
ಕರ್ನಾಟಕ ಸರ್ಕಾರ
ಕಾಲೇಜು ಶಿಕ್ಷಣ ಇಲಾಖೆ
ದಾವಣಗೆರೆ ವಿಶ್ವವಿದ್ಯಾಲಯ
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಬಸವಾಪಟ್ಟಣ
ದಿನಾಂಕ:- 20-02-2021 ಶನಿವಾರದಂದು ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸವಾಪಟ್ಟಣದಲ್ಲಿ ಸಾಂಸ್ಕೃತಿಕ ಕ್ರೀಡೆ ರಾಷ್ಟ್ರೀಯ ಸೇವಾ ಯೋಜನೆ ಯೂತ್ ರೆಡ್ ಕ್ರಾಸ್ ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ ಹಾಗೂ ಪ್ರಥಮ ವರ್ಷದ ಬಿಎ ಬಿಕಾಂ ಬಿಬಿಎಂ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದರಿ ಕಾಲೇಜಿನ ಪ್ರಾಂಶುಪಾಲರಾದ ಯೋಗೇಶ್ ಕೆ ಜೆ ಅವರು ವಹಿಸಿಕೊಂಡಿದ್ದರು ಹಾಗೂ ಮುಖ್ಯ ಅತಿಥಿಗಳಾಗಿ ಮಾಯಕೊಂಡ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಪ್ರೋ!! ಲಿಂಗಣ್ಣನವರು ಆಗಮಿಸಿದ್ದರು ಮತ್ತು ಜನ ಪ್ರಿಯಾ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಯುತ ತೇಜಸ್ವಿ ಪಟೇಲ್ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು
ಪ್ರೋ!!ಎನ್ ಮಲ್ಲಯ್ಯ ಶ್ರೀಮತಿ ಜ್ಯೋತಿ ಎನ್ ರವಿಕುಮಾರ್ ಎಸ್ ಹೆಚ್ ಪ್ರಕಾಶ್ ಜಿ ಪಿ ಸೇರಿದಂತೆ ಎಲ್ಲಾ ಉಪನ್ಯಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು
ಈ ಕಾರ್ಯಕ್ರಮವನ್ನು ರವಿಕುಮಾರ್ ಎಸ್ ಹೆಚ್ ಸ.ಪ್ರಾ ನಿರೂಪಿಸಿದರು
ಶ್ರೀಮತಿ ಜ್ಯೋತಿ ಎನ್ ಸ.ಪ್ರಾ ಈ ಕಾರ್ಯಕ್ರಮದ ಸರ್ವರನ್ನೂ ಸ್ವಾಗತಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಪ್ರೋ!! ಎನ್ ಮಲ್ಲಯ್ಯ ರವರು ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯಲ್ಲಿ ಕಾಲೇಜಿನ ಹುಟ್ಟು ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದರು ನಂತರ ವೇದಿಕೆ ಮೇಲಿದ್ದ ಎಲ್ಲಾ ಗೌರವಾನ್ವಿತರು ಜ್ಯೋತಿಯನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದರು
ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಯುತ ತೇಜಸ್ವಿ ಪಟೇಲ್ ಅವರು ಕಾರ್ಯಕ್ರಮವನ್ನು ಕುರಿತು ವ್ಯಕ್ತಿತ್ವ ವಿಕಸನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು
ನಂತರದಲ್ಲಿ ಅತಿಥಿಗಳು ಭಾಷಣದಲ್ಲಿ ಸನ್ಮಾನ್ಯ ಶಾಸಕರಾದ ಶ್ರೀಯುತ ಪ್ರೋ!! ಲಿಂಗಣ್ಣನವರು ತಮ್ಮ ವೃತ್ತಿ ಜೀವನ ಮತ್ತು ರಾಜಕೀಯ ಜೀವನವನ್ನು ಎಲ್ಲರಬಳಿ ಹಂಚಿ ಕೊಂಡರು ನಂತರದಲ್ಲಿ ವೇದಿಕೆ ಮೇಲೆ ಉಪಸ್ಥಿತರಿದ್ದ ಸರ್ವರನ್ನೂ ಕೂಡ ಸನ್ಮಾನಿಸಲಾಯಿತು ಮತ್ತು ಕಳೆದ ವರ್ಷ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೂ ಸನ್ಮಾನಿಸಲಾಯಿತು
ಸನ್ಮಾನ್ಯ ಶಾಸಕರ ಮುಂದೆ ಕಾಲೇಜಿನ ಕೆಲವೊಂದು ಬೇಡಿಕೆಗಳನ್ನು ಇಡಲಾಯಿತು ಜೊತೆಗೆ ಸದರಿ ಕಾಲೇಜಿನ ಅಂತಿಮ ಬಿ ಎ ವಿದ್ಯಾರ್ಥಿನಿಯರು ಹೆಚ್ಚುವರಿಯಾಗಿ ಬೇಡಿಕೆಗಳನ್ನು ಶಾಸಕರ ಮುಂದೆ ಇಡುವುದರ ಮೂಲಕ ಕಾರ್ಯಕ್ರಮಕ್ಕೆ ಹೊಸ ರೀತಿಯ ಚಾಲನೆ ನೀಡುವುದರ ಜೊತೆಗೆ ಒಂದೆ ರೀತಿಯ ಉಡುಪುಗಳನ್ನು ಧರಿಸಿ ಈ ಕಾರ್ಯಕ್ರಮದ ಸರ್ವರಿಗೂ ಪ್ರೀತಿ ಪಾತ್ರರಾದರು
ಅಧ್ಯಕ್ಷೀಯ ಭಾಷಣದಲ್ಲಿ ಸದರಿ ಕಾಲೇಜಿನ ಪ್ರಾಂಶುಪಾಲರಾದ ಯೋಗೇಶ್ ಕೆ ಜೆ ಅವರು ಕಾಲೇಜಿನ ಅಭಿವೃದ್ಧಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಕುರಿತು ಮಾತನಾಡಿದರು
ಅತಿಥಿಗಳು ಪೋಷಕರು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 350 ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಕಾರ್ಯಕ್ರಮದ ಸರ್ವರಿಗೂ ಪ್ರಕಾಶ್ ಜಿ ಪಿ ಸ.ಪ್ರಾ. ಧನ್ಯವಾದಗಳನ್ನು ತಿಳಿಸಿದರು

ಮಂಜುನಾಥ ಕೆ ಎಂ
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಬಸವಪಟ್ಟಣ {ಚಿರಡೋಣಿ)
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಬಸವಪಟ್ಟಣ {ಚಿರಡೋಣಿ)