ಶನಿವಾರ, ಜನವರಿ 12, 2019

ರಾಷ್ಟ್ರೀಯ ಯುವ ದಿನ

 ಮಂಜುನಾಥ ಕೆ ಎಂ


ಕನ್ನಡ ರಕ್ಷಣ ವೇದಿಕೆ


ಲೇಖನವನ್ನು ಪೂರ್ತಿಯಾಗಿ ಓದಿ 

ಶರಣ್ಯಂ ಸರ್ವ ಲೋಕಾನಾಂ ಅಗ್ರಗಣ್ಯಂ ದಿವೌಕಸಾಮ್ |
ವರೇಣ್ಯಂ ದೇವಸೇನಾಯಾ: ಸುಬ್ರಮಣ್ಯಮುಪಾಸ್ಮಹೇ ||೧||

ಭಾವಾರ್ಥ:- ಸಮಸ್ತ ಲೋಕಕ್ಕೂ ಆಶ್ರಯದಾತನೂ, ದೇವತೆಗಳಲ್ಲಿ ಅಗ್ರಗಣ್ಯನೂ,  ದೇವತೆಗಳ ಸೇನಾಧಿಪನೂ,ಆಗಿರುವ ಸುಬ್ರಮಣ್ಯನೆ ನಿನಗೆ ನಮಸ್ಕಾರ  ಎನ್ನುವ ಸದಾಶಯದೊಂದಿಗೆ.  ನಾಡಿನ ಸಮಸ್ತ ಜನತೆಗೆ ಜನೆವರಿ 12 ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶಯಗಳು 


ವಿವೇಕಾನಂದರ ಪೂರ್ವದ ಹೆಸರು ನರೇಂದ್ರ ವಿಶ್ವನಾಥ ದತ್ತ ಮತ್ತು ಭುವನೇಶ್ವರಿ ದೇವಿ ವಿವಾಹವಾಗಿ ಸುಮಾರು ವರ್ಷಗಳು ಆಗಿದ್ದರು ಸಹ ಇವರಿಗೆ ಸಂತಾನ ಪ್ರಾಪ್ತಿ ಯಾಗಿರ್ಲಲ್ಲ ಭುವನೇಶ್ವರಿ ದೇವಿಯವರು ತುಂಬ ದೈವ ಭಕ್ತಳಾಗಿದ್ದಳು ಹೀಗಿರುವಾಗ ಒಂದು ದಿನ ರಾತ್ರಿ ಕನಸಿನಲ್ಲಿ ಶಿವನ ತೇಜೋಪಂಜರ ಕಾಣಿಸಿಕೊಂಡು ಶಿವನನ್ನು ಪೂಜಿಸುವ ನಿನಗೆ ಗಂಡು ಮಗು ಜನಿಸುತ್ತದೆ ಎಂದು ಹೇಳಿದಾಗ ಭುವನೇಶ್ವರಿ ದೇವಿಯು ಶಿವನನ್ನು ಪೂಜಿಸಲು ಪ್ರಾರಂಭಿಸುತ್ತಾಳೆ ಕೆಲವು ವರ್ಷಗಳ ನಂತರ ಜನೆವರಿ 12 1863 ರಂದು ಸುಂದರವಾದ ಬೆಳಗ್ಗಿನ ಜಾವ ಭುವನೇಶ್ವರಿ ದೇವಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ  ಆ ಮಗುವೆ ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು ಮಹಾನ್ ಚಿಂತಕ ದೇಶ ಭಕ್ತ ವಿಶ್ವ ಕಂಡಂತಹ ಧೀಮಂತ ನಾಯಕ ಸ್ವಾಮಿ ವಿವೇಕಾನಂದ 

ದೇಶವನ್ನು ಮುನ್ನೆಡೆಸಲು ಸಶಕ್ತವಾದ ಯುವ ಪಡೆಯನ್ನು ನಿರ್ಮಿಸುವುದೇ ನನ್ನ ಗುರಿ ಎನ್ನುತಿದ್ದವರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಮಾನಸಿಕ ದೈಹಿಕ ಆಧ್ಯಾತ್ಮಿಕ ನೈತಿಕ ಸಾಮಾಜಿಕವಾಗಿ ಎಂದು ಶಕ್ತಿ ಕಳೆದುಕೊಳ್ಳ ಬಾರದು ಎಂದು ಕರೆ ಕೊಟ್ಟವರು ಸ್ವಾಮಿ ವಿವೇಕಾನಂದರು  

ಸ್ವಾಮಿ ವಿವೇಕಾನಂದರು ಬಾಲ್ಯದಲ್ಲಿಯೆ ಬಹಳ ಚಾಣಕ್ಷ್ಯತನ ಹೊಂದಿದವರಾಗಿದ್ದರು ಚಿಕ್ಕವಯಸ್ಸಿನಲ್ಲೆ ತನ್ನ ತಾಯಿಯಿಂದ ಪುರಾಣ ಪುಣ್ಯ ಕಥೆಗಳನ್ನು ಕೇಳುತ್ತ ಅದರಲ್ಲಿ ಬರುವ ಪಾತ್ರಧಾರಿ ತಾನೆ ಎಂದು ತಿಳಿದುಕೊಂಡು ಆನಂದಿಸುತಿದ್ದರು ಹೀಗೆ ಒಂದು ದಿನ ಭುವನೇಶ್ವರಿ ದೇವಿ ಮಗುವಿಗೆ ಊಟ ಮಾಡಿಸುತ್ತಿರುವಾಗ ತಂದೆ ವಿಶ್ವನಾಥ ದತ್ತರು ನರೇಂದ್ರನ ಬಳಿ ಬಂದು ಮಗು ನೀನು ಮುಂದೆ ಏನಾಗಬೇಕು ಅನ್ಕೊಂಡಿದಿಯ ಎಂದು ಕೇಳಿದಾಗ ಅಲ್ಲೇ ಗೋಡೆಯಮೆಲೆ ಅರ್ಜುನನಿಗೆ ಶ್ರೀಕೃಷ್ಣ ಸಾರಥಿ ಯಾಗಿರುವ ಚಿತ್ರವನ್ನು ತೋರಿಸುತ್ತಾನೆ ಇದರಿಂದ ಕೋಪಗೊಂಡ ವಿಶ್ವನಾಥ ದತ್ತ ಓದಿ ಏನಾದರು ಸಾಧನೆ ಮಾಡು ಅಂದರೆ ಕುದುರೆ ಗಾಡಿಯನ್ನು ಓಡಿಸ್ತಿಯ ಎಂದು ನರೇಂದ್ರನಿಗೆ ಹೊಡೆಯುತ್ತಾರೆ ಮಗು ಅಳಲು ಪ್ರಾರಂಭಿಸುತ್ತೆ ಆಗ ತಾಯಿ ಭುವನೇಶ್ವರಿ ದೇವಿ ಮಗುವನ್ನು ಸಂತೈಸುತ್ತ ಮಗು ನೀನು ಆ ರೀತಿ ಏಕೆ ಹೇಳಿದೆ ಎಂದು ಕೇಳಿದಾಗ ಸ್ವಾಮಿ ವಿವೇಕಾನಂದರು ಕೊಟ್ಟಂತಹ ಉತ್ತರ ಅಮ್ಮ ನಾನು ಹೇಳಿದ್ದು ಕುದುರೆ ಗಾಡಿಯನ್ನು ಓಡಿಸುವ ಸಾರಥಿ ಅಲ್ಲಾ ಧರ್ಮ ಅನ್ನುವಂತಹ ರಥವನ್ನು ಓಡಿಸುವ ಸಾರಥಿ ಹಾಕ್ತೀನಿ ಅಂತ ಈ ಮಾತನ್ನು ಕೇಳಿದ ತಾಯಿ ಭುವನೇಶ್ವರಿ ದೇವಿಗೆ ತುಂಬ ಸಂತೋಷವಾಗುತ್ತದೆ 

ಮುಂದೆ ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ವಿಲಿಯಮ್ ಹೇಸ್ಟಿ ಯವರ ಸಹಾಯದೊಂದಿಗೆ ಅಮೇರಿಕಾದ ವಿಶ್ವ ಧರ್ಮ ಸಮ್ಮೇಳನಕ್ಕೆ ಬೇಟಿ ನೀಡ್ತಾರೆ ಅನೇಕ ದೇಶಗಳಿಂದ ತಮ್ಮ ತಮ್ಮ ಧರ್ಮವನ್ನು ಪ್ರಚಾರ ಮಾಡಲು ಧರ್ಮ ಪ್ರಚಾರಕರು ಬಂದಿರ್ತಾರೆ ಎಲ್ಲಾರು ಕೂಡ ಒಳ್ಳೆ ಒಳ್ಳೆಯ ಬಟ್ಟೆಯನ್ನು ಧರಿಸಿರುತ್ತಾರೆ ಆದರೆ ಸ್ವಾಮಿ ವಿವೇಕಾನಂದರು ಕಾವಿ ಬಟ್ಟೆಯನ್ನು ಧರಿಸಿರುತ್ತಾರೆ ಎಲ್ಲಾರು ಅವರನ್ನು ಹೀನಾಯ ದೃಷ್ಟಿಯಿಂದ ನೋಡುತ್ತಾರೆ ಆದರೂ ಕೂಡ ಸ್ವಾಮಿ ವಿವೇಕಾನಂದರು ಬೇಜಾರಾಗಿದೆ  ಸಭೆಯಲ್ಲಿ ಕುಳಿತಿರುತ್ತಾರೆ ಧರ್ಮ ಪ್ರಚಾರ ಪ್ರಾರಂಭವಾಗುತ್ತದೆ ಎಲ್ಲಾ ಪ್ರಚಾರಕರು ಅವರವರ ಧರ್ಮ ಶ್ರೇಷ್ಠ ಎನ್ನುವಂತೆ ಮಾತನಾಡುತ್ತಾರೆ ಕೊನೆಯಲ್ಲಿ ಸ್ವಾಮಿ ವಿವೇಕಾನಂದರ ಸರದಿ ಬರುತ್ತದೆ ಆಗ ಅವರನ್ನು ಕರೆದು ಗುರೂಜಿ 2ನಿಮಿಷಗಳ ಕಾಲವಧಿ ಇದೆ ನಿಮ್ಮ ಧರ್ಮದ ಬಗ್ಗೆ ಏನಾದರೂ ಹೇಳುವುದಿದ್ದರೆ ಹೇಳಿ ಅಂದಾಗ ಸ್ವಾಮಿ ವಿವೇಕಾನಂದರ ಅಮೇರಿಕಾದ ಸಹೋದರ ಸಹೋದರಿಯರೆ ಎಂಬ ಮೊದಲ ಮಾತಿಗೆ ಅಮೇರಿಕಾದ ಜನತೆ 2ನಿಮಿಷಗಳ ಕಾಲ ಚಪ್ಪಾಳೆಯನ್ನು ತಟ್ಟುತ್ತಾರೆ ಈ ಸ್ವಾಮೀಜಿ ಏನು ಮಾತಾಡ್ತಾರೆ ಎದ್ದು ಹೊರಟವರು ಮತ್ತೆ ಕುಳಿತುಕೊಂಡು ಸ್ವಾಮಿ ವಿವೇಕಾನಂದರ ಮಾತುಗಳನ್ನು  ಕೇಳುತ್ತಾರೆ 2 ನಿಮಿಷಗಳ ಕಾಲಾವಧಿ 2 ದಿನಗಳಾಗಿ ಬದಲಾಗುತ್ತೆ ಅಮೇರಿಕಾದ ಎಲ್ಲಾ ಟಿವಿ ಚಾನೆಲ್ ಗಳಲ್ಲಿ ಎಲ್ಲಾ ಪತ್ರಿಕೆಯಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆಯೆ ಇರುತ್ತದೆ ಚಿಕಾಗೊದಲ್ಲಿ ಮಾತನಾಡುವಾಗ ವಿವೇಕಾನಂದರು ಎಲ್ಲಿಯೂ ಕೂಡ ನನ್ನ ಧರ್ಮ ಶ್ರೇಷ್ಠ ಎಂದೂ ಹೇಳಿಲ್ಲ ಅಲ್ಲಿ ಇಟ್ಟಂತಹ ಧರ್ಮ ಗ್ರಂಥಗಳನ್ನು ನೋಡ್ತಾರೆ ಎಲ್ಲಾ ಧರ್ಮ ಗ್ರಂಥಗಳು ಮೇಲಿರ್ತಾವೆ ಆದರೆ ನಮ್ಮ ಹಿಂದೂ ಧರ್ಮದ ಗ್ರಂಥ ಕೆಳಗಡೆ ಇರುತ್ತದೆ ಆಗ ಸ್ವಾಮಿ ವಿವೇಕಾನಂದರು ಅದನ್ನು ಗಮನಿಸಿ ನಮ್ಮ ಧರ್ಮದ ಗ್ರಂಥವನ್ನು ಕೆಳಗಡೆ ಎಳಿತಾರೆ ಆಗ ಎಲ್ಲಾ ಧರ್ಮ ಗ್ರಂಥಗಳು ಕೆಳಗಡೆ ಬೀಳ್ತಾವೆ ಆಗ ವಿವೇಕಾನಂದರು ಹೇಳ್ತಾರೆ ನಿಮ್ಮ ಎಲ್ಲಾ ಧರ್ಮಗಳಿಗು ಆಧಾರ ಸ್ತಂಭವಾಗಿರುವುದು ನಮ್ಮ ಹಿಂದೂ ಧರ್ಮ ಆ ನಮ್ಮ ಧರ್ಮ ಎನಾದರೂ ನಶಿಸಿ ಹೋದರೆ ನಿಮ್ಮ ಯಾವ ಧರ್ಮವು ಉಳಿಯುವುದಿಲ್ಲ ಎಂತಹ ಅದ್ಬುತವಾದ ಮಾತು ಇವರು ಬದುಕಿದ್ದು ಕೇವಲ 39 ವರ್ಷಗಳು ಮಾತ್ರ ಅಷ್ಟು ಕಡಿಮೆ ಅವಧಿಯಲ್ಲಿ ಹಿಂದೂ ಧರ್ಮವನ್ನು ಇಡಿ ಪ್ರಪಂಚಕ್ಕೆ ಪರಿಚಯಿಸಿದಂತಹ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ 

 " ರಾಷ್ಟ್ರೀಯ ಯುವದಿನ "

1985ರ ನಂತರ ಭಾರತದಲ್ಲಿ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬವನ್ನು "ರಾಷ್ಟ್ರೀಯ ಯುವ ದಿನ" ಎಂದು ಘೋಷಿಸಲಾಗಿದ್ದು, ಈಗಲೂ ಆಚರಣೆಯಲ್ಲಿದೆ ಎಂಬುದಷ್ಟೇ ಸಂತೋಷ. ಇಂದು ದೇಶದಾದ್ಯಂತ ಆಚರಣೆ ಜಾರಿಯಲ್ಲಿದ್ದು, ಶಾಲಾ, ಕಾಲೇಜು ಅಲ್ಲಲ್ಲಿ ಮೆರವಣಿಗೆ, ಪ್ರಬಂಧ ಸ್ಪರ್ಧೆ, ಭಾಷಣ, ಚರ್ಚಾಕೂಟದಲ್ಲಿ ಪಾಲ್ಗೊಂಡು ವಿವೇಕಾನಂದರರ ಸಂದೇಶ ಸಾರುವಲ್ಲಿ ತೊಡಗಿದ್ದಾರೆ.

ಸ್ವಾಮಿ ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವದ ಮೂಲಕ, ಅಪೂರ್ವ ವಾಗ್ಮೀಯತೆ ಹಾಗೂ ಪ್ರಚೋದನಾತ್ಮಕ ಬರವಣಿಗೆ ಮೂಲಕ ನಮ್ಮ ರಾಷ್ಟ್ರ ಚೇತವನ್ನು ಜಾಗೃತಗೊಳಿಸಿ, ಯುವಕರಲ್ಲಿ ನವೋತ್ಸಾಹವನ್ನು ಕೆರಳಿಸಿ, ಅವರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಕುದುರಿಸಿ ಸ್ವತಂತ್ರ ನವ ಭಾರತ ನಿರ್ಮಾಣಕ್ಕೆ ಬುನಾದಿಯನ್ನು ಹಾಕಿದರು.

ಮೊದಲಿಗೆ ಯುವ ಜನತೆ ಎಂದು ಗುರುತಿಸುವುದು ನಿರ್ದಿಷ್ಟ ವಯಸ್ಸಿನಿಂದ ಅದು ಸುಮಾರು 18-20 ರಿಂದ 35 ವರ್ಷದವರೆಗೆಗಿನ ವಯಸ್ಸಿನವರೆಗೆ ಯುವಜನತೆ ಎಂದು ಕರೆಯಬಹುದು 

ಯುವಕರೆ ಎದ್ದೇಳಿ ಗುರಿ ಮುಟ್ಟುವವರೆಗೆ ಮುನ್ನಡೆಯಿರಿ” ಈ ಮಾತು ಎಂದಿಗೂ ಅಮರ ವಾಕ್ಯವಾಗಿ ಉಳಿದಿದೆ. ಯುವಜನತೆಗೆ ಈ ಮನ ಮುಟ್ಟುವಂಥ ಮಾತನ್ನು ಹೇಳಿದವರೇ ಬೇರಾರೂ ಅಲ್ಲ ಭಾರತದ ಮಹಾನ್ ಚಿಂತಕರಾಗಿ, ತತ್ವಜ್ಞಾನಿ ದೇಶ ಭಕ್ತ ಎಂದೇ ಖ್ಯಾತಿಯಾಗಿರುವ ಸಂತ ಸ್ವಾಮಿ ವಿವೇಕಾನಂದ . ಆದರೆ ಸಂಸ್ಕೃತಿಯ ತವರೂರು ಎಂದೇ ಕರೆಯಲ್ಪಡುವ ಈ ಭಾರತ ದೇಶಕ್ಕೆ ಈಗಿನ ಯುವಜನತೆ ಎಷ್ಟರ ಮಟ್ಟಿಗೆ ಸಂಸ್ಕೃತಿ ಹಾಗೂ ಭಾಷೆಗೆ ಮಾನ ಹಾಗೂ ಗೌರವ ಕೊಡುತ್ತಾರೆ? ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ. ಇವತ್ತು ನಮ್ಮ ಸಂಸ್ಕೃತಿ, ಭಾಷೆ, ವೇಷ ಭೂಷಣ ಬಿಟ್ಟು ಬೇರೆ ದೇಶದ ಭಾಷೆಗೆ ಸಂಸ್ಕೃತಿಗೆ ಯುವಜನತೆ ಹೆಚ್ಚು ಹೆಚ್ಚು ಅಕರ್ಷಿತರಾಗುತ್ತಿದ್ದಾರೆ. ಅಲ್ಲಿ ನಡೆಯುತ್ತಿರುವ ಫ್ಯಾಷನ್ ಇಲ್ಲಿ ತರಲು ಇಚ್ಛಿಸುತ್ತಾರೆ. ಅವರ ಹಾಗೆ ನಾವೂ ಕೂಡ ಇರಬೇಕು ಎಂಬ ಹಂಬಲ ಇವತ್ತು ಯುವಜನತೆಯಲ್ಲಿ ಎದ್ದು ಕಾಣಿಸುತ್ತಿದೆ. ಅದಕ್ಕಿಂತ ಹೆಚ್ಚು ನಾವಿಲ್ಲಿ ಬದಲಾಗಬೇಕು ಎಂಬ ಚಿಂತೆ ಈಗಿನ ಯುವಜನತೆಯಲ್ಲಿ…. ಮತ್ತು ಅವರ ಅನುಕರಣೆಗೂ ಹಿಂದೇಟು ಹಾಕುವುದಿಲ್ಲ. ಇಂದಿನ ಆದುನಿಕ ಕಾಲದಲ್ಲಿ ಈ ದೇಶದಲ್ಲಿ ಯುವಜನತೆಯ ಪಾತ್ರ ಎಷ್ಟು ಎಂಬುದು ಚರ್ಚಾ ವಿಷಯವಾಗಿದೆ.

ಇಂದಿನ ಯುವಜನತೆಯಲ್ಲಿ ಹೊಸ ರೀತಿಯಲ್ಲಿ ಆಗುವಂತಹ ಬದಲಾವಣೆ! ದೇಶದಲ್ಲಿ ಹೊಸದು ಏನು ಮಾಡುವುದು ಎಂಬ ಚಿಂತೆ! ಇದು ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಮೊಬೈಲ್, ಕಂಪ್ಯೂಟರ್‌ನ ಬಳಕೆ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಯುವ ಜನತೆ ದಾರಿ ತಪ್ಪುತ್ತಿದೆ

ಒಂದು ದೇಶದ ಪ್ರಗತಿಯಲ್ಲಿ ಯುವಜನತೆಯ ಪಾತ್ರ ಬಹಳ ದೊಡ್ಡದು..ಸಮಾಜದ ಕೆಟ್ಟವ್ಯವಸ್ಥೆಯಾಗಿರಲಿ ,ಜಾತಿಭೇದವಾಗಿರಲಿ , ದ್ವಂದ್ವನೀತಿಗಳಾಗಿರಲಿ ,
ಹೀಗೆ ಯಾವುದೇ ಅನಾಚಾರಗಳನ್ನ ,ಅತಂತ್ರ ಸ್ಥಿತಿಗಳನ್ನ ,ಸರಿಪಡಿಸಬಲ್ಲ ಸಾಮರ್ಥ್ಯ ಇರೋದು ಯುವಕರಿಗೆ."ಹೆಣ್ಣೊಂದು ಕಲಿತರೆ ಶಾಲೆಯೊಂದು" ತೆರೆದಂತೆ ಎಂಬ ಮಾತಿನಂತೆ ಒಬ್ಬ ಯುವಕ ನಿದ್ದೆಯಿಂದೆದ್ದರೆ ,ಅಂದರೆ ಜಾಗೃತನಾದರೆ
ಬರೀ ಸಮಾಜವೇನು , ರಾಷ್ಟ್ರೋದ್ಧಾರವನ್ನೇ ಮಾಡಬಹುದು . ನಿಖರತೆಯ ನಡೆಯಿಂದ ಏಕಚಿತ್ತತೆಯ ಭಾವದಿಂದ, ಛಲಬಿಡದೇ ಗುರಿಮುಟ್ಟುವ ಅಗಮ್ಯ
ಹುಮ್ಮಸ್ಸಿನಿಂದ , ರೊಚ್ಚಿಗೆದ್ದು ಪರರ ಮನಸಲ್ಲೂ ಕಿಚ್ಚು ತುಂಬಿ ಅಧರ್ಮ, ಅನೀತಿ ಅನ್ಯಾಯ ,ಅಕ್ರಮ , ಗಳಿಗೆ ತಡೆಯೊಡ್ಡಿ
ಒಂದು ಮಾದರಿ ಸಮಾಜವನ್ನ ರೂಪಿಸುವ ಶಕ್ತಿ ,
ಸಾಮರ್ಥ್ಯ ಇರೋದು ಯುವ ಪೀಳಿಗೆಗೆ ಮಾತ್ರ 

ಒಂದು ದೇಶದ ಯುವಜನತೆ ಆ ದೇಶದ ಅಭಿವೃದ್ಧಿಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.ದೇಶದಲ್ಲಿ ಯುವಜನತೆಯ ಪ್ರಮಾಣ ಹೆಚ್ಚಾದಂತೆ ದೇಶ ಬಲಿಷ್ಠವಾಗುತ್ತಾ ಹೋಗುತ್ತದೆ. ಅಂತೆಯೇ ಭಾರತವೂ ಕೂಡಾ ಒಂದು ಯುವರಾಷ್ಟ್ರ.ಅರ್ಥಾತ್ ನಮ್ಮ ದೇಶದ ಒಟ್ಟು ಜನಸಂಖ್ಯೆಯು ಶೇ ೬೦ ರಷ್ಟು ಯುವಜನತೆಯನ್ನು ಹೊಂದಿದೆ. ಯುವಜನತೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ದೇಶ ಅತಿವೇಗವಾಗಿ ಅತ್ಯುನ್ನತ ಸ್ಥಾನಕ್ಕೆ ಹೋಗುವುದು ೧೦೦ ಕ್ಕೆ ೧೦೦ ಸತ್ಯ.ಹೀಗಿದ್ದೂ ಭಾರತ ಏಕೆ ಇನ್ನೂ ಆಮೆಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ?? ಯುವಶಕ್ತಿಯ ಪ್ರಮಾಣ ಹೆಚ್ಚಿದ್ದರೂ ಏಕೆ ಇಂತಹ ಸ್ಥಿತಿ? ಅವಲೋಕನ ಮಾಡಿದರೆ ಗೊತ್ತಾಗುವುದಿಷ್ಟೇ, ಯುವಶಕ್ತಿಯ ಉಪಯೋಗ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ.ಅರ್ಥಾತ್ ಯುವಜನತೆ ತಮ್ಮ ಜೀವನವನ್ನು ದೇಶಕ್ಕೋಸ್ಕರ ಸದ್ವಿನಿಯೋಗ ಮಾಡುತ್ತಿಲ್ಲ.ಹಾಗಾದರೆ ನಮ್ಮ ಯುವಶಕ್ತಿ ಹಾದಿ ತಪ್ಪುತ್ತಿರುವುದಾದರೂ ಹೇಗೆ?

ಮೊದಲೆನೆಯದಾಗಿ, ಇತ್ತೀಚೆಗೆ ಯುವಜನತೆ ಹೆಚ್ಚಾಗಿ ದಾರಿ ತಪ್ಪುತ್ತಿರುವುದು ಅಂತರ್ಜಾಲದಿಂದ…!!! ಹೌದು, ಇಂದಿನ ಪೀಳಿಗೆಯ ಯುವಕ-ಯುವತಿಯರು ತಮ್ಮ ಬಹುತೇಕ ಸಮಯವನ್ನು ಅಂತರ್ಜಾಲ ಯಾ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿದ್ದಾರೆ.ದಿನದ ಇಪ್ಪತ್ನಾಲ್ಕು ಗಂಟೆಯೂ ಫ಼ೇಸ್ಬುಕ್, ವಾಟ್ಸ್ಆಪ್, ವಿ ಚಾಟ್ ಮುಂತಾದ ಜಾಲತಾಣಗಳಲ್ಲಿ ಕಾಲಕಳೆಯುತ್ತಾರೆ.ಅದಕ್ಕೆ ಪೂರಕವಾಗಿರು ಮೊಬೈಲ್ ಕಂಪನಿಗಳು ಇವರಿಗೆ ಸ್ನೇಹಿಯಾಗಿ ಕೆಲಸ ಮಾಡುತ್ತಿವೆ.ಇವುಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಬಹುದಾದರೂ ನಮ್ಮ ಯುವಜನತೆ ಉಪಯೋಗಿಸಿಕೊಳ್ಳುತ್ತಿಲ್ಲ.ಗುರುತು ಪರಿಚಯ ಇಲ್ಲದವರೊಂದಿಗೆ ಸಮಯದ ಮಿತಿ ಇಲ್ಲದೇ ವ್ಯವಹರಿಸುವುದು ಒಂದು ಹವ್ಯಾಸವಾಗಿಬಿಟ್ಟಿದೆ.ಅಪಾಯಕಾರಿ ಅಂಶವೆಂದರೆ ಇಂತಹ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ವ್ಯವಹರಿಸುವುದು, ಅಶ್ಲೀಶ ಸಂದೇಶ ರವಾನಿಸುವುದು, ಬೇರೆಯವರ ಬದುಕಿನಲ್ಲಿ ಮನಬಂದಂತೆ ವಿಕೃತವಾಗಿ ನಡೆದುಕೊಳ್ಳುತ್ತಾ ಕಾಲಹರಣ ಮಾಡುತ್ತಿರುವ ಸನ್ನಿವೇಶ ಸೃಷ್ಟಿಯಾಗಿದೆ. ಇದರಿಂದ ಸಮಾಜದಲ್ಲಿ ಎಂತಹ ಘೋರ ಅಪರಾಧ ಎಸಗಿದಂತಾಗುತ್ತದೆ ಎಂಬ ಅರಿವೂ ಇವರುಗಳಿಗೆ ಇಲ್ಲದಿರುವುದು ಹಾಗೂ ಇಂತಹ ಕೆಲಸ ಮಾಡುತ್ತಿರುವುದರಲ್ಲಿ ವಿದ್ಯಾವಂತರೇ ಹೆಚ್ಚಾಗಿರುವುದು ನಮ್ಮ ದುರ್ದೈವವೇ ಸರಿ…..

ಪ್ರಸ್ತುತದಲ್ಲಿ ರಾಜಕಾರಣಿಗಳು ಯುವಶಕ್ತಿಯನ್ನು ಹಾಳುಮಾಡುವುದರಲ್ಲಿ ಒಬ್ಬರಿಗೆ ಮತ್ತೊಬ್ಬರಿಗೆ ಪೈಪೋಟಿ ನೀಡಬಲ್ಲವರಾಗಿದ್ದಾರೆ.ಏಕೆಂದರೆ ತಮ್ಮ ಎಲ್ಲಾ ರೀತಿಯ ನೈತಿಕ ಹಾಗೂ ಅನೈತಿಕ ಕೆಲಸಗಳಿಗೆ ಯುವಜನತೆಯನ್ನು ಬೇಕಾಬಿಟ್ಟಿಯಾಗಿ ನದಿನೀರಿನಂತೆ ಉಪಯೋಗಿಸುತ್ತಿದ್ದಾರೆ. ಚುನಾವಣೆ ಘೋಷಣೆಯಾದಾಗ ತಮ್ಮ ಪರ ಪ್ರಚಾರ ಮಾಡುವುದರಿಂದ ಹಿಡಿದು ಜನರನ್ನು ಮತಗಟ್ಟೆಗೆ ಕರೆದುಕೊಂಡು ಬರುವವರೆಗೆ ಯುವಶಕ್ತಿಯನ್ನು ಅವಲಂಬಿಸಿರುತ್ತಾರೆ. ಅವರಿಗೆ ವಿವಿಧ ರೀತಿಯ ಆಮಿಷಗಳನ್ನೊಡ್ಡಿ ತಮ್ಮತ್ತ ಸೆಳೆದು ಅವರನ್ನು ಮೈಗಳ್ಳರನ್ನಾಗಿ ಮಾಡುವುದು ಒಂದು ವಿಧವಾದರೆ, ತಮ್ಮ ವಿರುದ್ಧ ದನಿ ಎತ್ತಿದವರ ಹುಟ್ಟಡಗಿಸಲು , ಹೋರಾಟ ನಡೆಸುವವರನ್ನು ಹತ್ತಿಕ್ಕಲು ತಮ್ಮದೇ ಆದ ಸಣ್ಣ ಸೇನೆಯನ್ನು ಅರ್ಥಾತ್ ರೌಡಿಗಳ ಗುಂಪನ್ನು ತಯಾರು ಮಾಡುತ್ತಾರೆ. ಹೀಗೆ ಬೆಳೆದ ಪೊರ್ಕಿಗಳು ತಮಗೆ ಶ್ರೀರಕ್ಷೆಯಾಗಿ ಈ ರಾಜಕಾರಣಿಗಳು ಇರುತ್ತಾರೆ ಎಂಬ ನಂಬಿಕೆಯಲ್ಲಿ ಗಲ್ಲಿ ಗಲ್ಲಿಗಳಲ್ಲಿ ತಮಗಿಷ್ಟ ಬಂದ ರೀತಿಯಲ್ಲಿ ಗಲಾಟೆ ದೊಂಬಿಗಳನ್ನು ನಡೆಸುತ್ತಾರೆ. ಇಂತವರ ಮೇಲೆ ಪೋಲಿಸ್ ಕೇಸ್ ಸಹ ಆಗುವುದಿಲ್ಲ ಇನ್ನು ಸಾರ್ವಜನಿಕರು ಏನು ತಾನೆ ಮಾಡಿಯಾರು? ನಮ್ಮ ದೇಶದ ತರುಣ ಸಂಪನ್ಮೂಲ ಇಷ್ಟೊಂದು ಕೆಟ್ಟ ರೀತಿಯಲ್ಲಿ ವಿನಾಶ ಹೊಂದುತ್ತಿರುವುದು ಖಂಡಿತವಾಗಿಯೂ ಅಪಾಯಕಾರಿ ಸಂಗತಿಯಾಗಿದೆ ಅಲ್ಲವೇ?

ಅಂತರ್ಜಾಲ, ಭೂಗತಲೋಕ,ರಾಜಕಾರಣ ಒಂದೆಡೆಯಾದರೆ ನಿರುದ್ಯೋಗ ಇನ್ನೊಂದು ಕಡೆ ನಿಲ್ಲುತ್ತದೆ. ಪದವಿ ಮುಗಿಸಿದ ಕೋಟ್ಯಂತರ ವಿದ್ಯಾರ್ಥಿಗಳು ಕೆಲಸವಿಲ್ಲದೆ ಸುಮ್ಮನೆ ಕೂರುವಂತ ಪರಿಸ್ಥಿತಿ ಬಂದಿದೆ.ಕೆಲಸವಿಲ್ಲದೇ ಅಲೆಯುವವರ ಸಮಸ್ಯೆ ಒಂದೆಡೆಯಾದರೆ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಅಲೆಯುವವರ ಸಮಸ್ಯೆ ಇನ್ನೊಂದೆಡೆ. ಉತ್ತಮ ರೀತಿಯಲ್ಲಿ ಶೈಕ್ಷಣಿಕ ಅರ್ಹತೆ ಹೊಂದಿದ್ದರೂ ಸರ್ಕಾರಿ ಕೆಲಸ ಸಿಗುವುದು ಕಬ್ಬಿಣದ ಕಡಲೆಯಂತಾಗಿದೆ. ಒಂದು ವೇಳೆ ಕೆಲಸಗಳಿಗೆ ಅರ್ಜಿ ಆಹ್ವಾನಿಸಿದರೂ, ಕೆಲಸಗಾರರ ಅಗತ್ಯ ಇರುವ ಇಲಾಖೆಗೆ ಸರಿಯಾದ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುವುದಿಲ್ಲ ಮತ್ತು ಅಗತ್ಯವಿರುವಷ್ಟು ಕೆಲಸಗಾರರನ್ನು ನಿಯೋಜನೆ ಮಾಡಿಕೊಳ್ಳುವುದಿಲ್ಲ. ಕಾರಣ ಧರ್ಮ-ಜಾತಿ ಆಧಾರಿತ ಮೀಸಲಾತಿ. ಇದಕ್ಕೆಲ್ಲಾ ನಮ್ಮನ್ನಾಳುವ ಸರ್ಕಾರವೇ ನೇರ ಹೊಣೆ ಹೊರಬೇಕು. ಒಟ್ಟಾರೆಯಾಗಿ ಸರ್ಕಾರದ ನಿರ್ಲಕ್ಷ್ಯದಿಂದ ಯುವಶಕ್ತಿ ಪೋಲಾಗುತ್ತಿದೆ.

ಇದಲ್ಲದೇ ಇನ್ನು ಕಾಲೇಜು ವಿದ್ಯಾರ್ಥಿಗಳ ವಿಷಯದ ಬಗ್ಗೆ ಗಮನಿಸುವುದಾದರೆ ಅವರದ್ದೂ ಕೂಡ ಭಿನ್ನವಾಗಿಲ್ಲ. ಉಜ್ವಲ ಸಮಾಜವನ್ನು ನಿರ್ಮಾಣ ಮಾಡಬೇಕಾದಂತಹ ವಿದ್ಯಾರ್ಥಿಗಳು ಬೀದಿ-ಬೀದಿಗಳಲ್ಲಿ ಪೊರ್ಕಿಗಳಂತೆ ಅಡ್ಡಾಡುತ್ತಾರೆ. ಸಮಾಜದಲ್ಲಿ ಭಯ ಹುಟ್ಟಿಸುವಂತಹ ಕೆಲಸ ಮಾಡುತ್ತಿದ್ದಾರೆ.ಬೀಡಿ, ಸಿಗರೇಟ್, ಮದ್ಯಪಾನ ಮುಂತಾದ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸ ಅಲ್ಲವೇ? ದೇಶಕ್ಕಾಗಿ ಯಾ ಸಮಾಜಕ್ಕಾಗಿ ಅಲ್ಲದಿದ್ದರೂ ತಮ್ಮ ಏಳಿಗೆಗೋಸ್ಕರ ಹಗಲು ರಾತ್ರಿ ಶ್ರಮಿಸುವ ತಮ್ಮ ತಂದೆ-ತಾಯಿಯರ ಆಸೆಯ ಸಲುವಾಗಿಯಾದರೂ ಇಂತಹ ವಿದ್ಯಾರ್ಥಿಗಳು ಬದಲಾಗಬಹುದಲ್ಲವೇ????

ಸ್ವಾಮಿ ವಿವೇಕಾನಂದರು “ನನಗೆ ನೂರು ಜನ ಸದೃಢ ಯುವಕರನ್ನು ನೀಡಿ, ನಾನು ಬಲಾಢ್ಯ ಜಗದ್ಗುರು ಭಾರತವನ್ನು ಕಟ್ಟುತ್ತೇನೆ, ಭಾರತದ ಯುವಶಕ್ತಿಗೆ ಸರಿಸಾಟಿಯಾಗಿ ನಿಲ್ಲುವಂತದ್ದು ಯಾವುದೂ ಇಲ್ಲ ” ಎಂದು ಜಗತ್ತಿಗೇ ಸಾರುತ್ತರೆ. ಎಂತಹ ಛಾತಿ ಇದೆ ಅವರ ಆ ಮಾತಿನಲ್ಲಿ. ಅಂದು ಅವರಾಡಿದ ಮಾತಿಗೆ ಇಂದು ಬೆಲೆಯೇ ಇಲ್ಲದಂತಾಗಿದೆ. ಅವರು ಕೇಳಿದ್ದು ಕೇವಲ ನೂರೇ ನೂರು ಸದೃಢ ಯುವಕರನ್ನು. ನೋಡಿ ಕೇವಲ ನೂರು ಜನ ಸದೃಢ ಯುವಕರೊಂದಿಗೆ ವಿಶ್ವಗುರು ಭಾರತ ಕಟ್ಟುತ್ತೇನೆ ಎನ್ನುವ ಸ್ವಾಮೀಜಿ, ಇನ್ನೇನಾದರೂ ದೇಶದ ಸಂಪೂರ್ಣ ಯುವಶಕ್ತಿ ಸರಿಯಾದ ರೀತಿಯಲ್ಲಿ ವಿನಿಯೋಗವಾದರೆ ಎಂತಹ ಮಟ್ಟದ ಭಾರತ ನಿರ್ಮಾಣವಾಗಬಹುದು ನೀವೇ ಅಂದಾಜಿಸಿ. ಸಂಶಯವೇ ಇಲ್ಲ ಯುವಶಕ್ತಿ ಜಲಪಾತದಂತೆ ಭೋರ್ಗರೆದು , ದೇಶಸೇವೆಗೆ ನಾ ಮುಂದು ತಾ ಮುಂದು ಎಂದು ಧುಮ್ಮಿಕ್ಕಿದರೆ ನಾವು ನೀವು ಬಿಡಿ ಪ್ರಪಂಚದ ಯಾವ ನಾಯಕರೂ ಊಹಿಸದಂತಹ ಬಲಿಷ್ಠ ಭಾರತ ನಿರ್ಮಾಣ ಖಂಡಿತಾ ಸಾಧ್ಯ.

ಉದ್ಯೋಗವಿಲ್ಲ ಎನ್ನುವ ಬದಲು ಉದ್ಯೋಗವನ್ನು ಸೃಷ್ಟಿಸಬೇಕು. ಇತರರಿಗೆ ನಾವೇ ಉದ್ಯೋಗ ನೀಡುವಂತಾಗಬೇಕು. ಸಾಧ್ಯವಾದರೆ ಸೈನ್ಯಕ್ಕೆ ಸೇರಬೇಕು. ಪೋಲಿಸ್ ಇಲಾಖೆಗೆ ಸೇರಿ ನ್ಯಾಯಯುತವಾಗಿ ಸೇವೆ ಸಲ್ಲಿಸಬೇಕು. ತಮ್ಮಂತ ಯುವಕರ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಬೇಕು.ಮುಂದುವರೆದ ವಿದ್ಯುನ್ಮಾನ ಯುಗದಲ್ಲಿ ತಮ್ಮ ಪೂರ್ತಿ ಜೀವನವನ್ನು ದೇಶ ಸೇವೆಗೆ ಮೀಸಲಿರಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.ಆದರೆ ದಿನದ ಕೆಲ ಗಂಟೆಗಳು ಅಥವಾ ವಾರದಲ್ಲಿ ಒಂದೋ ಎರಡೋ ದಿನ ಸಮಾಜಕ್ಕಾಗಿ ಮೀಸಲಿಟ್ಟರೆ ಸಾಕು ಅಬ್ದುಲ್ ಕಲಾಂ ರ 2020ರ ಭಾರತದ ಕನಸು ಖಂಡಿತವಾಗಿಯೂ ನನಸಾಗುತ್ತದೆ. ಇದೆಲ್ಲದಕ್ಕೂ ಮೊದಲು ನಮ್ಮಲ್ಲಿ ದೇಶಭಕ್ತಿ ಜಾಗೃತವಾಗಬೇಕು. ನನ್ನ ದೇಶ, ನನ್ನ ಜನ,ನನ್ನ ಸಮಾಜ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಹಿಂದೂ ಮುಸ್ಲಿಂ ಕ್ರಿಸ್ಚಿಯನ್ ಜೈನ ಬೌದ್ಧ ಎಂಬ ಧರ್ಮ ಸಂಕೋಲೆಗಳಿಂದ ಹೊರ ಬಂದು ನಾವೆಲ್ಲರೂ ಭಾರತೀಯರು ಎಂಬ ಒಂದೇ ಧರ್ಮದಡಿ ಸೇರಬೇಕು. ಸ್ವದೇಶಿ ಉತ್ಪನ್ನಗಳ ಖರೀದಿ-ಮಾರಾಟದ ಬಗ್ಗೆ ಆಸಕ್ತಿವಹಿಸಬೇಕು. ಆಗ ಮಾತ್ರ ಈ ದೇಶದಲ್ಲಿ ಬದುಕಿದ್ದೂ ಸಾರ್ಥಕವಾಗುತ್ತದೆ. ಆದ್ದರಿಂದ ವಿವೆಕಾನಂದರ ವಾಕ್ಯದಂತೆ ಏಳಿ ಎದ್ದೇಳಿ ಯುವಕ-ಯುವತಿಯರೇ, ಗುರಿ ಮುಟ್ಟುವವರೆಗೂ ನಿಲ್ಲದಿರಿ, ವಿಶ್ರಮಿಸದಿರಿ. ತಾಯಿ ಭಾರತಾಂಬೆಯ ಪಾದಕ್ಕೆನಮ್ಮನ್ನು ಅರ್ಪಿಸಿಕೊಂದು ಅವಳ ಸೇವೆಗೆ ಕಂಕಣ ಬದ್ಧರಾಗೋಣ. ಇಡೀ ಪ್ರಪಂಚವೇ ಸಹಾಯಕ್ಕಾಗಿ ನಮ್ಮತ್ತ ಕೈ ಚಾಚುವಂತಹ ಜಗದ್ಗುರು ಭಾರತವನ್ನು ನಿರ್ಮಾಣ ಮಾಡಿ ನಮ್ಮ ಸನಾತರಿಗೆ ಗೌರವ ಸಲ್ಲಿಸೋಣ…….

||ಜೈ ಹಿಂದ್|| ||ವಂದೇ ಮಾತರಂ||





  ಇಂತಿ
               ಮಂಜುನಾಥ ಕೆ ಎಂ
  ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
            ಬಸವಪಟ್ಟಣ {ಚಿರಡೋಣಿ}