ಶನಿವಾರ, ಜನವರಿ 23, 2021

ಸುಭಾಷ್ ಚಂದ್ರ ಬೋಸ್ ಅವರ 124ನೇ ಜನ್ಮದಿನಾಚರಣೆ

                                              ಕನ್ನಡ ರಕ್ಷಣಾ ವೇದಿಕೆ


                                                

ನಾಡಿನ ಸಮಸ್ತ ಜನತೆಗೆ ಸುಭಾಷ್ ಚಂದ್ರ ಬೋಸ್ ಅವರ 124ನೇ ಜನ್ಮದಿನಾಚರಣೆ ಹಾಗೂ ಪರಾಕ್ರಮ ದಿನದ ಶುಭಾಶಯಗಳು


                                 ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ ದಾವಣಗೆರೆ ವಿಶ್ವವಿದ್ಯಾಲಯ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸವಾಪಟ್ಟಣದ ಕಾಲೇಜಿನಲ್ಲಿ ಇತಿಹಾಸ ವೇದಿಕೆ ವತಿಯಿಂದ ಸುಭಾಷ್ ಚಂದ್ರ ಬೋಸ್ ಅವರ 124ನೇ ಜನ್ಮದಿನಾಚರಣೆ ಹಾಗೂ ಪರಾಕ್ರಮ ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

                                 



      ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದರಿ ಕಾಲೇಜಿನ ಪ್ರಾಂಶುಪಾಲರಾದ ಯೋಗೇಶ್ ಕೆ ಜೆ ಅವರು ವಹಿಸಿಕೊಂಡಿದ್ದರು ಮತ್ತು ಈ ಕಾರ್ಯಕ್ರಮದ ನೇತೃತ್ವವನ್ನು ಮಲ್ಲಯ್ಯ ಎನ್ ಇತಿಹಾಸ ವಿಭಾಗದ ಮುಖ್ಯಸ್ಥರು (ಸ.ಪ್ರಾ) ಇವರು ವಹಿಸಿದ್ದರು ಹಾಗೂ ರವಿಕುಮಾರ್ ಎಸ್ ಹೆಚ್ (ಸ.ಪ್ರಾ) ಹನುಮಂತಪ್ಪ (ಸ.ಪ್ರಾ) ಜ್ಯೋತಿ ಎನ್ (ಸ.ಪ್ರಾ) ಮಧುಸೂದನ್ (ಸ.ಪ್ರಾ) ಪ್ರಕಾಶ್ ಜಿ ಪಿ (ಸ.ಪ್ರಾ) ಸೇರಿದಂತೆ 150 ಕ್ಕು ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಈ ಕಾರ್ಯಕ್ರಮವನ್ನು ವಿದ್ಯಾರ್ಥಿ ಮಂಜುನಾಥ ಕೆ ಎಮ್ ನಿರೂಪಿಸಿದರು ಈ ಕಾರ್ಯಕ್ರಮದ ಸರ್ವರನ್ನೂ ವಿಧ್ಯಾರ್ಥಿನಿ ಪೂಜಾ ಕೆ ಎಸ್ ಅವರು ಸ್ವಾಗತಿಸಿದರು ಹಾಗೂ ವಿದ್ಯಾರ್ಥಿ ನಿಖಿಲ್ ರವರು ಈ ಕಾರ್ಯಕ್ರಮದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದರು


                             ಈ ಕಾರ್ಯಕ್ರಮವು ರಾಷ್ಟ್ರ ಗೀತೆಯನ್ನು ಹಾಡಿ ರಾಷ್ಟ್ರ ನಾಯಕ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಗೌರವವನ್ನು ಸಮರ್ಪಿಸುವ ಮೂಲಕ ಪ್ರಾರಂಭವಾಯಿತು ನಂತರದಲ್ಲಿ ರವಿಕುಮಾರ್ ಎಸ್ ಹೆಚ್  ಸ.ಪ್ರಾ ಪ್ರಾಸ್ತಾವಿಕ ನುಡಿಯಲ್ಲಿ ನೇತಾಜಿ ಯವರ ಸಾಹಸ ಧೈರ್ಯ ಅವರ ಆದರ್ಶ ವ್ಯಕ್ತಿತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಉಣಬಡಿಸಿದರು

        ನಂತರದಲ್ಲಿ ರಾಜ್ಯಶಾಸ್ತ್ರದ ಉಪನ್ಯಾಸಕರಾದ ಹನುಮಂತಪ್ಪ ಸರ್ ರವರು  ನಾವು ಈ ರೀತಿ ರಾಷ್ಟ್ರ ನಾಯಕರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಮಾಡಿ ಭಾಷಣಗಳನ್ನು ಮಾಡಿದರೆ ಸಾಲದು ಅವರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಮತ್ತೆ ನಿಸ್ವಾರ್ಥವಾಗಿ ದೇಶಕ್ಕೊಸ್ಕರ ದುಡಿಯಬೇಕು ಎಂಬ ಆಶಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು

ಶ್ರೀಮತಿ ಜ್ಯೋತಿ ಎನ್ ಸ.ಪ್ರಾ ಈ ಕಾರ್ಯಕ್ರಮವನ್ನು ಉದಾದೇಶಿಸಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೊಡುಗೆಗಳನ್ನು ಹಾಗೂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಝಾನ್ಸಿ ಮಹಿಳಾ ಸೇನೆಯ ಪಾತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು

     ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಇತಿಹಾಸ ಉಪನ್ಯಾಸಕರಾದ ಮಲ್ಲಯ್ಯ ಸರ್ ರವರು ತಮ್ಮ ನೇತೃತ್ವ ಭಾಷಣದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಕುರಿತಂತೆ ಸಂಪೂರ್ಣ ಮಾಹಿತಿಯನ್ನು ನೀಡುವುದರ ಜೊತೆಗೆ ಕಾರ್ಯಕ್ರಮದ ಯಶಸ್ಸಿಗೆ ಬದ್ರ ಬುನಾದಿಯಾಗಿ ವಿದ್ಯಾರ್ಥಿಗಳ ಗಮನವನ್ನು ಸೆಳೆದರು

     ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸದರಿ ಕಾಲೇಜಿನ ಪ್ರಾಂಶುಪಾಲರಾದ ಯೋಗೇಶ್ ಕೆ ಜೆ ಅವರು ಅಧ್ಯಕ್ಷರಿಗೆ ಭಾಷಣದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಎರಡು ರೀತಿಯ ಗುಣಗಳನ್ನು (ಕ್ರಾಂತಿಕಾರಿ ಗುಣ ಮತ್ತು ತ್ಯಾಗದ ಗುಣ) ಕುರಿತು ವಿದ್ಯಾರ್ಥಿಗಳಿಗೆ ಉಣಬಡಿಸಿದರು

             ಬಿಂದು ಪೂಜಾ ಭೀಮನಾಯ್ಕ್  ನಿಖಿಲ್ ಸೇರಿದಂತೆ 20 ಕ್ಕು ಹೆಚ್ಚು ವಿದ್ಯಾರ್ಥಿಗಳು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಕುರಿತು ಮಾತನಾಡಿದರು



ನೇತಾಜಿ ಸುಭಾಷ್ ಚಂದ್ರ ಬೋಸ್



ನೇತಾಜಿ ಸುಭಾಷ್ ಚಂದ್ರ ಭೋಸರ ಜನ್ಮದಿನವಿದು. ಜನವರಿ 23, 1897ರಂದು ಜನಿಸಿದ ಸುಭಾಷ್ ಚಂದ್ರಬೋಸ್ ಭಾರತೀಯ ಇತಿಹಾಸದಲ್ಲಿ ಹಲವು ರೀತಿಗಳ ಬಿರುಗಾಳಿ ಬೀಸಿ, ಕಡೆಗೆ ಅವರು ಏನಾದರೂ ಎಂಬ ಬಗ್ಗೆ ಕೂಡ ಹಲವು ಸುದ್ಧಿಗಳು ನಿರಂತರವಾಗಿ ಗಾಳಿಯಲ್ಲೇ ಉಳಿಯುವ ಹಾಗೆ ಕಣ್ಮರೆಯಾದರು. ಅವರು ಈ ಲೋಕವನ್ನು ಬಿಟ್ಟು ಹೋದರು ಎಂಬ ಬಗ್ಗೆ ಇರುವ ಊಹೆಯ ದಿನ ಆಗಸ್ಟ್ 18, 1945.

ನೇತಾಜಿ ಸುಭಾಷ್ ಚಂದ್ರ ಬೋಸರ ಬಗ್ಗೆ ಹಲವು ಕತೆಗಳಿವೆ. ಭಾರತೀಯರಿಗೆ ದೇಶಾಭಿಮಾನ ಕಡಿಮೆ ಎಂಬ ಮಾತು ಪ್ರಶ್ನೆ ಪತ್ರಿಕೆಯಲ್ಲಿತ್ತೆಂದು ಕೋಪಗೊಂಡು ಪ್ರಶ್ನೆ ಪತ್ರಿಕೆ ಹರಿದೆಸೆದು ಹೊರಟ ವಿದ್ಯಾರ್ಥಿ ಎಂದು ಒಂದು ಕಥೆ, ಒಬ್ಬ ಬ್ರಿಟಿಷ್ ಅಧ್ಯಾಪಕ ಭಾರತೀಯರನ್ನು ಅವಮಾನಿಸಿ ಮಾತನಾಡಿದ ಎಂದು ಅವನನ್ನು ತಳಿಸಿದರು ಎಂದು ಮತ್ತೊಂದು ಹೀಗೆ ಹಲವು.

ನೇತಾಜಿಅವರು ಮಹಾನ್ ಬುದ್ಧಿವಂತರಾಗಿ ಇಂಡಿಯನ್ ಸಿವಿಲ್ ಸರ್ವೀಸಸ್ ಸೇವೆ ತಲುಪಿದ್ದಂತೂ ನಿಜ. ಅದನ್ನು ಕಿತ್ತೊಗೆದು ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಇಳಿದು ಇನ್ನಿಲ್ಲದಂತೆ ಸೇವೆ ಸಲ್ಲಿಸಿದ್ದೂ ನಿಜ. ಅದೆಷ್ಟೋ ಬಾರಿ ಗಡೀ ಪಾರಾಗಿ ಪುನಃ ಪುನಃ ಬಂದು ಬಂಧನಕ್ಕೆ ಒಳಗಾಗುತ್ತಿದ್ದುದೂ ನಿಜ. ಭಾರತದ ಸ್ವಾತಂತ್ರಕ್ಕೆ ಕಂಕಣ ಕಟ್ಟಿ ದುಡಿದದ್ದು ಅಪ್ಪಟ ನಿಜ.

ಗಾಂಧೀ ಮತ್ತು ನೇತಾಜಿ ಇಬ್ಬರೂ ವಿಭಿನ್ನ ಮನೋಧರ್ಮದವರು. ಗಾಂಧೀಜಿ ಆಶಯಕ್ಕೆ ವಿರುದ್ಧವಾಗಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ನಾಯಕತ್ವಕ್ಕೆ ಆಯ್ಕೆ ಆಗಿದ್ದು ಕೊನೆಗೆ ಅದನ್ನು ಬಿಟ್ಟುಕೊಟ್ಟು ಹೊರಗೂ ನಡೆದು ಬಿಟ್ಟರು.

ನಾಜೀಗಳ ಜೊತೆ, ಜಪಾನಿನವರ ಜೊತೆ ಹೀಗೆ ಬ್ರಿಟಿಷರ ವಿರೋಧಿಗಳ ಜೊತೆ ಯಾರೆಂದರೂ ಸರಿ ಸಲ್ಲಾಪ ನಡೆಸಿ ಮಲಯ, ಸಿಂಗಪುರ ಮುಂತಾದೆಡೆಗಳಲ್ಲಿ ಇದ್ದ ಯುದ್ಧ ಖೈದಿಗಳು, ಪ್ಲಾಂಟೇಶನ್ ಕೆಲಸಗಾರರನ್ನು ಒಟ್ಟುಗೂಡಿಸಿ ಆಜಾದ್ ಹಿಂದ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಒಗ್ಗೂಡಿಸಿದ ಶಕ್ತಿವಂತ. ನಾವು ‘ಜೈ ಹಿಂದ್’ ಎಂದು ಕೇಳಿದಾಗ ಮೊದಲು ಕಣ್ಣಿಗೆ ಬೀಳುವ ಚಿತ್ರ ಸುಭಾಷರದ್ದು.


ಸ್ವಾಮಿ ವಿವೇಕಾನಂದರ ನಿಷ್ಠ ಭಕ್ತರಾದ ನೇತಾಜಿ ಅವರು ವಿಶ್ವದೆಲ್ಲೆಡೆ ಭಾರತದ ಸ್ವಾತಂತ್ರ್ಯದ ಕಹಳೆಯನ್ನು ಕೂಗಿ ಜನಮನವನ್ನು ಬಡಿದೆಬ್ಬಿಸಿ ಬ್ರಿಟಿಷರನ್ನು ದಿಗ್ಬ್ರಾಂತರನ್ನಾಗಿ ಮಾಡಿದ್ದು ಚರಿತ್ರೆಯ ಪುಟಗಳಲ್ಲಿ ನಿಚ್ಚಳವಾಗಿ ಮೂಡಿದೆ.

ನಮ್ಮ ದೇಶಕ್ಕಾಗಿ ನಿರಂತರ ಯೋಚಿಸಿ, ತನ್ನ ಬುದ್ಧಿವಂತಿಕೆ, ಸಾಧ್ಯವಿದ್ದ ಶ್ರೀಮಂತ ಬದುಕು, ಮತ್ತೊಂದು ಹೌದಪ್ಪ ಆಗಿದ್ದರೆ ಭವಿಷ್ಯದ ರಾಜಕಾರಣಿಯ ಹಿರಿತನದ ಬದುಕು ಮುಂತಾದ ಸಣ್ಣತನಗಳನ್ನೆಲ್ಲಾ ಬದಿಗೊತ್ತಿ, ಯಾವುದನ್ನೂ ಸ್ವಾರ್ಥದಿಂದ ಯೋಚಿಸದೆ ಜೀವಮಾನವಿಡೀ ಕಷ್ಟಗಳನ್ನು ಎದುರಿಸಿ ಹೋರಾಟಮಯ ಬದುಕನ್ನು ಬಾಳಿದ ಈ ಧೀಮಂತ ನಾಯಕನಿಗೆ ನಾವು ಏನು ತಾನೇ ಹೇಳೋಣ.

ಈ ಮಹಾನ್ ದೇಶಭಕ್ತನ ಶಕ್ತಿ, ಆಶೀರ್ವಾದಗಳ ಚಹರೆ ಈ ದೇಶದ ಮೇಲೆ ಮತ್ತೊಮ್ಮೆ ಬೀಸಿ ಇಲ್ಲಿ ಕವಿದಿರುವ ಅಂಧಕಾರವನ್ನು ಹೋಗಲಾಡಿಸಲಿ ಎಂದು ಹಾರೈಸಿ ಆತನ ಅಡಿದಾವರೆಗಳಿಗೆ ಭಕ್ತಿಯಿಂದ ನಮಿಸೋಣ.

                                  ಇಂತಿ

                         ಮಂಜುನಾಥ ಕೆ ಎಂ

              ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 

                         ಬಸವಪಟ್ಟಣ {ಚಿರಡೋಣಿ)