ಸೋಮವಾರ, ಜುಲೈ 1, 2019

ಸ್ವಾತಂತ್ರ್ಯ ದಿನಾಚರಣೆ

  ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ

 ಮಂಜುನಾಥ ಕೆ ಎಂ

ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ 

                     ಬ್ರಿಟೀಷರ ಕುತಂತ್ರದಿಂದಾಗಿ  ಅತಂತ್ರ ಪರರಿಸ್ಥಿತಿಯಲ್ಲಿದ್ದ  ನಮ್ಮ ದೇಶವನ್ನು ಹೋರಾಡಿ  ಪ್ರಾಣ ತ್ಯಾಗ ಮಾಡಿ  ಸ್ವಾತಂತ್ರ್ಯವನ್ನಾಗಿಸಿದ ಮಹಾತ್ಮರೆಲ್ಲರನ್ನೂ  ತುಂಬು ಹೃದಯದಿಂದ ಸ್ಮರಿಸಿಕೊಳ್ಳುತ್ತ  ನಾಡಿನ ಸಮಸ್ತ ಜನತೆಗೂ 73 ನೇ ಸ್ವಾತಂತ್ರೋತ್ಸವದ ಶುಭ ಕಾಮನೆಗಳು

ಉತ್ತರದಲ್ಲಿ ಉತ್ತುಂಗ ಹಿಮವಂತ ದಕ್ಷಿಣದ ತುದಿಯಲ್ಲಿ ಅಗಾಧ ಶರತ್ತು ತಾಯಿಯ ಶಿರದಲ್ಲಿ ಸದಾ ಹಿಮ ವರ್ಷ ತಾಯಿಯ ಚರಣದಲ್ಲಿ ನೀಲ ಸಿಂಧೂವಿನ ಜಲ ಸ್ಪರ್ಶ ಒಂದೆಡೆ ದಟ್ಟ ಕಾಡು ಇನ್ನೊಂದೆಡೆ ವಿಶಾಲವಾದ ನದಿ ಬಯಲು ಒಂದೆಡೆ ಬಣಗುಡುವ ಮರುಭೂಮಿ ಇನ್ನೊಂದೆಡೆ ಧುಮುಕಿ ಧುಮಿಸುವ ನದಿ ಎತ್ತ ನೋಡಿದರತ್ತಾ ಸುಂದರವಾದ ಹಚ್ಚ ಹಸುರಿನ ಲೋಕ ಬೆಟ್ಟ ಗುಡ್ಡಗಳ ಸಾಲು ಸಾಲು  ಇದು ನಮ್ಮ ಭಾರತ

         
ಸ್ವರ್ಗಕ್ಕು ಮುಕ್ತಿಗು ದ್ವಾರವಾದಂತಹ.             
ಭಾರತ ದೇಶದಲ್ಲಿ ಜನಿಸಿರುವ ಪ್ರತಿಯೊಂದು ಜೀವಿಯು ಕೂಡ ಆ ದೇವತೆ ಗಳಿಗಿಂತ ಮಿಗಿಲು ಇದು ನಾವು ಹೇಳಿದ ಮಾತಲ್ಲ ಆ ದೇವತೆಗಳೇ ಭಾರತವನ್ನು ಕೊಂಡಾಂಡಿ ದಂತಹ ಮಾತುಗಳು ಅಂತಹ ಭಾರತ ದೇಶದಲ್ಲಿ ನಾವುಗಳಿಂದು ಪುಣ್ಯ ಜೀವಿಗಳಾಗಿ ಜನಿಸಿದ್ದೇವೆ ಅದು ವಿಶೇಷ

ಆತ್ಮೀಯರೆ ಭಾರತಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳಾಯ್ತು ಒಬ್ಬ ಮಾನವನ ವಯಸ್ಸಿಗೆ ಓಲಿಸಿಕೊಂಡರೆ ಇದು ವೃದ್ಧಾಪ್ಯದ ಕಾಲ ಆದರೆ ಭಾರತಕ್ಕಿದು ‌ಯೌವನದ ಕಾಲ ಯಾಕೆ ಅಂತ ಹೇಳಿದ್ರೆ ಭಾರತ ಅತಿ ಹೆಚ್ಚಿನ ಪ್ರಮಾಣದಲ್ಲಿ ಯುವಜನತೆಯನ್ನು ಹೊಂದಿದೆ ಎನ್ನುವಂತದ್ದು ಈ ಮಾತನ್ನು ನಾನು ಕಳೆದ ವರ್ಷ ಕೂಡ ಹೇಳಿದ್ದೆ

ಮಾತನ್ನು ಮತ್ತೆ ಯಾಕೆ ಹೇಳಿದೆ ಅಂದರೆ ಒಂದು ರಾಷ್ಟ್ರ ಅಭಿವೃದ್ಧಿ ಹೋಂದಬೇಕು ಅಂದರೆ ಆ ರಾಷ್ಟ್ರ ಆ ರಾಷ್ಟ್ರದ ಯುವ ಜನತೆಯನ್ನ ಅವಲಂಭಿಸಿರುತ್ತೆ ಪ್ರಸ್ತುತ ನಮ್ಮ ದೇಶದಲ್ಲಿ ಶೇಕಡಾ 60 ರಷ್ಟು ಯುವಜನತೆಯನ್ನು ಹೊಂದಿದ್ದರು ಸಹ ಯಾಕೆ ನಮ್ಮ ಭಾರತ ಅಮೇಗತಿಯಲ್ಲಿ ಅಭಿವೃದ್ಧಿ ಹೋಂದುತ ಇದೆ ಹಾಗಾದರೆ ಯುವ ಜನತೆ ಸರಿಯಾದ ದಾರಿಯಲ್ಲಿ ಸಾಗ್ತ ಇಲ್ವ ನಮ್ಮ ಯುವ ಪೀಳಿಗೆ ದಾರಿ ತಪ್ತ ಇರೋದಾದ್ರು ಎಲ್ಲಿ

1985ರ ನಂತರ ಭಾರತದಲ್ಲಿ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬವನ್ನು "ರಾಷ್ಟ್ರೀಯ ಯುವ ದಿನ"ವನವನ್ನಾಗಿ ಆಚರಿಸುತ್ತೆವೆ ಮೊದಲಿಗೆ ಯುವ ಜನತೆ ಎಂದು ಗುರುತಿಸುವುದು ನಿರ್ದಿಷ್ಟ ವಯಸ್ಸಿನಿಂದ ಅದು ಸುಮಾರು 18-20 ರಿಂದ 35 ವರ್ಷದವರೆಗೆಗಿನ ವಯಸ್ಸಿನವರೆಗೆ ಯುವಜನತೆ ಎಂದು ಕರೆಯಬಹುದು 

ಯುವಕರೆ ಎದ್ದೇಳಿ ಗುರಿ ಮುಟ್ಟುವವರೆಗೆ ಮುನ್ನಡೆಯಿರಿ” ಈ ಮಾತು ಎಂದಿಗೂ ಅಮರ ವಾಕ್ಯವಾಗಿ ಉಳಿದಿದೆ. ಯುವಜನತೆಗೆ ಈ ಮನ ಮುಟ್ಟುವಂಥ ಮಾತನ್ನು ಹೇಳಿದವರೇ ಬೇರಾರೂ ಅಲ್ಲ ಭಾರತದ ಮಹಾನ್ ಚಿಂತಕ, ತತ್ವಜ್ಞಾನಿ ದೇಶ ಭಕ್ತ ಎಂದೇ ಖ್ಯಾತಿಯಾಗಿರುವ ಸಂತ ಸ್ವಾಮಿ ವಿವೇಕಾನಂದ . ಆದರೆ ಸಂಸ್ಕೃತಿಯ ತವರೂರು ಎಂದೇ ಕರೆಯಲ್ಪಡುವ ಈ ಭಾರತ ದೇಶಕ್ಕೆ ಈಗಿನ ಯುವಜನತೆ ಎಷ್ಟರ ಮಟ್ಟಿಗೆ ಸಂಸ್ಕೃತಿ ಹಾಗೂ ಭಾಷೆಗೆ ಮಾನ ಹಾಗೂ ಗೌರವ ಕೊಡುತ್ತಾರೆ? ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ. ಇವತ್ತು ನಮ್ಮ ಸಂಸ್ಕೃತಿ, ಭಾಷೆ, ವೇಷ ಭೂಷಣ ಬಿಟ್ಟು ಬೇರೆ ದೇಶದ ಭಾಷೆಗೆ ಸಂಸ್ಕೃತಿಗೆ ಯುವಜನತೆ ಹೆಚ್ಚು ಹೆಚ್ಚು ಅಕರ್ಷಿತರಾಗುತ್ತಿದ್ದಾರೆ.
ಆದುನಿಕ ಕಾಲದಲ್ಲಿ ಯುವಜನತೆಯ ಪಾತ್ರ ಎಷ್ಟು ಎಂಬುದು ಚರ್ಚಾ ವಿಷಯವಾಗಿದೆ.

ಇಂದಿನ ಯುವಜನತೆಯಲ್ಲಿ ಹೊಸ ರೀತಿಯಲ್ಲಿ ಆಗುವಂತಹ ಬದಲಾವಣೆ! ದೇಶದಲ್ಲಿ ಹೊಸದು ಏನು ಮಾಡುವುದು ಎಂಬ ಚಿಂತೆ! ಇದು ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಮೊಬೈಲ್, ಕಂಪ್ಯೂಟರ್‌ನ ಬಳಕೆ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಯುವ ಜನತೆ ದಾರಿ ತಪ್ಪುತ್ತಿದೆ


ಒಂದು ದೇಶದ ಪ್ರಗತಿಯಲ್ಲಿ ಯುವಜನತೆಯ ಪಾತ್ರ ಬಹಳ ದೊಡ್ಡದು..ಸಮಾಜದ ಕೆಟ್ಟವ್ಯವಸ್ಥೆಯಾಗಿರಲಿ ,ಜಾತಿಭೇದವಾಗಿರಲಿ , ದ್ವಂದ್ವನೀತಿಗಳಾಗಿರಲಿ ,
ಹೀಗೆ ಯಾವುದೇ ಅನಾಚಾರಗಳನ್ನ ,ಅತಂತ್ರ ಸ್ಥಿತಿಗಳನ್ನ ,ಸರಿಪಡಿಸಬಲ್ಲ ಸಾಮರ್ಥ್ಯ ಇರೋದು ಯುವಕರಿಗೆ."ಹೆಣ್ಣೊಂದು ಕಲಿತರೆ ಶಾಲೆಯೊಂದು" ತೆರೆದಂತೆ ಎಂಬ ಮಾತಿನಂತೆ ಒಬ್ಬ ಯುವಕ ನಿದ್ದೆಯಿಂದೆದ್ದರೆ ,ಅಂದರೆ ಜಾಗೃತನಾದರೆ
ಬರೀ ಸಮಾಜವೇನು , ರಾಷ್ಟ್ರೋದ್ಧಾರವನ್ನೇ ಮಾಡಬಹುದು . ನಿಖರತೆಯ ನಡೆಯಿಂದ ಏಕಚಿತ್ತತೆಯ ಭಾವದಿಂದ, ಛಲಬಿಡದೇ ಗುರಿಮುಟ್ಟುವ ಅಗಮ್ಯ
ಹುಮ್ಮಸ್ಸಿನಿಂದ , ರೊಚ್ಚಿಗೆದ್ದು ಪರರ ಮನಸಲ್ಲೂ ಕಿಚ್ಚು ತುಂಬಿ ಅಧರ್ಮ, ಅನೀತಿ ಅನ್ಯಾಯ ,ಅಕ್ರಮ , ಗಳಿಗೆ ತಡೆಯೊಡ್ಡಿ
ಒಂದು ಮಾದರಿ ಸಮಾಜವನ್ನ ರೂಪಿಸುವ ಶಕ್ತಿ ,
ಸಾಮರ್ಥ್ಯ ಇರೋದು ಯುವ ಪೀಳಿಗೆಗೆ ಮಾತ್ರ 


ಒಂದು ದೇಶದ ಯುವಜನತೆ ಆ ದೇಶದ ಅಭಿವೃದ್ಧಿಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.ದೇಶದಲ್ಲಿ ಯುವಜನತೆಯ ಪ್ರಮಾಣ ಹೆಚ್ಚಾದಂತೆ ದೇಶ ಬಲಿಷ್ಠವಾಗುತ್ತಾ ಹೋಗುತ್ತದೆ. ಅಂತೆಯೇ ಭಾರತವೂ ಕೂಡಾ ಒಂದು ಯುವರಾಷ್ಟ್ರ. ನಮ್ಮ ದೇಶದ ಒಟ್ಟು ಜನಸಂಖ್ಯೆಯು ಶೇ ೬೦ ರಷ್ಟು ಯುವಜನತೆಯನ್ನು ಹೊಂದಿದೆ. ಯುವಜನತೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ದೇಶ ಅತಿವೇಗವಾಗಿ ಅತ್ಯುನ್ನತ ಸ್ಥಾನಕ್ಕೆ ಹೋಗುವುದು ೧೦೦ ಕ್ಕೆ ೧೦೦ ಸತ್ಯ.ಹೀಗಿದ್ದೂ ಭಾರತ ಏಕೆ ಇನ್ನೂ ಆಮೆಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ?? ಯುವಶಕ್ತಿಯ ಪ್ರಮಾಣ ಹೆಚ್ಚಿದ್ದರೂ ಏಕೆ ಇಂತಹ ಸ್ಥಿತಿ? ಅವಲೋಕನ ಮಾಡಿದರೆ ಗೊತ್ತಾಗುವುದಿಷ್ಟೇ, ಯುವಶಕ್ತಿಯ ಉಪಯೋಗ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಯುವಜನತೆ ತಮ್ಮ ಜೀವನವನ್ನು ದೇಶಕ್ಕೋಸ್ಕರ ಸದ್ವಿನಿಯೋಗ ಮಾಡುತ್ತಿಲ್ಲ.ಹಾಗಾದರೆ ನಮ್ಮ ಯುವಶಕ್ತಿ ಹಾದಿ ತಪ್ಪುತ್ತಿರುವುದಾದರೂ ಎಲ್ಲಿ 


ಮೊದಲೆನೆಯದಾಗಿ, ಇತ್ತೀಚೆಗೆ ಯುವಜನತೆ ಹೆಚ್ಚಾಗಿ ದಾರಿ ತಪ್ಪುತ್ತಿರುವುದು ಅಂತರ್ಜಾಲದಿಂದ…!!! ಹೌದು, ಇಂದಿನ ಪೀಳಿಗೆಯ ಯುವಕ-ಯುವತಿಯರು ತಮ್ಮ ಬಹುತೇಕ ಸಮಯವನ್ನು ಅಂತರ್ಜಾಲ ಯಾ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿದ್ದಾರೆ.ದಿನದ ಇಪ್ಪತ್ನಾಲ್ಕು ಗಂಟೆಯೂ ಫ಼ೇಸ್ಬುಕ್, ವಾಟ್ಸ್ಆಪ್, ವಿ ಚಾಟ್ ಮುಂತಾದ ಜಾಲತಾಣಗಳಲ್ಲಿ ಕಾಲಕಳೆಯುತ್ತಾರೆ.ಅದಕ್ಕೆ ಪೂರಕವಾಗಿರು ಮೊಬೈಲ್ ಕಂಪನಿಗಳು ಇವರಿಗೆ ಸ್ನೇಹಿಯಾಗಿ ಕೆಲಸ ಮಾಡುತ್ತಿವೆ.ಇವುಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಬಹುದಾದರೂ ನಮ್ಮ ಯುವಜನತೆ ಉಪಯೋಗಿಸಿಕೊಳ್ಳುತ್ತಿಲ್ಲ.ಗುರುತು ಪರಿಚಯ ಇಲ್ಲದವರೊಂದಿಗೆ ಸಮಯದ ಮಿತಿ ಇಲ್ಲದೇ ವ್ಯವಹರಿಸುವುದು ಒಂದು ಹವ್ಯಾಸವಾಗಿಬಿಟ್ಟಿದೆ. ಅಪಾಯಕಾರಿ ಅಂಶವೆಂದರೆ ಇಂತಹ ಕೆಲಸ ಮಾಡುತ್ತಿರುವುದರಲ್ಲಿ ವಿದ್ಯಾವಂತರೇ ಹೆಚ್ಚಾಗಿರುವುದು ನಮ್ಮ ದುರ್ದೈವವೇ ಸರಿ…..


ಪ್ರಸ್ತುತದಲ್ಲಿ ರಾಜಕಾರಣಿಗಳು ಯುವಶಕ್ತಿಯನ್ನು ಹಾಳುಮಾಡುವುದರಲ್ಲಿ ಒಬ್ಬರಿಗೆ ಮತ್ತೊಬ್ಬರಿಗೆ ಪೈಪೋಟಿ ನೀಡಬಲ್ಲವರಾಗಿದ್ದಾರೆ.ಏಕೆಂದರೆ ತಮ್ಮ ಎಲ್ಲಾ ರೀತಿಯ ನೈತಿಕ ಹಾಗೂ ಅನೈತಿಕ ಕೆಲಸಗಳಿಗೆ ಯುವಜನತೆಯನ್ನು ಬೇಕಾಬಿಟ್ಟಿಯಾಗಿ ನದಿನೀರಿನಂತೆ ಉಪಯೋಗಿಸುತ್ತಿದ್ದಾರೆ. ಚುನಾವಣೆ ಘೋಷಣೆಯಾದಾಗ ತಮ್ಮ ಪರ ಪ್ರಚಾರ ಮಾಡುವುದರಿಂದ ಹಿಡಿದು ಜನರನ್ನು ಮತಗಟ್ಟೆಗೆ ಕರೆದುಕೊಂಡು ಬರುವವರೆಗೆ ಯುವಶಕ್ತಿಯನ್ನು ಅವಲಂಬಿಸಿರುತ್ತಾರೆ. 

ಅಂತರ್ಜಾಲ, ಭೂಗತಲೋಕ,ರಾಜಕಾರಣ ಒಂದೆಡೆಯಾದರೆ ನಿರುದ್ಯೋಗ ಇನ್ನೊಂದು ಕಡೆ ನಿಲ್ಲುತ್ತದೆ. ಪದವಿ ಮುಗಿಸಿದ ಕೋಟ್ಯಂತರ ವಿದ್ಯಾರ್ಥಿಗಳು ಕೆಲಸವಿಲ್ಲದೆ ಸುಮ್ಮನೆ ಕೂರುವಂತ ಪರಿಸ್ಥಿತಿ ಬಂದಿದೆ.ಕೆಲಸವಿಲ್ಲದೇ ಅಲೆಯುವವರ ಸಮಸ್ಯೆ ಒಂದೆಡೆಯಾದರೆ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಅಲೆಯುವವರ ಸಮಸ್ಯೆ ಇನ್ನೊಂದೆಡೆ. ಉತ್ತಮ ರೀತಿಯಲ್ಲಿ ಶೈಕ್ಷಣಿಕ ಅರ್ಹತೆ ಹೊಂದಿದ್ದರೂ ಸರ್ಕಾರಿ ಕೆಲಸ ಸಿಗುವುದು ಕಬ್ಬಿಣದ ಕಡಲೆಯಂತಾಗಿದೆ. 

ಒಂದು ವೇಳೆ ಕೆಲಸಗಳಿಗೆ ಅರ್ಜಿ ಆಹ್ವಾನಿಸಿದರೂ, ಕೆಲಸಗಾರರ ಅಗತ್ಯ ಇರುವ ಇಲಾಖೆಗೆ ಸರಿಯಾದ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುವುದಿಲ್ಲ ಮತ್ತು ಅಗತ್ಯವಿರುವಷ್ಟು ಕೆಲಸಗಾರರನ್ನು ನಿಯೋಜನೆ ಮಾಡಿಕೊಳ್ಳುವುದಿಲ್ಲ. ಕಾರಣ ಧರ್ಮ-ಜಾತಿ ಆಧಾರಿತ ಮೀಸಲಾತಿ. ಇದಕ್ಕೆಲ್ಲಾ ನಮ್ಮನ್ನಾಳುವ ಸರ್ಕಾರವೇ ನೇರ ಹೊಣೆ ಹೊರಬೇಕು. ಒಟ್ಟಾರೆಯಾಗಿ ಸರ್ಕಾರದ ನಿರ್ಲಕ್ಷ್ಯದಿಂದ ಯುವಶಕ್ತಿ ಪೋಲಾಗುತ್ತಿದೆ.


ಇದಲ್ಲದೇ ಇನ್ನು ಕಾಲೇಜು ವಿದ್ಯಾರ್ಥಿಗಳ ವಿಷಯದ ಬಗ್ಗೆ ಗಮನಿಸುವುದಾದರೆ ಅವರದ್ದೂ ಕೂಡ ಭಿನ್ನವಾಗಿಲ್ಲ. ಉಜ್ವಲ ಸಮಾಜವನ್ನು ನಿರ್ಮಾಣ ಮಾಡಬೇಕಾದಂತಹ ವಿದ್ಯಾರ್ಥಿಗಳು ಬೀದಿ-ಬೀದಿಗಳಲ್ಲಿ ಪೊರ್ಕಿಗಳಂತೆ ಅಡ್ಡಾಡುತ್ತಾರೆ. ಸಮಾಜದಲ್ಲಿ ಭಯ ಹುಟ್ಟಿಸುವಂತಹ ಕೆಲಸ ಮಾಡುತ್ತಿದ್ದಾರೆ 

ಸ್ವಾಮಿ ವಿವೇಕಾನಂದರು “ನನಗೆ ನೂರು ಜನ ಸದೃಢ ಯುವಕರನ್ನು ನೀಡಿ, ನಾನು ಬಲಾಢ್ಯ ಜಗದ್ಗುರು ಭಾರತವನ್ನು ಕಟ್ಟುತ್ತೇನೆ, ಭಾರತದ ಯುವಶಕ್ತಿಗೆ ಸರಿಸಾಟಿಯಾಗಿ ನಿಲ್ಲುವಂತದ್ದು ಯಾವುದೂ ಇಲ್ಲ ” ಎಂದು ಜಗತ್ತಿಗೇ ಸಾರುತ್ತರೆ. ಎಂತಹ ಛಾತಿ ಇದೆ ಅವರ ಆ ಮಾತಿನಲ್ಲಿ. ಅಂದು ಅವರಾಡಿದ ಮಾತಿಗೆ ಇಂದು ಬೆಲೆಯೇ ಇಲ್ಲದಂತಾಗಿದೆ. ಅವರು ಕೇಳಿದ್ದು ಕೇವಲ ನೂರೇ ನೂರು ಸದೃಢ ಯುವಕರನ್ನು. ನೋಡಿ ಕೇವಲ ನೂರು ಜನ ಸದೃಢ ಯುವಕರೊಂದಿಗೆ ವಿಶ್ವಗುರು ಭಾರತ ಕಟ್ಟುತ್ತೇನೆ ಎನ್ನುವ ಸ್ವಾಮೀಜಿ, ಇನ್ನೇನಾದರೂ ದೇಶದ ಸಂಪೂರ್ಣ ಯುವಶಕ್ತಿ ಸರಿಯಾದ ರೀತಿಯಲ್ಲಿ ವಿನಿಯೋಗವಾದರೆ ಎಂತಹ ಮಟ್ಟದ ಭಾರತ ನಿರ್ಮಾಣವಾಗಬಹುದು ನೀವೇ ಅಂದಾಜಿಸಿ. ಸಂಶಯವೇ ಇಲ್ಲ ಯುವಶಕ್ತಿ ಜಲಪಾತದಂತೆ ಭೋರ್ಗರೆದು , ದೇಶಸೇವೆಗೆ ನಾ ಮುಂದು ತಾ ಮುಂದು ಎಂದು ಧುಮ್ಮಿಕ್ಕಿದರೆ ನಾವು ನೀವು ಬಿಡಿ ಪ್ರಪಂಚದ ಯಾವ ನಾಯಕರೂ ಊಹಿಸದಂತಹ ಬಲಿಷ್ಠ ಭಾರತ ನಿರ್ಮಾಣ ಖಂಡಿತಾ ಸಾಧ್ಯ.

ಉದ್ಯೋಗವಿಲ್ಲ ಎನ್ನುವ ಬದಲು ಉದ್ಯೋಗವನ್ನು ಸೃಷ್ಟಿಸಬೇಕು. ಇತರರಿಗೆ ನಾವೇ ಉದ್ಯೋಗ ನೀಡುವಂತಾಗಬೇಕು. ಸಾಧ್ಯವಾದರೆ ಯುವಕರ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿ ನಿಸ್ವಾರ್ಥದಿಂದ ಸಮಾಜ ಸೇವೆಯನ್ನು ಮಾಡುತ್ತ ದಿನದ ಕೆಲ ಗಂಟೆಗಳು ಅಥವಾ ವಾರದಲ್ಲಿ ಒಂದೋ ಎರಡೋ ದಿನ ಸಮಾಜಕ್ಕಾಗಿ ಮೀಸಲಿಟ್ಟರೆ ಸಾಕು ಅಬ್ದುಲ್ ಕಲಾಂ ರ 2020ರ ಭಾರತದ ಕನಸು ಖಂಡಿತವಾಗಿಯೂ ನನಸಾಗುತ್ತದೆ. 

ಇದೆಲ್ಲದಕ್ಕೂ ಮೊದಲು ನಮ್ಮಲ್ಲಿ ದೇಶಭಕ್ತಿ ಜಾಗೃತವಾಗಬೇಕು. ನನ್ನ ದೇಶ, ನನ್ನ ಜನ,ನನ್ನ ಸಮಾಜ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಹಿಂದೂ ಮುಸ್ಲಿಂ ಕ್ರಿಸ್ಚಿಯನ್ ಜೈನ ಬೌದ್ಧ ಎಂಬ ಧರ್ಮ ಸಂಕೋಲೆಗಳಿಂದ ಹೊರ ಬಂದು ನಾವೆಲ್ಲರೂ ಭಾರತೀಯರು ಎಂಬ ಒಂದೇ ಧರ್ಮದಡಿ ಸೇರಿಕೊಂಡು ವಿವೆಕಾನಂದರ ವಾಕ್ಯದಂತೆ ಏಳಿ ಎದ್ದೇಳಿ ಯುವಕ-ಯುವತಿಯರೇ, ಗುರಿ ಮುಟ್ಟುವವರೆಗೂ ನಿಲ್ಲದಿರಿ, ವಿಶ್ರಮಿಸದಿರಿ. ತಾಯಿ ಭಾರತಾಂಬೆಯ ಪಾದಕ್ಕೆನಮ್ಮನ್ನು ಅರ್ಪಿಸಿಕೊಂದು ಅವಳ ಸೇವೆಗೆ ಕಂಕಣ ಬದ್ಧರಾಗೋಣ. ಇಡೀ ಪ್ರಪಂಚವೇ ಸಹಾಯಕ್ಕಾಗಿ ನಮ್ಮತ್ತ ಕೈ ಚಾಚುವಂತಹ ಜಗದ್ಗುರು ಭಾರತವನ್ನು ನಿರ್ಮಾಣ ಮಾಡಿ ನಮ್ಮ ಸನಾತರಿಗೆ ಗೌರವ ಸಲ್ಲಿಸೋಣ…….

ಅದ್ಬುತ ಅದಮ್ಯ ಭಾರತ ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರವನ್ನು ನಿರ್ಮಾಣ ಮಾಡೋಣ ಅಂತ ಹೇಳುತ ನನ್ನ ಮಾತುಗಳನ್ನು ಮುಗುಸ್ತ ಇದಿನಿ.....

||ಜೈ ಹಿಂದ್|| ||ವಂದೇ ಮಾತರಂ||



  ಇಂತಿ
               ಮಂಜುನಾಥ ಕೆ ಎಂ
                   ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
              ಬಸವಪಟ್ಟಣ {ಚಿರಡೋಣಿ }