್ ಎಸ್ ಹೆಚ್ ಸ.ಪ್ರಾ ಪ್ರಾಸ್ತಾವಿಕ ನುಡಿಯಲ್ಲಿ ನೇತಾಜಿ ಯವರ ಸಾಹಸ ಧೈರ್ಯ ಅವರ ಆದರ್ಶ ವ್ಯಕ್ತಿತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಉಣಬಡಿಸಿದರು
ನಂತರದಲ್ಲಿ ರಾಜ್ಯಶಾಸ್ತ್ರದ ಉಪನ್ಯಾಸಕರಾದ ಹನುಮಂತಪ್ಪ ಸರ್ ರವರು ನಾವು ಈ ರೀತಿ ರಾಷ್ಟ್ರ ನಾಯಕರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಮಾಡಿ ಭಾಷಣಗಳನ್ನು ಮಾಡಿದರೆ ಸಾಲದು ಅವರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಮತ್ತೆ ನಿಸ್ವಾರ್ಥವಾಗಿ ದೇಶಕ್ಕೊಸ್ಕರ ದುಡಿಯಬೇಕು ಎಂಬ ಆಶಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು
ಶ್ರೀಮತಿ ಜ್ಯೋತಿ ಎನ್ ಸ.ಪ್ರಾ ಈ ಕಾರ್ಯಕ್ರಮವನ್ನು ಉದಾದೇಶಿಸಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೊಡುಗೆಗಳನ್ನು ಹಾಗೂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಝಾನ್ಸಿ ಮಹಿಳಾ ಸೇನೆಯ ಪಾತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು
ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಇತಿಹಾಸ ಉಪನ್ಯಾಸಕರಾದ ಮಲ್ಲಯ್ಯ ಸರ್ ರವರು ತಮ್ಮ ನೇತೃತ್ವ ಭಾಷಣದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಕುರಿತಂತೆ ಸಂಪೂರ್ಣ ಮಾಹಿತಿಯನ್ನು ನೀಡುವುದರ ಜೊತೆಗೆ ಕಾರ್ಯಕ್ರಮದ ಯಶಸ್ಸಿಗೆ ಬದ್ರ ಬುನಾದಿಯಾಗಿ ವಿದ್ಯಾರ್ಥಿಗಳ ಗಮನವನ್ನು ಸೆಳೆದರು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸದರಿ ಕಾಲೇಜಿನ ಪ್ರಾಂಶುಪಾಲರಾದ ಯೋಗೇಶ್ ಕೆ ಜೆ ಅವರು ಅಧ್ಯಕ್ಷರಿಗೆ ಭಾಷಣದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಎರಡು ರೀತಿಯ ಗುಣಗಳನ್ನು (ಕ್ರಾಂತಿಕಾರಿ ಗುಣ ಮತ್ತು ತ್ಯಾಗದ ಗುಣ) ಕುರಿತು ವಿದ್ಯಾರ್ಥಿಗಳಿಗೆ ಉಣಬಡಿಸಿದರು
ಬಿಂದು ಪೂಜಾ ಭೀಮನಾಯ್ಕ್ ನಿಖಿಲ್ ಸೇರಿದಂತೆ 20 ಕ್ಕು ಹೆಚ್ಚು ವಿದ್ಯಾರ್ಥಿಗಳು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಕುರಿತು ಮಾತನಾಡಿದರು
ನೇತಾಜಿ ಸುಭಾಷ್ ಚಂದ್ರ ಬೋಸ್
ನೇತಾಜಿ ಸುಭಾಷ್ ಚಂದ್ರ ಭೋಸರ ಜನ್ಮದಿನವಿದು. ಜನವರಿ 23, 1897ರಂದು ಜನಿಸಿದ ಸುಭಾಷ್ ಚಂದ್ರಬೋಸ್ ಭಾರತೀಯ ಇತಿಹಾಸದಲ್ಲಿ ಹಲವು ರೀತಿಗಳ ಬಿರುಗಾಳಿ ಬೀಸಿ, ಕಡೆಗೆ ಅವರು ಏನಾದರೂ ಎಂಬ ಬಗ್ಗೆ ಕೂಡ ಹಲವು ಸುದ್ಧಿಗಳು ನಿರಂತರವಾಗಿ ಗಾಳಿಯಲ್ಲೇ ಉಳಿಯುವ ಹಾಗೆ ಕಣ್ಮರೆಯಾದರು. ಅವರು ಈ ಲೋಕವನ್ನು ಬಿಟ್ಟು ಹೋದರು ಎಂಬ ಬಗ್ಗೆ ಇರುವ ಊಹೆಯ ದಿನ ಆಗಸ್ಟ್ 18, 1945.
ನೇತಾಜಿ ಸುಭಾಷ್ ಚಂದ್ರ ಬೋಸರ ಬಗ್ಗೆ ಹಲವು ಕತೆಗಳಿವೆ. ಭಾರತೀಯರಿಗೆ ದೇಶಾಭಿಮಾನ ಕಡಿಮೆ ಎಂಬ ಮಾತು ಪ್ರಶ್ನೆ ಪತ್ರಿಕೆಯಲ್ಲಿತ್ತೆಂದು ಕೋಪಗೊಂಡು ಪ್ರಶ್ನೆ ಪತ್ರಿಕೆ ಹರಿದೆಸೆದು ಹೊರಟ ವಿದ್ಯಾರ್ಥಿ ಎಂದು ಒಂದು ಕಥೆ, ಒಬ್ಬ ಬ್ರಿಟಿಷ್ ಅಧ್ಯಾಪಕ ಭಾರತೀಯರನ್ನು ಅವಮಾನಿಸಿ ಮಾತನಾಡಿದ ಎಂದು ಅವನನ್ನು ತಳಿಸಿದರು ಎಂದು ಮತ್ತೊಂದು ಹೀಗೆ ಹಲವು.
ನೇತಾಜಿಅವರು ಮಹಾನ್ ಬುದ್ಧಿವಂತರಾಗಿ ಇಂಡಿಯನ್ ಸಿವಿಲ್ ಸರ್ವೀಸಸ್ ಸೇವೆ ತಲುಪಿದ್ದಂತೂ ನಿಜ. ಅದನ್ನು ಕಿತ್ತೊಗೆದು ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಇಳಿದು ಇನ್ನಿಲ್ಲದಂತೆ ಸೇವೆ ಸಲ್ಲಿಸಿದ್ದೂ ನಿಜ. ಅದೆಷ್ಟೋ ಬಾರಿ ಗಡೀ ಪಾರಾಗಿ ಪುನಃ ಪುನಃ ಬಂದು ಬಂಧನಕ್ಕೆ ಒಳಗಾಗುತ್ತಿದ್ದುದೂ ನಿಜ. ಭಾರತದ ಸ್ವಾತಂತ್ರಕ್ಕೆ ಕಂಕಣ ಕಟ್ಟಿ ದುಡಿದದ್ದು ಅಪ್ಪಟ ನಿಜ.
ಗಾಂಧೀ ಮತ್ತು ನೇತಾಜಿ ಇಬ್ಬರೂ ವಿಭಿನ್ನ ಮನೋಧರ್ಮದವರು. ಗಾಂಧೀಜಿ ಆಶಯಕ್ಕೆ ವಿರುದ್ಧವಾಗಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ನಾಯಕತ್ವಕ್ಕೆ ಆಯ್ಕೆ ಆಗಿದ್ದು ಕೊನೆಗೆ ಅದನ್ನು ಬಿಟ್ಟುಕೊಟ್ಟು ಹೊರಗೂ ನಡೆದು ಬಿಟ್ಟರು.
ನಾಜೀಗಳ ಜೊತೆ, ಜಪಾನಿನವರ ಜೊತೆ ಹೀಗೆ ಬ್ರಿಟಿಷರ ವಿರೋಧಿಗಳ ಜೊತೆ ಯಾರೆಂದರೂ ಸರಿ ಸಲ್ಲಾಪ ನಡೆಸಿ ಮಲಯ, ಸಿಂಗಪುರ ಮುಂತಾದೆಡೆಗಳಲ್ಲಿ ಇದ್ದ ಯುದ್ಧ ಖೈದಿಗಳು, ಪ್ಲಾಂಟೇಶನ್ ಕೆಲಸಗಾರರನ್ನು ಒಟ್ಟುಗೂಡಿಸಿ ಆಜಾದ್ ಹಿಂದ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಒಗ್ಗೂಡಿಸಿದ ಶಕ್ತಿವಂತ. ನಾವು ‘ಜೈ ಹಿಂದ್’ ಎಂದು ಕೇಳಿದಾಗ ಮೊದಲು ಕಣ್ಣಿಗೆ ಬೀಳುವ ಚಿತ್ರ ಸುಭಾಷರದ್ದು.
ಸ್ವಾಮಿ ವಿವೇಕಾನಂದರ ನಿಷ್ಠ ಭಕ್ತರಾದ ನೇತಾಜಿ ಅವರು ವಿಶ್ವದೆಲ್ಲೆಡೆ ಭಾರತದ ಸ್ವಾತಂತ್ರ್ಯದ ಕಹಳೆಯನ್ನು ಕೂಗಿ ಜನಮನವನ್ನು ಬಡಿದೆಬ್ಬಿಸಿ ಬ್ರಿಟಿಷರನ್ನು ದಿಗ್ಬ್ರಾಂತರನ್ನಾಗಿ ಮಾಡಿದ್ದು ಚರಿತ್ರೆಯ ಪುಟಗಳಲ್ಲಿ ನಿಚ್ಚಳವಾಗಿ ಮೂಡಿದೆ.
ನಮ್ಮ ದೇಶಕ್ಕಾಗಿ ನಿರಂತರ ಯೋಚಿಸಿ, ತನ್ನ ಬುದ್ಧಿವಂತಿಕೆ, ಸಾಧ್ಯವಿದ್ದ ಶ್ರೀಮಂತ ಬದುಕು, ಮತ್ತೊಂದು ಹೌದಪ್ಪ ಆಗಿದ್ದರೆ ಭವಿಷ್ಯದ ರಾಜಕಾರಣಿಯ ಹಿರಿತನದ ಬದುಕು ಮುಂತಾದ ಸಣ್ಣತನಗಳನ್ನೆಲ್ಲಾ ಬದಿಗೊತ್ತಿ, ಯಾವುದನ್ನೂ ಸ್ವಾರ್ಥದಿಂದ ಯೋಚಿಸದೆ ಜೀವಮಾನವಿಡೀ ಕಷ್ಟಗಳನ್ನು ಎದುರಿಸಿ ಹೋರಾಟಮಯ ಬದುಕನ್ನು ಬಾಳಿದ ಈ ಧೀಮಂತ ನಾಯಕನಿಗೆ ನಾವು ಏನು ತಾನೇ ಹೇಳೋಣ.
ಈ ಮಹಾನ್ ದೇಶಭಕ್ತನ ಶಕ್ತಿ, ಆಶೀರ್ವಾದಗಳ ಚಹರೆ ಈ ದೇಶದ ಮೇಲೆ ಮತ್ತೊಮ್ಮೆ ಬೀಸಿ ಇಲ್ಲಿ ಕವಿದಿರುವ ಅಂಧಕಾರವನ್ನು ಹೋಗಲಾಡಿಸಲಿ ಎಂದು ಹಾರೈಸಿ ಆತನ ಅಡಿದಾವರೆಗಳಿಗೆ ಭಕ್ತಿಯಿಂದ ನಮಿಸೋಣ.
ಇಂತಿ
ಮಂಜುನಾಥ ಕೆ ಎಂ
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಬಸವಪಟ್ಟಣ {ಚಿರಡೋಣಿ)
ಅದು ಲಂಡನ್ನಿನ ಭಾರತ ಭವನ ಹಾಸ್ಟೆಲ್. ಅಲ್ಲಿದ್ದ ವಿದ್ಯಾರ್ಥಿಗಳೆಲ್ಲಾ ಭಾರತೀಯರು. ಅವರಲ್ಲೊಬ್ಬ ತನ್ನ ಕೈಯ್ಯನ್ನು ಮೇಜಿನ ಮೇಲೆ ಊರಿದ್ದ. ಇನ್ನೊಬ್ಬ ಗೆಳೆಯ ಅದರ ಮೇಲೆ ಗುಂಡು ಸೂಜಿಯಿಂದ ಬಲವಾಗಿ ಚುಚ್ಚುತ್ತಿದ್ದ. ಆದರೆ ಯುವಕನ ಮುಖದಲ್ಲಿ ನೋವಿನ ಗೆರೆ ಎಳ್ಳಷ್ಟು ಮೂಡಲಿಲ್ಲ. ನೋಡು ನೋಡುತ್ತಿದ್ದಂತೆ ರಕ್ತ ಚಿಲ್ಲನೆ ಹಾರುತ್ತಾ ಸೂಜಿ ಒಳಗಿಳಿಯಿತ್ತು! ಸುತ್ತ ನೆರೆದಿದ್ದ ಡಜನ್’ಗಟ್ಟಲೆ ಗೆಳೆಯರು ಹೌಹಾರಿದರು. ಆದರೆ ಯುವಕನ ಕಣ್ಣಲ್ಲಿ ಅದೇ ಗಟ್ಟಿತನ. ನೋವು ಬಿಡಿ ತುಟಿಗಳಲ್ಲಿದ್ದ ಮಂದಸ್ಮಿತ ಕೂಡ ಅಲುಗಾಡಲಿಲ್ಲ!
ಇಂತಹುದೊಂದು ಸಾಹಸ ಮಾಡಿದ್ದ ಯುವಕ ಬೇರಾರೂ ಅಲ್ಲ. ಭಾರತದ ಸ್ವಾತಂತ್ರ್ಯದ ಹೋರಾಟದ ಕ್ರಾಂತಿಯ ಕಿಡಿ ಮದನ್’ಲಾಲ್ ದಿಂಗ್ರಾ! ಅಷ್ಟಕ್ಕೂ ಆತ ಮಾಡಿದ್ದು ತನ್ನ ವೈಯಕ್ತಿಕ ತಾಕತ್ತನ್ನು ಪ್ರದರ್ಶಿಸಲು ಅಲ್ಲ. ಜಪಾನಿಯರಷ್ಟು ಸಾಹಸಿಗಳು ಯಾರೂ ಇಲ್ಲ ಎಂದು ಗೆಳೆಯನೊಬ್ಬ ಕಿಚಾಯಿಸಿದ್ದಕ್ಕೆ ‘ಹಿಂದೂಸ್ಥಾನದವರೇನೂ ಕಡಿಮೆ ಇಲ್ಲ’ ಎಂಬುದನ್ನು ತೋರಿಸಲು ಈ ಸಾಹಸ ಮೆರೆದಿದ್ದು!!
ಮದನ್’ಲಾಲ್ ದಿಂಗ್ರ. ಇದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪುಟಗಳಲ್ಲಿ ಅಚ್ಚೊತ್ತಲ್ಪಟ್ಟಿರುವ ಹೆಸರು. ಈತ ಹುಟ್ಟಿದ್ದು ಅಮೃತಸರದ ಆಗರ್ಭ ಶ್ರೀಮಂತ ಕುಲದಲ್ಲಿ (1883). ತಂದೆ ಸಾಹಿಬ್ ದಿತ್ತಾ. ಈತ ಅದೆಷ್ಟು ಶ್ರೀಮಂತನೆಂದರೆ ಆ ಕಾಲಕ್ಕೇ ಈತ ೨೩ ಮನೆ, ೬ ಬಂಗ್ಲೆಗಳ ಒಡೆಯ! ಇಡೀ ಅಮೃತಸರದಲ್ಲೇ ಕಾರನ್ನು ಹೊಂದಿದ್ದ ಮೊದಲ ಭಾರತೀಯ ನಾಗರೀಕನೂ ಹೌದು! ವೃತ್ತಿಯಲ್ಲಿ ವೈದ್ಯನಾಗಿದ್ದ ಈತ ಸಹಜವಾಗೇ ಬ್ರಿಟೀಷರ ಆಪ್ತನೂ ಆಗಿದ್ದ. ಆದರೆ, ಈ ರೀತಿಯ ಶ್ರೀಮಂತಿಕೆಯ ಕುಲದಲ್ಲಿ ಹುಟ್ಟಿದ್ದರೂ ದಿಂಗ್ರಾ ಮಾತ್ರ ಅಪ್ಪನ ಆಶಯಕ್ಕೆ ವಿರುದ್ಧವಾಗೇ ಬೆಳೆದದ್ದು ಅದು ಭಾರತಾಂಬೆಯ ಪುಣ್ಯವೆನ್ನಬೇಕಷ್ಟೇ.
ಹಾಗೆ ನೋಡಿದರೆ ಬಾಲ್ಯದಲ್ಲಿ ದಿಂಗ್ರನಿಗೂ ಆಸೆಗಳಿದ್ದವು. ಮೋಜು ಮಸ್ತಿ ಎಂದರೆ ಸಖತ್ ಖುಷಿಪಡುತ್ತಿದ್ದ ಈತ. ತಾನೂ ಕೂಡ ಇಂಗ್ಲೆಂಡ್’ಗೆ ತೆರಳಬೇಕು, ವಿದ್ಯಾಭ್ಯಾಸ ಪಡೆಯಬೇಕೆಂಬ ಕನಸು ಈತನದ್ದಾಗಿತ್ತು. ವಿದ್ಯಾಭ್ಯಾಸದಲ್ಲೂ ಚುರುಕಿದ್ದ ಈತ ಮೆಟ್ರಿಕ್ಯುಲೇಶನ್ ಬಳಿಕ ಕಾಲೇಜು ವಿದ್ಯಾಭ್ಯಾಸಕ್ಕೆಂದು ಸೇರಿದ್ದು ಲಾಹೋರಿನ ಕಾಲೇಜಿಗೆ. ಆದರೆ ಈತನ ಚಟುವಟಿಕೆಗಳು ಕಾಲೇಜಿಗೆ ಸಹ್ಯವಾಗದೇ ಹೋದುದರಿಂದ ಕೆಲವೇ ದಿನಗಳಲ್ಲಿ ಕಾಲೇಜಿನಿಂದ ಹೊರದಬ್ಬಲ್ಪಟ್ಟ! ಇತ್ತ ಈತನ ತಂದೆ ಕೂಡ ಮಗನ ದುರ್ವರ್ತನೆಗೆ ಕಿಡಿ ಕಾರಿ ಮನೆಯಿಂದಲೇ ಅಟ್ಟಿಸಿ ಬಿಟ್ಟರು. ದಿಂಗ್ರ ಅಕ್ಷರಶಃ ಏಕಾಂಗಿಯಾಗಿದ್ದ. ಅಲ್ಲಿ ಇಲ್ಲಿ ಕೆಲಸ ಮಾಡುತ್ತಾ ಹೇಗೋ ದಿನ ತಳ್ಳಬೇಕಾಯಿತು. ಆದರೆ ತನ್ನ ಉನ್ನತ ವಿದ್ಯಾಭ್ಯಾಸದ ಕನಸು ಹಾಗೆಯೇ ಉಳಿದಿತ್ತಾದ್ದರಿಂದ ಮುಂದೆ ಅದೇಗೋ ಮನೆ ಸೇರಿ 1906ರಲ್ಲಿ ಇಂಗ್ಲೆಂಡ್’ಗೆ ಪ್ರಯಾಣ ಬೆಳೆಸಿದ. ಸೇರಿದ್ದು ಇಂಜಿನಿಯರ್ ಪದವಿಗಾಗಿ.
ಸ್ವದೇಶ, ಸ್ವಾತಂತ್ರ್ಯ, ಹೋರಾಟ ಎಂಬ ಪದಗಳ ಅರ್ಥವೇ ಗೊತ್ತಿಲ್ಲದ ಅಂದಿನ ಮದನ್’ಲಾಲ್ ದಿಂಗ್ರಾಗೆ ಅಂದು ಅಭಿರುಚಿ ಇದ್ದದು ತನ್ನ ಸೌಂದರ್ಯ ಇಮ್ಮಡಿಗೊಳಿಸುವುದರಲ್ಲಿ! ಗಮನವಿದ್ದುದ್ದು ತನ್ನ ಉಡುಗೆ ತೊಡುಗೆಗಳ ಮೇಲೆ! ಆದರೆ ಈ ರೀತಿಯಾಗಿ ಬೆಳೆಯುತ್ತಿದ್ದ ದಿಂಗ್ರಾ ಮುಂದೆ ಕೆಲವೇ ದಿನಗಳಲ್ಲಿ ಬದಲಾಗಿ ಬಿಟ್ಟ. ಇದಕ್ಕೆ ಕಾರಣ ಅಂದು ಕಾನೂನು ಪದವಿಗೆ ಎಂದು ಇಂಗ್ಲೆಂಡ್ ಸೇರಿದ್ದ ಸಾವರ್ಕರ್! ಅವರು ನಿಜವಾಗಿಯೂ ಅಲ್ಲಿ ಮಾಡುತ್ತಿದ್ದದು ಅಲ್ಲಿನ ಭಾರತೀಯ ಯುವಕರನ್ನು ಬ್ರಿಟೀಷರ ವಿರುದ್ಧ ಹೋರಾಡುವ ಅಸ್ತ್ರವನ್ನಾಗಿಸುವ ಪ್ರಯತ್ನವನ್ನ. ಇದು ದಿಂಗ್ರನ ಜೀವನದಲ್ಲೂ ಪರಿವರ್ತನೆ ತರಿಸಿತ್ತು. ಇವರ ಭಾಷಣದ ತೀಕ್ಷಣತೆಗೆ ಆಕರ್ಷಿತನಾದ ದಿಂಗ್ರ ಮುಂದೆ ಕೆಲವೇ ದಿನಗಳಲ್ಲಿ ಬ್ರಿಟೀಷರ ವಿರುದ್ಧ ಹೋರಾಡುವ ಪ್ರಬಲ ಅಸ್ತ್ರವಾಗಿ ಬದಲಾಗಿ ಬಿಟ್ಟ.
ಹೀಗೆ ಒಂದೆಡೆಯಿಂದ ಭಾರತೀಯ ಯುವಕರು ಬ್ರಿಟೀಷರ ವಿರುದ್ಧ ತೊಡೆ ತಟ್ಟುತ್ತಿದ್ದರೆ ಅತ್ತ ಕಡೆಯಿಂದ ಬ್ರಿಟೀಷರು ‘ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್’ ಎಂಬ ಸಂಸ್ಥೆ ಕಟ್ಟಿಕೊಂಡು ಭಾರತೀಯ ಯುವಕರ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದರು! ಇದರಲ್ಲಿ ನಿಸ್ಸೀಮನಾಗಿದ್ದವರು ಸರ್.ವಿಲಿಯಂ ಕರ್ಜನ್ ವೈಲಿ ಎಂಬಾತ. ಸಾವರ್ಕರ್ ಪ್ರಯತ್ನಕ್ಕೆ ಒಂದು ರೀತಿಯ ಅಡ್ಡಗಾಲು ಎಂಬಂತ್ತಿತ್ತು ಈತನ ಪ್ರತೀ ಹೆಜ್ಜೆಗಳು. ‘ಭಾರತದ ದಾಸ್ಯದ ವಿರುದ್ಧದ ಹೋರಾಟಕ್ಕೆ ಪ್ರತೀಯೋರ್ವರು ಕೈಜೋಡಿಸಬೇಕು, ಬ್ರಿಟೀಷರ ದಬ್ಬಾಳಿಕೆಯನ್ನು ಕೊನೆಗಾಣಿಸಬೇಕು’ ಎಂಬ ಸಾವರ್ಕರ್’ರವರ ಕಿಡಿ ಮಾತುಗಳು ದಿಂಗ್ರನ ಕಿವಿಯಲ್ಲಿ ಅದಾಗಲೇ ಗುಂಯಿಗುಡಲು ಪ್ರಾರಂಭಿಸಿತ್ತು. ಗಾಯದ ಮೇಲೆ ಬರೆ ಎಳೆದಂತೆ ಅದೇ ಸಮಯಕ್ಕೆ ಭಾರತದಲ್ಲಿ ಖುದಿರಾಮ್ ಬೋಸ್, ಕನಯ್ಯ ಲಾಲ್ ದತ್ತಾ, ಸತ್ಯೇಂದ್ರ ಬೋಸ್ ಗಲ್ಲಿಗೇರಿಸಲ್ಪಟ್ಟರು! ವೀರ ಸಾವರ್ಕರ್ ಸಹೋದರ ಗಣೇಶ್ ದಾಮೋದರ್ ಸಾವರ್ಕರ್’ನ್ನು ದೂರದ ಅಂಡಮಾನಿನ ನರಕ ಸದೃಶ ಜೈಲಿಗೆ ಅಟ್ಟಲಾಯಿತು! ಇದು ದಿಂಗ್ರ ಸಹಿತ ಇಂಗ್ಲೆಂಡ್’ನಲ್ಲಿದ್ದ ಭಾರತೀಯರ ಕ್ರೋಧವನ್ನು ಇಮ್ಮಡಿಗೊಳಿಸಿತು. ನಾನೇನಾದರು ಮಾಡಲೇ ಬೇಕು ಎಂಬ ದೃಡ ನಿರ್ಧಾರಕ್ಕೆ ಬಂದ ದಿಂಗ್ರ. ಈ ನಿಟ್ಟಿನಲ್ಲಿ ನಾನು ನೀಡಬಹುದಾದ ಕೊಡುಗೆ ಹಾಗೂ ಪ್ರತಿಕಾರವೆಂದರೆ ಅದು ಈ ಕರ್ಜನ್’ವೈಲಿಯ ಪ್ರಾಣ ಎಂಬುದನ್ನೂ ಅರಿತುಕೊಂಡ!
ಅದು 1909 ರ ಜುಲೈ 1. ಇಂಗ್ಲೇಂಡಿನಲ್ಲಿ ‘ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್’ನ ವಾರ್ಷಿಕ ದಿನಾಚರಣೆಗೆ ವೇದಿಕೆ ಸಿದ್ಧವಾಗಿತ್ತು. ಅಂದಿನ ಪ್ರಧಾನ ಭಾಷಣಕಾರ ವೈಲಿ ಎಂದೂ ನಿಗದಿಯಾಗಿತ್ತು. ಬೇಟೆಗೆ ಕಾಯುವ ಹುಲಿಯಂತಿದ್ದ ದಿಂಗ್ರಾ ಕೂಡ ಸಭೆಗೆ ಹಾಜರಾಗಿದ್ದ! ರಾತ್ರಿ ಸುಮಾರು ಹತ್ತು ಗಂಟೆಯ ಸಮಯವಿರಬಹುದು. ಕರತಾಡನದ ಭಾಷಣ ಮುಗಿಸಿ ವೈಲಿ ಇನ್ನೇನು ವೇದಿಕೆಯಿಂದ ಕೆಳಗಿಳಿಯಬೇಕು ಅನ್ನುವಷ್ಟರಲ್ಲಿ ಪಂಜಾಬಿ ದಿರಿಸಿನಲ್ಲಿದ್ದ ದಿಂಗ್ರ ಅನುಮಾನವೇ ಬಾರದ ರೀತಿಯಲ್ಲಿ ವೈಲಿ ಸನಿಹ ತಲುಪಿದ. ಏನು ಏಕೆ ಎಂದು ಅರಿವಾಗುವ ಮೊದಲೇ ದಿಂಗ್ರಾನ ಕೈಲಿದ್ದ ಪಿಸ್ತೂಲ್ ಎರಡು ಬಾರಿ ಹೊಗೆಯುಗುಳಿತು! ವೈಲಿ ನೆಲಕ್ಕುರುಳಿದ. ವೈಲಿಯ ರಕ್ಷಣೆಗೆ ದೌಡಾಯಿಸಿದ ಓರ್ವ ಪಾಸರ್ ಕೂಡ ಇಲ್ಲಿ ಬಲಿಯಾಗಬೇಕಾಯಿತು. ಕೊಲೆಗಾರ ಕೊಲೆಗಾರ ಎಂದು ಸಭೆಯೆಲ್ಲಾ ಕಿರುಚುತ್ತಿದ್ದರೆ, ಎದೆಯೇರಿಸಿಯೇ ನಿಂತಿದ್ದ ದಿಂಗ್ರಾ “ನಾನು ಕೊಲೆಗಾರನಲ್ಲ, ನನ್ನ ಕರ್ತವ್ಯ ಸರಿಯಾಗಿಯೇ ಇದೆ. ನಿಮ್ಮ ಇಂಗ್ಲೇಂಡ್’ನ ವಶಪಡಿಸಲು ಜರ್ಮನಿ ಮುಂದಾದಾಗ ನೀವೂ ಕೂಡ ಮಾಡಿದ್ದು ಇದನ್ನೇ ತಾನೆ?” ಎಂದು ತನ್ನ ಕಾರ್ಯವನ್ನು ಸಮರ್ಥಿಕೊಂಡಿದ್ದ! ಮನಸ್ಸು ಮಾಡಿದ್ದರೆ ಸುಲಭವಾಗೆ ಅಲ್ಲಿಂದ ತಪ್ಪಿಸಬಹುದಾಗಿತ್ತು.
ಬಳಿಕ ಯಾರಿಗೂ ಹೆದರದೆ ಸ್ವತಃ ಬಂಧನಕ್ಕೊಳಗಾದ ಈತ 10 ದಿನಗಳವರೆಗೆ ಜೈಲಿನೊಳಗೆ ಕಳೆಯುಂತಾಯಿತು. ಅಂದು ಭಾರತೀಯ ಕ್ರಾಂತಿಕಾರಿಗಳು ಸಿಕ್ಕಿ ಬಿದ್ದಾಗಲೆಲ್ಲಾ ಬ್ರಿಟೀಷರು ಮಾಡುತ್ತಿದ್ದುದು ಬರೀ ನಾಮಕಾವಸ್ಥೆಯ ವಿಚಾರಣೆಯನ್ನಷ್ಟೇ. ಶಿಕ್ಷೆ ಮೊದಲೇ ತೀರ್ಮಾನಿಸಲ್ಪಡುತ್ತಿತ್ತು! ಇಲ್ಲೂ ಅದೇ ಆಯಿತು. ದಿಂಗ್ರನ ವಿಚಾರಣೆ ಕೇವಲ ಒಂದೇ ದಿನಕ್ಕೆ ಮುಗಿಸಲಾಯಿತು. ಆಗಸ್ಟ್ 17ಕ್ಕೆ (1909) ಗಲ್ಲಿಗೇರಿಸುವುದೆಂದು ತೀರ್ಪು ನೀಡಲಾಯಿತು! ಈ ಸಂದರ್ಭದಲ್ಲಿ ಜೈಲಿಗೆ ಭೇಟಿಯಾದ ಸಾವರ್ಕರ್’ಗೆ ದಿಂಗ್ರ ಹೇಳಿದ ಮಾತುಗಳೇನು ಗೊತ್ತೆ? “ನನ್ನ ಸಾವು ಬ್ರಟೀಷರಿಗೆ ಎಚ್ಚರಿಕೆಯಾಗಬೇಕು. ನನ್ನ ಅಂತಿಮ ಸಂಸ್ಕಾರವನ್ನು ಹಿಂದೂಸ್ಥಾನದ ರೀತಿ ರಿವಾಜುವಿಗನುಗುಣವಾಗೇ ನಡೆಸಬೇಕು. ಬ್ರಿಟೀಷರಿಗೆ ನನ್ನ ಹೆಣವನ್ನು ಮುಟ್ಟುವ ಅಧಿಕಾರ ಕೂಡ ಇಲ್ಲ. ನನ್ನ ವಸ್ತುಗಳನ್ನೆಲ್ಲಾ ಹರಾಜುಗೊಳಿಸಿ ಬರುವ ಹಣವನ್ನು ನ್ಯಾಷನಲ್ ಫಂಡ್’ಗೆ ಸೇರಿಸಿ…” ಸಾವಿನ ಬಾಯಲ್ಲಿ ನಿಂತಿದ್ದರೂ ಈ 24ರ ಹರೆಯದ ಯುವಕನ ಯೋಚನೆ ಮಾತ್ರ ಭವಿಷ್ಯದ ಭಾರತದ್ದಾಗಿತ್ತು. ಕಿಂಚಿತ್ತೂ ಅಲುಗಾಡದ ಇಂತಹ ಗಟ್ಟಿ ಹೃದಯ ಕ್ರಾಂತಿಕಾರಿಗಳಿಗಲ್ಲದೆ ಇನ್ಯಾರಿಗಿರಲು ಸಾಧ್ಯ?
ದಿಂಗ್ರನಿಗೆ ತನ್ನ ಸಾವಿನ ಬಗ್ಗೆ ಎಳ್ಳಷ್ಟೂ ವ್ಯಥೆ ಇರಲಿಲ್ಲ. ‘ಅಸಹಾಯಕನಾದ ನನ್ನಂತವರಿಗೆ ನನ್ನ ತಾಯಿ ಭಾರತಾಂಬೆಯ ರಕ್ಷಣೆಗೆ ರಕ್ತವನ್ನಲ್ಲದೆ ಬೇರೇನನ್ನು ನೀಡಲು ಸಾಧ್ಯವಿಲ್ಲ. ಓ ದೇವರೇ ಇವಳ ರಕ್ಷಣೆಗಾಗಿ ನನಗೆ ಈ ನೆಲದಲ್ಲಿ ಮತ್ತೆ ಮತ್ತೆ ಜನ್ಮ ಕೊಡು ಮತ್ತು ಆಕೆಗಾಗಿ ಮತ್ತೆ ಮತ್ತೆ ಸಾವನ್ನು ಕೊಡು’ ಎಂಬುದು ಇವನ ಮನದಾಳದ ಪ್ರಾರ್ಥನೆಯಾಗಿತ್ತು!
ದಿಂಗ್ರಾನ ನಡೆ ಮತ್ತದಕ್ಕೆ ದೊರಕಿದ ಸಾವು ಭಾರತದಾದ್ಯಂತ ಸುದ್ದಿಯಾಯಿತು. ಇದು ಇಲ್ಲಿನ ಕ್ರಾಂತಿಕಾರಿಗಳನ್ನು ಮತ್ತಷ್ಟು ಚುರುಕಾಗುವಂತೆ ಮಾಡಿತು. ದಿಂಗ್ರ ಬಯಸಿದಂತೆ ಆತನ ಸಾವು ಬ್ರಿಟೀಷರಿಗೆ ಎಚ್ಚರಿಕೆಯಾಗಿ ಮಾರ್ಪಟ್ಟಿತ್ತು. ಆದರೆ ಬ್ರಿಟೀಷರ ನೆರಳಲ್ಲಿದ್ದ ಈತನ ತಂದೆ ಮಾತ್ರ ಮಗನ ಕಾರ್ಯವನ್ನು ಮೆಚ್ಚದೆ ಈತ ತನ್ನ ಮಗನೇ ಅಲ್ಲ ಎಂದು ತಿರಸ್ಕರಿಸಿಬಿಟ್ಟ! ಆದರೇನಂತೆ ಅಷ್ಟೊತ್ತಿಗಾಗಲೇ ಸಾವಿರಾರು ಭಾರತೀಯ ಪೋಷಕರು ದಿಂಗ್ರನನ್ನು ತನ್ನ ಸ್ವಂತ ಮಗನೆಂದು ಆರಾಧಿಸಲು ಪ್ರಾರಂಭಿಸಿದ್ದರು! ಪ್ರತೀಯೋರ್ವರು ದಿಂಗ್ರನಿಗಾಗಿ ಕಣ್ಣೀರಿಟ್ಟರು. ಈತ ಸ್ವಾತಂತ್ರ್ಯ ಹೋರಾಟದಲ್ಲಿ ಸವೆಸಿದ ಹೆಜ್ಜೆಗಳು ಅಲ್ಪವಾದರು ಅವುಗಳೆಲ್ಲಾ ಸ್ವಾರ್ಥರಹಿತ ಹೆಜ್ಜೆಗಳೆಂಬುದನ್ನು ನಾವೆಂದೂ ಮರೆಯಬಾರದು.
ಹೀಗೆ 1906ರಲ್ಲಿ ಇಂಗ್ಲೆಂಡ್’ಗೆ ತೆರಳಿದ್ದ ದಿಂಗ್ರ ಮುಂದಿನ ಮೂರೇ ವರ್ಷಗಳಲ್ಲಿ ತನ್ನೆಲ್ಲಾ ಕನಸುಗಳನ್ನು ಮೂಟೆ ಕಟ್ಟಿ ಭಾರತಕ್ಕಾಗಿ ಪ್ರಾಣವನ್ನೇ ನೀಡಿದ್ದು ಇಂದು ಇತಿಹಾಸ. ಭಾರತದ ಸ್ವಾತಂತ್ರ್ಯದ ಪಟಗಳನ್ನು ಕೆದಕಿದಾಗ ನಮ್ಮ ಕಣ್ಣಂಚಿನಲ್ಲಿ ನೀರಿಳಿಸುವುದು, ಮೈನವಿರೇಳಿಸುವುದು ಈ ಕ್ರಾಂತಿಕಾರಿಗಳೇ. ಬ್ರಿಟೀಷ್ ದಾಸ್ಯದ ವಿರುದ್ಧ ಹೋರಾಡಿ ಭಾರತೀಯರ ಭವಿಷ್ಯದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತೆತ್ತವರು ಇವರುಗಳು. ಮಹಾತ್ಮಗಾಂಧಿ ನೇತ್ರತ್ವದ ಅಹಿಂಸಾ ಚಳುವಳಿಯೊಂದೇ ಭಾರತದ ಸ್ವಾತಂತ್ರ್ಯದಲ್ಲಿ ಮಹತ್ತರ ಪಾತ್ರ ವಹಿಸಿದ್ದು ಎಂದುಕೊಂಡರೆ ಅದು ನಾವು ಈ ಕ್ರಾಂತಿಕಾರಿಗಳಿಗೆ ಮಾಡುವ ಅಪಮಾನವಾಗಬಹುದೇನೋ! ಕೊನೆ ಪಕ್ಷ ಸ್ವಾತಂತ್ರ್ಯದ ದಿನವಾದರೂ ಒಂದರೆಕ್ಷಣ ಇವರುಗಳನ್ನು ನೆನಪಿಸೋಣ, ಘೋಷಣೆ, ಭಾಷಣಗಳ ಮಧ್ಯೆಯಾದರೂ ಸೇರಿಸಿ ಗೌರವಿಸೋಣ. ಅಷ್ಟಕ್ಕೂ ಅಂದು ಅವರು ಪ್ರಾಣವರ್ಪಿಸಿದ್ದು ನಮ್ಮ ಸುಸ್ಥಿತಿಗಾಗಿ ತಾನೇ? ಅಮರವಾಗಿಸೋಣ ಇವರ ನೆನಪುಗಳನ್ನು.
ಇಂತಿ
ಮಂಜುನಾಥ ಕೆ ಎಂ
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಬಸವಪಟ್ಟಣ {ಚಿರಡೋಣಿ}
ಗುರುಬ್ರಹ್ಮ ಗುರುರ್ವಿಷ್ಣುಗುರುಃದೇವೋ ಮಹೇಶ್ವರಃಗುರುಸಾಕ್ಷಾತ್ ಪರಃ ಬ್ರಹ್ಮ. ತಸ್ಮೈಶ್ರೀ ಗುರವೇ ನಮಃ....
ಮಂಜುನಾಥ ಕೆ ಎಮ್
ಮಾಜಿ ರಾಷ್ಟ್ರಪತಿ ರಾಧಾಕೃಷ್ಣನ್
ಭೋದನೆಯ ಮೂಲಕ ಸಾಧನೆಯ ಹಾದಿಗೆ ನಡೆಸಿದ ನನ್ನ ಪ್ರೀತಿಯ ಎಲ್ಲಾ ಗುರುಗಳಿಗು ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಗುರುವಿಲ್ಲದೆ ಬದುಕಿಲ್ಲ ಗುರುವನರಿತರೆ ಬದುಕು ಬೆಲ್ಲ ಎನ್ನುವ ಮಾತನ್ನು ಈ ಶುಭಸಂದರ್ಭದಲ್ಲಿ ಹೇಳುವುದಕ್ಕೆ ಇಷ್ಟಪಡ್ತಿನಿ
ಮತ್ತೆ ಶಿಕ್ಷಕರ ದಿನಾಚರಣೆ ಬಂದಿದೆ ಅದೇ ಬಾಲ್ಯದ ನೆನಪುಗಳನ್ನು ಹೊತ್ತು ತಂದಿದೆ ಈ ದಿನದಂದು ನಮಗೆ ಆಗ ಹಬ್ಬದ ಸಂಭ್ರಮ. ಡಾ. ರಾಧಾಕೃಷ್ಣನ್ ಅವರ ಭಾವಚಿತ್ರವಿರುವ ಚಿಕ್ಕ ಪೋಸ್ಟರ್ ಗಳನ್ನು ನೋಟ್ ಬುಕ್ ಮೇಲೆ ಅಂಟಿಸಿ ಸಂತಸಪಡುತ್ತಿದ್ದೆವು. ಶಿಕ್ಷಕರ ಕುರಿತು ಮನೆಯಲ್ಲಿ ಅಪ್ಪ ಅಮ್ಮನಿಂದ ಬರೆಯಿಸಿಕೊಂಡು ಬಂದ ಪುಟ್ಟ ಭಾಷಣ ಮಾಡಿ ಸಂತಸಪಡುತ್ತಿದ್ದೆವು- ಇದು ಪ್ರಾಥಮಿಕ ಶಾಲೆಯಲ್ಲಿನ ಸಂಭ್ರಮ.
ಮುಂದೆ ಮಾಧ್ಯಮಿಕ ಶಾಲೆಗೆ ಬಂದಾಗ, ಶಿಕ್ಷಕ ದಿನಾಚರಣೆಗೆ ಚಿಕ್ಕವರಿದ್ದಾಗ ಕೊಡುತ್ತಿದ್ದ ಗೌರವ ಕೊಂಚ ಕಡಿಮೆಯಾಗಿತ್ತು. ಯಾಕೆಂದರೆ, ಪ್ರಾಥಮಿಕ ಶಾಲೆಯಲ್ಲಿ ಯಾವ ಶಿಕ್ಷಕರು ನಮ್ಮ "ಹೀರೋ"ಗಳಾಗಿ ಕಂಗೊಳಿಸುತ್ತಿದ್ದರೋ, ಅವರು ಈಗ ಕೊಂಚ ದುರ್ಬಲರಾಗಿ ಗೋಚರಿಸತೊಡಗಿದ್ದರು. ಹಾಗಂತ ಅವರಿಗೆ ಗೌರವ ಕೊಡುತ್ತಿರಲಿಲ್ಲವೆಂತಲ್ಲ. ಗೌರವದಲ್ಲಿ ಸ್ವಲ್ಪ ವ್ಯತ್ಯಾಸವಾಗಿರುತ್ತದೆ ಅಷ್ಟೆ.
ಇನ್ನು ಕಾಲೇಜ್ ಮೆಟ್ಟಿಲು ಹತ್ತಿದಾಗಲಂತೂ ಶಿಕ್ಷಕರು ಅವರೇನು ಮಹಾ ಎಂಬ ಉಡಾಫೆ ಮನೋಭಾವ ಬೆಳೆದಿರುತ್ತದೆ. ಇಂಥ ಮನೋಭಾವ ಎಲ್ಲರಲ್ಲಿಯೂ ಇರುತ್ತದೆ ಎಂದು ಹೇಳುತ್ತಿಲ್ಲ. ಬಹುಶಃ ನೂರು ಕಾಲೇಜ್ ಹುಡುಗರಲ್ಲಿ ಸುಮಾರು 80ರಷ್ಟು ಹುಡುಗರು ಇದೇ ಮನೋಭಾವ ಹೊಂದಿರಬಹುದೇನೋ. ಹೀಗಿರುವಾಗ ಶಿಕ್ಷಕ ದಿನಾಚರಣೆಯ ಮಹತ್ವ ಹೇಗೆ ಗೊತ್ತಾಗಬೇಕು? ಶಿಕ್ಷಕರ ಮಹತ್ವದಬಗ್ಗೆ ತಿಳಿದು ಕೊಳ್ಳುವುದಾದರು ಹೇಗೆ? ಅಲ್ವಾ ಅದಕ್ಕೆ ಪುರಂದರ ದಾಸರು. "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ " ಎಂದು ಹೇಳಿದ್ದಾರೆ ಏಕೆಂದರೆ ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಬಹಳ ಅನನ್ಯವಾದದ್ದು, ಪ್ರತಿಯೊಬ್ಬರೂ ತಮಗೆ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುಗಳನ್ನು ನೆನೆಯುವ ದಿನವೇ ಸೆ.5, ಶಿಕ್ಷಕರ ದಿನಾಚರಣೆ.
ಮಾಜಿ ಉಪರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ 132ನೇ ಜನ್ಮದಿನವನ್ನು ಇಂದು ನಾವು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ಶಿಕ್ಷಕರೆಂದರೆ ಇಂದಿನ ಪೀಳಿಗೆಗೆ ಒಂದು ವೃತ್ತಿಯಾಗಷ್ಟೇ ಸೀಮಿತವಾಗಿಬಿಟ್ಟಿದೆ. ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಅದರಲ್ಲಿ ಶಿಕ್ಷಕರೇ ಜೀವಾಳವಾಗಿರುತ್ತಾರೆ. ಯಾವುದೇ ಕ್ಷೇತ್ರದಲ್ಲಾದರೂ ಶಿಕ್ಷಕ ಇಲ್ಲದೇ ಅಭಿವೃದ್ಧಿ ಅಸಾಧ್ಯ. ಓರ್ವ ಶಿಕ್ಷಕ ದೇಶದ ರಾಷ್ಟ್ರಪತಿಯಾಗಿ ಮಾದರಿ ವ್ಯಕ್ತಿತ್ವವಾಗಿ ಹೊರಹೊಮ್ಮಲು ಸಾಧ್ಯ ಎಂಬುದಕ್ಕೆ ಸರ್ವಪಲ್ಲಿ ರಾಧಾಕೃಷ್ಣನ್ ಅವರೇ ಉತ್ತಮ ಉದಾಹರಣೆ. ಪ್ರಸ್ತುತ ಭಾರತದಲ್ಲಿ ಮೌಲ್ಯಾಧಾರಿತ ಶಿಕ್ಷಣ ಕಳೆಗುಂದುತ್ತಿರುವುದು ಮೌಲ್ಯಾಧಾರಿತ ಶಿಕ್ಷಕರ ಕೊರತೆಯನ್ನೂ ಎತ್ತಿ ಹಿಡಿಯುತ್ತಿದೆ!
ಇಂದಿನ ಪೀಳಿಗೆಯವರನ್ನು ಕೇಳಿ ನೋಡಿ, ನೀನು ಏನಾಗಬೇಕೆಂದು ಕೇಳಿದರೆ, ಅಪ್ಪಿ ತಪ್ಪಿ ಕೂಡ ನಾನೋರ್ವ ಶಿಕ್ಷಕನಾಗಬೇಕು ಎಂದು ಹೇಳುವುದಿಲ್ಲ. ಅವರ ದೃಷ್ಠಿಯೇನಿದ್ದರೂ ಇಂಜಿನಿಯರೋ ಡಾಕ್ಟರಾಗುವ ಗುರಿಯತ್ತ ಪಯಣ ಬೆಳೆಸಿರುತ್ತದೆ. ಹೀಗೆ ಎಲ್ಲರೂ ಶಿಕ್ಷಕ ವೃತ್ತಿಯಿಂದ ದೂರ ಉಳಿದರೆ ದೇಶದ ಸ್ಥಿತಿ ಏನಾಗಬೇಡ? ಪ್ರತಿಷ್ಠಿತ ಕಾಲೇಜು ಶಿಕ್ಷಕರನ್ನು ಬಿಡಿ, ಅವರಿಗೆ ಲಕ್ಷಗಟ್ಟಳೆ ಸಂಬಳ ಸವಲತ್ತು ಎಲ್ಲವೂ ದೊರೆಯುತ್ತದೆ. ಆದರೆ ಸಾಮಾನ್ಯ ಸರ್ಕಾರಿ ಶಿಕ್ಷಕರ ಪಾಡು ಅಂದುಕೊಂಡಷ್ಟು ಸುಲಭವಲ್ಲ. ಸರ್ಕಾರಿ ಕೆಲಸವೆಂದರೆ ಜೀವನದಲ್ಲಿ ಸೆಕ್ಯೂರ್ಡ್ ಎಂಬ ಭಾವನೆ ಮೂಡುತ್ತದೆ. ಆದರೆ ಶಿಕ್ಷಕ ವೃತ್ತಿಗೆ ಹಾಗಲ್ಲ, ಅದರಲ್ಲಿಯೂ ಇಂದಿನ ಸರ್ಕಾರಿ ಶಾಲಾ ಶಿಕ್ಷಕರ ಸ್ಥಿತಿ ಉತ್ತಮವಾಗಿಲ್ಲ ಎಂಬುದಂತೂ ಸತ್ಯ!.
ಆದರೆ ಶಿಕ್ಷಣದ ಗುಣಮಟ್ಟ, ಶಿಕ್ಷಕರ ಮೌಲ್ಯಗಳೂ ಸಹ ಕಡಿಮೆಯಾಗುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಪ್ರಪಂಚವನ್ನೇ ಅರಿಯದ ಮಕ್ಕಳಿಗೆ ಪ್ರಪಂಚ ಜ್ನಾನ ತಿಳಿಸುವ ಶಿಕ್ಷಕರು ನಿಜವಾಗಿಯೂ ನಮ್ಮ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತಿದ್ದಾರ ಎಂಬ ಸಂಶಯ ಕಾಡುತ್ತದೆ.! ಹಾಗಂತ ವಿವಿಧ ಕಾರಣಗಳಿಂದಾಗಿ ದೇಶ ಅದಃಪತನದತ್ತ ಮುಖ ಮಾಡಿರುವುದಕ್ಕೆ ಶಿಕ್ಷಕರೇ ನೇರ ಕಾರಣ ಎಂದು ಹೇಳಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದೇವೆ ನಾವು.....
ಇಂದಿನ ಶಿಕ್ಷಣ ಹಾಗೂ ಶಿಕ್ಷಕರನ್ನು ನೋಡಿದರೆ ಖಂಡಿತವಾಗಿಯೂ ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಶಂಕೆ ಮೂಡುತ್ತದೆ. ಇಂದು ಅದೆಷ್ಟು ಕಾಲೇಜುಗಳಲ್ಲಿ ಅವ್ಯವಹಾರ ನಡೆಯುತ್ತಿಲ್ಲ, ಅದೆಷ್ಟು ವಿದ್ಯಾ ಸಂಸ್ಥೆಗಳಲ್ಲಿ(ಪ್ರಮುಖವಾಗಿ ಕಾಲೇಜುಗಳಲ್ಲಿ) ಶಿಕ್ಷಕರೇ ಅವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲ ಹೇಳಿ.... ಇದನ್ನೂ ಸಹಿಸಬಹುದು. ಎಷ್ಟೋ ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿನಿಗಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇದ್ದಲ್ಲಿ ಎಷ್ಟೋ ಕಾಲೇಜುಗಳಲ್ಲಿ ಹಣ ಪಡೆದು ಹಾಜರಾತಿ ನೀಡುತ್ತಾರೆ. ಅದು ಹೋಗಲಿ, ನಕಲು ಮಾಡಲು, ಪರೀಕ್ಷೆಗಳಲ್ಲಿ ವಾಮಮಾರ್ಗದಿಂದ ಪಾಸಾಗಲು ಅದೆಷ್ಟು ಶಿಕ್ಷಕರು ಸಹಾಯಮಾಡುವುದಿಲ್ಲ ಹೇಳಿ.....?
ಓರ್ವ ವಿದ್ಯಾರ್ಥಿಗೆ ತನ್ನ ಭವಿಷ್ಯದ ಬಗ್ಗೆ ಒಂದು ಗುರಿ ಕಟ್ಟಿಕೊಡುವ ಶಿಕ್ಷಕರೇ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದರೇ ದೇಶ ಹೇಗೆ ತಾನೇ ಉದ್ಧಾರವಾದೀತು....? ಇಂತಹ ಕೆಲವು ಮೌಲ್ಯರಹಿತವಾದ ಶಿಕ್ಷಕರಿಂದ ಇಡೀ ಶಿಕ್ಷಕ ವರ್ಗದವರಿಗೇ ಕಳಂಕ ಅಲ್ಲವೇ....? ಟಿಸಿ ಹೆಚ್ ಮುಗಿಸಿದ ನಂತರ ಶಿಕ್ಷಕರಿಗೆ ಶಿಕ್ಷಣ ನೀಡುವುದರ ಕುರಿತು ತರಬೇತಿ ನೀಡಲಾಗುತ್ತದೆ ಆದರೆ ಅದರಲ್ಲಿಯೂ ಯಾವುದೇ ಪರಿಣಾಮಕಾರಿಯಾದ ತರಬೇತಿ ನೀಡುವುದಿಲ್ಲ. ಪರಿಣಾಮ ನಮ್ಮ ದೇಶದಲ್ಲಿ ರಾಧಾಕೃಷ್ಣನ್ ಅವರು ಕಂಡಿದ್ದ ಕನಸಿನ ಶಿಕ್ಷಣ ಹಾಗೂ ಶಿಕ್ಷಕರ ವರ್ಗ ಕನಸಾಗಿಯೇ ಉಳಿದಿದೆ. ಅದೆಷ್ಟೋ ಶಿಕ್ಷಕರು ತಮಗೇ ಗುರಿಯಿಲ್ಲದೇ ವಿದ್ಯಾರ್ಥಿಗಳಿಗೆ ಗುರಿ ಕಟ್ಟಿಕೊಡುವ ಸ್ಥಿತಿ ಎದುರಾಗಿದೆ ಮೇಲಾಗಿ ಶಿಕ್ಷಕರ ಕೊರತೆ ತಾಂಡವಾಡುತ್ತಿದೆ.
ಶಿಕ್ಷಕರ ವರ್ಗವನ್ನೇ ಕೀಳರಿಮೆ ದೃಷ್ಠಿಯಿಂದ ನೋಡುವ ಸ್ಥಿತಿಗೆ ನಾವು ತಲುಪಿದ್ದೇವೆ ಎಂದರೆ ಅದಕ್ಕಿಂತಲೂ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಇಂದಿಗೂ ಸಹ ಸರ್ಕಾರಿ ಶಾಲೆಗಳ ಸ್ಥಿತಿ ಬದಲಾಗಿಲ್ಲ. ಶಿಕ್ಷಕರನ್ನು ನಿಯೋಜಿಸಲು ಸರ್ಕಾರ ಮೀನಾ-ಮೇಷ ಎಣಿಸುತ್ತಿದೆ. ಇದು ಪ್ರತಿ ಸರ್ಕಾರ ಬಂದಾಗಲೂ ಶಾಲಾ ಶಿಕ್ಷಕರ ಸಂಖ್ಯೆ ಬಹಳ ಕಡಿಮೆಯಿರುತ್ತದೆ. 5 ವರ್ಷಗಳು ಸರ್ಕಾರ ಅಸ್ಥಿತ್ವದಲ್ಲಿದ್ದರೂ ಸಹ ಶಿಕ್ಷಕರನ್ನು ನೇಮಿಸುವ ಕಾರ್ಯಕ್ಕೆ ಮುಕ್ತಿದೊರೆಯುವುದಿಲ್ಲ.
ಸರಿಯಾದ ಸೌಲಭ್ಯ ಒದಗಿಸದೇ ಇದ್ದರೆ ಯಾರಿಗೆ ತಾನೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಬೇಕೆಂಬ ಭಾವನೆ ಮೂಡುತ್ತದೆ ಹೇಳಿ...? ಅದೆಷ್ಟು ಸರ್ಕಾರಿ ಶಿಕ್ಷಕರು ಇಂದು ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿಲ್ಲ....? ಇವೆಲ್ಲದರ ಪರಿಣಾಮ ಭಾರತಕ್ಕೆ ಉತ್ತಮ ನಾಗರಿಕರನ್ನು ತಯಾರು ಮಾಡುವ ಕ್ರಿಯೆಯಲ್ಲಿ ಗುಣಮಟ್ಟ ಕಡಿಮೆಯಾಗುತ್ತಿದೆ.
ಈ ವರ್ಷದ ಶಿಕ್ಷಕರ ದಿನಾಚರಣೆಯಿಂದಲಾದರೂ ನಾವು ಉತ್ತಮ ಗುಣಮಟ್ಟದ, ಮೌಲ್ಯಾಧಾರಿತ ಶಿಕ್ಷಕರಿಗೆ ನಿರೀಕ್ಷಿಸೋಣ.... ನಮ್ಮ ಉನ್ನತಿಗೆ ಕಾರಣಕರ್ತರಾದ ಗುರುಗಳಿಗೆ ವಂದಿಸೋಣ.... ಹ್ಯಾಪಿ ಟೀಚರ್ಸ್ ಡೇ....
ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ
ಮಂಜುನಾಥ ಕೆ ಎಂ
ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ
ಬ್ರಿಟೀಷರ ಕುತಂತ್ರದಿಂದಾಗಿ ಅತಂತ್ರ ಪರರಿಸ್ಥಿತಿಯಲ್ಲಿದ್ದ ನಮ್ಮ ದೇಶವನ್ನು ಹೋರಾಡಿ ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯವನ್ನಾಗಿಸಿದ ಮಹಾತ್ಮರೆಲ್ಲರನ್ನೂ ತುಂಬು ಹೃದಯದಿಂದ ಸ್ಮರಿಸಿಕೊಳ್ಳುತ್ತ ನಾಡಿನ ಸಮಸ್ತ ಜನತೆಗೂ 73 ನೇ ಸ್ವಾತಂತ್ರೋತ್ಸವದ ಶುಭ ಕಾಮನೆಗಳು
ಉತ್ತರದಲ್ಲಿ ಉತ್ತುಂಗ ಹಿಮವಂತ ದಕ್ಷಿಣದ ತುದಿಯಲ್ಲಿ ಅಗಾಧ ಶರತ್ತು ತಾಯಿಯ ಶಿರದಲ್ಲಿ ಸದಾ ಹಿಮ ವರ್ಷ ತಾಯಿಯ ಚರಣದಲ್ಲಿ ನೀಲ ಸಿಂಧೂವಿನ ಜಲ ಸ್ಪರ್ಶ ಒಂದೆಡೆ ದಟ್ಟ ಕಾಡು ಇನ್ನೊಂದೆಡೆ ವಿಶಾಲವಾದ ನದಿ ಬಯಲು ಒಂದೆಡೆ ಬಣಗುಡುವ ಮರುಭೂಮಿ ಇನ್ನೊಂದೆಡೆ ಧುಮುಕಿ ಧುಮಿಸುವ ನದಿ ಎತ್ತ ನೋಡಿದರತ್ತಾ ಸುಂದರವಾದ ಹಚ್ಚ ಹಸುರಿನ ಲೋಕ ಬೆಟ್ಟ ಗುಡ್ಡಗಳ ಸಾಲು ಸಾಲು ಇದು ನಮ್ಮ ಭಾರತ
ಸ್ವರ್ಗಕ್ಕು ಮುಕ್ತಿಗು ದ್ವಾರವಾದಂತಹ.
ಭಾರತ ದೇಶದಲ್ಲಿ ಜನಿಸಿರುವ ಪ್ರತಿಯೊಂದು ಜೀವಿಯು ಕೂಡ ಆ ದೇವತೆ ಗಳಿಗಿಂತ ಮಿಗಿಲು ಇದು ನಾವು ಹೇಳಿದ ಮಾತಲ್ಲ ಆ ದೇವತೆಗಳೇ ಭಾರತವನ್ನು ಕೊಂಡಾಂಡಿ ದಂತಹ ಮಾತುಗಳು ಅಂತಹ ಭಾರತ ದೇಶದಲ್ಲಿ ನಾವುಗಳಿಂದು ಪುಣ್ಯ ಜೀವಿಗಳಾಗಿ ಜನಿಸಿದ್ದೇವೆ ಅದು ವಿಶೇಷ
ಆತ್ಮೀಯರೆ ಭಾರತಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳಾಯ್ತು ಒಬ್ಬ ಮಾನವನ ವಯಸ್ಸಿಗೆ ಓಲಿಸಿಕೊಂಡರೆ ಇದು ವೃದ್ಧಾಪ್ಯದ ಕಾಲ ಆದರೆ ಭಾರತಕ್ಕಿದು ಯೌವನದ ಕಾಲ ಯಾಕೆ ಅಂತ ಹೇಳಿದ್ರೆ ಭಾರತ ಅತಿ ಹೆಚ್ಚಿನ ಪ್ರಮಾಣದಲ್ಲಿ ಯುವಜನತೆಯನ್ನು ಹೊಂದಿದೆ ಎನ್ನುವಂತದ್ದು ಈ ಮಾತನ್ನು ನಾನು ಕಳೆದ ವರ್ಷ ಕೂಡ ಹೇಳಿದ್ದೆ
ಈ ಮಾತನ್ನು ಮತ್ತೆ ಯಾಕೆ ಹೇಳಿದೆ ಅಂದರೆ ಒಂದು ರಾಷ್ಟ್ರ ಅಭಿವೃದ್ಧಿ ಹೋಂದಬೇಕು ಅಂದರೆ ಆ ರಾಷ್ಟ್ರ ಆ ರಾಷ್ಟ್ರದ ಯುವ ಜನತೆಯನ್ನ ಅವಲಂಭಿಸಿರುತ್ತೆ ಪ್ರಸ್ತುತ ನಮ್ಮ ದೇಶದಲ್ಲಿ ಶೇಕಡಾ 60 ರಷ್ಟು ಯುವಜನತೆಯನ್ನು ಹೊಂದಿದ್ದರು ಸಹ ಯಾಕೆ ನಮ್ಮ ಭಾರತ ಅಮೇಗತಿಯಲ್ಲಿ ಅಭಿವೃದ್ಧಿ ಹೋಂದುತ ಇದೆ ಹಾಗಾದರೆ ಯುವ ಜನತೆ ಸರಿಯಾದ ದಾರಿಯಲ್ಲಿ ಸಾಗ್ತ ಇಲ್ವ ನಮ್ಮ ಯುವ ಪೀಳಿಗೆ ದಾರಿ ತಪ್ತ ಇರೋದಾದ್ರು ಎಲ್ಲಿ
1985ರ ನಂತರ ಭಾರತದಲ್ಲಿ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬವನ್ನು "ರಾಷ್ಟ್ರೀಯ ಯುವ ದಿನ"ವನವನ್ನಾಗಿ ಆಚರಿಸುತ್ತೆವೆ ಮೊದಲಿಗೆ ಯುವ ಜನತೆ ಎಂದು ಗುರುತಿಸುವುದು ನಿರ್ದಿಷ್ಟ ವಯಸ್ಸಿನಿಂದ ಅದು ಸುಮಾರು 18-20 ರಿಂದ 35 ವರ್ಷದವರೆಗೆಗಿನ ವಯಸ್ಸಿನವರೆಗೆ ಯುವಜನತೆ ಎಂದು ಕರೆಯಬಹುದು
ಯುವಕರೆ ಎದ್ದೇಳಿ ಗುರಿ ಮುಟ್ಟುವವರೆಗೆ ಮುನ್ನಡೆಯಿರಿ” ಈ ಮಾತು ಎಂದಿಗೂ ಅಮರ ವಾಕ್ಯವಾಗಿ ಉಳಿದಿದೆ. ಯುವಜನತೆಗೆ ಈ ಮನ ಮುಟ್ಟುವಂಥ ಮಾತನ್ನು ಹೇಳಿದವರೇ ಬೇರಾರೂ ಅಲ್ಲ ಭಾರತದ ಮಹಾನ್ ಚಿಂತಕ, ತತ್ವಜ್ಞಾನಿ ದೇಶ ಭಕ್ತ ಎಂದೇ ಖ್ಯಾತಿಯಾಗಿರುವ ಸಂತ ಸ್ವಾಮಿ ವಿವೇಕಾನಂದ . ಆದರೆ ಸಂಸ್ಕೃತಿಯ ತವರೂರು ಎಂದೇ ಕರೆಯಲ್ಪಡುವ ಈ ಭಾರತ ದೇಶಕ್ಕೆ ಈಗಿನ ಯುವಜನತೆ ಎಷ್ಟರ ಮಟ್ಟಿಗೆ ಸಂಸ್ಕೃತಿ ಹಾಗೂ ಭಾಷೆಗೆ ಮಾನ ಹಾಗೂ ಗೌರವ ಕೊಡುತ್ತಾರೆ? ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ. ಇವತ್ತು ನಮ್ಮ ಸಂಸ್ಕೃತಿ, ಭಾಷೆ, ವೇಷ ಭೂಷಣ ಬಿಟ್ಟು ಬೇರೆ ದೇಶದ ಭಾಷೆಗೆ ಸಂಸ್ಕೃತಿಗೆ ಯುವಜನತೆ ಹೆಚ್ಚು ಹೆಚ್ಚು ಅಕರ್ಷಿತರಾಗುತ್ತಿದ್ದಾರೆ.
ಆದುನಿಕ ಕಾಲದಲ್ಲಿ ಯುವಜನತೆಯ ಪಾತ್ರ ಎಷ್ಟು ಎಂಬುದು ಚರ್ಚಾ ವಿಷಯವಾಗಿದೆ.
ಭಾವನೆಗಳು ಬರಹದ ಪ್ರತಿಬಿಂಬ
ಮಂಜುನಾಥ ಕೆ ಎಂ
ಪ್ರೀತಿಯ ಸ್ನೇಹಿತರೇ ಪ್ರಸ್ತುತ ಭಾರತದ ಯುವ ಜನತೆ ಮೊಬೈಲ್ ಎಂಬ ವೈರಸ್ಗೆ ಯಾವ ರೀತಿ ಮಾರು ಹೋಗಿದ್ದಾರೆ ಎಂಬುದನ್ನು ಕುರಿತು ನನ್ನ ಸ್ವಾಸಾಮರ್ಥ್ಯದಿಂದ ನಾನು ರಚಿಸಿರುವ ನಾಲ್ಕನೆಯ ಗೀತೆ ಏನಾದರು ತಪ್ಪಿದ್ದರೆ ಸರಿಪಡಿಸಿ
ಮೂಲಗೀತೆ ಗಣಪ ಚಿತ್ರದ
"ಮುದ್ದಾಗಿ ನೀನು ನನ್ನ ಕೂಗಿದೆ "
" ಸದ್ದಿಲ್ಲದೇನೆ ಸುದ್ದಿಯಾಗಿದೆ "
ನನ್ನ ರಚನೆ
ಫ್ರೇಂಡಾಗಿ ನೀನು ಮೆಸೇಜ್ ಮಾಡಿದೆ
ಗೊತ್ತಿಲ್ಲದೇನೆ ರಿಪ್ಲೆ ಮಾಡಿದೆ
ಸದ್ದಿಲ್ಲದೇನೆ ಸುದ್ದಿಯಾಗಿದೆ
ವಾಟ್ಸಪಲ್ಲಿ ಒಂದು ಮಿಂಚು ತಾಗಿದೆ
ಫೇಸ್ ಬುಕ್ ಮೇಲೆ ಇಂದು ಆಸೆಯಾಗಿದೆ
ಇಂದಲ್ಲ ನಾಳೆ ಮೋಬೈಲಿಂದ ಏನೋ ಕಾದಿದೆ
ವಾಟ್ಸಾಪ್ ಬಂದ ನಂತರ
ಟೆಲಿಗ್ರಾಮ್ ಮಾಯವಾಗಿದೆ
ಮೆಸೇಜ್ ತುಂಬಿಕೊಳ್ಳಲು
ಸ್ಟೋರೇಜ್ ಸಾಲದಾಗಿದೆ
ಮೊದಲೇನೆ ಹೇಳಿ ಬಿಡುವೆನು
ನನಗಂತೂ ಮೊಬೈಲ್ ಬೇಕಿದೆ
ಮೊಬೈಲಲ್ಲಿದ ಒಂಟಿ ಜೀವನ
ನನಗೀಗ ಬೇಡವಾಗಿದೆ
ಉಪಯೋಗ ಇಲ್ಲದಿದ್ದರೂ
ಮೊಬೈಲ್ ಒಂದೇ ಆಸ್ತಿ ಯಾಗಿದೆ
ಸ್ಮಾಟ್ ಫೋನ್ ಬಂದ ಮೇಲೆಯೆ
ಯುವ ಜನತೆ ದಾರಿ ತಪ್ಪಿದೆ
ಫ್ರೇಂಡಾಗಿ ನೀನು ಮೆಸೇಜ್ ಮಾಡಿದೆ
ಗೊತ್ತಿಲ್ಲದೇನೆ ರಿಪ್ಲೆ ಮಾಡಿದೆ
ಸದ್ದಿಲ್ಲದೇನೆ ಸುದ್ದಿಯಾಗಿದೆ
ವಾಟ್ಸಾಪಲ್ಲಿ ಒಂದು ಮಿಂಚು ತಾಗಿದೆ
ಫೇಸ್ ಬುಕ್ ಮೇಲೆ ಇಂದು ಆಸೆ ಮೂಡಿದೆ
ಇಂದಲ್ಲ ನಾಳೆ ಮೋಬೈಲಿಂದ ಏನೋ ಕಾದಿದೆ
ಫೇಸ್ ಬುಕಲ್ಲಿ ನೀನು ಹಾಕಿರೊ
ಫೋಟೋ ಎಷ್ಟು ಪುಣ್ಯ ಮಾಡಿದೆ
ವಾಟ್ಸಾಪಲ್ಲಿ ನೀನು ಕುತಿರೋ
ಡಿಪಿ ಕೂಡ ಧನ್ಯವಾಗಿದೆ
ದಿನನಿತ್ಯ ಆನ್ ಲೈನ್ ನಲ್ಲಿ
ಇರುವಂತ ಆಸೆಯಾಗಿದೆ
ಆನ್ ಲೈನ್ ಗೆ ಬಂದ ನಂತರ
ನಿನ್ನ ನಡತೆನೆ ಬೇರೆಯಾಗಿದೆ
ಮೊಬೈಲಲ್ಲಿದ ಒಂಟಿ ಜೀವನ
ಯುವಜನತೆಗೆ ಬೇಕಾಗಿದೆ
ಯುವಜನತೆ ಹೇಳು ಬೇಗನೆ
ನಿಮಗೂನು ಹೀಗೆಯಾಗಿದೆ
ಫ್ರೇಂಡಾಗಿ ನೀನು ಮೆಸೇಜ್ ಮಾಡಿದೆ
ಗೊತ್ತಿಲ್ಲದೇನೆ ರಿಪ್ಲೆ ಮಾಡಿದೆ
ಸದ್ದಿಲ್ಲದೇನೆ ಸುದ್ದಿಯಾಗಿದೆ
ವಾಟ್ಸಾಪಲ್ಲಿ ಒಂದು ಮಿಂಚು ತಾಗಿದೆ
ಫೇಸ್ ಬುಕ್ ಮೇಲೆ ಇಂದು ಆಸೆ ಮೂಡಿದೆ
ಇಂದಲ್ಲ ನಾಳೆ ಮೋಬೈಲಿಂದ ಏನೋ ಕಾದಿದೆ
ನಾನು ಕವಿಯಲ್ಲ ತೋಚಿದನ್ನ ಗೀಚಿದ್ದೇನೆ ಇಷ್ಟ ಆದ್ರೆ ಲೈಕ್ ಮಾಡಿ ಏನಾದರು ತಪ್ಪಿದ್ದರೆ ಸರಿಪಡಿಸಿ ಅದನ್ನು ಬಿಟ್ಟು ಎಲ್ಲಿ ಕಾಪಿ ಮಾಡಿದೆ ಯಾವುದನ್ನ ನೋಡ್ಕೊಂಡು ಬರ್ದೆ ಅಂತ ಕಾಲು ಎಳಿಯೊದಿಕ್ಕೆ ಹೋಗ್ಬೇಡಿ ಒಂದು ಸಲ ನೀವು ಬರಿಯೊದಿಕ್ಕೆ ಪ್ರಯತ್ನಿಸಿ ಅದರಲ್ಲಿ ಸಿಗುವ ಆನಂದವನ್ನ ನೋಡಿ
ಯಾರೇನೆ ಹೇಳಿದ್ರು ನನಗೇನು ಬೇಜಾರಿಲ್ಲ ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
ಸರಕಾರಿ ಯೋಜನೆಗಳು, ಸೌಲಭ್ಯಗಳು ಮತ್ತು ಮಹಿಳಾ ಸಬಲೀಕರಣ
ಇತ್ತೀಚೆಗೆ ನಾನೊಂದು ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಮಹಿಳಾ ದಿನಾಚರಣೆ ಸಂದರ್ಬ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕಾನೂನು ನುರಿತ ತಜ್ಞರು, ಮಹಿಳಾ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ವಿರಾಜಮಾನರಾಗಿದ್ದರು. ಇವರೆಲ್ಲರೂ ತಮ್ಮ ಭಾಷಣದಲ್ಲಿ ಮಹಿಳೆಯರು ಮುಂದೆ ಬರಬೆಕು. ಬಹಳ ದೌರ್ಜನ್ಯ ನಡೀತಾ ಇದೆ, ಶೋಷಣೆ ನಡೀತಾ ಇದೆ, ಪುರುಷರು ಮಹಿಳೆಯರಿಗೆ ಅವಕಾಶ ಕೊಡ”ಕು, ಸರಕಾರ ಈ ದೌರ್ಜನ್ಯ ತಡೆಗಟ್ಟುವಲ್ಲಿ ಕ್ರಮ ಕೆಗೊಳ್ಳಬೆಕು, ಹೀಗೆ ತಮ್ಮ-ತಮ್ಮ ವಿಚಾರ ಧಾರೆಗಳನ್ನು ಮುಂದಿಟ್ಟರು. ಈ ಎಲ್ಲಾ ಮಾತುಗಳನ್ನು ಕೇಳುವಾಗ ನನ್ನ ಮನದಲ್ಲಿ ಒಂದು ಜಿಜ್ಞಾಸೆ ಮೂಡಿತು. ಮಹಿಳೆಯರು ಮುಂದೆ ಬರುವಲ್ಲಿ ಇಂದು ನಿಜವಾಗಿಯೂ ಅಡ್ಡಿ ಇದೆಯೇ? ಈ ಪ್ರಶ್ನೆಯು ನನ್ನನ್ನು ನಿರಂತರವಾಗಿ ಕಾಡಿತ್ತು ಮತ್ತು ಈಗಲೂ ಕಾಡುತ್ತಿದೆ.
ಹಾಗಿದ್ದರೆ ಮಹಿಳೆಯರು ಮುಂದೆ ಬರಲು ಇಂದು ಯಾವುದೇ ಅಡ್ಡಿ-ಆತಂಕಗಳು ಇಲ್ಲವೇ? ಈ ಪ್ರಶ್ನೆಗೂ ನನ್ನಲ್ಲಿ ಉತ್ತರವಿಲ್ಲ, ಆದರೆ ಇಂದು ಭಾರತ ಸರಕಾರ, ರಾಜ್ಯ ಸರಕಾರಗಳು, ಸಾವಿರಾರು ಸಂಘ-ಸಂಸ್ಥೆಗಳು, ಮಹಿಳೆಯರಿಗೆ ಪ್ರಾಧನ್ಯತೆ ನೀಡುವ ಯೋಜನೆಗಳನ್ನು ಹಾಕಿಕೊಂಡಿದೆ. ರಾಜಕೀಯ, ಸಾಮಾಜಿಕ ಸಂಘಟನೆಗಳು ಮಹಿಳೆಯರ ಸಹಭಾಗಿತ್ವಕ್ಕಾಗಿ ಮಿಸಲಾತಿಯನ್ನು ಇಟ್ಟಿದೆ. ಹಾಗಿದ್ದಲ್ಲಿ ಯಾಕೆ ಇಂದು ಪ್ರತೀ ವೇದಿಕೆಯಲ್ಲಿಯೂ ಈ ಜಿಜ್ಞಾಸೆಯು ಪ್ರಶ್ನಾರ್ಥವಾಗಿಯೇ ಉಳಿದಿದೆ? ಈ ಬಗ್ಗೆ ಬಹಳ ಗಾಢವಾಗಿ ಆಲೋಚನೆ ಮಾಡಿದಾಗ ನಮ್ಮಲ್ಲಿ ಯೋಜನೆಗಳಿವೆ, ಅವಕಾಶಗಳಿವೆ, ಮಹಿಳಾಪರ ಕಾನೂನುಗಳೂ ಇವೆ. ಆದರೆ ಇದನ್ನು ತಳಮಟ್ಟಕ್ಕೆ ತಲುಪಿಸುವಂತಹ I.E.C ಅಂದರೆ (Information Education & Communication) ಮಾಹಿತಿ ನೀಡುವುದು, ತಿಳುವಳಿಕೆ ನೀಡುವುದು ಮತ್ತು ಸಂಪರ್ಕಿಸುವ ವ್ಯವಸ್ಥೆ ಇದ್ದರೂ, ಯೋಜನೆಗಳು, ಅವಕಾಶಗಳು, ಕಾನೂನುಗಳು ಬರೀ ಪುಸ್ತಕ-ವರದಿಗಳಗೆ ಸೀಮಿತವಾಗಿದೆ ಎಂಬ ಭಾವನೆ ಬೇರೂರಿದೆ. ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ತೋರಿಸುತ್ತಿರುವ ಆಸಕ್ತಿ, ಬದ್ದತೆ ಮತ್ತು ನೆಪುಣ್ಯತೆಯೂ ಕಾರಣವಾಗಿದೆ.
ಕೆಲವು ಯೋಜನೆಗಳಂತೂ ಬರೀ ದುಡ್ಡು ಮಾಡುವುದಾಕ್ಕಾಗಿ ರೂಪಿಸಲಾಗುತ್ತಿದೆ ಎಂಬ ಮಾತೂ ಇದೆ, ಕಾನೂನು ಇಂದು ಕೆಗೆಟುಕದ ಸ್ಥಿತಿಯಲ್ಲಿ ಇದೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಇದೆ. ಏನೇ ಇರಲಿ ಇಂದು ಮಹಿಳಾ ಸಬಲೀಕರಣಕ್ಕೆ ಪೂರಕವಾದ ಆಯುಧಗಳು ನಮ್ಮ ಸಮಾಜದಲ್ಲಿ ಬಹಳಷ್ಟು ಇದೆ. ಇದನ್ನು ತಿಳಿದುಕೊಂಡು ಬಳಕೆ ಮಾಡಿದರೆ ನಾವು ಯಾರನ್ನು ದೂರಬೇಕಾಗಿಲ್ಲ, ಯಾರನ್ನು ಬೇಡ ಬೇಕಾಗಿಲ್ಲ.
ಈ ನಿಟ್ಟಿನಲ್ಲಿ ಮಹಿಳೆಯರ ಅಭಿವೃದ್ಧಿಗೆ, ಸಬಲೀಕರಣಕ್ಕೆ ಪ್ರಸ್ತುತ ಇರುವ ಸರಕಾರಿ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಸಣ್ಣ ಬೆಳಕನ್ನು ಚೆಲ್ಲುವ ಪ್ರಯತ್ನವನ್ನು ನಾನು ಮಾಡಿದ್ದೇನೆ. ಇದು ಎಲ್ಲರಿಗೂ ಉಪಯೋಗವಾಗಬಹುದು ಎಂದು ನಾನು ನಂಬಿದ್ದೇನೆ. ಹೆಣ್ಣು ಮಗು ಈ ಭೂಮಿಗೆ ಕಾಲಿಡುವ ಸಂದರ್ಭದಿಂದ ಇರುವ ಯೋಜನೆಯ ಬಗ್ಗೆ ಪ್ರಾರಂಭಿಸುತ್ತೇನೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಬಿವೃದ್ಧಿ ಇಲಾಖೆ:
ಈ ಇಲಾಖೆಯಡಿಯಲ್ಲಿ ಮಕ್ಕಳ ಕಲ್ಯಾಣ, ಮಹಿಳಾ ಕಲ್ಯಾಣ ಮತ್ತು ಸಾಮಾಜಿಕ ರಕ್ಷಣೆಯಡಿಯಲ್ಲಿ ಹಲವಾರು ಕಾರ್ಯ ಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ.
ಮಕ್ಕಳ ಕಲ್ಯಾಣ ಯೋಜನೆಯಡಿಯಲ್ಲಿ:
೧) ಭಾಗ್ಯಲಕ್ಷ್ಮಿ ಯೋಜನೆ :: ಶಾಶ್ವತ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿರತಕ್ಕಂತಹ ಬಡತನ ರೇಖೆಗಿಂತ ಕೆಳಗಿರುವ(BPL) ಮೂರು ಮಕ್ಕಳಿರುವ BPL ಕುಟುಂಬಗಳ ಮೊದಲ ಎರಡು ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ದೊರೆಯುತ್ತಿದೆ. ರೂ.೧೯,೩೦೦/- ಮೊತ್ತ ನಿರಖು ಠೇವಣಿಯನ್ನು ಮೊದಲ ಮಗುವಿನ ಹೆಸರಿನಲ್ಲಿಡಲಾಗುವುದು ಮತ್ತು ಎರಡನೇಯ ಮಗುವಿನ ಹೆಸರಿನಲ್ಲಿ ರೂ.೧೮,೩೫೦/- ಇಡಲಾಗುವುದು. ಮತ್ತು ಮಗುವಿಗೆ ೧೮ ವರ್ಷ ಪೂರ್ಣಗೊಂಡ ನಂತರ ಮೊದಲ ಮಗುವಿಗೆ ರೂ.೧,೦೦,೦೯೭/- ಮತ್ತು ಎರಡನೇಯ ಮಗುವಿಗೆ ರೂ.೧,೦೦,೦೫೨/- ಮೊತ್ತ ನೀಡಲಾಗುತ್ತದೆ.
ಈ ಮಗುವಿಗೆ ೧೫ ವರ್ಷ ತುಂಬಿದ ನಂತರ ೧೦ನೇ ತರಗತಿಯಲ್ಲಿ ಉತ್ತಿರ್ಣಳಾಗಿ, ಮುಂದಿನ ವಿದ್ಯಾಬ್ಯಾಸಕ್ಕಾಗಿ ಈ ಭಾಗ್ಯಲಕ್ಷ್ಮಿ ಬಾಂಡನ್ನು ಅಂಗೀಕೃತ ಬ್ಯಾಂಕ್ಗಳಲ್ಲಿ ಅಡಮಾನವಿರಿಸಿ, ಗರಿಷ್ಠ ರೂ.೫೦,೦೦೦/- ಸಾಲ ಪಡೆಯಬಹುದಾಗಿದೆ.
ಈ ಯೋಜನೆಯನ್ನು ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ.
ಈ ಯೋಜನೆಯಡಿಯಲ್ಲಿ ಇತರ ಅರ್ಹತೆಯ ಅಂಶಗಳು:
೧) ಮಗುವಿನ ಜನನವನ್ನು ಖಡ್ಡಾಯವಾಗಿ ನೋಂದಾಯಿಸಿರಬೆಕು.
೨) ಆರೋಗ್ಯ ಇಲಾಖೆಯ ಕಾರ್ಯಕ್ರಮದಂತೆ ರೋಗ ನಿರೋಧಕ ಲಸಿಕೆ ಹಾಕಿಸಿರಬೆಕು.
೩) ಅಂಗನವಾಡಿ ಕೇಂದ್ರಕ್ಕೆ ನೊಂದಾವಣೆ ಆಗಿರಬೆಕು.
೪) ಶಿಕ್ಷಣ ಇಲಾಖೆಯು ನೋಂದಾಯಿಸಿದ ಶಾಲೆಗಳಲ್ಲಿ ಮಗುವನ್ನು ಶಾಲೆಗೆ ದಾಖಲಿರಿಸಬೆಕು.
೫) ಮಗು ಬಾಲಕಾರ್ಮಿಕಳಾಗಿರಬಾರದು.
೬) ೧೮ ವರ್ಷತನಕ ವಿವಾಹವಾಗಬಾರದು.
೨. ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ: (Integrated Child Development Scheme (ICDS)
ಈ ಯೋಜನೆಯು ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಆರೋಗ್ಯ, ಶಿಶುಗಳ ಆರೋಗ್ಯ ಮತ್ತು ಆರೆಕೆ, ಮತ್ತು ಹದಿಹರೆಯದ ಮಕ್ಕಳ ಆರೋಗ್ಯಕ್ಕೆ ಪೂರಕವಾದಂತಹ ಯೋಜನೆ ಕರ್ನಾಟಕ ಸರಕಾರವು ೧೯೭೫ರಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಿಸಿ ಪ್ರಸ್ತುತ ರಾಜ್ಯಾದ್ಯಾಂತ ಎಲ್ಲಾ ತಾಲೂಕುಗಳಲ್ಲಿ ಅನುಷ್ಠಾನವಾಗುತ್ತಿದೆ.
ಈ ಯೋಜನೆಯ ಉದ್ದೇಶ:
೧) ಆರು ವರ್ಷದೊಳಗಿನ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಕಾಪಾಡುವುದು.
೨) ಮಗುವಿನ ದೆಹಿಕ, ಬೌದ್ದಿಕ, ಮಾನಸಿಕ ಮತ್ತು ಭಾವಾನಾತ್ಮಕ ಬೆಳವಣಿಗೆ ಸಮಗ್ರವಾಗುವಂತೆ ಮಾಡುವುದು.
೩) ಶಿಶುಗಳ ಮರಣ, ಅನಾರೋಗ್ಯ, ಅಪೌಷ್ಠಿಕತೆಯ ಸಮಸ್ಯೆಗಳ ನಿವಾರಣೆ ಮತ್ತು ಶಾಲೆ ಬಿಡುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವುದು.
೪) ಮಕ್ಕಳ ಅಭಿವೃದ್ಧಿಗೆ ಇರುವಂತಹ ವಿವಿಧ ಇಲಾಖೆಗಳ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುವಂತೆ ನೋಡುವುದು.
೫) ಮುಖ್ಯವಾಗಿ ತಾಯಂದಿರು ತಮ್ಮ ಆರೋಗ್ಯ ನಿರ್ವಹಣೆ ಮತ್ತು ಮಕ್ಕಳ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವಂತೆ ಮಾಹಿತಿ ಕಾರ್ಯಕ್ರಮಗಳ ಆಯೋಜನೆ ಮಾಡುವುದು.
ಸೇವೆಗಳು:
ಸೇವೆಗಳು ಯಾರಿಗೆ? ಸೇವೆ ನೀಡುವವರು
ಪೌಷ್ಟಿಕ ಆಹಾರ ಒದಗಣೆ ಆರುವರ್ಷದೊಳಗಿನ ಮಕ್ಕಳಿಗೆ, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ, ಹದಿಹರೆಯದ ಹೆಣ್ಣುಮಕ್ಕಳಿಗೆ. ಅಂಗನವಾಡಿ ಕಾರ್ಯಕರ್ತೆಯರು.
ಲಸಿಕೆಗಳು ಆರುವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರು. ANM
ಉಚಿತ ಆರೋಗ್ಯ ತಪಾಸಣೆ ಆರುವರ್ಷದೊಳಗಿನ ಮಕ್ಕಳು, ಗರ್ಭಿಣಿ ಮಹಿಳೆ, ಹಾಲುಣಿಸುವ ತಾಯಿ. ಡಾಕ್ಟgಗಳು/ANM/ ಅಂಗನವಾಡಿ ಕಾರ್ಯಕರ್ತರು
ರೆಫರ ಹದಿಹರೆಯದ ಹೆಣ್ಣುಮಕ್ಕಳು. ಡಾಕ್ಟgಗಳು/ANM/ ಅಂಗನವಾಡಿ ಕಾರ್ಯಕರ್ತರು.
ಪ್ರಾಥಮಿಕ ಶಾಲೆ, ವಿದ್ಯಾಭ್ಯಾಸ ೩-೬ ವರ್ಷದ ಮಕ್ಕಳಿಗೆ. ಅಂಗನವಾಡಿ ಕಾರ್ಯಕರ್ತರು.
ಪೌಷ್ಠಿಕತೆ ಮತ್ತು ಆರೋಗ್ಯ ಶಿಕ್ಷಣ ೧೫ ರಿಂದ ೪೫ ವರ್ಷದ ಮಹಿಳೆಯರು, ಹದಿಹರೆಯದ ಮಕ್ಕಳು. ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು.
ಈ ಸೇವೆಗಳ ಅನುಷ್ಠಾನದಲ್ಲಿ ಹಲವಾರು ಮಾಹಿತಿ ಕಾರ್ಯಕ್ರಮಗಳು, ಉಚಿತ ಆರೋಗ್ಯ ತಪಸಣಾ ಶಿಬಿರಗಳು, ಗರ್ಬಿಣಿ/ಬಾಣಂತಿಯರ ಆರೆಕೆ, ಶಿಶುಗಳ ಆರೆಕೆಗೆ ಕ್ರಮಗಳನ್ನು ಮಾಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಸಮಗ್ರ ಅನುಷ್ಠಾನ ಮಾಡಲಾಗುತ್ತಿದೆ. ಗ್ರಾಮೀಣ ನಗರ ಪ್ರದೇಶಗಳ ಕುಟುಂಬಗಳು ಸೌಲಭ್ಯ ಪಡಕೊಳ್ಳಬಹುದಾಗಿದೆ.
೩. ಚೈಲ್ಡ್ ಟ್ರ್ಯಾಕಿಂಗ್ ಸಿಸ್ಟಂ (Child Tracking System): ೧೮ ವರ್ಷದೊಳಗಿನ ಮಕ್ಕಳ ಸಂಖ್ಯೆ ಒಟ್ಟು ಜನಸಂಖ್ಯೆಗೆ ಹೋಲಿಸಿದಾಗ ಅಧಿಕವಾಗಿರುವ ನಿಟ್ಟಿನಲ್ಲಿ, ಈ ಮಕ್ಕಳ ಪಾಲನೆ, ಪೋಷಣೆ-ರಕ್ಷಣೆಗಾಗಿ, ಮಕ್ಕಳ ಟ್ರ್ಯಾಕಿಂಗ್ ಪದ್ಧತಿಯನ್ನು NIC (ನ್ಯಾಷನಲ್ ಇನ್ಫೋಮೆಟ್ರಿಕ್ಸ್ ಸೆಂಟರ್) ಸಂಸ್ಥೆಯ ಸಹಯೋಗದೊಂದಿಗೆ ಅನುಷ್ಠಾನಿಸಲಾಗುತ್ತಿದೆ. ಈ ವ್ಯವಸ್ಥೆಯ ಪ್ರಕಾರ ೧೮ ವರ್ಷದೊಳಗಿನ ಮಕ್ಕಳ ಮಾಹಿತಿ ಅವರಿಗೆ ವಿವಿಧ ಇಲಾಖೆಗಳಿಂದ ಕೊಡಿಸಲಾದ ಸೌಲಭ್ಯ, ಅವರ ಶಿಕ್ಷಣ ವ್ಯವಸ್ಥೆ, ಆರೋಗ್ಯ ಮತ್ತು ವಲಸೆ ಹೀಗೆ ಎಲ್ಲಾ ವಿಚಾರಗಳನ್ನು ಸಾಫ್ಟ್ ವೆರ್ ನಲ್ಲಿ ದಾಖಲಿಸಿ ಟ್ರ್ಯಾಕ್ ಮಾಡಲಾಗುತ್ತಿದೆ. ಇದು ಮಕ್ಕಳ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮವಾಗಿರುತ್ತದೆ.
೪. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ತರಗತಿ ಹಾಜರಾತಿಗೆ ಸ್ಕಾಲರ್ ಶಿಪ್ ಪಾವತಿ: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಹಾಜರಾತಿ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೆಕೆಂಬ ಉದ್ದೇಶದಿಂದ ಪ್ರತಿ ತಿಂಗಳು ರೂ.೨೫/-ರಂತೆ, ಹತ್ತು ತಿಂಗಳು-೭ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಅದೇ ರೀತಿಯಲ್ಲಿ ೮-೧೦ ನೇ ತರಗತಿಯವರೆಗೆ ಹೆಣ್ಣು-ಮಕ್ಕಳಿಗೆ ರೂ.೭೫/-ರಂತೆ ನೀಡಲಾಗುತ್ತಿದೆ. ಕನಿಷ್ಠ ೮೦% ಹಾಜರಾತಿ ಖಡ್ಡಾಯ. ಕುಟುಂಬದ ಆದಾಯ ರೂ.೧೦,೦೦೦/-ಕ್ಕೆ ಮೀರಿರಬಾರದು ಮತ್ತು ಹಳ್ಳಿಯ ಜನಸಂಖ್ಯೆ ೨೦,೦೦೦ ದೊಳಗೆ ಇದ್ದರೆ ಮಾತ್ರ ಈ ಯೋಜನೆ ಅನ್ವಯಿಸುವುದು. ಜಿಲ್ಲಾ ಪಂಚಾಯತಿ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ.
೫. ವಿದ್ಯಾರ್ಥಿನಿಯರಿಗೆ ವಸತಿ ವ್ಯವಸ್ಥೆ: ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ರೂ.೧೦,೦೦೦/-ಕ್ಕಿಂತ ಆದಾಯ ಕಡಿಮೆಯಿರುವ ಕುಟುಂಬದ ಹೆಣ್ಣುಮಕ್ಕಳಿಗೆ ಆರನೇ ತರಗತಿ ನಂತರದ ವಿದ್ಯಾಭ್ಯಾಸಕ್ಕಾಗಿ ಉಚಿತ ಹಾಸ್ಟೇಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಒಟ್ಟು ೪೪ ಹಾಸ್ಟೆಗಳನ್ನು ರಾಜ್ಯಾದ್ಯಂತ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ.
೬. ಮಕ್ಕಳ ರಕ್ಷಣೆ ಮತ್ತು ಜಾಗರೂಕತೆಗಾಗಿ ಮತ್ತು ಕಲ್ಯಾಣಕ್ಕಾಗಿ ಯೋಜನೆಗಳು: ಅನಾಥ ಹಾಗೂ ನಿರ್ಗತಿಕ ಮಕ್ಕಳ ರಕ್ಷಣೆಗಾಗಿ, ಅವರ ಪಾಲನೆ ಪೋಷಣೆಗಾಗಿ ಅನಾಥಾಲಯಗಳನ್ನು ಸ್ಥಾಪಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳಿಗೆ ಇದರ ನಿರ್ವಹಣೆ ಜವಾಬ್ದಾರಿಯನ್ನು ನೀಡಲಾಗಿದೆ. ಒಟ್ಟು ೨೬೯ ಅನಾಥಾಲಯಗಳು ಕಾರ್ಯನಿರ್ವಸುತ್ತಿದೆ.
೭. ಕೆಲಸ ಮಾಡುವ ಮಹಿಳೆಯರ, ಮಕ್ಕಳ ಪಾಲನೆಗಾಗಿ ಶಿಶುಧಾಮ: ಗಾಮೀಣ ಪ್ರದೇಶಗಳಲ್ಲಿ ಕೃಷಿ ಹಾಗೂ ಇತರ ಕೆಲಸಗಳಿಗೆ ತೆರಳುವ ಮಹಿಳೆಯರ ೩ ವರ್ಷದೊಳಗಿನ ಮಕ್ಕಳ ರಕ್ಷಣೆಗಾಗಿ ಶಿಶುಧಾಮ, ಶಿಶು ಮಂದಿರಗಳನ್ನು ನಡೆಸುವರೇ ಮಹಿಳಾ ಮಂಡಳಿ, ಸ್ವಯಂ ಸೇವಾ ಸಂಸ್ಥೆಗಳಿಗೆ ಆರ್ಥಿಕ ಸಹಾಯದ ಸೌಲಭ್ಯವಿದೆ. ಈ ಸೌಲಭ್ಯದಲ್ಲಿ ಆರೋಗ್ಯ ರಕ್ಷಣೆ, ಪೌಷ್ಠಿಕ ಆಹಾರ, ಮಗುವಿಗೆ ವಸತಿ ವ್ಯವಸ್ಥೆ, ಲಸಿಕೆ ಹಾಕುವುದು, ಆಟಗಳು ಇವೆಲ್ಲವೂ ಒಳಗೊಂಡಿದೆ.
೮. ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ತಡೆಗೆ ಯೋಜನೆಗಳು: ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಈ ವಿಚಾರದ ಬಗ್ಗೆ ಮಾಹಿತಿ ಕೊಡುವ ನಿಟ್ಟಿನಲ್ಲಿ ಮತ್ತು ಈ ವಿಚಾರದ ಬಗ್ಗೆ ಮನದಟ್ಟು ಮಾಡುವಂತೆ ಪ್ರತೀ ತಾಲೂಕು ಮತ್ತು ಗ್ರಾಮ ಪಂಚಾಯv ಮಟ್ಟದಲ್ಲಿ ಒಂದು ದಿನದ ಮಾಹಿತಿ ಕಾರ್ಯಕ್ರಮಗಳನ್ನು ಜಾಥಾ, ಬೀದಿ ನಾಟಕ, ರ್ಯಾಲಿಗಳ ಮೂಲಕ ಸಂಘಟಿಸಲಾಗುತ್ತಿದೆ.
೯. ಬಾಲ್ಯವಿವಾಹ ತಡೆ ಕಾಯಿದೆ ೨೦೦೬ರ ಅನುಷ್ಠಾನ: ಬಾಲ್ಯ ವಿವಾಹ ತಡೆ ಕಾಯಿದೆಯ ಅನುಷ್ಠಾನ ಜವಾಬ್ದಾರಿಯನ್ನು ಇಲಾಖೆ ನೋಡಿಕೊಳ್ಳುತ್ತಿದೆ. ಇಲಾಖೆಯ ಉಪ ಕಮಿಷನರ್, ಉಪನಿರ್ದೇಶಕರು, ಕಾರ್ಯನಿರ್ವಹಣಾ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ತಹಶೀಲ್ದಾರರು, ಕಾರ್ಮಿಕ ಇಲಾಖಾ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ರೆವನ್ಯೂ ಅಧಿಕಾರಿ ಮತ್ತು ಗ್ರಾಮ ಲೆಕ್ಕಿಗರು ಇವರೆಲ್ಲರೂ ಈ ಕಾಯಿದೆಯ ಅನುಷ್ಠಾನದ ಜವಾಬ್ದಾರಿ ಇರುವವರು, ಬಾಲ್ಯವಿವಾಹ ಕಂಡು ಬಂದಲ್ಲಿ ಈ ಅಧಿಕಾರಿಗಳಿಗೆ ಯಾರು ಬೇಕಾದರೂ (ಸಾರ್ವಜನಿಕರು) ಸೂಚಿಸಬಹುದು.
೧೦. ಹೆಣ್ಣು ಮಕ್ಕಳ ದಿನ ಆಚರಣೆ: ಜನವರಿ ೨೪ರಂದು ಹೆಣ್ಣು ಮಗುವಿನ ದಿನ ಎಂದು ಭಾರತ ಸರಕಾರವು ಘೋಷಿಸಿದೆ. ಈ ದಿನದಂದು ಹೆಣ್ಣು ಮಗುವಿನ ಪ್ರಾಮುಖ್ಯತೆ, ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಜಾಗೃತಿ, ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಶೋಷಣೆ, ಅಪೌಷ್ಠಿಕತೆ ಬಗ್ಗೆ ಜಾಗೃತಿ ಹೀಗೆ ಈ ವಿಚಾರಗಳ ಬಗ್ಗೆ ವ್ಯಾಪಕವಾದಂತಹ ಮಾಹಿತಿ ಒದಗಣೆ ಮತ್ತು ತಿಳುವಳಿಕೆ ಹೆಚ್ಚಿಸುವ ಕಾರ್ಯಕ್ರಮವನ್ನು ಇಲಾಖೆ ಹಮ್ಮಿಕೊಳ್ಳುತ್ತಿದೆ.
೧೧. ಉಜ್ವಲ ಯೋಜನೆ: ಲೆಂಗಿಕ ಶೋಷಣೆಗೆ ಒಳಗಾದ ಮಕ್ಕಳು/ಮಹಿಳೆಯರ ರಕ್ಷಣೆ, ಆರೆಕೆ ಮತ್ತು ಅವರನ್ನು ಕುಟುಂಬದ ಜೊತೆ ಜೋಡಿಸುವ ಯೋಜನೆ, ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಅಕ್ರಮ ಸಾಗಾಣಿಕೆ ಮತ್ತು ಬಲಾತ್ಕಾರವಾದ ಲೆಂಗಿಕತೆ, ಇಂತಹ ದೌರ್ಜನ್ಯವನ್ನು ತಡೆಯುವುದಕೋಸ್ಕರ ಸಮಾಜದಲ್ಲಿ ಸಾರ್ವಜನಿಕರಿಗೆ ಮಹಿಳೆಯರ ಪರವಾಗಿ ಗೌರವಯುತ ಭಾವನೆಯನ್ನು ತರುವಂತೆ ಮತ್ತು ಲೆಂಗಿಕ ಬಲಾತ್ಕಾರ ಮತ್ತು ಶೋಷಣೆಯ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಉಜ್ವಲ ಯೋಜನೆ ಶ್ರಮಿಸುತ್ತಿದೆ. ಇಂತಹ ಸಮಸ್ಯೆಗೆ ಸಿಲುಕಿದಂತಹ ಮಹಿಳೆಯರ ರಕ್ಷಣೆ ಮತ್ತು ಅವರಿಗೆ ಸಮಾಜದಲ್ಲಿ ಸ್ಥಾನಮಾನ ಕಲ್ಪಿಸುವಲ್ಲಿ, ದೇಶದ ಗಡಿ ಪ್ರದೇಶದಲ್ಲಿ ಈ ಸಮಸ್ಯೆಗೆ ಒಳಗಾದಂತಹ ಮಹಿಳೆಯರನ್ನು ಅವರ ಸ್ವದೇಶಕ್ಕೆ ಮರಳುವಂತೆ ಮಾಡುವಂತೆ, ವಸತಿ ವ್ಯವಸ್ಥೆ, ಊಟ-ಉಪಚಾರ, ಮೂಲಭೂತ ಸೌಕರ್ಯಗಳ ಒದಗಣೆ ಹೀಗೆ ಈ ರೀತಿಯಾದಂತಹ ಸೇವೆಗಳನ್ನು ಕಲ್ಪಿಸಲಾಗುತ್ತಿದೆ. ಈ ಯೋಜನೆಯನ್ನು ಸಮಾಜಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮಗಳು, ಇತರ ಸ್ವಯಂ ಸೇವಾ ಸಂಸ್ಥೆಗಳು ಅನುಷ್ಠಾನ ಮಾಡುತ್ತಿದೆ.
೧೨. ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನಾ (IGMSY) (ಹೆರಿಗೆ ಸೌಲ”s ಯೋಜನೆ): ಕೇಂದ್ರ ಸರಕಾರದ ಕಾರ್ಯಕ್ರಮ: ಈ ಯೋಜನೆಯ ಪ್ರಕಾರ ಗರ್ಭಿಣಿ, ಬಾಣಂತಿ ಮತ್ತು ಹಾಲುಣಿಸುವ ತಾಯಂದಿರ ಮತ್ತು ಶಿಶುಗಳ ಆರೋಗ್ಯ, ನೆರ್ಮಲ್ಯ ಮತ್ತು ಪೌಷ್ಟಿಕತೆ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾದ ಹೆಜ್ಜೆಗಳು, ಪದ್ಧತಿಗಳು, ಆರೆಕೆ ಕ್ರಮಗಳು, ಸುರಕ್ಷಾ ಹೆರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ನೀಡಬೆಕಾದ ಆಹಾರ ಪದ್ಧತಿ ಹೀಗೆ ಈ ವಿಚಾರಗಳ ಬಗ್ಗೆ ಕಾಳಜಿಯನ್ನು ವಹಿಸಲಾಗುತ್ತದೆ. ವಯೋಮಿತಿ ಹತ್ತೊಂಬತ್ತು ಮತ್ತು ಹೆಚ್ಚಿನ ಪ್ರಾಯದ ಗರ್ಭಿಣಿ ಮಹಿಳೆಯರ ಎರಡು ಮಕ್ಕಳಿಗೆ ಈ ಯೋಜನೆ ಅನ್ವಯಿಸುತ್ತದೆ. ಗರ್ಭವತಿಯಾದ ಸಂದರ್ಭ ಮತ್ತು ಹೆರಿಗೆ ಸಂದರ್ಭ ಉದ್ಯೋಗ/ಕೂಲಿ ಕೆಲಸಕ್ಕೆ ಹೋಗಲು ಅಸಾಧ್ಯವಾಗುವುದರಿಂದ ಅದಕ್ಕೆ ಪೂರಕವಾಗಿ ರೂ.೪,೦೦೦/- ಸಹಾಯ ಧನವನ್ನು ಮೂರು ಕಂತಿನಲ್ಲಿ ಮಹಿಳೆಯರಿಗೆ, ಗರ್ಭಿಣಿಯಾಗಿ ಆರು ತಿಂಗಳು ಪೂರ್ತಿಯಾಗಿ ಮತ್ತು ಹೆರಿಗೆಯಾಗಿ ಆರು ತಿಂಗಳು ಆಗುವ ಅವಧಿಯಲ್ಲಿ ನೀಡಲಾಗುತ್ತದೆ. ಈ ಯೋಜನೆಯು ಸಮಗ್ರ ಮಕ್ಕಳ ಕಲ್ಯಾಣ ಯೋಜನೆ (ICDS) ಉಸ್ತುವಾರಿಯಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನವಾಗುತ್ತದೆ. ಮಹಿಳೆ ಗರ್ಭಿಣಿ ಆಗಿರುವಾಗ ಉತ್ತಮ ಆಹಾರ ಸೇವನೆ ಬಗ್ಗೆ ಜಾಗೃತಿ ವಹಿಸಿ ತನ್ನನ್ನು ಆರೆಕೆ ಮಾಡಿಕೊಂಡು ಆರೋಗ್ಯವಂತ ಶಿಶುಗಳ ಸುರಕ್ಷಿತ ಜನನ ಮತ್ತು ಶಿಶುಗಳ ಜನನವಾದ ತಕ್ಷಣದಲ್ಲಿ ಖಡ್ಡಾಯವಾಗಿ ಎದೆಹಾಲನ್ನು ಉಣಿಸುವ ಬಗ್ಗೆ ಜಾಗೃತಿ ಮತ್ತು ಬಾಣಂತಿ ಆರೆಕೆ ಸಮಗ್ರವಾಗಿ ಆಗಿ ತಾಯಿ ಮತ್ತು ಮಗು ಆರೋಗ್ಯವಂತರಾಗಿ ಇರುವಂತೆ ನೋಡಿಕೊಳ್ಳುವ ಯೋಜನೆ.
ಇದಕ್ಕೆ ಮಾಡಬೆಕಾದದ್ದು ಇಷ್ಟೇ:
೧೩. ಜನನಿ ಸುರಕ್ಷಾ ಯೋಜನಾ: ರಾಷ್ರೀಯ ಗ್ರಾಮೀಣ ಆರೋಗ್ಯ ಮಿಷನ್ – ಗ್ರಾಮೀಣ ಭಾಗದ ಮಹಿಳೆಯರು ಸುರಕ್ಷಿತ ಹೆರಿಗೆ ಮತ್ತು ಆರೆಕೆ ಮಾಡಿಸಿ ಕೊಳ್ಳಬೆಕೆಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಕಾರ್ಯಕ್ರಮವು ಕೇಂದ್ರ ಸರಕಾರದ ಕಾರ್ಯಕ್ರಮವಾಗಿದೆ.
ಆಶಾ ಕಾರ್ಯಕರ್ತರು ಈ ಯೋಜನೆಯನ್ನು ಗ್ರಾಮೀಣ ಭಾಗದಲ್ಲಿ ಅನುಷ್ಠಾನ ಮಾಡುತ್ತಾರೆ. (ಆಶಾ ಅಂದರೆ: ASHA: Accredited Social Health Activist) ಗ್ರಾಮಿಣ ಪ್ರದೇಶದಲ್ಲಿ ಗರ್ಭಿಣಿ ಸ್ತ್ರೀಯರನ್ನು ಗುರುತಿಸಿ ಅವರು ಪ್ರಸವ ಪೂರ್ವ ಆರೆಕೆ ಪಡಕೊಳ್ಳುವಂತೆ ಮತ್ತು ಹೆರಿಗೆ ಸಂದರ್ಭ ಆಕೆಯ ಸಂಪೂರ್ಣ ಆರೆಕೆ, ಹೆರಿಗೆಯ ನಂತರ ಶಿಶು ಹಾಗೂ ತಾಯಿಯ ಆರೋಗ್ಯ ಸ್ಥಿತಿ ಬಗ್ಗೆ ನಿಗಾವಹಿಸುವಿಕೆ, ಶಿಶುವಿಗೆ ಲಸಿಕೆ ಹಾಕಿಸುವುದು, ಮಗುವಿಗೆ ಎದೆಹಾಲು ಉಣಿಸುವಂತೆ ಮಾಡುವುದು, ಆಸ್ಪತ್ರೆಯಲ್ಲಿಯೇ ಹೆರಿಗೆ ಆಗುವಂತೆ ನೋಡಿಕೊಳ್ಳುವುದು ಇತ್ಯಾದಿ ಜವಾಬ್ದಾರಿಗಳು ಆಶಾ ಕಾರ್ಯಕರ್ತೆಯರಿಗೆ ಇದೆ.
ಈ ಯೋಜನೆ ಯಾರಿಗೆ ಅನ್ವಯಿಸುತ್ತದೆ?
ದೇಶದಲ್ಲಿ ಕೆಲವೊಂದು ರಾಜ್ಯಗಳನ್ನು ಉತ್ತಮ ನಿರ್ವಹಣೆಯ ರಾಜ್ಯಗಳು ಮತ್ತು ಸಾಮಾನ್ಯ ನಿರ್ವಹಣೆಯ ರಾಜ್ಯಗಳು (ಆರೋಗ್ಯ ಕೇಂದ್ರ ಆಸ್ಪತ್ರೆಗಳಲ್ಲಿ ಹೆರಿಗೆ ಆಗುವ ಸಂಖ್ಯೆಗಳ ಆಧಾರದಲ್ಲಿ) ಎಂದು ವಿಂಗಡಣೆ ಮಾಡಲಾಗಿದೆ. ಈ ರಾಜ್ಯಗಳಿಗೆ ಸೂಕ್ತವಾದ ಸೌಲಭ್ಯಗಳು ಅನ್ವಯಿಸುತ್ತದೆ.
ರಾಜ್ಯಗಳು | ಚಿಕಿತ್ಸೆ ಪಡಕೊಳ್ಳ ಬೆಕಾದ ಸ್ಥಳ | ಗ್ರಾಮೀಣ ಪ್ರದೇಶ (ಲಗವಾಗುವ ಮೊತ್ತ) | ನಗರ ಪ್ರದೇಶ (ಲಗವಾಗುವಮೊತ್ತ) |
---|---|---|---|
ಸಾಮಾನ್ಯ ನಿರ್ವಹಣೆ ರಾಜ್ಯಗಳು (LPS) Low Preparing States | ಸರಕಾರಿ ಆಸ್ಪತ್ರೆ, ಸಮುದಾಯ, ಆರೋಗ್ಯ ಕೇಂದ್ರ, ಜಿಲ್ಲಾ, ರಾಜ್ಯ ಆಸ್ಪತ್ರೆಗಳಲ್ಲಿ ಮತ್ತು ಗುರುತಿಸಿದ ಖಾಸಗೀ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಕೊಳ್ಳುವ ಮಹಿಳೆಯರಿಗೆ. | ೧,೪೦೦ | ೧,೦೦೦ |
ಉತ್ತಮ ನಿರ್ವಹಣೆ ರಾಜ್ಯಗಳು(HPS)High Preparing States | ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ೧೯ ವರ್ಷ ಮೇಲ್ಪಟ್ಟ ಮಹಿಳೆಯರಿಗೆ | ೭೦೦ | ೬೦೦ |
ಸಾಮಾನ್ಯ ಮತ್ತು ಉತ್ತಮ ನಿರ್ವಹಣೆ ರಾಜ್ಯಗಳು ( LPS, HPS) | ಎಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮಹಿಳೆಯರು, ಸರಕಾರಿ ಆಸ್ಪತ್ರೆ, ಪ್ರಾಥಮಿಕ | ೧,೪೦೦ | ೧,೦೦೦ |
೧೪. ನ್ಯಾಶನಲ್ ಚಾರ್ಟರ್ ಫಾರ್ ಚಿಲ್ಡ್ರನ್ (National Charter For Children)-೨೦೦೩: ಮಕ್ಕಳ ಏಳಿಗೆಗಾಗಿ ಅಭ್ಯುದಯಕ್ಕಾಗಿ ಕೇಂದ್ರ ಸರಕಾರವು ೨೦೦೩ ರಲ್ಲಿ ನ್ಯಾಶನ ಚಾರ್ಟರ್ ಫಾರ್ ಚಿಲ್ಡ್ರನ್ನ್ನು ಜಾರಿಗೆ ತಂದಿತು. ಈ ಚಾರ್ಟರ್ನ ಪ್ರಕಾರ ಯಾವುದೇ ಮಗು ಹಸಿವಿನಿಂದ ಬಳಲಬಾರದು, ಶಿಕ್ಷಣ ವಂಚಿತನಾಗಬಾರದು ಮತ್ತು ಅನಾರೋಗ್ಯ ಪೀಡಿತನಾಗಬಾರದು ಎಂಬುದಾಗಿದೆ. ಈ ಚಾರ್ಟರ್ನ ಪ್ರಕಾರ ಸಮುದಾಯವು/ಸಮಾಜವು ಪ್ರತಿಯೊಂದು ಮಗುವಿಗೆ ಕೆಳಗಿನ ವಿಚಾರಗಳಲ್ಲಿ ನ್ಯಾಯಸಮ್ಮತವಾದದನ್ನೇ ಮಾಡಬೆಕು.
ಬದುಕಲು, ಜೀವಿಸಲು ಮತ್ತು ಸ್ವತಂತ್ರ್ಯವಾಗಿರಲು ಅವಕಾಶ.
ಆರೋಗ್ಯ ಮತ್ತು ಪೌಷ್ಟಿಕತೆಗೆ ಪೂರಕವಾದ ಅತ್ಯುತ್ತಮವಾದ ಆಹಾರ ಪದ್ಧತಿ ಅನುಸರಣೆ ಮಾಡುವುದು.
ಮೂಲಭೂತ ಸೌಕರ್ಯಗಳ ಅವಶ್ಯಕತೆಯನ್ನು ಪೂರೆಸುವುದು ಮತ್ತು ಭದ್ರತೆ ಒದಗಿಸುವುದು.
ಆಟವಾಡಲು ಮತ್ತು ಬಿಡುವಿನ ವೇಳೆ ನೀಡುವುದು.
ಮಗುವಿನ ಬೆಳವಣಿಗೆ , ಅಭಿವೃದ್ಧಿ ಮತ್ತು ಬದುಕು ಸಾಗಿಸುವುದಕ್ಕಾಗಿ ಅದರ ಆರೆಕೆ.
ಉಚಿತ ಮತ್ತು ಖಡ್ಡಾಯ ಪ್ರಾಥಮಿಕ ಶಿಕ್ಷಣ ಒದಗಿಸುವುದು.
ಸಮಾಜದಲ್ಲಿ ಆಗುವ ಶೋಷಣೆಗಳು ಮತ್ತು ಇತರ ದುಷ್ಟಶಕ್ತಿಗಳಿಂದ ಮಗುವಿನ ರಕ್ಷಣೆ.
ಹೆಣ್ಣು ಮಗವಿನ ರಕ್ಷಣೆ.
ಹದಿಹರೆಯದ ಮಕ್ಕಳ ಸಬಲೀಕರಣ.
ತನ್ನ ವಿಚಾರಗಳನ್ನು ಮಂಡನೆ ಮಾಡುವುದಕ್ಕೆ, ಮಾಹಿತಿಯನ್ನು ಪಡೆಯುವುದಕ್ಕೆ ಮತ್ತು ಉಪಯೋಗಿಸುವುದಕ್ಕೆ, ಇನ್ನೊಬ್ಬರ ಜೊತೆ ಸಹವಾಸ ಮತ್ತು ಶಾಂತಿಯುತವಾಗಿ ಸೇರುವ ಬಗ್ಗೆ ಸ್ವಾತಂತ್ಯ.
ಮಗುವಿನ ಕುಟುಂಬದ ಜೊತೆ ಬಲ ವರ್ಧನೆ.
ಪೋಷಕರ ಜವಾಬ್ದಾರಿಗಳು.
ಅಂಗವಿಕಲ/ವಿಕಲಚೇತನ ಮಕ್ಕಳ ರಕ್ಷಣೆ.
ಇತರ ಜನಾಂಗದ ಕುಟುಂಬಗಳ, ಮಕ್ಕಳ ಆರೆಕೆ, ರಕ್ಷಣೆ, ಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ.
ಮಕ್ಕಳಿಗೆ ಹಿತವಾಗುವ ಪದ್ಧತಿಗಳ ಅನುಕರಣೆ.
ಹೀಗೆ ಮೇಲಿನ ಎಲ್ಲಾ ವಿಚಾರಗಳಲ್ಲಿ ಸಮುದಾಯವು, ಸಮಾಜವು, ಜನರು ಹೇಗೆ ಜವಾಬ್ದಾರಿಯುತವಾಗಿ ವರ್ತಿಸಬೆಕೆಂದು ಇದರಲ್ಲಿ ವಿವರಿಸಲಾಗಿದೆ.
ಮೇಲೆ ಉಲ್ಲೇಖಿಸಿದ ಅಷ್ಟೂ ಕಾರ್ಯಕ್ರಮಗಳು ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಇರುವ ಕಾರ್ಯಕ್ರಮಗಳು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರಕಾರದಿಂದ ನಡೆಸಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳು ಹಿಂದುಳಿದ ಗ್ರಾಮೀಣ ಭಾಗದ ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳು.
ಅದೇ ರೀತಿಯಲ್ಲಿ ಈ ಇಲಾಖೆಗಳಿಂದ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಇರುವ ಕಾರ್ಯಕ್ರಮಗಳು:
೧. ಸ್ತ್ರೀ ಶಕ್ತಿ ಸಂಘಗಳು: ಮಹಿಳಾ ಸಶಕ್ತೀಕರಣ ಮತ್ತು ಅವರನ್ನು ಸ್ವಾವಲಂಬಿಗಲಾಗಿಸುವ ನಿಟ್ಟಿನಲ್ಲಿ ೨೦೦೦-೦೧ರಲ್ಲಿ ಆಗಿನ ಕರ್ನಾಟಕ ಘನ ಸರಕಾರವು ಸ್ತ್ರೀಶಕ್ತಿ ಸಂಘಗಳ ರಚನೆಯನ್ನು ಪ್ರಾರಂಭಿಸಿತು. ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬ, ಕೃಷಿ ಕೂಲಿ ಕಾರ್ಮಿಕರು, ಭೂರಹಿತ ಕುಟುಂಬಗಳು, ಮಹಿಳೆಯರು ಸಂಘ ರಚನೆ ಮಾಡುತ್ತಾರೆ. ಸಣ್ಣ ಉಳಿತಾಯವನ್ನು ಪ್ರಾರಂಭಿಸಿ ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಇದರ ಮೂಲ ಉದ್ದೇಶ. ಮಹಿಳೆಯರನ್ನು ಸಂಘಟಿಸಿ ಅವರು ಆದಾಯವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಂಡು ತಮ್ಮ ಕುಟುಂಬದ ಏಳಿಗೆ ಮಾಡುವ ಅವಕಾಶ ಈ ಸ್ತ್ರೀಶಕ್ತಿ ಸಂಘಗಳ ಮೂಲಕ ಸಾಧ್ಯವಿದೆ, ಅಲ್ಲದೆ ಇಲಾಖೆಯ ಇತರ ಸೌಲ”sಗಳನ್ನೂ ಈ ಸಂಘಗಳ ಮೂಲಕ ನೇರವಾಗಿ ನೀಡುವಲ್ಲಿಯೂ ಇದು ಸಹಕಾರಿಯಾಗಿದೆ.
೨. ಕರ್ನಾಟಕ ಮಹಿಳಾ ಅಭಿವೃದ್ಧಿ ಯೋಜನೆ: ೨೦೦೩ರಲ್ಲಿ ಕರ್ನಾಟಕ ಘನ ಸರಕಾರವು ಈ ಕೇಂದ್ರವನ್ನು ಸ್ಥಾಪನೆ ಮಾಡಿತು. ಈ ಕೇಂದ್ರದ ಉದ್ದೇಶ ಲಿಂಗ ತಾರತಮ್ಯ ನಿವಾರಣೆ ಮತ್ತು ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳಲ್ಲಿ ೧/೩ ರಷ್ಟು ಮಹಿಳೆಯರಿಗೆ ಮೀಸಲಿರಿಸಿ ಅನುಷ್ಠಾನ ಮಾಡುವುದಾಗಿದೆ. ೨೦೧೪-೧೫ ರಲ್ಲಿ ಇಂತಹ ೨೩೭ ಯೋಜನೆಗಳನ್ನು ಗುರುತಿಸಲಾಗಿದ್ದು ೫೮೦೦ ಕೋಟಿ ಮೊತ್ತ ಮಹಿಳೆಯರ ಯೋಜನೆಗಳಿಗಾಗಿ ಇಟ್ಟುಕೊಳ್ಳಲಾಗಿದೆ.
೩. ಉದ್ಯೋಗಿನಿ: ಮಹಿಳೆಯರು ಸ್ವಂತ ಉದ್ಯೋಗವನ್ನು ಕೆಗೊಳ್ಳುವ ನಿಟ್ಟಿನಲ್ಲಿ ಆರ್ಥಿಕ ಸೌಲಭ್ಯವನ್ನು ಒದಗಿಸುವ ಯೋಜನೆ. ಕರ್ನಾಟಕ ಮಹಿಳಾ ಅಭಿವೃದ್ಧಿ ಪ್ರಾಧಿಕಾರವು ಉದ್ಯೋಗ ಕೆಗೊಂಡ ಮಹಿಳೆಯರಿಗೆ ಪ್ರೋತ್ಸಾಹಧನವನ್ನು ನೀಡುತ್ತದೆ. ವರ್ಷಕ್ಕೆ ರೂ.೪೦,೦೦೦ ಆದಾಯದೊಳಗಿನ ಕುಟುಂಬದ ೧೮ ರಿಂದ ೪೫ ವರ್ಷಪ್ರಾಯದ ಮಹಿಳೆಯರಿಗೆ ರೂ.೧,೦೦,೦೦೦/- ಮೊತ್ತ ಆರ್ಥಿಕ ಸೌಲಭ್ಯ ನೀಡಲಾಗುತ್ತದೆ. ಇದರಲ್ಲಿ ಪರಿಶಿಷ್ಟ ಜಾತಿ/ಪಂಗಡದ ಮಹಿಳೆಯರಿಗೆ ೩೦% ಅಥವಾ ರೂ.೧೦,೦೦೦/-ಯಾವುದು ಕಡಿಮೆಯೋ ಅದು ಮತ್ತು ಇತರ ಮಹಿಳೆಯರಿಗೆ ೨೦% ಅಥಯಾ ರೂ.೭,೫೦೦/- ಯಾವುದು ಕಡಿಮೆಯೋ ಅದು ಪ್ರೋತ್ಸಾಹ ಧನ ಲಭ್ಯವಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಅರ್ಜಿ ವಿಲೇವಾರಿ ಮಾಡಲಾಗುತ್ತದೆ.
೪. ಸಾಂತ್ವಾನ ಕೇಂದ್ರ: ಈ ಯೋಜನೆಯು ೨೦೦೦ನೇ ಇಸವಿಯಲ್ಲಿ ಪ್ರಾರಂಭವಾಯಿತು. ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಲೆಂಗಿಕ ಕಿರುಕುಳ, ವರದಕ್ಷಿಣೆ ಇತ್ಯಾದಿಗಳಿಗೆ ಒಳಗಾದ ಮಹಿಳೆಯರಿಗೆ ಸಾಂತ್ವಾನ, ಆಶ್ರಯ ನೀಡುವ ಉದ್ದೇಶದಿಂದ ಈ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ಈ ಕೇಂದ್ರದ ಮೂಲಕ ಕಾನೂನು ಸಹಾಯ, ತಾತ್ಕಾಲಿಕ ಆಶ್ರಯ, ಆರ್ಥಿಕವಾಗಿ ಸ್ವಾಲಂಬನೆ ಹೊಂದುವುದಕ್ಕೆ ಪೂರಕ ತರಬೆತಿಗಳ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಸ್ವಯಂ ಸೇವಾ ಸಂಸ್ಥೆಗಳು ಈ ಸಾಂತ್ವಾನ ಕೇಂದ್ರಗಳನ್ನು ನಡೆಸುತ್ತಿದ್ದು ೨೪ ಗಂಟೆಗಳ ಸೇವೆಯನ್ನು ಪ್ರತೀ ತಾಲೂಕುಗಳಲ್ಲಿ ನೀಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಸಮಿತಿ ಇದ್ದು ಈ ಸಮಿತಿಯ ನಿರ್ದೇಶನದಂತೆ ಕೇಂದ್ರ ಕಾರ್ಯಾಚರಿಸುತ್ತದೆ. ಮಹಿಳೆಗೆ ಅಗತ್ಯವಿದ್ದಾಗ ರೂ.೨,೦೦೦/- ದಿಂದ ರೂ.೧೦,೦೦೦/- ದವರೆಗೆ ಆರ್ಥಿಕ ನೆರವೂ ನೀಡಲಾಗುತ್ತಿದೆ.
೫. ಉದ್ಯೋಗಸ್ಥ ಮಹಿಳೆಯರ ವಸತಿ ವ್ಯವಸ್ಥೆ: ಅತೀ ಕಡಿಮೆ ದರದಲ್ಲಿ ಮತ್ತು ಸುರಕ್ಷಿತ ವಸತಿ ವ್ಯವಸ್ಥೆ, ಉದ್ಯೋಗಸ್ಥ ಮಹಿಳೆಯರಿಗೆ ಪಟ್ಟಣ ಪ್ರದೇಶಗಳಲ್ಲಿ ಒದಗಿಸಲಾಗುತ್ತಿದೆ. ಕೇಂದ್ರ ಸರಕಾರ ೭೫% ಕಟ್ಟಡ ನಿರ್ಮಾಣ ವೆಚ್ಚ ಭರಿಸುತ್ತಿದೆ. ರಾಜ್ಯ ಸರಕಾರ ೨೫% ಮತ್ತು ಸ್ವಯಂ ಸೇವಾ ಸಂಸ್ಥೆ ೧೨.೫% ವೆಚ್ಚ ಭರಿಸುತ್ತದೆ. ಇದರ ನಿವಹಣೆಯು ಸ್ವಯಂ ಸೇವಾ ಸಂಸ್ಥೆ ನಡೆಸುತ್ತಿದ್ದು ಒಟ್ಟು ೬೬ ವಸತಿ ಗೃಹಗಳಿವೆ.
೬. ಸಾಮಾಜಿಕ ದುಷ್ಟ ಶಕ್ತಿಗಳ ತಡೆಗೆ ವಿಶೇಷ ಕೇಂದ್ರ ಸ್ಥಾಪನೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶನಾಲಯದಲ್ಲಿ ವರದಕ್ಷಿಣೆ ಪಿಡುಗು, ಬಾಲ್ಯವಿವಾಹ, ಕೌಟುಂಬಿಕ ದೌರ್ಜನ್ಯ, ಮಹಿಳೆಯರ ಶೋಷಣೆಗಳ ವಿರುದ್ಧ ಜಾಗೃತಿ ಮೂಡಿಸುವಲ್ಲಿ ನಿರಂತರವಾಗಿ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಈ ಕೇಂದ್ರದ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ.
೭. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆ ೨೦೦೫ರ ಅನುಷ್ಠಾನ: ಇಲಾಖೆಯ ಉಪ ನಿರ್ದೇಶಕರು, ಯೋಜನಾಧಿಕಾರಿಗಳು, ಈ ಕಾಯಿದೆಯ ಪ್ರಕಾರ ರಕ್ಷಣಾ ಅಧಿಕಾರಿಗಳಾಗಿರುತ್ತಾರೆ. ಉಚಿತ ಕಾನೂನು ನೆರವು ಕೇಂದ್ರಗಳ ರಚನೆ ಮಾಡಲಾಗಿದೆ. ಅನುಭವ ಇರುವ ಕಾನೂನು ತಜ್ಞರು ವಾರದಲ್ಲಿ ಎರಡುದಿನ ಈ ಕೇಂದ್ರದಲ್ಲಿ ಲಭ್ಯವಿರುತ್ತಾರೆ. ಮಹಿಳೆಯರ ಆರೆಕೆಗಾಗಿ, ಆರೋಗ್ಯ ನಿರ್ವಹಣೆಗಾಗಿ ಮತ್ತು ವಸತಿಗಾಗಿ ಸ್ವಧಾರ್ ಕೇಂದ್ರ, ಸ್ಟೇ ಹೋಮ ಗಳು ಮತ್ತು ಸಾಂತ್ವಾನ ಕೇಂದ್ರಗಳು ಇವೆ. ಅಲ್ಲದೇ ೧೧೬ ಸ್ವಯಂ ಸೇವಾ ಸಂಸ್ಥೆಗಳು, ಕಾನೂನು, ವೆದ್ಯಕೀಯ ಮತ್ತು ಇತರ ಸೇವೆಗಳನ್ನು ನೀಡುವುದಕ್ಕೆ ಗುರುತಿಸಲ್ಪಟ್ಟಿದೆ.
೮. ಕಾನೂನು ಅರಿವು ಕಾರ್ಯಕ್ರಮ: ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಇಲಾಖೆಯ ಬಾಲ್ಯವಿವಾಹ ತಡೆ ಕಾಯಿದೆ, ವರದಕ್ಷಿಣೆ ತಡೆ ಕಾಯಿದೆ, ಮಹಿಳಾ ದೌರ್ಜನ್ಯ ತಡೆ ಕಾಯಿದೆ ಇತ್ಯಾದಿ. ಕಾನೂನುಗಳ ಬಗ್ಗೆ ವ್ಯಾಪಕ ಮಾಹಿತಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ.
೯. ಸ್ವಾಧಾರ್ ಕೇಂದ್ರ: ಮಹಿಳೆಯರ ಸಂಕಷ್ಟಗಳ ಪರಿಸ್ಥಿತಿಯಲ್ಲಿ ನೆರವಾಗುವ ಯೋಜನೆ: ನಿರ್ಗತಿಕ ಮಹಿಳೆ, ವಿಧವಾ ಮಹಿಳೆ, ಜೆಲಿನಿಂದ ಹೊರಬಂದ ಮಹಿಳಾ ಖೆದಿಗಳು, ಪ್ರಾಕೃತಿಕ ವಿಕೋಪದಿಂದಾಗಿ ಉಳಿದಿರುವ ಮಹಿಳೆಯರು/ಹೆಣ್ಣು ಮಕ್ಕಳು, ಮಾನಸಿಕವಾಗಿ ಅಸ್ವಸ್ಥರಾಗಿರುವ ಮಹಿಳೆಯರು ಮತ್ತು ಯಾವುದೇ ಆಧಾರ, ಬೆಂಬಲವಿಲ್ಲದ ಮಹಿಳೆಯರನ್ನು ರಕ್ಷಣೆ ಮಾಡುವ ಕೇಂದ್ರವೇ “ಸ್ವಾಧಾರ್ ಕೇಂದ್ರ“. ಈ ಕೇಂದ್ರವು ಮಹಿಳೆಯರಿಗೆ ಆಹಾರ, ವಸತಿ, ಬಟ್ಟೆ, ಆರೋಗ್ಯ ರಕ್ಷಣೆ, ಸಮಾಲೋಚನೆ, ಕಾನೂನು ನೆರವು ಮತ್ತು ಸಾಮಾಜಿಕವಾಗಿ ಆರ್ಥಿಕವಾಗಿ ಅವರು ಮುಂದೆ ಬರುವಂತೆ ತರಬೆತಿ ಸೇವೆಗಳನ್ನು ನೀಡುತ್ತದೆ. ಈ ಯೋಜನೆಯನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಇಲಾಖೆಯ ಸಹಯೋಗದೊಂದಿಗೆ ಇತರ ಮಹಿಳಾ ಅಭಿವೃದ್ಧಿ ಸಂಸ್ಥೆಗಳ ಸಹಯೋಗದೊಂದಿಗೆ ಅನುಷ್ಠಾನ ಮಾಡಲಾಗುತ್ತಿದೆ. ಅಲ್ಲದೆ ಈ ಕೇಂದ್ರದಲ್ಲಿ ಮಹಿಳಾ ಸಹಾಯ ವಾಣಿಯ ಸೇವೆಯೂ ಲಭ್ಯವಿರುತ್ತದೆ. ಒಟ್ಟು ೩೨ ಸ್ವಧಾರ್ ಕೇಂದ್ರಗಳು ಕಾರ್ಯಾಚರಣೆ ಮಾಡುತ್ತಿದೆ.
೧೦. ಮದ್ಯಪಾನ, ಏದ್ಸ್ ಮತ್ತು ಡ್ರಗ್ಸ್ ಬಳಕೆ ತಡೆ ಯೋಜನೆ: ಮದ್ಯವರ್ಜನ ಶಿಬಿರಗಳು ಮತ್ತು ಸಮಾಲೋಚನೆ, ಆರೆಕೆ ಮತ್ತು ಪುನರ್ ವಸತಿ ಸೌಲಭ್ಯಗಳನ್ನು ಒದಗಿಸುವ ಸ್ವಯಂ ಸೇವಾ ಸಂಸ್ಥೆಗಳಿಗೆ ಕೇಂದ್ರಸರಕಾರದಿಂದ ವಿಶೇಷ ನೆರವು ಒದಗಿಸಲಾಗುತ್ತಿದೆ. ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವುದು, ಶಿಬಿರಗಳ ಆಯೋಜನೆ, ಮಾಹಿತಿ, ಜಾಥಾ, ಆಂದೋಲನಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
೧೧. ತರಬೆತಿ ಹಾಗೂ ಉದ್ದಿಮೆಗೆ ಉತ್ತೇಜನ ಕಾರ್ಯಕ್ರಮ (STEP- Support to Training & Employment Project): ಕೇಂದ್ರಸರಕಾರದ ಮಹತ್ತರವಾದ ಈ ಯೋಜನೆಯ ಉದ್ದೇಶ ಮಹಿಳೆಯರು ಉದ್ಯೋಗಿಗಳಾಗುವಂತೆ ತಯಾರುಗೊಳಿಸುವುದು ಮತ್ತು ಸ್ವ ಉದ್ಯೋಗ ಕೆಗೊಳ್ಳುವಂತೆ ಸಬಲರನ್ನಾಗಿ ಮಾಡುವುದು. ಹದಿನಾರು ವರ್ಷಕ್ಕಿಂತ ಮೇಲ್ಪಟ್ಟ ಹೆಣ್ಣು ಮಕ್ಕಳಿಗೆ/ಮಹಿಳೆಯರಿಗೆ ಈ ಯೋಜನೆ ಅನ್ವಯಿಸುತ್ತದೆ. ಕೃಷಿ, ತೋಟಗಾರಿಕೆ, ಆಹಾರ ಸಂಸ್ಕರಣೆ, ಕೆಮಗ್ಗ, ಹೊಲಿಗೆ, ಕಸೂತಿ, ಕರ-ಕುಶಲ ವಸ್ತು ತಯಾರಿ, ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ಸೇವೆ, ಇಂಗ್ಲೀಷ್ ಮಾತನಾಡುವ ಕಲೆ, ಕೃತಕ ಆಭರಣದ ತಯಾರಿ, ಪ್ರವಾಸೋದ್ಯಮ ಮತ್ತು ಆರೆಕೆ ಕ್ಷೇತ್ರಗಳಲ್ಲಿ ನಿರಂತರ ವಿಶೇಷ ತರಬೆತಿ ಮತ್ತು ಉದ್ಯೋಗವಕಾಶಗಳನ್ನು ಕಲ್ಪಿಸಲಾಗುವುದು.
೧೨. ರಾಜೀವ್ ಗಾಂಧಿ ಯುವತಿಯರ ಸಬಲೀಕರಣ ಯೋಜನೆ (RGMSY): ಈ ಯೋಜನೆಯೂ ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನವಾಗುತ್ತದೆ. ಈ ಯೋಜನೆಯ ಉದ್ದೇಶ ಹದಿಹರೆಯದ ಯುವತಿಯರ ಸ್ವಯಂ ಅಭಿವೃದ್ಧಿ ಮತ್ತು ಸಬಲೀಕರಣ, ಅವರ ಆರೋಗ್ಯ ಮತ್ತು ಪೌಷ್ಟಿಕತೆ, ಸ್ಥಿತಿಗತಿಯನ್ನು ಅಭಿವೃದ್ಧಿ ಪಡಿಸುವುದು, ಆರೊಗ್ಯ, ಸ್ವಚ್ಚತೆ, ನೆರ್ಮಲ್ಯ, ಲೆಂಗಿಕ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೆ, ಯುವತಿಯರಲ್ಲಿರುವ ಕೌಶಲ್ಯಗಳನ್ನು ಗುರುತಿಸಿ, ಅದನ್ನು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಜೋಡಿಸಿ ಸ್ವ ಉದ್ಯೋಗಕ್ಕೆ ಪ್ರೇರಣೆ ನೀಡುವುದು. ಶಾಲೆ ಬಿಟ್ಟ ಯುವತಿಯರನ್ನು ಶಾಲೆಗೆ ಸೇರಿಸುವುದು ಹಾಗೂ ಸಾರ್ವಜನಿಕ ಸೇವೆಗಳ ಬಗ್ಗೆಯೂ ಅಂದರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಬ್ಯಾಂಕ್, ಅಂಚೆಕಛೇರಿ, ಪೋಲಿ ಸ್ಟೇಷಗಳ ಬಗ್ಗೆ ಮಾಹಿತಿ ಒದಗಿಸುವುದು. ೧೧ ರಿಂದ ೧೮ ವರ್ಷದ ವಯೋಮಿತಿ ಒಳಗಿನ ಹೆಣ್ಣು ಮಕ್ಕಳು ಈ ಯೋಜನೆಯಡಿಯಲ್ಲಿ ಬರುತ್ತಾರೆ.
ಈ ಯೋಜನೆಯ ಸೇವೆಗಳು:
೧) ಪೌಷ್ಟಿಕ ಆಹಾರ ಒದಗಣೆ.
೨) ಕಬ್ಬಿಣ ಮತ್ತು ಫೋಲಿಕ್ ಆಸಿದ್ ಮಾತ್ರೆಗಳ ಒದಗಣೆ.
೩) ಉಚಿತ ಆರೋಗ್ರ ತಪಾಸಣೆ ಮತ್ತು ಮುಂದಿನ ಹಂತದ ಚಿಕಿತ್ಸೆಗಾಗಿ ಕಳುಹಿಸುವುದು.
೪) ಪೌಷ್ಟಿಕತೆ ಮತ್ತು ಆರೋಗ್ಯದ ಬಗ್ಗೆ ಶಿಕ್ಷಣ.
೫) ಕೌಟುಂಬಿಕ ಕ್ಷೇಮ, ವಿಚಾರಗಳ ಬಗ್ಗೆ, ಮಗುವಿನ ಆರೆಕೆ ಮತ್ತು ಗೃಹಾಡಳಿತದ ಬಗ್ಗೆ ಸಮಾಲೋಚನೆ/ಮಾಹಿತಿ ಕಾರ್ಯಕ್ರಮಗಳು.
೬) ಜೀವನ ಕೌಶಲ್ಯ ಶಿಕ್ಷಣ ಮತ್ತು ಸಾರ್ವಜನಿಕ ಸೇವೆಗಳನ್ನು ಪಡಕೊಳ್ಳುವುದು.
೭) ೧೬ ವರ್ಷ ಮೇಲ್ಪಟ್ಟ ಹೆಣ್ಣಿಗೆ ಉದ್ಯೋಗ ಪೂರಕ ಕೌಶಲ್ಯಾಭಿವೃದ್ಧಿ ತರಬೆತಿ ಅವಕಾಶ.
ಅನುಷ್ಠಾನ ಮಾದರಿ:
೧) “ಕಿಶೋರಿ ಸಮೂಹ” ಎಂಬ ತಂಡಗಳನ್ನು ಮಾಡಿ ಸುಮಾರು ೧೫-೨೦ ಹೆಣ್ಣು ಮಕ್ಕಳು ಅಂಗನವಾಡಿಯಲ್ಲಿ ಸೇರುತ್ತಾರೆ. ಅಲ್ಲಿ ಮಾಹಿತಿಗಳನ್ನು ನೀಡಲಾಗುತ್ತಿದೆ.
೨) ಇದಕ್ಕಾಗಿ ಪ್ರತೀ ಅಂಗನವಾಡಿ ಕೇಂದ್ರಕ್ಕೆ ತರಬೆತಿ ಕಿಟಗಳನ್ನು ನೀಡಲಾಗುತ್ತದೆ.
೩) “ಕಿಶೋರಿ ದಿನ” ಎಂದು ಒಂದು ದಿನ ಆಚರಣೆ ಮಾಡಿ ಉಚಿತ ವೆದ್ಯಕೀಯ ಚಿಕಿತ್ಸೆ ಹಮ್ಮಿಕೊಳ್ಳುತ್ತಾರೆ.
೪) ಆರೋಗ್ಯ ಕಾರದ್ ಗಳನ್ನು ನೀಡಲಾಗುತ್ತದೆ.
೫) ಜಿಲ್ಲಾ ಯೋಜನಾಧಿಕಾರಿ ಈ ಕಾರ್ಯಕ್ರಮವನ್ನು ಅನುಷ್ಠಾನಿಸಿ ಮಕ್ಕಳ ಅಭಿವೃದ್ಧಿ ಅಧಿಕಾರಿ ತಾಲೂಕು ಮಟ್ಟದಲ್ಲಿ ಅನುಷ್ಠಾನಿಸುತ್ತಾರೆ. ಅಂಗನವಾಡಿ ಕಾರ್ಯಕರ್ತೆ ಸಂಯೋಜಕಿಯಾಗಿರುತ್ತಾರೆ.
ಶಿಕ್ಷಣ ಇಲಾಖೆ:
೧. ಸೆಕಲ್ ವಿತರಣೆ :ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಹೆಣ್ಣು ಮಕ್ಕಳಿಗೆ ಸರಕಾರಿ/ಅನುದಾನಿತ ಸರಕಾರಿ ಶಾಲೆಗಳಲ್ಲಿ ಓದುತ್ತಿದ್ದರೆ ಅವರಿಗೆ ಸೆಕಲ್ ನೀಡುವ ಯೋಜನೆಯನ್ನು ೨೦೦೬-೦೭ರಲ್ಲಿ ಕರ್ನಾಟಕ ಘನ ಸರಕಾರವು ಜಾರಿಗೆ ತಂದಿತು. ೮ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ನೀಡಲಾಯಿತು. ಮುಖ್ಯವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ, ಬಹಳ ದೂರದಿಂದ ಶಾಲೆಗೆ ಬರಬೆಕಾಗಿದ್ದು, ಸಂಚಾರ ವ್ಯವಸ್ಥೆ ಇಲ್ಲದಿರುವ ಸ್ಥಳಗಳಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ನೂತನ ಕಾರ್ಯಕ್ರಮ ಜಾರಿಗೆ ಬಂತು.
೨. ಉಚಿತ ಯೂನಿಫಾರಮ್, ಸ್ಕೂಲ್ ಬ್ಯಾಗ್: ೧೪ ವರ್ಷದ ತನಕ ಮಕ್ಕಳಿಗೆ ಖಡ್ಡಾಯ ಶಿಕ್ಷಣ ಸಿಗಬೆಕು ಎಂಬ ನಿರ್ದೇಶನ, ನಮ್ಮ ಸಂವಿಧಾನದಡಿ “ಡೆರೆಕ್ಟ ಪ್ರಿಸೀಪಲ್ ಆಫ್ ಸ್ಟೇಟ ಪಾಲಿಸಿ”ಯಲ್ಲಿ ಉಲ್ಲೇಖವಾದ ನಿಟ್ಟಿನಲ್ಲಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು “ಯೂನಿವರ್ಸಲೆಸೇಶನ್ ಆಫ್ ಎಲಿಮೆಂಟರಿ ಎಜುಕೇಶ”ನ್ನು ಅನುಷ್ಠಾನ ಮಾಡಿದ ನಂತರ ಪ್ರಾಥಮಿಕ ಶಿಕ್ಷಣಕ್ಕೆ ಮಕ್ಕಳು ನೋಂದಾವಣೆಗೊಳ್ಳುವುದು ಹೆಚ್ಚಳವಾಯಿತು. ಬಡತನ ಹಾಗೂ ಆರ್ಥಿಕ ಸೌಲಭ್ಯ ವಂಚಿತರಾದ ಕುಟುಂಬಗಳ ಮಕ್ಕಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡದಿರುವುದು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಖಡ್ಡಾಯ ಶಿಕ್ಷಣಕ್ಕಾಗಿ ಸರಕಾರದಿಂದ ವಿಶೇಷ ಯೋಜನೆಗಳನ್ನು ಮಾಡಿ, ಅಂಥಹ ಮಕ್ಕಳು ಶಿಕ್ಷಣ ಪಡೆಯುವಂತೆ ಮಾಡಲೇ ಬೆಕಾಗಿದೆ. ಅಲ್ಲದೇ ಶಾಲೆಗೆ ಸೇರಿದ ಮಕ್ಕಳು ಶಿಕ್ಷಣ ಮುಂದುವರೆಸಿಕೊಂಡು ಹೋಗುವಂತೆ ಮಾಡುವುದು ಕೂಡಾ ಅಷ್ಟೇ ಪ್ರಮುಖವಾದ ವಿಚಾರವಾಗಿದೆ. ಈ ಎಲ್ಲಾ ವಿಚಾರಗಳಿಂದಾಗಿ ರಾಜ್ಯ ಸರಕಾರವು ಉಚಿತ ಶಿಕ್ಷಣ, ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ಒದಗಿಸಿತ್ತಿದೆ. ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳಲ್ಲಿ ಓದಿತ್ತಿರುವ ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ.
೩. ಬಿಸಿಯೂಟ : ಕೇಂದ್ರ ಸರಕಾರದ “ಯೂನಿವರ್ಸಲೆಸೇಶನ್ ಆಫ್ ಪ್ರೆಮರಿ ಎಜುಕೇಶನ್” (Universalisation of Priamary Education) ಯೋಜನೆ ಪ್ರಕಾರ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನು ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಾಡಲಾಗುತ್ತಿದೆ.
೪. ಕ್ಷೀರ ಭಾಗ್ಯ: ಕರ್ನಾಟಕ ಘನ ಸರಕಾರವು ಸರಕಾರೀ ಮತ್ತು ಸರಕಾರೀ ಅನುದಾನಿತ ಶಾಲೆಗಳ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
೫. ಸುವರ್ಣ ಆರೋಗ್ಯ ಚೆತನ್ಯ ಕಾರ್ಯಕ್ರಮ: ಆರೋಗ್ಯ ತಪಸಾಣಾ ಕಾರ್ಯಕ್ರಮವನ್ನು ಎಲ್ಲಾ ಶಾಲೆಗಳ ಒಂದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ೨೦೦೬-೦೭ರಿಂದ ನಡೆಸಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸರಕಾರೀ ಆಸ್ಪತ್ರೆಗಳ ವೆದ್ಯರು, ಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡುತ್ತಾರೆ. ಯಾವುದೇ ವಿದ್ಯಾರ್ಥಿಗೆ ತೀವ್ರ ತರವಾದ ಕಾಯಿಲೆಯ ಲಕ್ಷಣಗಳು ಕಂಡು ಬಂದಲ್ಲಿ ಸೂಕ್ತ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೇ ದೇಹದ ಪ್ರಮುಖ ಅಂಗಗಳಾದ ಹೃದಯ, ಕಿವಿ, ಕಣ್ಣು, ಮೂಳೆಗಳಲ್ಲಿ ತೀವ್ರ ಸಮಸ್ಯೆಗಳು ಕಂಡುಬಂದಲ್ಲಿ ಉತ್ತಮ ಆಸ್ಪತ್ರೆಗಳಲ್ಲಿ ಉಚಿತ ಕಾರಡ್ಗಳನ್ನು ನೀಡಿ ಅದರಲ್ಲಿ ಚಿಕಿತ್ಸೆಯ ತಪಾಸಣೆ ಸಂಪೂರ್ಣ ವಿವರಗಳನ್ನು ದಾಖಲಿಸಲಾಗುತ್ತದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ:
೬. ಅನ್ನಭಾಗ್ಯ : ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅನ್ನಭಾಗ್ಯ ಯೋಜನೆಯಡಿಯಲ್ಲಿ ಒಂದು ಕೆ.ಜಿ ಅಕ್ಕಿಗೆ ರೂ.೧/-ರಂತೆ ೩೦ ಕೆ.ಜಿ ಅಕ್ಕಿ ಪ್ರತೀ ತಿಂಗಳಿಗೆ ನೀಡಲಾಗುವುದು. ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳ ಒಬ್ಬ ಸದಸ್ಯನಿಗೆ ೧೦ ಕೆ.ಜಿ ಅಕ್ಕಿ ರೂ.೧/-ರಲ್ಲಿ ನೀಡಲಾಗುತ್ತಿದೆ.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ:
೭. ಸುವರ್ಣ ಗ್ರಾಮೋದಯ ಯೋಜನೆ: ಆಯ್ಕೆಯಾದ ಹಳ್ಳಿಗಳ ಸಮಗ್ರ ಅಭಿವೃದ್ಧಿ ಹಳ್ಳಿಯಲ್ಲಿ ಲಭ್ಯವಿರುವ ಭೌತಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಆದಾಯಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಜನರಿಗೆ ಪ್ರೇರಣೆ ನೀಡಿ ಪ್ರತೀ ಕುಟುಂಬಗಳ ಅಭಿವೃದ್ಧಿಗಾಗಿ ಈ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಜನರನ್ನು ಸ್ವಸಹಾಯ ಸಂಘಗಳನ್ನಾಗಿ ಸಂಘಟಿಸಿ ಮಾಹಿತಿ, ತರಬೆತಿ ಕಾರ್ಯಕ್ರಮಗಳ ಮೂಲಕ ಅವರನ್ನು ಸಬಲರನ್ನಾಗಿ ಮಾಡಿ, ಹಳ್ಳಿಯ ಅಭಿವೃದ್ಧಿ ಸಾಧಿಸುವಲ್ಲಿ ಈ ಯೊಜನೆ ಶ್ರಮಿಸುತ್ತಿದೆ.
೮. ಕೇಂದ್ರ ಸರಕಾರದ ಇತರ ಯೋಜನೆಗಳು: ಮಹಿಳಾ ಕಿಸಾನ್ ಸಶಕ್ತೀಕಿರಣ ಪರಿಯೋಜನಾ:
ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಕೃಷಿ ಕಾರ್ಮಿಕರಾಗಿ, ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಇವರನ್ನು ನೇರವಾಗಿ ಸರಕಾರದ ಸೌಲಭ್ಯಗಳು ಒದಗುವಂತೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಇವರು ಭೂಮಾಲೀಕರು ಅಲ್ಲ. ಅಲ್ಲದೇ ದಿನಗೂಲಿ ವ್ಯತ್ಯಾಸ ಪುರುಷರಿಗೆ ಅಧಿಕ ಮಹಿಳೆಯರಿಗೆ ಕಡಿಮೆ ಎಂಬ ತಾರತಮ್ಯವೂ ಇದೆ. ತನ್ನ ಕೃಷಿ ಭೂಮಿಯಲ್ಲಿ ತನ್ನನ್ನು ತಾನೂ ಹೆಚ್ಚಾಗಿ ತೊಡಗಿಸಿಕೊಂಡರೂ ಕೂಡಾ ಆಕೆಯ ಹಲವಾರು ಜವಾಬ್ದಾರಿಗಳ ನಡುವೆ ಇದು ನಗಣ್ಯ ವೆನಿಸುತ್ತಿದೆ. ಇದರಿಂದಾಗಿ ಆಕೆ ಕೃಷಿಗೆ ಪೂರಕವಾದ ಮಾಹಿತಿ ತಂತ್ರಜ್ಞಾನಗಳನ್ನು ಪಡಕೊಳ್ಳುವಲ್ಲಿ ಅಶಕ್ತಳಾಗುತ್ತಾಳೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಕೃಷಿಕರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೇಂದ್ರಸರಕಾರವು ಮಹಿಳಾ ಕಿಸಾ ಸಶಕ್ತೀಕರಣಾ ಪರಿಯೋಜನಾ ಎಂಬ ಹೊಸಯೋಜನೆಯನ್ನು “ನ್ಯಾಷನ ರೂರಲ್ ಲೆವ್ಲಿಹುದ್ ವಿಷನ್”ನ ಯೋಜನೆಯಲ್ಲಿ ತಂದಿತು.
ಈ ಯೋಜನೆಯ ಮೂಲಭೂತ ಉದ್ದೇಶ:
೯. ರಾಷ್ಟ್ರೀಯ ಮಹಿಳಾ ನಿಧಿ (ರಾಷ್ಟ್ರೀಯ ಮಹಿಳಾ ಕೋಶ್)(RMK): ಅತ್ಯಂತ ಕಡಿಮೆ ಆದಾಯ ಇರುವ ಮಹಿಳೆಯರಿಗೆ ಈ ನಿಧಿಯಿಂದ ಕಿರು ವ್ಯವಹಾರ ಪ್ರಾರಂಭಿಸಲು ಸಾಲ ಸೌಲಭ್ಯ ನೀಡಲಾಗುತ್ತಿದೆ.
೧೦. ರಾಷ್ಟ್ರೀಯ ಮಹಿಳಾ ಸಬಲೀಕರಣ ಪ್ರಾಧಿಕಾರ: ೨೦೧೦ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭ ಈ ಪ್ರಾಧಿಕಾರವನ್ನು ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ ಮತ್ತು ಸರಕಾರೀ ಇಲಾಖೆಗಳ ವಿವಿಧ ಯೋಜನೆಗಳನ್ನು ಸಮನ್ವಯಗೊಳಿಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು.
ಮಹಿಳೆಯರ ಯೋಗ ಕ್ಷೇಮಕ್ಕಾಗಿ, ಅಭಿವೃದ್ಧಿಗಾಗಿ ಇರುವ ಎಲ್ಲಾ ಸೇವೆಗಳನ್ನು ಒಂದೇ ಕೇಂದ್ರದಿಂದ ಒದಗಿಸುವ ವ್ಯವಸ್ಥೆ, ಈ ಪ್ರಾಧಿಕಾರ ಮಾಡುವುದರಿಂದ “ಮಿಷನ್ ಪೂರ್ಣ ಶಕ್ತಿ” ಎಂದೂ ಇದಕ್ಕೆ ನಾಮಕರಣ ಮಾಡಲಾಗಿದೆ. ರಾಷ್ಟ್ರೀಯ ಸಂಪನ್ಮೂಲ ಕೇಂದ್ರವನ್ನು (ನ್ಯಾಷನ ರಿಸೋರ್ಸ್ ಸೆಂಟರ್) ಇದಕೋಸ್ಕರ ಪ್ರಾರಂಭ ಮಾಡಲಾಗಿದ್ದು, ವಿವಿಧ ಯೋಜನೆಗಳ, ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ತಂತ್ರಜ್ಞಾನ, ತಿಳುವಳಿಕೆ, ಸಂಶೋಧನೆಗಳ ಅಂಕಿ ಅಂಶಗಳು ಮತ್ತು ಲಿಂಗತಾರತಮ್ಯ, ಲಿಂಗನುಪಾತ ವಿಚಾರಕ್ಕೆ ಸಂಬಂಧಿಸಿದ ವಿಚಾರಗಳು. ಹೀಗೆ ಸಮಗ್ರ ವಿಚಾರಗಳು ಈ ಕೇಂದ್ರದಲ್ಲಿ ಲಭ್ಯವಿರುತ್ತದೆ. ಅಲ್ಲದೇ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಪ್ರಾಧಿಕಾರಿಗಳಿಗೆ ನಿರ್ದೇಶನ ಮತ್ತು ಸೇವೆಯನ್ನು ನೀಡುವ ಪ್ರಮುಖ ಸಂಸ್ಥೆಯಾಗಿದೆ. ಈ ಸಂಸ್ಥೆಯು ಕೆಳಗಿನ ವಿಚಾರಗಳ ಬಗ್ಗೆ ಕರ್ತವ್ಯ ನಿರ್ವಹಿಸುತ್ತಿದೆ.
೧೧. ನ್ಯಾಶನ ಬಯೋಫ್ಯೂಯೆಲ್ ಅಭಿವೃದ್ಧಿ ಯೋಜನೆ: ಈ ಯೋಜನೆಯ ಮಹಿಳೆಯರ ಕ್ಷೇಮಕ್ಕಾಗಿ ಇರುವುದು. ಜೆವಿಕ ಅನಿಲ ಸ್ಥಾನದ ರಚನೆಗಾಗಿ ಕೇಂದ್ರಸರಕಾರ ಹಾಗೂ ರಾಜ್ಯ ಸರಕಾರಗಳಿಂದ ಅನುದಾನ ರೂ.೧೧,೦೦೦/- ಲಭ್ಯವಿದೆ.
೧೨. ನಿರ್ಮಲ್ ಭಾರತ್ ಅಭಿಯಾನ: ಕೇಂದ್ರ ಸರಕಾರದ “ಟೋಟಲ್ ಸ್ಯಾನೀಟೇಶ ಕ್ಯಾಂಪ್” ಯೋಜನೆಯನ್ನು ಮರು ನಾಮಾಕರಣ “ನಿರ್ಮಲ್ ಭಾರತ್ ಅಭಿಯಾನ” ಎಂದು ಮಾಡಲಾಯಿತು. ಈ ಯೋಜನೆಯಡಿಯಲ್ಲಿ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ರೂ.೧೨,೦೦೦/ ಮತ್ತು ಪರಿಶಿಷ್ಠ ಜಾತಿ/ಪಂಗಡದ ಕುಟುಂಬಗಳಿಗೆ ರೂ.೧೫,೦೦೦/- ಮೊತ್ತ ಅನುದಾನ ನೀಡಲಾಗುವುದು. ಜೊತೆಯಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ, ಅಂಗನವಾಡಿಗಳ ಮೂಲಕ ಶೌಚಾಲಯ ಬಳಕೆ ಬಗ್ಗೆ ಮತ್ತು ನೆರ್ಮಲ್ಯ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಇತರ ಯೋಜನೆಗಳು
೧೩. ಜನ್ ಧನ್ ಯೋಜನೆ: ಕೇಂದ್ರ ಸರಕಾರವು ಪ್ರತಿಯೊಂದು ಕುಟುಂಬವನ್ನು ಆರ್ಥಿಕ ಸೇರ್ಪಡೆ ಮಾಡಿಸುವ ನಿಟ್ಟಿನಲ್ಲಿ “ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆ ತೆರೆಯುವ ವಿಶೇಷ ಯೋಜನೆಯನ್ನು ಅಗ ೨೦೧೪ ರಲ್ಲಿ ಜಾರಿಗೆ ತಂದಿತು. ಈ ಯೋಜನೆಯನ್ನು ಅತ್ಯಂತ ಸರಳ ಕೆ.ವೆ.ಸಿ ದಾಖಲೆಗಳನ್ನು ಒದಗಿಸಿ ಯಾವುದೇ ಆರಂಭಿಕ ಮೊತ್ತ ಜಮೆ ಮಾಡದೇ ಝೀರೋ ಬ್ಯಾಲೆನಲ್ಲಿ ನಲ್ಲಿ ಖಾತೆ ಪ್ರಾರಂಭಿಸಬಹುದಾಗಿದೆ. ಈ ಖಾತೆ ತೆರೆದಲ್ಲಿ ಸದಸ್ಯರಿಗೆ ರೂ. ೧ ಲಕ್ಷ ತನಕ ಅಪಘಾತ ವಿಮೆ ಮತ್ತು ರೂ.೩೦,೦೦೦/- ಜೀವ ವಿಮೆಯ ಸೌಲಭ್ಯ ದೊರಕುತ್ತದೆ. ಅಲ್ಲದೇ ಖಾತೆದಾರರು ಮಹಿಳೆಯರಾಗಿದ್ದಲ್ಲಿ, ಆರು ತಿಂಗಳ ನಂತರ ರೂ.೫,೦೦೦/- ತನಕ ಓವg ಡ್ರಾಫಟ್ ಸೌಲಭ್ಯ ಸಿಗುತ್ತದೆ. ಸರಕಾರದಿಂದ ದೊರೆಕುವ ಸೌಲಭ್ಯಗಳು ನೇರವಾಗಿ ಸದಸ್ಯರ ಈ ಖಾತೆಗೆ ವರ್ಗಾವಣೆಗೊಳ್ಳುತ್ತದೆ.
೧೪. “ಬೆಟಿ ಬಚಾವೋ ಬೆಟಿ ಪಡಾವೋ” ಆಂದೋಲನವು ಕೇಂದ್ರಸರಕಾರದ ನೂತನ ಕಾರ್ಯಕ್ರಮ. ದೇಶದಲ್ಲಿ ಲಿಂಗಾನುಪಾತ ಕುಸಿದಿರುವ ಕಾರಣದಿಂದಾಗಿ ಹೆಣ್ಣು ಮಕ್ಕಳ/ಮಹಿಳೆಯರ/ಅಬಾಲ ವೃದ್ಧೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರಗಳಿಂದಾಗಿ ಭವಿಷ್ಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣದ ಆದ್ಯತೆ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗಳು ಜಂಟಿಯಾಗಿ ಅನುಷ್ಠಾನ ಮಾಡಲಾಗುವುದು. ಹೆಣ್ಣು ಮಗು ಹುಟ್ಟಿದಾಗ ಸಂಭ್ರಮ ಆಚರಣೆ ಮಾಡುವುದು ಮತ್ತು ಅವಳ ವಿದ್ಯೆಗೆ ಆದ್ಯತೆ ನೀಡುವಂತೆ ಮಾಡುವುದು, ಈ ಬಗ್ಗೆ ತೀವ್ರ ತರವಾದ ತಿಳುವಳಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಲಿಂಗನುಪಾತ ಕಡಿಮೆ ಇರುವ ಜಿನ್ಯಗಳನ್ನು ಆಯ್ಕೆ ಮಾಡಿ ನಿರಂತರ ಮಾಹಿತಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತೆ ಮಾಡುವುದು, ಇವೇ ಮೊದಲಾದ ಕಾರ್ಯಕ್ರಮಗಳನ್ನು ಈ ಯೋಜನೆ ಒಳಗೊಂಡಿರುತ್ತದೆ.
೧೫. ಸುಕನ್ಯ ಸಮೃದ್ಧಿ ಯೋಜನೆ: ಹತ್ತು ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆಯುವ ಹೊಸ ಯೋಜನೆಯನ್ನು ಕೇಂದ್ರಸರಕಾರ ಆರಂಭಿಸಿದೆ. ಪ್ರತೀ ವರ್ಷ ಕನಿಷ್ಟ ರೂ.೧,೦೦೦/- ಮೊತ್ತ ಗರಿಷ್ಟ ರೂ.೧.೫ ಲಕ್ಷ ಈ ಖಾತೆಗೆ ಜಮಾ ಮಾಡಿದರೆ ಪ್ರಸ್ತುತ ೯.೧% ಬಡ್ಡಿದರ ನೀಡಲಾಗುತ್ತದೆ. ಮಗುವಿಗೆ ೨೧ ವರ್ಷ ಆದ ನಂತರ ಖಾತೆಯನ್ನು ಮುಚ್ಚ ಬಹುದಾಗಿದೆ. ಮತ್ತು ಮಗುವಿಗೆ ೧೮ ವರ್ಷ ನಂತರ ಖಾತೆಯಲ್ಲಿ ಜಮೆ ಇರುವ ೫೦% ಮೊತ್ತ ಶಿಕ್ಷಣಕ್ಕಾಗಿ ಹಿಂಪಡೆಯಬಹುದು.
೧೬. ಪ್ರಧಾನ ಮಂತ್ರಿ ಜೀವ ಜ್ಯೋತಿ ಭಿಮಾ ಯೋಜನೆ (PMJJBY): ಈ ಯೋಜನೆಯ ಪ್ರಕಾರ ಬ್ಯಾಂಕ್ ಖಾತೆ ಹೊಂದಿರುವಂತಹ ಎಲ್ಲಾರಿಗೆ ಅನ್ವಯವಾಗುತ್ತದೆ. ರೂ.೩೮೦/- ಪ್ರತೀ ವರ್ಷಕ್ಕೆ ಪ್ರಿಮಿಯಂ ಮೊತ್ತ ಖಾತೆಯಿಂದ ಈ ಯೋಜನೆಗೆ ವರ್ಗಾವಣೆಯಾಗುತ್ತದೆ. ಈ ವಿಮಾದಾರರು ಯಾವುದೇ ಕಾರಣಕ್ಕೆ ಮರಣ ಹೊಂದಿದ ಸಂದರ್ಭದಲ್ಲಿ ರೂ. ೨ ಲಕ್ಷ ವಿಮೆ ಮೊತ್ತ ಸಿಗುತ್ತದೆ. ೧೮ ರಿಂದ ೫೦ ವರ್ಷದೊಳಗಿನ ಎಲ್ಲರೂ ಮಾಡಬಹುದು. ಈ ವಿಮೆಯು ಒಂದು ವರ್ಷಕ್ಕೆ ಮಾತ್ರ ಅನ್ವಯವಾಗುವುದು. ಉದಾರಹಣೆಗೆ: ೨೪.೦೫.೨೦೧೫ರ ದಿನಾಂಕದಂದು ವಿಮೆ ಮಾಡಿಸಿದಲ್ಲಿ, ೨೩.೦೫.೨೦೧೬ರ ತನಕ ಮಾತ್ರ ವಿಮೆ ಚಾಲ್ತಿಯಲ್ಲಿರುವುದು. ಬ್ಯಾಂಕ್ನಲ್ಲಿ ಈ ವಿಮೆಯ ಅರ್ಜಿ ಲಭ್ಯವಿರುವುದು.
೧೭. ಪ್ರಧಾನ ಮಂತ್ರಿ ಜೀವ ಸುರಕ್ಷಾ ಯೋಜನೆ((PMJSY): ಈ ಯೋಜನೆಯೂ ಕೂಡ ಬ್ಯಾಂಕ್ ಉಳಿತಾಯ ಖಾತೆ ಹೊಂದಿರುವ ಸದಸ್ಯರಿಗೆ ಅನ್ವಯಿಸುತ್ತದೆ. ವಯೋಮಿತಿ ೧೮ ರಿಂದ ೭೦ ವರ್ಷ ಆಗಿರುವುದೇ. ಇದರ ಪ್ರಕಾರ ಸದಸ್ಯರು ಅಪಘಾತದಲ್ಲಿ ಮರಣ ಹೊಂದಿದಲ್ಲಿ/ಎರಡು ಕೆ/ಎರಡು ಕಾಲು/ಎರಡು ಕಣ್ಣುಗಳನ್ನು ಕಳೆದುಕೊಂಡಲ್ಲಿ ರೂ. ೨ ಲಕ್ಷ ಪರಿಹಾರ ಧನವಿರುತ್ತದೆ. ಇದಕ್ಕೆ ನೀಡಬೆಕಾದ ಮೊತ್ತ ರೂ. ೧೨ ನೇರವಾಗಿ ಬ್ಯಾಂಕ್ ಖಾತೆಯಿಂದ ಜಮೆ ಮಾಡಿ ಕೊಳ್ಳಲಾಗುತ್ತದೆ.
೧೮. ಅಟಲ್ ಪಿಂಚಣಿ ಯೋಜನೆ: ಇದು ರಾಷ್ರೀಯ ಪಿಂಚಣಿ ಯೋಜನೆಯಾಗಿದ್ದು-ಪ್ರಸ್ತುತ ಅಟಲ್ ಪಿಂಚಣಿ ಎಂದು ಮರು ನಾಮಕರಣಗೊಂಡಿದೆ. ಕೂಲಿಕಾರ್ಮಿಕರು, ಇತರ (ಪಿಂಚಣಿ ಸೌಲಭ್ಯ ಕೊಳ್ಳಗಾದ) ಸದಸ್ಯರು ಈ ಯೋಜನೆಗೆ ಸೇರಬಹುದು. ವಯೋಮಿತಿ ೧೮ ರಿಂದ ೪೦ ವರ್ಷ ಆಗಿರುತ್ತದೆ. ಪ್ರತೀ ವರ್ಷವು ಪಿಂಚಣಿ ಖಾತೆಗೆ ಕನಿಷ್ಠ ರೂ.೧,೦೦೦/- ಗರಿಷ್ಠ ೧೨,೦೦೦/- ಮೊತ್ತ ಜಮೆ ಮಾಡಬೆಕು. ಕನಿಷ್ಠ ಇಪತ್ತು ವರ್ಷಗಳ ಕಾಲ ನಿರಂತರವಾಗಿ ಮೊತ್ತ ಜಮೆ ಮಾಡಿದರೆ ೬೦ ವರ್ಷ ಪ್ರಾಯದ ನಂತರ ಪಿಂಚಣಿ ಸೌಲಭ್ಯ ಪಡೆಯಬಹುದು. ಇಪ್ಪತ್ತು ವರ್ಷಗಲಲ್ಲಿ ಸದಸ್ಯರ ಪಿಂಚಣಿ ಖಾತೆಯಲ್ಲಿ ಕ್ರೋಢಿಕರಣವಾದ ಮೊತ್ತದ ಆಧಾರದಲ್ಲಿ ನೀಡಲಾಗುವ ಮಾಸಿಕ ಪಿಂಚಣಿ ಮೊತ್ತ ನಿರ್ಧರಿತವಾಗುತ್ತದೆ. ಪ್ರಥಮ ೫ ವರ್ಷದಲ್ಲಿ ಕೇಂದ್ರ ಸರಕಾರವೂ ಕೂಡ ಗರಿಷ್ಠ ರೂ.೧,೦೦೦/- ಮೊತ್ತ ಸದಸ್ಯರ ಪಿಂಚಣಿ ಖಾತೆಗೆ ಜಮೆ ಮಾಡುತ್ತದೆ.
ವೇತನ ಯೋಜನೆಗಳು:
೧) ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ: ಇದು ರೂ.೧೧,೮೦೦/- ಕ್ಕಿಂತ ಕಡಿಮೆ ಆದಾಯ ಇರುವ ಕುಟುಂಬಕ್ಕೆ ಮಾಸಿಕ ರೂ.೫೦೦/- ವೇತನ ನೀಡಲಾಗುವುದು.
೨) ಸಂಧ್ಯಾ ಸುರಕ್ಷಾ ಯೋಜನೆ: ಕರ್ನಾಟಕ ಘನ ಸರಕಾರವು ೨೦೦೭ನೇ ಇಸವಿಯಿಂದ ರೂ.೧,೦೦೦ ಮಾಸಿಕಈ ವೇತನ ಪ್ರಾರಂಭಿಸಿತು. ಇದು ಮೇಲೆ ಉಲ್ಲೇಖಿಸಿದ ರೀತಿಯಲ್ಲಿಯೇ ಅನುಷ್ಠಾನ ಆಗುತ್ತಿದೆ. ಆದರೆ ಇಲ್ಲಿ ವಾರ್ಷಿಕ ಆದಾಯ ರೂ.೨೦,೦೦೦/- ಕ್ಕಿಂತ ಕಡಿಮೆ ಇರುವವರಿಗೆ ಮಾತ್ರ ಅನ್ವಯಿಸುವುದು.
೩) ನಿರ್ಗತಿಕ ವಿಧವಾ ವೇತನಾ: ೧೮ ವರ್ಷಕ್ಕಿಂತ ಅಧಿಕ ವಯೋಮಿತಿಯ ವಿಧವೆಯರಿಗೆ ಇದು ಅನ್ವಯಿಸುತ್ತದೆ. ರೂ.೪೦೦/- ಮಾಸಿಕ ವೇತನ ನೀಡಲಾಗುತ್ತದೆ. ಒಂದು ವೇಳೆ ಆಕೆ ಇನ್ನೊಂದು ಮದುವೆ ಆದಲ್ಲಿಯೂ ಮಕ್ಕಳು ಅವಳನ್ನು ನೋಡಿಕೊಳ್ಳುವ ಹಂತಕ್ಕೆ ಬಂದಾಗ ಅಥವಾ ಆಕೆಯ ಆದಾಯ ವರ್ಷಕ್ಕೆ ರೂ.೧೧,೮೦೦/- ಕ್ಕಿಂತ ಹೆಚ್ಚಾದರೆ ಈ ಸೌಲಭ್ಯ ಒದಗಿಸಲಾಗುವುದಿಲ್ಲ.
೪) ಅಂಗವಿಕಲ ಮಾಸಾಶನ: ವಾರ್ಷಿಕ ಆದಾಯ ರೂ.೬,೦೦೦/- ಕ್ಕಿಂತ ಆದಾಯ ಕಡಿಮೆ ಇರುವ ಮತ್ತು ೭೫% ಅಂಗವೆಕಲ್ಯತೆ ಇದ್ದರೆ ರೂ.೧,೦೦೦/- ಮಾಸಾಶನ ನೀಡಲಾಗುವುದು.
೫) ಮದುವೆಯಾಗದ ಮದ್ಯವಯಸ್ಸಿನ ಮಹಿಳೆಯರಿಗೆ (೪೫-೬೦ ವರ್ಷ): ರೂ.೧,೦೦೦/- ದಂತೆ ವೇತನ ನೀಡಲಾಗುತ್ತಿದೆ. ಇದು ಮಹಿಳೆಯರಿಗೆ ಮಾತ್ರ. ಇವರು ಇತರ ಯಾವುದೇ ಪಿಂಚಣಿ ಯೋಜನೆಯಲ್ಲಿ ನೋದಾವಣೆಗೊಂಡಿರಬಾರದು.
ಹೀಗೆ ಸರಕಾರದ ವಿವಿಧ ಇಲಾಖೆಗಳಿಂದ, ನಿಗಮಗಳಿಂದ ಬಡ ಕುಟುಂಬಗಳ ಸ್ವಾವಲಂಬಿಗಳಾಗುವಂತೆ ಹಲವಾರು ಆರ್ಥಿಕ ಸೌಲಭ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಕೆಗೊಳ್ಳುತ್ತಿವೆ. ಜಲಾನಯನ ಇಲಾಖೆಯಿಂದ ಸೌಲಭ್ಯಗಳು, ತೋಟಾಗಾರಿಕಾ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳಿಂದ ಸೌಲಭ್ಯಗಳು ಅಲ್ಲದೇ ಅಲ್ಪ ಸಂಖ್ಯಾತರ ನಿಗಮ, ಅಂಬೆಡ್ಕರ್ ಅಭಿಮಾನಿ ನಿಗಮ, ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ, ಮಹಿಳಾ ಅಭಿವೃದ್ಧಿ ನಿಗಮ, ಕರ್ನಾಟಕ ಸಣ್ಣ ಕೆಗಾರಿಕೆ ಅಭಿವೃದ್ಧಿ ನಿಗಮ ಹೀಗೆ ವಿವಿಧ ನಿಗಮಗಳ ಮೂಲಕ ಸೌಲಭ್ಯಗಳು ಜಾರಿಯಲ್ಲಿದೆ. ಇಷ್ಟೆಲ್ಲ ಸೌಲಭ್ಯಗಳಿದ್ದು ಇಂದಿಗೂ ಜನರಲ್ಲಿ ಅಸಹಾಯಕತೆಯ ಭಾವನೆ ಯಾಕೆ ಇದೆ? ಹಲವಾರು ಉತ್ತರಿಸಲಾಗದ ಪ್ರಶ್ನೆಗಳು! ನಿಜವಾಗಿಯೂ ಈ ಸೌಲಭ್ಯಗಳು ತಲುಪಬೆಕಾದಲ್ಲಿ ತಲುಪುತ್ತಿದೆಯೇ? ಈ ಸೌಲಭ್ಯಗಳಲ್ಲಿ ಡೂಪ್ಲಿಕೇಷ ಆಗುತ್ತಿಲ್ಲವೇ? ಒಂದು ವೇಳೆ ಈ ಎಲ್ಲಾ ಯೋಜನೆಗಳು ತಲುಪಬೆಕಾದಲ್ಲಿ ತಲುಪಿದರೆ ಮುಂದಕ್ಕೆ ಹೊಸ ಯೋಜನೆಗಳ ಅವಶ್ಯಕತೆ ಇದೆಯೇ? ಜನರು ಬಿಟ್ಟು ಅವಲಂಬಿತರಾಗುತ್ತಿದ್ದಾರೆಯೇ? ಸ್ವಾವಲಂಬಿಗಳಾಗುವುದು ಯಾವಾಗ? ನಿಜವಾಗಿಯೂ ಈ ಎಲ್ಲಾ ಕಾರ್ಯಕ್ರಮಗಳ ಮಾಹಿತಿಯು ಸಾಮಾನ್ಯ ಜನರಲ್ಲಿ, ಗ್ರಾಮಗಳಲ್ಲಿ, ಕುಟುಂಬಗಳಲ್ಲಿ ಇದೆಯೇ? ಮಾಹಿತಿ ತಿಳಿದ ಮೇಲೂ ಈ ಸೌಲಭ್ಯಗಳನ್ನು ಪಡೆಯಲು ಅವರು ಶಕ್ತರೇ?
ಬಹುಶ” ಸೌಲಭ್ಯಗಳನ್ನು ಪಡಕೊಳ್ಳುವಲ್ಲಿ ಜನಸಾಮಾನ್ಯರ ಸಾಮರ್ಥ್ಯವನ್ನು ಹೆಚ್ಚಿಸ ಬೆಕಾಗಿದೆ. ಅವರ ದನಿಯನ್ನು ಬಲಗೊಳಿಸ ಬೆಕಾಗಿದೆ. ಜಾಗೃತಿಯನ್ನು ಮೂಡಿಸಬೆಕಾಗಿದೆ.
ಸರಕಾರೀ ಸೌಲಭ್ಯಗಳ ಸಾರ್ಥಕತೆಯು ಜನರನ್ನು ತಲುಪುವಲ್ಲಿ ಇದೆ. ಅವರ ಜೀವನದಲ್ಲಿ ಪರಿವರ್ತನೆಯನ್ನು ತರುವಲ್ಲಿ ಇದೆ.